<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>Shailajasbhat&#039;s Blog</title>
	<atom:link href="http://shailajasbhat.wordpress.com/feed/" rel="self" type="application/rss+xml" />
	<link>http://shailajasbhat.wordpress.com</link>
	<description>Just another WordPress.com weblog</description>
	<lastBuildDate>Mon, 14 Nov 2011 08:28:45 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='shailajasbhat.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://s2.wp.com/i/buttonw-com.png</url>
		<title>Shailajasbhat&#039;s Blog</title>
		<link>http://shailajasbhat.wordpress.com</link>
	</image>
	<atom:link rel="search" type="application/opensearchdescription+xml" href="http://shailajasbhat.wordpress.com/osd.xml" title="Shailajasbhat&#039;s Blog" />
	<atom:link rel='hub' href='http://shailajasbhat.wordpress.com/?pushpress=hub'/>
		<item>
		<title>ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ&#8212;ಇಂಡೊನೇಶಿಯಾ ಇನ್ನೊಂದು ಭಾರತವಾಗಿತ್ತು&#8230;..ಮರೆತು ಹೊದ ಕಥೆ -ಭಾಗ ೪</title>
		<link>http://shailajasbhat.wordpress.com/2011/03/27/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-4/</link>
		<comments>http://shailajasbhat.wordpress.com/2011/03/27/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-4/#comments</comments>
		<pubDate>Sun, 27 Mar 2011 17:56:45 +0000</pubDate>
		<dc:creator>my pen from shrishaila</dc:creator>
				<category><![CDATA[Series on History By V.S.G.]]></category>
		<category><![CDATA[ಇಂಡೊನೇಶಿಯಾ;ಹಿಂದೂ ಮತ್ತು ಬೌದ್ಧ ಸಂಸ್ಕೃತಿ;]]></category>
		<category><![CDATA[ಜಕಾರ್ತಾಕ್ಕೆ (Djakarta );ಬೊರೊಬುದುರ್-ಜಾವಾ ದ್ವೀಪ]]></category>
		<category><![CDATA[ಪ್ರಂಬನಂ ಹಿಂದೂ ದೇವಾಲಯ ;ಶೈಲೇಂದ್ರ ಸಾಮ್ರಾಜ್ಯ]]></category>
		<category><![CDATA[ಶ್ರೀವಿಜಯ ಸಾಮ್ರಾಜ್ಯ;ಮಹಾಪಜಿತ್ ಸಾಮ್ರಾಜ್ಯ]]></category>

		<guid isPermaLink="false">http://shailajasbhat.wordpress.com/?p=129</guid>
		<description><![CDATA[ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ&#8212;ಇಂಡೊನೇಶಿಯಾ ಇನ್ನೊಂದು ಭಾರತವಾಗಿತ್ತು&#8230;..ಮರೆತು ಹೊದ ಕಥೆ -ಭಾಗ ೪ ಈ ಮೊದಲಿನ ಮೂರು ಭಾಗಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಅದರ ಅವಿಭಾಜ್ಯ ಅಂಗವಾದ ಆಚಾರ-ವಿಚಾರ ವಿಶೇಷಣಗಳು ಹೇಗೆ ಅಪಘಾನಿಸ್ತಾನ , ಮಧ್ಯ ಏಶಿಯಾ, ಚೀನಾ,ಕೊರಿಯಾ, ಜಪಾನ್ ಮತ್ತು ಆಗ್ನೇಯ ಏಶಿಯಾದ ಪ್ರಮುಖ ದೇಶಗಳಲ್ಲಿ ಸ್ವೀಕರಿಸಲ್ಪಟ್ಟಿತು ಎಂಬುವುದನ್ನು ಕಂಡೆವು. ಈ ನಾಲ್ಕನೇ ಭಾಗದಲ್ಲಿ ಕೇವಲ ೫೦೦ ವರ್ಷಗಳ ಹಿಂದಿನ ವರೆಗೆ ನಮಗೆ ನಂಬಲೂ ಅಸಾಧ್ಯವೆಂಬಷ್ಟು ,ಇನ್ನೊಂದು ಭಾರತ ದೇಶ ಎನ್ನಬಹುದಾದಷ್ಟು ನಮ್ಮ ಸಂಸ್ಕೃತಿಯೊಡನೆ [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=129&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p>ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ&#8212;ಇಂಡೊನೇಶಿಯಾ ಇನ್ನೊಂದು ಭಾರತವಾಗಿತ್ತು&#8230;..ಮರೆತು ಹೊದ ಕಥೆ -ಭಾಗ ೪</p>
<p>ಈ ಮೊದಲಿನ ಮೂರು ಭಾಗಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಅದರ ಅವಿಭಾಜ್ಯ ಅಂಗವಾದ ಆಚಾರ-ವಿಚಾರ ವಿಶೇಷಣಗಳು ಹೇಗೆ ಅಪಘಾನಿಸ್ತಾನ , ಮಧ್ಯ ಏಶಿಯಾ, ಚೀನಾ,ಕೊರಿಯಾ, ಜಪಾನ್ ಮತ್ತು ಆಗ್ನೇಯ ಏಶಿಯಾದ ಪ್ರಮುಖ ದೇಶಗಳಲ್ಲಿ ಸ್ವೀಕರಿಸಲ್ಪಟ್ಟಿತು ಎಂಬುವುದನ್ನು ಕಂಡೆವು.<br />
ಈ ನಾಲ್ಕನೇ ಭಾಗದಲ್ಲಿ ಕೇವಲ ೫೦೦ ವರ್ಷಗಳ ಹಿಂದಿನ ವರೆಗೆ ನಮಗೆ ನಂಬಲೂ ಅಸಾಧ್ಯವೆಂಬಷ್ಟು ,ಇನ್ನೊಂದು ಭಾರತ ದೇಶ ಎನ್ನಬಹುದಾದಷ್ಟು ನಮ್ಮ ಸಂಸ್ಕೃತಿಯೊಡನೆ ವಿಲೀನವಾಗಿದ್ದ ಇಂಡೊನೇಶಿಯಾದ ಬಗ್ಗೆ ನೋಡೋಣ. ೧೨ನೆ ಶತಮಾನದಲ್ಲಿ ಭಾರತ ಸ್ವತಃ (೮೦೦ ವರ್ಷಗಳ ಹಿಂದೆ) ಮುಸಲ್ಮಾನರ ಧಾಳಿಗೆ ಸಿಲುಕಿದ್ದ ಸಂದರ್ಭದಲ್ಲಿ ಇಂಡೋನೇಶಿಯಾದಲ್ಲಿ ಹಿಂದೂ ಮತ್ತು ಬೌದ್ಧ ಸಂಸ್ಕೃತಿ ಹಬ್ಬಿತ್ತು ಮತ್ತು ಬಹುಮಂದಿ ಅದರ ಅನುಯಾಯಿಗಳಾಗಿದ್ದರು. ಇದು ಕೇವಲ ೫೦೦ ವರ್ಷಗಳ ಹಿಂದಿನ ಮಾತು, ಆದರೆ ಈಗ ನಂಬಲಸಾಧ್ಯವೆನಿಸುತ್ತದೆ.<br />
ಲೇಖಕರಾದ ವಿ.ಎಸ್.ಗೋಪಾಲಕೃಷ್ಣನ್ ರವರು ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ೧೯೭೯ರಲ್ಲಿ ಇಂಡೊನೇಶಿಯಾದಲ್ಲಿ ಜರುಗಿದ ಯುನೆಸ್ಕೋದ(UNESCO)  ಪ್ರಾದೇಶಿಕ ಸಮ್ಮೇಳನವೊಂದರಲ್ಲಿ ಅಂದಿನ (INFORMATION &amp; BROADCAST) ಮಂತ್ರಿವರ್ಯ ಎಲ್.ಕೆ.ಅದ್ವಾನಿಯವರೊಡನೆ ಭಾಗವಹಿಸಿದ್ದರು.ಆ ಸಂದರ್ಭದಲ್ಲಿ ಅಲ್ಲಿನ INFORMATION &amp; BROADCAST ಮಂತ್ರಿಮಹೋದಯರು</p>
<p>ಮುಸ್ಲಿಂ ಧರ್ಮಾನುಯಾಯಿಗಳು ಸಂಸ್ಕೃತ ಭಾಷೆಯಲ್ಲಿ ಕಿಂಚಿತ್ತೂ ತಡೆಯಿಲ್ಲದೇ ನಿರರ್ಗಳವಾಗಿ ಮಾತನಾಡಿದರು.ಆ ಒಂದು ಪ್ರಸಂಗ ಕೇವಲ ಅಪರೂಪದ್ದಿರಬಹುದಾದರೂ ,ಆ ದೇಶದಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಕಲೆತು ಹೋದುದನ್ನು ಕಂಡು ಅವರಿಬ್ಬರೂ ಮೂಕ ವಿಸ್ಮಿತರಾದರು. ಆ ನಂತರ ಲೇಖಕರು ಇನ್ನೊಮ್ಮೆ ಆ ದೇಶದ ರಾಜಧಾನಿಯೆಸಿಕೊಂಡ  ಜಕಾರ್ತಾಕ್ಕೆ (Djakarta )೧೯೯೫ ರಲ್ಲಿ ಭೇಟಿಯಿತ್ತ ಸಂದರ್ಭದಲ್ಲಿ ಅಲ್ಲಿನ ಪ್ರಾದೇಶಿಕ ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದರು, ಅಲ್ಲಿ ಅವರಿಗೆ ಪುನಃ ಕಾದಿತ್ತು ಅಚ್ಚರಿ, ಅವರು ಕಂಡದ್ದೇನು- ಬೇರೆ ಶಿಲ್ಪಕಲಾಕೃತಿಗಳೊಂದಿಗೆ  ನಮ್ಮ ಪೌರಾಣಿಕ ಕಥೆಗಳಲ್ಲಿ ಬರುವ ಪಾತ್ರಗಳಾದ ಗರುಡ,ವಿಷ್ಣು, ಹನುಮಾನ್ ಇತ್ಯಾದಿ.<br />
ಅವರಿಗೆ ತಾನು ಭಾರತದ ವಸ್ತು ಸಂಗ್ರಹಾಲಯದಲ್ಲಿದ್ದೇನೋ ಎಂಬಂತೆ ಭಾಸವಾಯಿತು.ಇಸ್ಲಾಂ  ಧರ್ಮದಲ್ಲಿ ಯಾವುದೇ ತೆರನಾದ ಮೂರ್ತಿ ಪೂಜೆ ನಿಷಿದ್ಧ , ಹಾಗಾಗಿ ಇದು ಅವರ ಹಿಂದೂ ಧರ್ಮಾವಲಂಬಿಗಳಾದ ಪೂರ್ವಜರ ಅವಶೇಷಗಳು. ಅಲ್ಲಿನ ವೈಮಾನಿಕ ಸಂಸ್ಠೆ  &#8220;ಗರುಡ&#8221; (Garuda Airways).<br />
ಕ್ರಿಸ್ತ ಪೂರ್ವ ಕಾಲದಲ್ಲೇ ಈ ದ್ವೀಪಸಮೂಹವು ನಮ್ಮ ದೇಶದವರಿಗೆ ಸುವರ್ಣಭೂಮಿಯೆಂದು ಪರಿಚಿತ. ನಮ್ಮ ಸಮುದ್ರಯಾನೀ ವರ್ತಕರು ಈ ದ್ವೀಪಗಳೊಂದಿಗೆ ವ್ಯಾಪಾರ ಸಂಪರ್ಕವನ್ನಿಟ್ಟುಕೊಂಡಿದ್ದರು. ನಮ್ಮ ದೇಶದ ನಾವೆಗಳು ವ್ಯಾಪಾರಕ್ಕೋಸ್ಕರ ಅಲ್ಲಿಗೆ ಪಯಣಿಸುತ್ತಿದ್ದವು, ಹಾಗೂ ನಮ್ಮ ವರ್ತಕರು ಅಲ್ಲಿನ ಬಂದರುಪ್ರದೇಶಗಳಲ್ಲಿ ನೆಲೆಯೂರಿದ್ದರು.(ಬ್ರಿಟಿಷ್ ಈಸ್ಟ್ ಇಂಡಿಯಾದ ವ್ಯಾಪಾರಿಗಳು ನಮ್ಮ ಮುಂಬಯಿ,ಮದ್ರಾಸ್ ಗಳಲ್ಲಿ ನೆಲೆಯೂರಿದ್ದಂತೆ!). ಇವರೊಂದಿಗೆ ಧಾರ್ಮಿಕ ವಿಧಿ-ವಿಧಾನಗಳ ಆಚರಣೆಗಳಿಗೆ ಬ್ರಾಹ್ಮಣರನ್ನೂ ಕರೆದೊಯ್ದಿದ್ದರು. ಆ ದೇಶದಲ್ಲಿ ನಮ್ಮ ನಾಡಿನ ಬ್ರಾಹ್ಮಣರಿಗೆ ತುಂಬಾ ಗೌರವ ದೊರಕುತ್ತಿತ್ತು. ಅವರ ವಿದ್ಯೆ, ಪಾಂಡಿತ್ಯಗಳಿಗೆ ಮನ್ನಣೆಯೂ ದೊರೆಯಿತು.ಹಾಗೂ ಜನರು ಅವುಗಳನ್ನು ಅನುಸರಿಸಲು ,ತಿಳಿದುಕೊಳ್ಳಲು ಬಯಸಿದರು. ಹೀಗೆ ಕಾಲಕ್ರಮೇಣ ಹಿಂದೂ ಧರ್ಮವು ಪ್ರಚಾರಕ್ಕೆ ಬಂದಿತು.ಒಟ್ಟೊಟ್ಟಿಗೆ ಮಹಾಯಾನ ಬೌದ್ಧಧರ್ಮವೂ ಈ ದೇಶವನ್ನು ಪ್ರವೇಶ ಮಾಡಿತು. ಇದು ನಮ್ಮ ದೇಶದ ಬೌದ್ಧ ಸನ್ಯಾಸಿಗಳ ಧರ್ಮಪ್ರಚಾರಕ್ಕಾಗಿ ನಡೆಸಿದ ಸಮುದ್ರಯಾನದ ಪ್ರಭಾವ.ಇಲ್ಲಿನ ಶೈಲೇಂದ್ರ ರಾಜ ವಂಶವು ಮಹಾಯಾನ ಬೌದ್ಧ ಧರ್ಮವನ್ನು ಅನುಸರಿಸಿದರು.ಇವರೇ ಶೈಲೇಂದ್ರ ಸಾಮ್ರಾಜ್ಯದ ನಿರ್ಮಾತೃ, ಇದುವೇ ಆ ಪ್ರದೇಶದ ಪ್ರಪ್ರಥಮ ದೊಡ್ಡ ಸಾಮ್ರಾಜ್ಯವಾಗಿತ್ತು.</p>
<p><img src="/Users/ssb/Pictures/2010-10-30/indonesia-map.gif" alt="" /></p>
<p><a href="http://shailajasbhat.files.wordpress.com/2011/03/indonesia-map.gif"><img class="aligncenter size-medium wp-image-142" title="indonesia-map" src="http://shailajasbhat.files.wordpress.com/2011/03/indonesia-map.gif?w=506&#038;h=209" alt="" width="506" height="209" /></a></p>
<p><img src="/Users/ssb/Pictures/2010-10-30/indonesia-map.gif" alt="" /><br />
<strong>ಶೈಲೇಂದ್ರ ಸಾಮ್ರಾಜ್ಯ</strong>-ಈ ರಾಜವಂಶವು ಕ್ರಿ.ಶಕ ೮ನೇ ಶತಮಾನದಲ್ಲಿ ತಲೆಯೆತ್ತಿತು. ಜಾವಾದ್ವೀಪದ ಮಧ್ಯದ ಪ್ರದೇಶವು ಈ ರಾಜರ ಕಾರ್ಯಸ್ಥಾನ ,ರಾಜ್ಯದ ಕೇಂದ್ರ ಬಿಂದುವಾಗಿತ್ತು.ಈ ಸಾಮ್ರಾಜ್ಯವು ಸುಮಾತ್ರಾ,ಬಾಲಿ,ಬೋರ್ನಿಯೋ ಮತ್ತು ಮಲಯಾ ದ್ವೀಪಗಳಲ್ಲಿ ಆವರಿಸಿತ್ತು.ಈ ಸಾಮ್ರಾಜ್ಯದ ವಿವರಗಳು ಅಲ್ಲಿ ದೊರಕಿದ ಪ್ರಾದೇಶಿಕ ಲಿಖಿತ ಬರಹಗಳು, ಶಿಲಾಶಾಸನಗಳಿಂದ  ಕಂಡು ಬರುತ್ತವೆ.ಆಗಿನ ಕಾಲದಲ್ಲಿ ಸಮುದ್ರ ಯಾನ ಮಾಡುತ್ತಿದ್ದ ಅರಬ್ಬೀ ವರ್ತಕರ ಬರಹಗಳಲ್ಲೂ ಇದರ ಮೇಲೆ ಉಲ್ಲೇಖಿಸಿದ್ದಾರೆ.ಈ ವಂಶದವರೆಲ್ಲರೂ ಬೌದ್ಧಧರ್ಮದ ಅನುಯಾಯಿಗಳು. ಇವರು ಅತ್ಯಂತ ಹೆಚ್ಚಿನ ಅಧಿಕಾರವನ್ನು ಹೊಂದಿದ್ದದವನನ್ನು ಮಹಾರಾಜ ಎಂದು ಕರೆಯುತ್ತಿದ್ದರು, ಮತ್ತು ಮಹಾರಾಜನ ಅಧಿಕಾರ, ಪ್ರಭಾವ ಅಪರಿಮಿತವಾಗಿದ್ದವು,ಅವನು ಎಲ್ಲರಿಗಿಂತಲೂ ಉನ್ನತ ಸ್ಥಾನದಲ್ಲಿದ್ದನು.ಇವನ ಕೆಳಗಿದ್ದ ನೌಕಾ ಪಡೆಯು ಅಗಾಗ ನೆರೆಯ ಲ್ಲಿದ್ದ  ಕಂಭುಜ , ಚಂಪಾ ದೇಶಗಳ ಮೇಲೆ ಧಾಳಿಯಿಡುತ್ತಿದ್ದವು. ಈ ಮಹಾರಾಜ ಎಂದೆನಿಸಿಕೊಂಡವನು ದಿನಾ ಒಂದು ಚಿನ್ನದ ಇಟ್ಟಿಗೆಯನ್ನು ಸರೋವರಕ್ಕೆಸೆಯುತ್ತಿದ್ದನೆಂಬ ವರ್ಣನೆಯಿದೆ. ಚೀನಾ ಮತ್ತು ಭಾರತ ದೇಶದ ರಾಜರು, ಅಧಿಕಾರಿಗಳು ಇವರ ಮಹಾರಾಜನನ್ನು ಭಯ-ಭಕ್ತಿ ಗೌರವಗಳಿಂದ ಕಾಣುತ್ತಿದ್ದರು. ಈ ರಾಜರು ಭಾರತ ಮತ್ತು ಚೀನಾ ದೇಶಗಳೊಡನೆ ನಿಕಟ ರಾಜಕೀಯ ಸಂಬಂಧ ಮತ್ತು ಸಂಪರ್ಕವನ್ನಿಟ್ಟುಕೊಂಡಿದ್ದರು.ಪಾಲ ರಾಜರು ಬಂಗಾಳವನ್ನಾಳುತ್ತಿದ್ದಾಗ ಈ ರಾಜ್ಯದಲ್ಲಿ ಬೌದ್ಧ ಧರ್ಮದ ಪ್ರವೇಶವಾಯಿತು. ಪಾಲರಾಜರು ಸ್ವತಃ ಬೌದ್ಧ ಧರ್ಮಾವಲಂಬಿಗಳಾದುದರಿಂದ ಧರ್ಮಪ್ರಚಾರಕ್ಕೆ ಪ್ರೋತ್ಸಾಹವನ್ನಿತ್ತರು. ಶೈಲೇಂದ್ರ ರಾಜನಾಗಿದ್ದ ಬಾಲಪುತ್ರದೇವ ತನ್ನ ರಾಯಭಾರಿಯನ್ನು ಪಾಲರಾಜ ದೇವಪಾಲನ ಆಸ್ಥಾನಕ್ಕೆ ಕಳುಹಿಸಿದ್ದನು. ಆಗಿನ ಕಾಲದಲ್ಲಿ ಬಂಗಾಳ ಪ್ರಾಂತ್ಯವು ಮಹಾಯಾನ ಪಂಥದ ಕೇಂದ್ರಸ್ಥಾನವಾಗಿತ್ತು ಮತ್ತು ಇದರ ಪ್ರಭಾವು ಬಹಳ ದೂರದ ವರೆಗೆ ಶೈಲೇಂದ್ರ ಸಾಮ್ರಾಜ್ಯದ ವರೆಗೂ ಹಬ್ಬಿತ್ತು. ಕುಮಾರಘೋಷನೆಂಬ ಬೌದ್ಧ ಸನ್ಯಾಸಿ ಬಂಗಾಳದಿಂದ ಹೋಗಿ ,ಶೈಲೇಂದ್ರ ರಾಜನಿಗೆ ಸಲಹಾಗಾರನಾಗಿ ನೇಮಿಸಲ್ಪಟ್ಟನು.</p>
<p><a href="http://shailajasbhat.files.wordpress.com/2011/03/jogja-pics-224borabudur-vsg.jpg"><img title="Jogja pics 224.jpgborabudur vsg" src="http://shailajasbhat.files.wordpress.com/2011/03/jogja-pics-224borabudur-vsg.jpg?w=300&#038;h=225" alt="" width="300" height="225" /></a></p>
<p><strong>ಬೊರೊಬುದುರ್(ಜಾವಾ ದ್ವೀಪದ)</strong> ನಲ್ಲಿರುವ ಬುದ್ಧಮಂದಿರ</p>
<p><a href="http://shailajasbhat.files.wordpress.com/2011/03/9-3870877902_45ea9c6d68borabudur-buddhidt.jpg"><img class="alignleft size-medium wp-image-130" title="9-3870877902_45ea9c6d68.jpgborabudur buddhidt" src="http://shailajasbhat.files.wordpress.com/2011/03/9-3870877902_45ea9c6d68borabudur-buddhidt.jpg?w=300&#038;h=168" alt="" width="300" height="168" /></a></p>
<p>ಈ ರಾಜರೇ ಪ್ರಪಂಚಪ್ರಸಿದ್ಧವಾದ <strong>ಬೊರೊಬುದುರ್(ಜಾವಾ ದ್ವೀಪದಲ್ಲಿ)</strong> ನಲ್ಲಿರುವ  ಬುದ್ಧಮಂದಿರವನ್ನು ಕಟ್ಟಿಸಿದರು. ಇದನ್ನು ಕ್ರಿ.ಶ.೭೫೦-೮೫೦ರ ಮಧ್ಯದಲ್ಲಿ ಕಟ್ಟಿಸಲಾಯಿತು. ಇದು ಈಗ ಪ್ರಪಂಚದ ೮ನೇ ಅದ್ಭುತವೆನಿಸಿದೆ.</p>
<p><a href="http://shailajasbhat.files.wordpress.com/2011/03/imagesbali-island.jpg"><img class="alignleft size-full wp-image-131" title="images.jpgbali island" src="http://shailajasbhat.files.wordpress.com/2011/03/imagesbali-island.jpg?w=225&#038;h=225" alt="" width="225" height="225" /></a>ಈ ಬುದ್ಧಮಂದಿರ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಎರಡೂ ದೃಷ್ಟಿಗಳಿಂದ ತುಂಬಾ ಸುಂದರ ಮತ್ತು ಶ್ರೀಮಂತವೆನಿಸಿಕೊಂಡಿದೆ. ಇದನ್ನು ವೀಕ್ಷಿಸಲು ವರ್ಷವು ಲಕ್ಷಾನುಗಟ್ಟಲೆ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೋರೊಬುದುರ್ ಮತ್ತು ಕಂಬೋಡಿಯಾದ ಆಂಗ್ ಕೋರ್ ವಾಟ್ ಆಗ್ನೇಯ ಏಶಿಯಾದ ಅದ್ಭುತ ಮತ್ತು ಪ್ರೇಕ್ಷಣೀಯ ಸ್ಥಳಗಳೆನಿಸಿಕೊಂಡಿವೆ.</p>
<p>ಬುದ್ಧ ಸ್ತೂಪ</p>
<p>ಈ ಮಂದಿರದಿಂದ ಸುಮಾರು ೫೦ಮೈಲಿಗಳ ದೂರದಲ್ಲಿ ಪ್ರಂಬನಂ ಹಿಂದೂ ದೇವಾಲಯ ಸಂಕೀರ್ಣವಿದೆ (PRAMBANAM  HINDU  TEMPLE  COMPLEX). ಇದರ ರಚನೆ,ವಿಶಾಲ ಆವರಣ, ಶಿಲ್ಪ ಮತ್ತು ವಾಸ್ತು ಕೌಶಲ್ಯಗಳು ವರ್ಣನಾತೀತ. ಇದು ದೊಡ್ಡ ಪ್ರವಾಸೀ ಕೇಂದ್ರ. ಇದರನ್ನು ೧೦ನೇ ಶತಮಾನದಲ್ಲಿ ರಚಿಸಿದರು. ಇದರ ಆವರಣದಲ್ಲಿ ಹಲವಾರು ಮಂದಿರಗಳಿರುವ ಕಾರಣ ಇದನ್ನು ದೇವಾಲಯ ಸಂಕೀರ್ಣ ಎಂದು ಹೇಳಲಾಗುತ್ತದೆ. ಇದನ್ನು ಯುನೆಸ್ಕೊದವರು ಈ ವಿಶ್ವದ ಮಾನವತೆಗೆ ಪೂರ್ವಜರಿಂದ ಬಂದ ಬಳುವಳಿ</p>
<p>(  HERITAGE  SITE) ಎಂದು ಘೋಷಿಸಿದ್ದಾರೆ.</p>
<p><a href="http://shailajasbhat.files.wordpress.com/2011/03/jogja-pics-114prambanan-vsg.jpg"><img class="aligncenter size-medium wp-image-137" title="Jogja pics 114.jpgprambanan vsg" src="http://shailajasbhat.files.wordpress.com/2011/03/jogja-pics-114prambanan-vsg.jpg?w=300&#038;h=225" alt="" width="300" height="225" /></a></p>
<p><a href="http://shailajasbhat.files.wordpress.com/2011/03/candi-prambanan-hindu-temple.jpg"><img class="alignnone size-medium wp-image-132" title="candi-prambanan.jpg hindu temple" src="http://shailajasbhat.files.wordpress.com/2011/03/candi-prambanan-hindu-temple.jpg?w=300&#038;h=225" alt="" width="300" height="225" /></a></p>
<p>ಶಿವ ದೇವಾಲಯ</p>
<p><a href="http://shailajasbhat.files.wordpress.com/2011/03/imagesgopuram-pramba.jpg"><img class="alignnone size-full wp-image-133" title="images.jpggopuram pramba" src="http://shailajasbhat.files.wordpress.com/2011/03/imagesgopuram-pramba.jpg?w=190&#038;h=266" alt="" width="190" height="266" /></a></p>
<p>ದೇವಾಲಯದ ಗೋಪುರ</p>
<p>೧೧ನೇ ಶತಮಾನದ ಕಾಲದಲ್ಲಿ ಶೈಲೇಂದ್ರ ಸಾಮ್ರಾಜ್ಯ ದಕ್ಷಿಣ ಭಾರತದ ಚೋಳ ರಾಜ ಒಂದನೇ ರಾಜೇಂದ್ರನ ಆಕ್ರಮಣಕ್ಕೆ ಒಳಗಾಗಿ ಸುಮಾರು ೧೦೦ವರ್ಷಗಳ ಕಾಲ ಅವರ ಅಧೀನದಲ್ಲಿತ್ತು. ಆ ರೀತಿಯ  ಯುದ್ಧ ,ಆಕ್ರಮಣಗಳನ್ನು ರಾಜರು ಸಂಪತ್ತಿಗಾಗಿ, ರಾಜ್ಯ ತಮ್ಮ ಅಧೀನದಲ್ಲಿದ್ದಾಗ ವರ್ಷವೂ ಕಪ್ಪ ಕಾಣಿಕೆಗಳನ್ನು  ಪಡೆಯಲು ಮಾಡುತ್ತಿದ್ದರು. ಆದರೆ ಚೋಳರ ಈ ವಿಶಾಲ ಸಾಮ್ರಾಜ್ಯ ೧೦೦ ವರ್ಷಗಳಲ್ಲಿ ಕುಸಿಯಿತು. ಆ ನಂತರ ಶೈಲೇಂದ್ರ  ರಾಜ ಸ್ವತಃ ರಾಜ್ಯ ವಿಸ್ತರಣೆಗೆಂದು ನೌಕಾ ಪಡೆಯೊದಿಗೆ ಶ್ರೀಲಂಕಾದ ಮೇಲೆ ಧಾಳಿ ಮಾಡಿದನು. ಇದರ ಸೋಲಿನೊಂದಿಗೆ ಕ್ರಮೇಣ ಶೈಲೇಂದ್ರ ಸಾಮ್ರಾಜ್ಯ ದುರ್ಬಲವಾಗಹತ್ತಿತು. ೧೪ನೇ ಶತಮಾನಕ್ಕಾಗುವಾಗ ಇಡೀ ಸಾಮ್ರಾಜ್ಯವೇ ಕುಸಿಯಿತು.</p>
<p><a href="http://shailajasbhat.files.wordpress.com/2011/03/jogja-pics-040prambanan-vsg.jpg"><img class="aligncenter size-medium wp-image-141" title="Jogja pics 040.jpgprambanan vsg" src="http://shailajasbhat.files.wordpress.com/2011/03/jogja-pics-040prambanan-vsg.jpg?w=300&#038;h=225" alt="" width="300" height="225" /></a></p>
<p><strong>ಶ್ರೀವಿಜಯ ಸಾಮ್ರಾಜ್ಯ</strong> -ಈ ಹಿಂದೂ ಸಾಮ್ರಾಜ್ಯವು ಸುಮಾತ್ರಾದಲ್ಲಿದ್ದಿತು.ಇದು ೭ನೇ ಶತಮಾನದಲ್ಲಿ ಉದಯವಾಯಿತು. ಇದು ಕೇವಲ ಒಂದು ಶತಮಾನ ಕಾಲ ಅಸ್ಥಿತ್ವದಲ್ಲಿತ್ತು, ಶೈಲೇಂದ್ರ ರಾಜರು ಅಧಿಕಾರಕ್ಕೆ ಬಂದಾಗ ಅವರು ಈ ರಾಜ್ಯವನ್ನು ವಶಪಡಿಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಹೀಗೆ ಈ ಹಿಂದೂ ಸಾಮ್ರಾಜ್ಯದೊಂದಿಗೆ ಶೈಲೇಂದ್ರ ಸಾಮ್ರಾಜ್ಯದ ಉದಯವಾಯಿತು.<br />
<strong>ಮಹಾಪಜಿತ್ ಸಾಮ್ರಾಜ್ಯ- </strong>೧೩ನೇ ಶತಮಾನದ ಕಾಲದಲ್ಲಿ ಶೈಲೇಂದ್ರರಾಜರು  ಜಾವಾದ ಮಧ್ಯಭಾಗವನ್ನು ತಮ್ಮ ಅಧಿಕಾರ ಕೇಂದ್ರವನ್ನಾಗಿಸಿ ರಾಜ್ಯಭಾರ ಮಾಡುತ್ತಿದ್ದರು.ಅದು ಕುಸಿಯಲಾರಂಭಿಸಿದಾಗ  ಜಾವಾದ ಪೂರ್ವ ಪ್ರಾಂತ್ಯವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಮಹಾಪಜಿತ್ ಸಾಮ್ರಾಜ್ಯದ ಉದಯವಾಯಿತು. ಇದು ಹಿಂದೂ ಸಾಮ್ರಾಜ್ಯ, ರಾಜರು ಹಿಂದುಧರ್ಮಾವಲಂಬಿಗಳು. ಈ ಸಾಮ್ರಾಜ್ಯ ಈಗಿನ ಇಂಡೊನೇಶಿಯ,ಮಲಯಗಳನ್ನು ಒಳಗೊಂಡಿತ್ತು. ಮಲಾಕ್ಕಾದ ೨ನೇ ರಾಜ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದಾಗ ಈ ದೇಶದಲ್ಲಿ ಹೊಸ ಧರ್ಮದ ಪ್ರವೇಶವಾಯಿತು. ಕ್ರಮೇಣ ಇಸ್ಲಾಂ ದೇಶವಿಡೀ ಹಬ್ಬಿತು, ಇದರ ಪ್ರಾಭಲ್ಯವು ಶಾಂತ ರೀತಿಯಲ್ಲಿ  ಹೆಚ್ಚಿ ಇಂಡೊನೇಶಿಯಾವು ಹೊಸ ಧರ್ಮವನ್ನಪ್ಪಿ, ಹಿಂದು ಸಾಮ್ರಾಜ್ಯವೇ ನಶಿಸಿತು. ಆಗ ಹಿಂದೂ ರಾಜ ಮತ್ತು ಹಿಂದೂ ಧರ್ಮಾವಲಂಬಿಗಳಾಗಿದ್ದ ಪ್ರಜೆಗಳು<br />
ಬಾಲಿ ದ್ವೀಪದಲ್ಲಿ ಆಶ್ರಯ ಪಡೆದರು. ಈಗಲೂ ಬಾಲಿ ದ್ವೀಪದಲ್ಲಿ ಪ್ರಜೆಗಳು ಹಿಂದೂ ಹಬ್ಬಗಳನ್ನು, ಅಚಾರ-ವಿಚಾರಗಳನ್ನು, ಪದ್ಧತಿಗಳನ್ನು ಅನುಸರಿಸುತ್ತಾರೆ. ಇದು ನಮ್ಮ ದೇಶದವರಿಗೆ ಹೆಮ್ಮೆಯ ವಿಚಾರವೇ ಸರಿ. ಹಾಗಾಗಿ ಆ ಹಳೇ ದಿನಗಳಲ್ಲಿ ಆ ದ್ವೀಪಗಳು ಹಿಂದೂ ದ್ವೀಪ ಸಮೂಹವೆಂದು ಕರೆಸಿಕೊಂಡದ್ದರಲ್ಲಿ ಆಶ್ಚರ್ಯದ ವಿಷಯವೇನಿಲ್ಲ.</p>
<p><em><strong>ವಿ.ಸೂ.-ಇದರೊಳಗಿರುವ ಎಲ್ಲಾ ಚಿತ್ರಗಳನ್ನೂ ಅಂತರ್ಜಾಲದಿಂದ ಆಯ್ದುಕೊಳ್ಳಲಾಗಿದೆ.</strong></em></p>
<p>http://shailajasbhat.wordpress.com/2010/03/01/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0/    .</p>
<p>ಇದು  ಮೊದಲನೇ ಭಾಗ</p>
<p>http://shailajasbhat.wordpress.com/2010/04/07/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0-2/</p>
<p>ಇದು ಎರಡನೇ ಭಾಗ</p>
<p>http://shailajasbhat.wordpress.com/2011/02/04/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0-3/</p>
<p>ಇದು ಮೂರನೇ ಭಾಗ</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/129/"><img alt="" border="0" src="http://feeds.wordpress.com/1.0/comments/shailajasbhat.wordpress.com/129/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/129/"><img alt="" border="0" src="http://feeds.wordpress.com/1.0/delicious/shailajasbhat.wordpress.com/129/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/129/"><img alt="" border="0" src="http://feeds.wordpress.com/1.0/facebook/shailajasbhat.wordpress.com/129/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/129/"><img alt="" border="0" src="http://feeds.wordpress.com/1.0/twitter/shailajasbhat.wordpress.com/129/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/129/"><img alt="" border="0" src="http://feeds.wordpress.com/1.0/stumble/shailajasbhat.wordpress.com/129/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/129/"><img alt="" border="0" src="http://feeds.wordpress.com/1.0/digg/shailajasbhat.wordpress.com/129/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/129/"><img alt="" border="0" src="http://feeds.wordpress.com/1.0/reddit/shailajasbhat.wordpress.com/129/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=129&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2011/03/27/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-4/feed/</wfw:commentRss>
		<slash:comments>1</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://shailajasbhat.files.wordpress.com/2011/03/indonesia-map.gif?w=300" medium="image">
			<media:title type="html">indonesia-map</media:title>
		</media:content>

		<media:content url="http://shailajasbhat.files.wordpress.com/2011/03/jogja-pics-224borabudur-vsg.jpg?w=300" medium="image">
			<media:title type="html">Jogja pics 224.jpgborabudur vsg</media:title>
		</media:content>

		<media:content url="http://shailajasbhat.files.wordpress.com/2011/03/9-3870877902_45ea9c6d68borabudur-buddhidt.jpg?w=300" medium="image">
			<media:title type="html">9-3870877902_45ea9c6d68.jpgborabudur buddhidt</media:title>
		</media:content>

		<media:content url="http://shailajasbhat.files.wordpress.com/2011/03/imagesbali-island.jpg" medium="image">
			<media:title type="html">images.jpgbali island</media:title>
		</media:content>

		<media:content url="http://shailajasbhat.files.wordpress.com/2011/03/jogja-pics-114prambanan-vsg.jpg?w=300" medium="image">
			<media:title type="html">Jogja pics 114.jpgprambanan vsg</media:title>
		</media:content>

		<media:content url="http://shailajasbhat.files.wordpress.com/2011/03/candi-prambanan-hindu-temple.jpg?w=300" medium="image">
			<media:title type="html">candi-prambanan.jpg hindu temple</media:title>
		</media:content>

		<media:content url="http://shailajasbhat.files.wordpress.com/2011/03/imagesgopuram-pramba.jpg" medium="image">
			<media:title type="html">images.jpggopuram pramba</media:title>
		</media:content>

		<media:content url="http://shailajasbhat.files.wordpress.com/2011/03/jogja-pics-040prambanan-vsg.jpg?w=300" medium="image">
			<media:title type="html">Jogja pics 040.jpgprambanan vsg</media:title>
		</media:content>
	</item>
		<item>
		<title>ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೩</title>
		<link>http://shailajasbhat.wordpress.com/2011/02/04/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-3/</link>
		<comments>http://shailajasbhat.wordpress.com/2011/02/04/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-3/#comments</comments>
		<pubDate>Fri, 04 Feb 2011 08:45:08 +0000</pubDate>
		<dc:creator>my pen from shrishaila</dc:creator>
				<category><![CDATA[Series on History By V.S.G.]]></category>
		<category><![CDATA[ಆಂಗ್ ಕೋರ್ ವಾಟ್;ಸುವರ್ಣಭೂಮಿ;ಸಂಸ್ಕೃತ ಭಾಷೆ]]></category>
		<category><![CDATA[ಕಂಭುಜ;ಹಿಂದೂ ಸಾಮ್ರಾಜ್ಯ;ಚಂಪಾ ಸಾಮ್ರಾಜ್ಯ;]]></category>

		<guid isPermaLink="false">http://shailajasbhat.wordpress.com/?p=114</guid>
		<description><![CDATA[ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೩ ಕಂಭುಜ- ಈ ಮೊದಲಿನ ಭಾಗ ೧ ಮತ್ತು ಭಾಗ ೨ ರಲ್ಲಿ ನಾವು ಈಗಾಗಲೇ ತಿಳಿದುಕೊಂಡಂತೆ ಬೌದ್ಧಧರ್ಮ ಮತ್ತು ಸಂಸ್ಕೃತಿಯು ನಮ್ಮ ಹಿಂದೂ ದೇಶದ(ಭಾರತ ದೇಶದ) ನೆಲದಿಂದ ಬಾಕ್ಟ್ರಿಯಾ(ಈಗಿನ ಅಪಘಾನಿಸ್ತಾನ),ಮಧ್ಯ ಏಶಿಯಾ, ಚೀನಾ, ಕೊರಿಯಾ, ಜಪಾನ್ ಮತ್ತು ಟಿಬೆಟ್ ಗಳಲ್ಲಿ ಪಸರಿಸಿತು. ಈ ಲೇಖನದಲ್ಲಿ  ಜಗತ್ ಪ್ರಸಿದ್ಧವಾದ ಕಂಬುಜ(ಹಿಂದೂ ಸಾಮ್ರಾಜ್ಯ) ಅಥವಾ ಕಾಂಬೋಡಿಯಾ ( ಪ್ರಪಂಚದ ಅದ್ಭುತಗಳಲ್ಲೊಂದೆನಿಸಿದ [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=114&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೩</strong><br />
ಕಂಭುಜ-<br />
ಈ ಮೊದಲಿನ ಭಾಗ ೧ ಮತ್ತು ಭಾಗ ೨ ರಲ್ಲಿ ನಾವು ಈಗಾಗಲೇ ತಿಳಿದುಕೊಂಡಂತೆ ಬೌದ್ಧಧರ್ಮ ಮತ್ತು ಸಂಸ್ಕೃತಿಯು ನಮ್ಮ ಹಿಂದೂ ದೇಶದ(ಭಾರತ ದೇಶದ) ನೆಲದಿಂದ ಬಾಕ್ಟ್ರಿಯಾ(ಈಗಿನ ಅಪಘಾನಿಸ್ತಾನ),ಮಧ್ಯ ಏಶಿಯಾ, ಚೀನಾ, ಕೊರಿಯಾ, ಜಪಾನ್ ಮತ್ತು ಟಿಬೆಟ್ ಗಳಲ್ಲಿ ಪಸರಿಸಿತು. ಈ ಲೇಖನದಲ್ಲಿ  ಜಗತ್ ಪ್ರಸಿದ್ಧವಾದ ಕಂಬುಜ(ಹಿಂದೂ ಸಾಮ್ರಾಜ್ಯ) ಅಥವಾ ಕಾಂಬೋಡಿಯಾ ( ಪ್ರಪಂಚದ ಅದ್ಭುತಗಳಲ್ಲೊಂದೆನಿಸಿದ ಆಂಗ್ ಕೋರ್ ವಾಟ್ ಇಲ್ಲಿದೆ) ಮತ್ತು ಚಂಪಾ ಸಾಮ್ರಾಜ್ಯವೆಂದು ಕರೆಸಿಕೊಂಡ ದಕ್ಷಿಣ ವಿಯೆಟ್ ನಾಮ್ ಗಳ ಮೋಹಕವಾದ ಚರಿತ್ರೆಯ ಬಗ್ಗೆ ತಿಳಿಯುವ.</p>
<p><img class="aligncenter" src="https://lh5.googleusercontent.com/_bEdWeUlAeV4/TUwtIIJEGzI/AAAAAAAAFF4/mWcyKSB5lQg/Myanmar_etc_pol.jpgmap.jpg" alt="" width="523" height="463" /></p>
<p><strong>ಕಂಭುಜ &#8211; </strong>ಸಂಸ್ಕೃತ ಭಾಷೆಯಿಂದ ಬಂದ ಈ ಹೆಸರು ವರ್ತಮಾನ ಕಾಲದಲ್ಲಿ ಕಾಂಬೋಡಿಯಾವಾಗಿ ಪರಿವರ್ತಿತವಾಯಿತು.ಇಲ್ಲಿ  ಪ್ರಾದೇಶಿಕ ಭಾಷೆಯಲ್ಲದೆ ಫ್ರೆಂಚ್ ಭಾಷೆ ಬಳಕೆಯಲ್ಲಿದೆ.ನಮ್ಮ ದೇಶದ ವ್ಯಾಪಾರೀ  ನೌಕೆಗಳು ಪೂರ್ವಕರಾವಳಿ ರೇವುಗಳಿಂದ ಕ್ರಿ.ಪೂರ್ವದ ಕಾಲದಲ್ಲೇ ವಿವಿಧ ದೇಶಗಳಿಗೆ,  ದೂರದ ದೇಶಗಳಾದ ದಕ್ಷಿಣ ಪೂರ್ವ ಮತ್ತು ಪೂರ್ವ ಏಶಿಯಾದ ದ್ವೀಪರಾಷ್ಟ್ರಗಳಿಗೆ  ಹೋಗುತ್ತಿದ್ದವು. ನಮ್ಮ ಜಾತಕದ ಕಥೆಗಳಲ್ಲಿ, ಕಥಾಸರಿತ್ಸಾಗರದ ಕಥೆಗಳಲ್ಲಿ  ಭಾರತೀಯ ನಾವಿಕರು ಸುವರ್ಣ ಭೂಮಿ ಎಂದು ಕರೆಸಿಕೊಳ್ಳುತ್ತಿದ್ದ ಮಲಯ, ಇಂಡೊನೇಶಿಯ ಮೊದಲಾದ ದ್ವೀಪಗಳೆಡೆಗೆ ನಡೆಸುತ್ತಿದ್ದ ದುರ್ಗಮ ಸಮುದ್ರಯಾನಗಳನ್ನು  ಬಣ್ಣಿಸಲಾಗಿದೆ.<br />
ಕ್ರಿ.ಶಕ ೨ನೇ ಶತಮಾನದ ಕಾಲದಿಂದ ಈ ಸುವರ್ಣಭೂಮಿಯಲ್ಲಿ ಭಾರತೀಯ ಮೂಲದ ಹಿಂದೂ ಧರ್ಮವು ಕಾಲಿಟ್ಟು, ಕ್ರಮೇಣ ಅಲ್ಲಿನ ರಾಜವಂಶಜರು  ಅದರ ಅನುಯಾಯಿಗಳಾದರು. ಹಿಂದೂ ಧರ್ಮವು ಅಲ್ಲಿ ೧೦೦೦ಕ್ಕೂ ಹೆಚ್ಚಿನ ವರ್ಷಗಳು  ನೆಲೆಯೂರಿ ಜನಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಈ ಪವಾಡ ಅಲ್ಲಿ ಹೇಗೆ ನಡೆಯಿತು? ಇಸ್ಲಾಮ್ ಖಡ್ಗದ ಬಲದಿಂದ ಧರ್ಮ ಪ್ರಚಾರ ಮಾಡಿದರೆ ಕ್ರೈಸ್ತಧರ್ಮವು ಬೈಬಲ್ ಪುಸ್ತಕಗಳಿಂದ ತನ್ನ ಕೆಲಸ ಮಾಡಿತು.ನಮ್ಮ ಹಿಂದೂ ವರ್ತಕರು ತಾವಿದ್ದ ಹೊಸ ನಾಡಿನಲ್ಲಿ ಜನಮನವನ್ನು ಗೆದ್ದು ಅವರನ್ನುತಮ್ಮ ಧರ್ಮಕ್ಕೆ ಸೆಳೆದುಕೊಂಡರು. ಭಾರತೀಯ ಮೂಲದ  ವರ್ತಕ ಸಮುದಾಯದವರು ಮಲಯ, ಸುಮಾತ್ರಾ,ಜಾವಾ ದ್ವೀಪಗಳಲ್ಲಿ ತಳವೂರಿದರು.ಆಗ ಅವರು ತಮ್ಮೊಂದಿಗೆ ಧಾರ್ಮಿಕ ಕ್ರಿಯೆಗಳಿಗೆ ಪುರೋಹಿತ ವರ್ಗದವರನ್ನೂ ಕರೆದೊಯ್ದರು. ನಮ್ಮ ಬ್ರಾಹ್ಮಣ ವರ್ಗದವರು ಅಲ್ಲಿನ ರಾಜರ, ಜನಸಾಮಾನ್ಯರ ಮನ್ನಣೆಗೆ ಪಾತ್ರರಾಗಿ ಬಹಳ ಗೌರವಿಸಲ್ಪಟ್ಟರು. ಇದರಿಂದಾಗಿ ನಮ್ಮ ನಾಡಿನ ಸಾವಿರಾರು ಮಂದಿ ಬ್ರಾಹ್ಮಣರು ಅಲ್ಲಿ ನೆಲೆಯೂರುವಂತಾಯಿತು, ಅವರೊಂದಿಗೆ ಸಂಸ್ಕೃತ ಭಾಷೆ ಮತ್ತು ನಮ್ಮ ಹಿಂದೂ ಸಂಸ್ಕೃತಿ ಬೇರೂರಿತು.</p>
<p>ಕ್ರಿ.ಶಕ ೨ನೇ ಮತ್ತು ೫ನೇ ಶತಮಾನಗಳಲ್ಲಿ  ಮಲಯ(ಪರ್ಯಾಯ ದ್ವೀಪ), ಕಾಂಬೋಡಿಯಾ, ಅನ್ನಂ(ವಿಯೆಟ್ನಾಂ), ಸುಮಾತ್ರಾ, ಜಾವಾ, ಬಾಲಿ ಮತ್ತು ಬೋರ್ನಿಯೋಗಳಲ್ಲಿ ಹಿಂದೂ ರಾಜ್ಯಗಳು  ತಲೆಯೆತ್ತಿದವು.<br />
ಚೀನಾ ದೇಶದ ಬರಹಗಾರರು ಉಲ್ಲೇಖಿಸಿದಂತೆ ಭಾರತೀಯ ಸಂಜಾತ ಕೌಂಡಿನ್ಯನೆಂಬ ಬ್ರಾಹ್ಮಣನೊಬ್ಬ ಕಂಭುಜದ ರಾಜಕುಮಾರಿಯೊಬ್ಬಳನ್ನು ವಿವಾಹವಾಗಿ ಅಲ್ಲಿನ ಹಿಂದೂ ರಾಜನಾದನು.(ಇದು ಸುಮಾರು ಕ್ರಿ.ಶ.೨-೩ನೇ ಶತಮಾನದ ಕಾಲದಲ್ಲಿ) .ನಂತರದ ದಿನಗಳಲ್ಲಿ ಅಲ್ಲಿನ ರಾಜ ವಂಶಜರು , ಮತ್ತು ಸಾಮಾನ್ಯ ಪ್ರಜೆಗಳು ಹಿಂದೂ ಧರ್ಮ, ಸಂಸ್ಕೃತಿ, ಅಚಾರ ವಿಧಿ ವಿಧಾನಗಳನ್ನು ಸ್ವೀಕರಿಸಿದರು. ಈ ವಿವರಗಳು ಕಂಭುಜದ ರಾಜಧಾನಿಯೆನಿಸಿಕೊಂಡಿದ್ದ ಭವಪುರದಲ್ಲಿ ದೊರಕಿದ ಸಂಸ್ಕೃತ ಭಾಷೆಯಲ್ಲಿದ್ದ ಲಿಖಿತ ದಾಖಲೆಗಳಲ್ಲಿ ಕೂಡಾ ಕಂಡು ಬಂದಿದೆ.ಮುಂಬರುವ ದಿನಗಳಲ್ಲಿ ಬ್ರಾಹ್ಮಣರು ಬಹು ಸಂಖ್ಯೆಯಲ್ಲಿ ವಲಸೆ ಹೋಗಿ ಅಲ್ಲಿನ ಹೆಣ್ಣು ಮಕ್ಕಳನ್ನು ವಿವಾಹವಾಗಿ ಅಲ್ಲೇ ನೆಲೆಯೂರಿದರು. ಚೀನೀಯರು ಕಂಭುಜವನ್ನು ಫುನಾನ್ ಎಂದು ಕರೆಯುತ್ತಿದ್ದರು. ಚೀನಾ ದೇಶದ ಇತಿಹಾಸಗಾರರು ಈ ಎಲ್ಲ ದೇಶದ ಬೆಳವಣಿಗೆಗಳನ್ನು ಮತ್ತು ವಿವರಗಳನ್ನು ಕ್ರಮಬದ್ಧವಾಗಿ ದಾಖಲಿಸಿದ್ದಾರೆ. ಆಗಿನ ಕಂಭುಜ ರಾಜರಿಗೆ ವರ್ಮನ್ ಎಂಬ ಉಪನಾಮಧೇಯವಿತ್ತು. ಪ್ರಸಿದ್ಧರಾದ ಕೆಲವು ರಾಜರುಗಳು ಜಯವರ್ಮನ್, ೨ನೇ ಮತ್ತು ೬ನೇ ಯಶೋ ವರ್ಮನ್ ಹಾಗೂ ಸೂರ್ಯವರ್ಮನ್. ಇವರೆಲ್ಲಾ  ಅಲ್ಲಿನ ಅಸಾಧಾರಣ ಹಿಂದೂ ರಾಜರು.ನಮ್ಮ ಹಿಂದೂ ವಲಸಿಗರು ಅಲ್ಲಿನ ಹೆಣ್ಣು ಮಕ್ಕಳನ್ನು ವಿವಾಹವಾಗುವಲ್ಲಿ ಅಪ್ರತಿಮರಾದರೆ ಚೀನೀಯರು ಅಂದಿನ ಆಗು ಹೋಗುಗಳನ್ನು, ಘಟನೆಗಳನ್ನು ದಾಖಲಿಸುವುದರಲ್ಲಿ  ಶ್ರೇಷ್ಠರೇ ಸರಿ ! ಆಗಿನ ರಾಜರುಗಳು ತಮ್ಮ ರಾಯಭಾರಿಗಳನ್ನು ನೆರೆಯ ದೇಶಗಳಾದ ಭಾರತ ಮತ್ತು ಚೀನಾಕ್ಕೆ ಕಳುಹಿದರು.<br />
<strong>ಕಂಭುಜ ರಾಜ್ಯವು ಉಛ್ರಾಯ ಸ್ಥಿತಿಯಲ್ಲಿದ್ದಾಗ ಈಗಿನ ಥೈಲಾಂಡ್, ಬರ್ಮಾದ ಕೆಲವು ಭಾಗಗಳು, ಲಾವೋಸ್ ಇವೆಲ್ಲಾ ಸೇರಿ ಒಂದೇ ದೇಶವೆನಿಸಿತ್ತು.</strong> ಆ ಕಾಲದಲ್ಲಿ ಬರೆದ ಅನೇಕಾನೇಕ ಸಂಸ್ಕೃತ ಭಾಷೆಯಲ್ಲಿರುವ ಲಿಖಿತ ದಾಖಲೆ,ಶಾಸನಗಳಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಹಿಂದೂ ಸಾಮ್ರಾಜ್ಯವು ೧೫ನೇ ಶತಮಾನದ ವರೆಗೂ ಅಲ್ಲಿ ಮುಂದುವರಿಯಿತು. ಇತ್ತ ೧೨ನೇ ಶತಮಾನದ ಕಾಲದಲ್ಲಿ ಭಾರತದಲ್ಲಿ ಮುಸಲ್ಮಾನರ ಧಾಳಿಯಾದಾಗ ಅಲ್ಲಿನ್ನೂ ಹಿಂದೂ ಸಾಮ್ರಾಜ್ಯ ಮೆರೆಯುತ್ತಿತ್ತು. ಕೊನೆಗೆ ಈ ಸಾಮ್ರಾಜ್ಯ ಪಶ್ಚಿಮ ದಿಕ್ಕಿನಿಂದ ಥೈಲಾಂಡ್ ಮತ್ತು ಪೂರ್ವ ದಿಕ್ಕಿನಿಂದ ವಿಯೆಟ್ನಾಂ(ಅನ್ನಾಂ) ಧಾಳಿ ನಡೆಸಿದಾಗ ಕ್ಷೀಣಿಸಿತು. ಅದಾಗ್ಯೂ ಕ್ಷೀಣವಾಗಿಯಾದರೂ ಹಿಂದೂ ಧರ್ಮವು  ತೀರ ಇತ್ತೀಚಿನ ವರೆಗೆ ಅಲ್ಲಿ ಅಸ್ಥಿತ್ವದಲ್ಲಿತ್ತು. ಬೌದ್ಧ ಧರ್ಮೀಯರು ಸಾವಧಾನವಾಗಿ, ಸಂಘರ್ಷಗಳಿಲ್ಲದೆ ದೇಶವಿಡೀ ಆವರಿಸಿದರು. ಈಗ ೯೦% ಮಂದಿ ಕಾಂಬೊಡಿಯಾ ಪ್ರಜೆಗಳು ಬೌದ್ಧ ಧರ್ಮಾವಲಂಬಿಗಳು. ಆದರೆ ಹಿಂದೂ ಧರ್ಮದ ಪ್ರಭಾವವು ಅಲ್ಲಿ ಇನ್ನೂ ಅಸ್ಥಿತ್ವದಲ್ಲಿದೆ. ರಾಮಾಯಣದ ಕಥೆಗಳನ್ನು ಆಧರಿಸಿದ ನೃತ್ಯ ರೂಪಕಗಳು ಅಲ್ಲಿ ಜನಪ್ರಿಯ, ಜನರ ಹೆಸರು ಹೆಚ್ಚಿನವು ಸಂಸ್ಕೃತ ಭಾಷಾಧರಿತದವಾಗಿವೆ.</p>
<p><img class="alignleft" src="https://lh5.googleusercontent.com/_bEdWeUlAeV4/TUwslVqLXiI/AAAAAAAAFFo/H7SeMp3ypaU/ANGKOR-WAT23.jpg" alt="" width="431" height="300" /></p>
<p><img class="alignright" src="https://lh4.googleusercontent.com/_bEdWeUlAeV4/TUwr4M0XF-I/AAAAAAAAFFk/L5NkxdE2uRI/s800/angkor_wat_cambodia.jpg" alt="" width="573" height="429" /></p>
<p><strong>ಆಂಗ್ ಕೋರ್ ವಾಟ್-</strong> ಆಂಗ್ ಕೋರ್ ಎಂದರೆ ನಗರ ಎಂದರ್ಥ, ಇದು ಆಗಿನ ಕಾಲದಲ್ಲಿ ಆ ದೇಶದ ಅಧಿಕಾರದ ಕೇಂದ್ರಸ್ಥಾನವಾಗಿತ್ತು. (ವಾಟ್ ಎಂದರೆ ಕಂಬೋಡಿಯಾ ಭಾಷೆಯಲ್ಲಿ ಮಂದಿರ ಎಂದರ್ಥ) ಈ ದೇವಾಲಯವನ್ನು ೧೨ನೇ ಶತಮಾನದಲ್ಲಿ ೨ನೇ ಸೂರ್ಯವರ್ಮನ್ ಕಟ್ಟಿಸಿದನು. ಇದು ಪ್ರಪಂಚದ ಅದ್ಭುತಗಳಲ್ಲೊಂದೆನಿಸಿದೆ. ಈ ಮಂದಿರದಲ್ಲಿ  ಭಗವಾನ್ ವಿಷ್ಣುವನ್ನು ಪೂಜಿಸುತ್ತಿದ್ದರು. ದೇವಾಲಯವನ್ನು ಪರ್ವತದ ಮೇಲಿರುವಂತೆ ನಿರ್ಮಿಸಿದ್ದಾರೆ. ಪೂಜಾ ಮಂದಿರವನ್ನು  ಉನ್ನತ ಸ್ಥಾನದಲ್ಲಿ ಶಿಖರದಲ್ಲಿರುವಂತೆ ಕಟ್ಟಲಾಗಿದೆ.ಶಿಲ್ಪಕಲೆಯು ಬಹಳ ಸುಂದರವಾಗಿದೆ.ಅಲ್ಲಿಗೆ ಹತ್ತಿರದಲ್ಲೇ ಅಂಗ್ ಕೊರ್ ಥಾಮ್ ಪಟ್ಟಣದಲ್ಲಿ ಕಟ್ಟಲಾದ ಬಯಾನ್ ಮಂದಿರದಲ್ಲಿ ದೇವಾಲಯದ ಎತ್ತರಕ್ಕೆ ಗೋಡೆಗಳ ಮೈಮೇಲೆ ಮಾನವ ಮುಖಗಳನ್ನು ಕೆತ್ತಲಾಗಿದೆ. ಅದೇ ತೆರನಾಗಿ ಅಲ್ಲಿ ಸುತ್ತುಮುತ್ತಲಿನ ಪ್ರದೇಶಗಳಲ್ಲೆಲ್ಲಾ  ಬಹು ಸಂಖ್ಯೆಯಲ್ಲಿ ದೇವಾಲಯಗಳಿವೆ. (ಅಂತರ್ಜಾಲದಲ್ಲಿ ಅವುಗಳ ಭಾವ ಚಿತ್ರಗಳು ಲಭ್ಯವಿದೆ.)</p>
<p>ಆಂಗ್ ಕೋರ್ ಥಾಮ್ ನಲ್ಲಿರುವ ಬಯಾನ್ ಮಂದಿರ</p>
<p><img class="alignleft" src="https://lh6.googleusercontent.com/_bEdWeUlAeV4/TUwuhtqPWuI/AAAAAAAAFGU/M0NtJHe_1NE/Angkor%20Thom%20huge%20heads%20at%20Bayon%20Angkor%20Thom%20Cambodia.jpgbyon.jpg" alt="" width="269" height="359" /></p>
<p>ಚಂಪಾ ಹಿಂದೂ<strong>ಸಾಮ್ರಾಜ್ಯ</strong>-(ದಕ್ಷಿಣ ವಿಯೆಟ್ನಾಂ)</p>
<p>ಕ ಲೆ ಪಗೊಡ</p>
<p><img class="alignleft" src="https://lh3.googleusercontent.com/_bEdWeUlAeV4/TUxAl58fGwI/AAAAAAAAFGw/h-8wErQjJsM/images.jpgco%20lepagoda.jpg" alt="" width="240" height="144" /></p>
<p>ಚಂಪಾ ಹಿಂದೂ ಸಾಮ್ರಾಜ್ಯ ತನ್ನ ಪಶ್ಚಿಮದ ನೆರೆಯಲ್ಲಿರುವ ಕಂಭುಜ ದೇಶದಷ್ಟು ಪ್ರಾಮುಖ್ಯತೆ ಪಡೆಯಲಿಲ್ಲ.ಅದರ ಮೇಲೆ ದಾಖಲಿಸಿದ ಬರಹಗಳು, ಲಿಖಿತ ಶಾಸನಗಳು ತುಂಬ ಕಂಡು ಬರುವುದಿಲ್ಲ.ಈ ದೇಶದಲ್ಲಿ ಕಂಭುಜ ದೇಶದಲ್ಲಿ ಕಂಡುಬಂದಂತೆ ದೊಡ್ಡ ವಿಶೇಷವಾದ ದೇವಾಲಯಗಳು, ಸ್ಮಾರಕಗಳು ಕಂಡುಬರದಿರುವುದೇ ಅದಕ್ಕೇ ಕಾರಣವಿರಬಹುದು. ಈ ದೇಶದ ಇತಿಹಾಸವನ್ನು ಬರೆದವರು ಚೀನಾದ ಇತಿಹಾಸಕಾರರೇ. ಈ ದೇಶವು ಕ್ರಿಶ.೧೫೦ರಿಂದ ೧೪೭೧ರ ವರೆಗೆ ಬಾಳಿತು.ಇಲ್ಲಿನ ರಾಜರೂ ವರ್ಮಾ ಎಂಬ ಉಪನಾಮಧೇಯವನ್ನು ಹೊಂದಿದ್ದರು. ಇಲ್ಲಿನ ಕೆಲವು ಪ್ರಾಮುಖ್ಯ ರಾಜರು ರುದ್ರ ವರ್ಮನ್,ಹರಿವರ್ಮನ್, ಇಂದ್ರ ವರ್ಮನ್ ಮತ್ತು ಸಿಂಹ ವರ್ಮನ್. ಈ ರಾಜರುಗಳು ಪೂರ್ವದಿಂದ ಕಂಭುಜ ಮತ್ತು ಉತ್ತರದಿಂದ ಉತ್ತರ ಆನ್ನಂ (ವಿಯೆಟ್ನಾಂ)ದೇಶಗಳ ಆಕ್ರಮಣದ ಪ್ರಯತ್ನಗಳನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದರು.ಹಾಗಾಗಿ ಅವರು ಸುಮಾರು ೧೩೦೦ ವರ್ಷಗಳ ಕಾಲ ಅವರು ಯಾವುದೇ ಹೊರಗಿನ ಆತಂಕಗಳಿಲ್ಲದೆ ರಾಜ್ಯವಾಳಿದರು. ಬೌದ್ಧ ಧರ್ಮವು ಈ ದೇಶವನ್ನೂ ಪ್ರವೇಶಿಸಿತು.ಇದರಿಂದಾಗಿ ಈ ದೇಶದಲ್ಲಿ ಎರಡೂ ಧರ್ಮಗಳ ದೇವಾಲಯಗಳನ್ನು ಕಾಣಬಹುದು. ರಾಜಧಾನಿಯಾಗಿದ್ದ ಚಂಪಾಪಟ್ಟಣದ ಹೆಸರೇ ದೇಶಕ್ಕೂ ನೀಡಲಾಯಿತು. ಇಲ್ಲಿನ ರಾಯಭಾರಿಗಳು ಚೀನಾ ದೇಶಕ್ಕೆ ಹೋಗಿದ್ದಾರೆ, ಆದರೆ ಭಾರತ ದೇಶಕ್ಕೆ ಹೋಗಿಲ್ಲ. ೧೬ನೇ ಶತಮಾನದಲ್ಲಿ ಉತ್ತರದಿಂದ ಅನ್ನರ(ಮಂಗೋಲಿಯನ್ನರ) ಆಕ್ರಮಣಕ್ಕೆ ತತ್ತರಿಸಿ ಹಿಂದೂ ಸಾಮ್ರಾಜ್ಯವು ನಶಿಸಲಾರಂಭಿಸಿತು. ಕಾಲ ಕ್ರಮೇಣ ಬೌದ್ಧಧರ್ಮದ ಪ್ರಭಾವದಿಂದಾಗಿ ಹಿಂದೂ ಧರ್ಮವು ತೀರ ನಶಿಸಿತು.</p>
<p>http://shailajasbhat.wordpress.com/2010/03/01/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0/   .  ಇದು  ಮೊದಲನೇ ಭಾಗ</p>
<p>http://shailajasbhat.wordpress.com/2010/04/07/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0-2/  ಇದು ಎರಡನೇ ಭಾಗ</p>
<p>ಇದರೊಳಗಿನ ಎಲ್ಲಾ ಚಿತ್ರಗಳನ್ನು ಅಂತರ್ಜಾಲದಿಂದ ಆರಿಸಿಕೊಳ್ಳಲಾಗಿದೆ.</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/114/"><img alt="" border="0" src="http://feeds.wordpress.com/1.0/comments/shailajasbhat.wordpress.com/114/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/114/"><img alt="" border="0" src="http://feeds.wordpress.com/1.0/delicious/shailajasbhat.wordpress.com/114/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/114/"><img alt="" border="0" src="http://feeds.wordpress.com/1.0/facebook/shailajasbhat.wordpress.com/114/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/114/"><img alt="" border="0" src="http://feeds.wordpress.com/1.0/twitter/shailajasbhat.wordpress.com/114/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/114/"><img alt="" border="0" src="http://feeds.wordpress.com/1.0/stumble/shailajasbhat.wordpress.com/114/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/114/"><img alt="" border="0" src="http://feeds.wordpress.com/1.0/digg/shailajasbhat.wordpress.com/114/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/114/"><img alt="" border="0" src="http://feeds.wordpress.com/1.0/reddit/shailajasbhat.wordpress.com/114/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=114&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2011/02/04/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-3/feed/</wfw:commentRss>
		<slash:comments>2</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="https://lh5.googleusercontent.com/_bEdWeUlAeV4/TUwtIIJEGzI/AAAAAAAAFF4/mWcyKSB5lQg/Myanmar_etc_pol.jpgmap.jpg" medium="image" />

		<media:content url="https://lh5.googleusercontent.com/_bEdWeUlAeV4/TUwslVqLXiI/AAAAAAAAFFo/H7SeMp3ypaU/ANGKOR-WAT23.jpg" medium="image" />

		<media:content url="https://lh4.googleusercontent.com/_bEdWeUlAeV4/TUwr4M0XF-I/AAAAAAAAFFk/L5NkxdE2uRI/s800/angkor_wat_cambodia.jpg" medium="image" />

		<media:content url="https://lh6.googleusercontent.com/_bEdWeUlAeV4/TUwuhtqPWuI/AAAAAAAAFGU/M0NtJHe_1NE/Angkor%20Thom%20huge%20heads%20at%20Bayon%20Angkor%20Thom%20Cambodia.jpgbyon.jpg" medium="image" />

		<media:content url="https://lh3.googleusercontent.com/_bEdWeUlAeV4/TUxAl58fGwI/AAAAAAAAFGw/h-8wErQjJsM/images.jpgco%20lepagoda.jpg" medium="image" />
	</item>
		<item>
		<title>ಪಿ. ಆರ್. ಜಯಲಕ್ಷಮ್ಮ</title>
		<link>http://shailajasbhat.wordpress.com/2010/12/25/%e0%b2%aa%e0%b2%bf-%e0%b2%86%e0%b2%b0%e0%b3%8d-%e0%b2%9c%e0%b2%af%e0%b2%b2%e0%b2%95%e0%b3%8d%e0%b2%b7%e0%b2%ae%e0%b3%8d%e0%b2%ae/</link>
		<comments>http://shailajasbhat.wordpress.com/2010/12/25/%e0%b2%aa%e0%b2%bf-%e0%b2%86%e0%b2%b0%e0%b3%8d-%e0%b2%9c%e0%b2%af%e0%b2%b2%e0%b2%95%e0%b3%8d%e0%b2%b7%e0%b2%ae%e0%b3%8d%e0%b2%ae/#comments</comments>
		<pubDate>Sat, 25 Dec 2010 19:36:09 +0000</pubDate>
		<dc:creator>my pen from shrishaila</dc:creator>
				<category><![CDATA[ಗೋಕುಲಂ ಗಾರ್ಡನ್ ಶಾಲೆ;ಮಹಾತ್ಮಗಾಂಧಿ]]></category>
		<category><![CDATA[ಪಿ. ಆರ್. ಜಯಲಕ್ಷಮ್ಮ;ಪಿ. ಆರ್.ರಾಮಯ್ಯನವರು;]]></category>
		<category><![CDATA[ಬೆಂಗಳೂರು ನಗರಸಭೆ;ಮಹಿಳಾ ಕಾರ್ಪೋರೇಟರ್;ಉಪಮೇಯರ್;]]></category>

		<guid isPermaLink="false">http://shailajasbhat.wordpress.com/?p=84</guid>
		<description><![CDATA[ಪಿ. ಆರ್. ಜಯಲಕ್ಷಮ್ಮ ಕೆಲವೊಮ್ಮೆ ಮನುಷ್ಯನನ್ನು ಜೀವನದ ಅನುಭವಗಳು ಬೆಳೆಸುತ್ತದೋ ಅಥವಾ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಜೀವನದ ಸನ್ನಿವೇಶಗಳನ್ನು ತನ್ನ ಆವಶ್ಯಕತೆಗಳಿಗನುಸಾರವಾಗಿ ಪರಿವರ್ತಿಸಿ ತಾನೇ ಬೆಳೆಯುತ್ತಾನೋ ಎಂದು  ನಾನು ಸಂದೇಹಕ್ಕೊಳಗಾಗುತ್ತೇನೆ. ಜೀವನ ಮತ್ತು ಜೀವಿ ಒಂದನ್ನೊಂದು ಅವಲಂಬಿಸಿಕೊಂಡು ಮುಂದುವರಿಯುವುದು ಪ್ರಕೃತಿ ಧರ್ಮ.ನನಗೆ ಶ್ರೀಮತಿ ಜಯಲಕ್ಷಮ್ಮನವರನ್ನು ಲೇಖನಗಳನ್ನು ಓದಿ ಅರಿಯಲೆತ್ನಿಸಿದಾಗ ಬಂದ ಭಾವ ಇದು.ಅವರು ನಮ್ಮ ಕನ್ನಡ ನಾಡಿನ ಹಿರಿಯ ಪತ್ರಿಕೋದ್ಯಮಿ, ಕನ್ನಡದ ಜನಪ್ರಿಯ ವಾರ್ತಾ ಪತ್ರಿಕೆಯಾದ &#8220;ತಾಯಿನಾಡು&#8221;ವಿನ ಸ್ಥಾಪಕರಾದ ಪಿ. ಆರ್.ರಾಮಯ್ಯನವರ ಪತ್ನಿ. ಅವರಿಬ್ಬರ ವಿವಾಹವಾದಾಗ ಜಯಲಕ್ಷಮ್ಮನವರಿನ್ನೂ [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=84&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ಪಿ. ಆರ್. ಜಯಲಕ್ಷಮ್ಮ</strong></p>
<p>ಕೆಲವೊಮ್ಮೆ ಮನುಷ್ಯನನ್ನು ಜೀವನದ ಅನುಭವಗಳು ಬೆಳೆಸುತ್ತದೋ ಅಥವಾ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಜೀವನದ ಸನ್ನಿವೇಶಗಳನ್ನು ತನ್ನ ಆವಶ್ಯಕತೆಗಳಿಗನುಸಾರವಾಗಿ ಪರಿವರ್ತಿಸಿ ತಾನೇ ಬೆಳೆಯುತ್ತಾನೋ ಎಂದು  ನಾನು ಸಂದೇಹಕ್ಕೊಳಗಾಗುತ್ತೇನೆ. ಜೀವನ ಮತ್ತು ಜೀವಿ ಒಂದನ್ನೊಂದು ಅವಲಂಬಿಸಿಕೊಂಡು ಮುಂದುವರಿಯುವುದು ಪ್ರಕೃತಿ ಧರ್ಮ.ನನಗೆ ಶ್ರೀಮತಿ ಜಯಲಕ್ಷಮ್ಮನವರನ್ನು ಲೇಖನಗಳನ್ನು ಓದಿ ಅರಿಯಲೆತ್ನಿಸಿದಾಗ ಬಂದ ಭಾವ ಇದು.ಅವರು ನಮ್ಮ ಕನ್ನಡ ನಾಡಿನ ಹಿರಿಯ ಪತ್ರಿಕೋದ್ಯಮಿ, ಕನ್ನಡದ ಜನಪ್ರಿಯ ವಾರ್ತಾ ಪತ್ರಿಕೆಯಾದ &#8220;ತಾಯಿನಾಡು&#8221;ವಿನ ಸ್ಥಾಪಕರಾದ ಪಿ. ಆರ್.ರಾಮಯ್ಯನವರ ಪತ್ನಿ. ಅವರಿಬ್ಬರ ವಿವಾಹವಾದಾಗ ಜಯಲಕ್ಷಮ್ಮನವರಿನ್ನೂ ೮ ವಯಸ್ಸಿನ ಬಾಲ್ಯದಲ್ಲಿದ್ದರು.ಅವರು ಬೆಳೆಯುತ್ತಾ ಪತಿಯಿಂದ ಮತ್ತು ತಮ್ಮ ಪಾಲಿಗೊದಗಿ ಬಂದ ಜೀವನದ ಸತ್ಯಗಳನ್ನು ಸ್ವೀಕರಿಸುತ್ತಾ ಹಿರಿದಾದರು, ಅವರ  ಬೆಳವಣಿಗೆ  ಬಹಳ ಮಂದಿಗೆ ನಿಲುಕದ ಎತ್ತರಕ್ಕಿದೆ.</p>
<p><img class="alignnone" src="http://lh4.ggpht.com/_bEdWeUlAeV4/TRTjDYui7mI/AAAAAAAAE54/yUdvyCzX1iI/indiakk.JPGindira.JPG" alt="" width="200" height="155" /> <img class="alignnone" src="http://lh4.ggpht.com/_bEdWeUlAeV4/TRY4tpx_SfI/AAAAAAAAE8k/UP7bRYBjyuU/akkvija.jpg%20vijayalakshmi%20pandit.jpg" alt="" width="200" height="154" /></p>
<p>ಬೆಂಗಳೂರು ನಗರಸಭೆಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ  ಶ್ರೀಮತಿ ಇಂದಿರಾಗಂಧಿ ಮತ್ತು ವಿಜಯಲಕ್ಷ್ಮಿ ಪಂಡಿತ್ ಅವರೊಂದಿಗೆ<br />
ನಮ್ಮ ವರ್ತಮಾನ ಕಾಲದಲ್ಲಿ ಹೆಣ್ಣು ಮಕ್ಕಳು ಓದುವುದು, ಸಾಧಿಸುವುದರಲ್ಲೇನೂ ವಿಶೇಷವಿಲ್ಲ, ಆದರೆ ಕಳೆದು ಹೋದ ೨೦ನೇ ಶತಮಾನದ ಪ್ರಾರಂಭದಲ್ಲಿ ಮಧ್ಯಮ ವರ್ಗದ ಸಂಪ್ರದಾಯಸ್ಥರ  ಹೆಣ್ಣು ಮಕ್ಕಳಿಗಿದ್ದ ಜೀವನೋದ್ದೇಶಗಳೆಂದರೆ; ಕೂಸು ಚಿಕ್ಕವಳಿದ್ದಾಗ ಅಕ್ಷರಾಭ್ಯಾಸ, ನಂತರ ಸ್ವಲ್ಪ ಓದು ಬರಹ, ಆದರೆ ನಂತರ ಹಾಡು ಹಸೆ ಎಂದು ಭಾವೀ ಜೀವನದ ತಯಾರಿ, ಅಡುಗೆ ಊಟದ ಕಲಿಕೆಯಂತು ತಪ್ಪಿದ್ದಲ್ಲ.ಈ ರೀತಿಯ ವಾತಾವರಣದಲ್ಲಿ ಬೆಳೆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ನಮ್ಮ ಕೆಲವು ಹಿರಿಯ ಹೆಂಗಳೆಯರು ಜೀವನದಲ್ಲಿ  ತಮ್ಮ ಸಾಮರ್ಥ್ಯವನ್ನು,ಮೇಧಾವಿತನವನ್ನು, ಬೌದ್ಧಿಕ ತಿಳುವಳಿಕೆಯನ್ನು ತೋರಿದ್ದಾರೆ. ಜಯಲಕ್ಷಮ್ಮನವರೂ ಈ ತೆರನಾದ ಹೆಂಗಳೆಯರ ಪಂಕ್ತಿಯಲ್ಲಿ ಬರುತ್ತಾರೆ. ಇವರ ಮಾತಾಪಿತೃಗಳು ಹಾಸನದ ಶಿರಸ್ತೇದಾರ್ ಭವಾನಿ ಶಂಕರ ಅಯ್ಯರ್ ಮತ್ತು ಲಕ್ಷಮ್ಮನವರು; ಈಕೆ ಈ ದಂಪತಿಗಳ ಕೊನೆಯ ಮಗಳಾಗಿ ೧೯೦೮ ರಲ್ಲಿ ಹಾಸನದಲ್ಲಿ ಹುಟ್ಟಿದರು. ಮನೆಯಲ್ಲಿ ಮುದ್ದಿನಿಂದ ಬೆಳೆದಾಕೆ; ಆಗಿನ ಸಾಮಾಜಿಕ ಸ್ಥಿತಿಗನುಗುಣವಾಗಿ ವಯಸ್ಸು ೮ ದಾಟುತ್ತಲೇ ಮದುವೆಯ ಪ್ರಯತ್ನ ನಡೆಯಿತು. ಆಗಿನ್ನೂ ಆ ಚಿಕ್ಕ ಹುಡುಗಿ ಪ್ರಾಥಮಿಕ ಶಾಲೆಯೊಳಗೆ ಕಲಿಯುತ್ತಿದ್ದಳಷ್ಟೆ ! ಇವರಿಂದ ೧೪ ವರ್ಷ ಹಿರಿಯ ವಯಸ್ಕನಾದ ರಾಮಯ್ಯನವರಲ್ಲಿ ಕನ್ಯಾ ಮಾತಾಪಿತೃಗಳು ಅನುರೂಪನಾದ ವರನನ್ನು ಕಂಡರು.</p>
<p>ಆದರೆ ಮುಂದೆ ಈ ಚಿಕ್ಕ ವಯಸ್ಸಿನ ಹುಡುಗಿ ಎಲ್ಲಾ ರೀತಿಯಲ್ಲಿ ಹಿರಿಯನಾಗಿದ್ದ ತನ್ನ ಪತಿಯೊಂದಿಗೆ ಸರಿ ಸಮಾನಳಾಗಿ ಕಷ್ಟಸುಖಗಳಲ್ಲಿ ಹೆಗಲನ್ನಿತ್ತು, ಅವನ ಜೀವನದ ಎಲ್ಲಾ ರಂಗಗಳಲ್ಲೂ ಸಹಧರ್ಮಿಣಿಯಾದಳು.ಇವರ ವಿವಾಹ ಕಾಲದಲ್ಲಾಗಲೇ ರಾಮಯ್ಯನವರಿಗೆ ಮೊದಲನೇ ಪತ್ನಿಯಿದ್ದರು, ಆದರೆ ಆಕೆ ಇನ್ನೂ ತೌರು ಮನೆಯಲ್ಲೇ ಇದ್ದರು.ರಾಮಯ್ಯನವರು  ಆಗಿನ ಕಾಲಕ್ಕೆ ತುಂಬಾ ವಿದ್ಯಾವಂತರು, ಮತ್ತು ಕಾಶಿಯಂತಾ ಊರಿನಲ್ಲಿ ವಿದ್ಯಾಭ್ಯಾಸವನ್ನು ಪಡೆದ ಹೆಗ್ಗಳಿಕೆಯಿದ್ದವರು, ಈ ಎಲ್ಲ ಕಾರಣಗಳಿಂದ ಇವರ ವಿವಾಹ ರಾಮಯ್ಯನವರೊಂದಿಗೆ ನಡೆದಿರಬೇಕು. ಸಂಪ್ರದಾಯಸ್ಥ ಮನೆಯಲ್ಲಿ ಬೆಳೆದ ಈ ಹೆಣ್ಣುಮಗಳು ಪೂಜೆ, ಪುನಸ್ಕಾರ,ಮಡಿ-ಮೈಲಿಗೆಗಳೆಲ್ಲವನ್ನೂ ಚಿಕ್ಕಂದಿನಲ್ಲೇ ಮೈಗೂಡಿಸಿಕೊಂಡರು. ಈ ಮದುವೆಯ ನಂತರವೇ ರಾಮಯ್ಯನವರ ಮೊದಲನೇ ಪತ್ನಿ ಮನೆಸೇರಿದರು. ಆಗಿನ ಕಾಲದಲ್ಲಿ ಜನ ಅವಿಭಕ್ತ ಕುಟುಂಬಗಳಲ್ಲಿದ್ದುದರಿಂದ ಸುಖ ದುಃಖಗಳಲ್ಲಿ ಮನೆಮಂದಿಗಳು ಮತ್ತು ಬಂಧುಗಳೇ  ಜೊತೆಯಾಗುತ್ತಿದ್ದರು, ಹಾಗಾಗಿ ತುಂಬಿದ ಸಂಸಾರ ಅಂದಿನವರಿಗೆ ಬೇಕೆಂದು ಬಯಸುವ ವಿಚಾರವಾಗಿತ್ತು.</p>
<p>ಜಯಲಕ್ಷಮ್ಮನವರು ೧೯೧೬ರಲ್ಲಿ ವಿವಾಹವಾಗಿ ರಾಮಯ್ಯನವರ ಮನೆಸೇರಿದಾಗ ಅವರಿಗಿದ್ದ ಜವಾಬ್ದಾರಿ ಬಹಳ, ಅವರು ತಮ್ಮ ಪತಿಯ ಮೊದಲ ಪತ್ನಿಯೊಡನೆ ಎಲ್ಲವನ್ನು ಹಂಚಿಕೊಂಡು  ಯಾವುದೇ ಸಂಘರ್ಷಗಳಿಲ್ಲದೇ ಬಾಳಿದರು. ಕಟ್ಟಾ ಗಾಂಧಿವಾದಿಯಾಗಿದ್ದ ರಾಮಯ್ಯನವರು ಸಣ್ಣ ವಯಸ್ಸಿನಲ್ಲಿ ತುಂಬ ಕೋಪಿಷ್ಠರಾಗಿದ್ದರು, ಆ ದಿನಗಳಲ್ಲಿ ಒಮ್ಮೆ ತಮ್ಮಿಂದ ಕಿರಿಯರಾದ ಆ  ಪತ್ನಿಯರು(ಹುಡುಗಿಯರು) ತಾಂಬೂಲ ಸವಿಯುತ್ತಾ  ನಗುತ್ತಾ ಮಾತಿನಲ್ಲಿ ಇದ್ದಾಗ &#8220;ಲೋಕದಲ್ಲಿ ಮಂದಿ ಕಷ್ಟದಿಂದ ಬಳಲುತ್ತಿದ್ದರೆ ನೀವು ನಗುತ್ತಾ ಕುಳಿತಿರಲ್ಲಾ ?&#8221;ಎಂದು ಕುಪಿತರಾಗಿ ಕಪೋಲಕ್ಕಿಟ್ಟಿದ್ದರಂತೆ ! ಅವರ ಮೊದಲನೇ ಪತ್ನಿ ಕೆಲವೇ ವರ್ಷ ಬಾಳಿದರು.  ರಾಮಯ್ಯನವರಿಗೆ ತಾಯಿ ಮೇಲೆ ಹಾಗೂ ತಮ್ಮಂದಿರ ಮೇಲೆ ತುಂಬಾ ಪ್ರೀತಿ, ಇದರಿಂದ ಕೆಲವೊಮ್ಮೆ ಆ ಪುಟ್ಟ ಹುಡುಗಿ ಜಯಲಕ್ಷಮ್ಮ ವಿನಾ ಕಾರಣ ಪತಿಯಿಂದ ಶಿಕ್ಷೆ ಅನುಭವಿಸಿದ್ದರಂತೆ. ಆದರೆ ಅತ್ತೆಗೆ ಈ ಚಿಕ್ಕ ವಯಸ್ಸಿನ ಸೊಸೆಯ  ಮೇಲೆ ತುಂಬ ಅಕ್ಕರೆ, ಪ್ರೇಮವಿತ್ತು.</p>
<p>ಹದಿ ವಯಸ್ಸು ದಾಟುತ್ತಲೇ (೧೯೨೪-೧೯೨೯)ಅವರು ಮೊದಲ ಎರಡು ಗಂಡು ಮಕ್ಕಳ ತಾಯಿಯಾದರು. ಆ ದಿನಗಳಲ್ಲಿಯೇ ೧೯೨೭ರಲ್ಲಿ &#8220;ತಾಯಿನಾಡು&#8221; ಪತ್ರಿಕೆ ಮೈಸೂರಿನಲ್ಲಿ ಪ್ರಾರಂಭವಾಯಿತು. ಆರ್ಥಿಕವಾಗಿ ರಾಮಯ್ಯನವರು ಬಹಳ ಕಷ್ಟದಲ್ಲಿದ್ದರು, ಜೊತೆಗೆ ಆಗಿನ ಸರಕಾರವು ರಾಮಯ್ಯನವರ ದಿಟ್ಟ ಅಭಿಪ್ರಾಯಗಳನ್ನು ವಿರೋಧಿಸಿ ಅಡಚಣೆಗಳನ್ನು ಒಡ್ಡಹತ್ತಿತು. ಇದರಿಂದಾಗಿ ರಾಮಯ್ಯನವರು ಸಂಸಾರವನ್ನು ಮತ್ತು ಪತ್ರಿಕೋದ್ಯಮನ್ನು ಬೆಂಗಳೂರಿಗೆ ಸ್ಥಳಾಂತರಿಸಿದರು. ರಾಮಯ್ಯನವರಿಗೆ ಸಂಸಾರದ ಬೆಂಬಲವಿದ್ದುದರಿಂದ ಕೆಲಸ ಮುಂದುವರಿಯಿತು. ಮನೆ ಮಂದಿಗಳೆಲ್ಲಾ ಸೇರಿ ಬರಹ,ಮುದ್ರಣ,ವಿತರಣೆ ಎಂದು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಆ ಚಿಕ್ಕ ವಯಸ್ಸಿನಲ್ಲಿ(೨೦ರ ಹರೆಯ) ಪತಿಯ ಕೆಲಸ ಕಾರ್ಯಗಳಿಗೆ ಸಹಕಾರ,ತನ್ನ ಚಿಕ್ಕ ಮಕ್ಕಳ ಲಾಲನೆ-ಪಾಲನೆ, ಮನೆಯಲ್ಲಿರುವ ಹಿರಿಯರ-ಕಿರಿಯರ ಸುಖ-ದುಃಖಗಳ ವ್ಯವಸ್ಥೆ, ಮತ್ತು ಬರವಣಿಗೆ, ಪ್ರಕಟಣೆಗಳಲ್ಲಿ ಜೊತೆಗೂಡುತ್ತಿದ್ದ  ರಾಮಯ್ಯವರ ಒಡಹುಟ್ಟಿದ ಸಹೋದರರ ವಿದ್ಯಾಭ್ಯಾಸ ಎಂದು ಕೆಲಸ, ಜವಾಬ್ದಾರಿಗಳೆಲ್ಲವನ್ನೂ ಜಯಲಕ್ಷಮ್ಮನವರು ತುಂಬಾ ಸಹನೆ ಮತ್ತು ಸಹೃದಯತೆಯಿಂದ ನಿಭಾಯಿಸಿದರು. ಅವರ ಈ ಗುಣ ಹುಟ್ಟಿನಿಂದಲೇ ಬಂದ ಬಳುವಳಿ. ರಾಮಯ್ಯನವರಿಗೆ ನಾಲ್ಕು ಜನ ಸಹೋದರರು ಮತ್ತು ಒಬ್ಬಳು ತಂಗಿ, ಆ ತುಂಬಿದ ಮನೆಯಲ್ಲಿ ಬಂದು ಹೋಗುವ ಅತಿಥಿ, ಅಭ್ಯಾಗತರಿಗೆ ಕೊರತೆಯೇ ಇರುತ್ತಿರಲಿಲ್ಲ. ಅವರ ಮನೆಯ ಕದ ಸದಾ ತೆರೆದಿರುತ್ತಿತ್ತು. ಎಲ್ಲಾ ಸಂಸಾರ ತಾಪತ್ರಯಗಳೊಂದಿಗೇ ಈ ದಂಪತಿಗಳು ತಮ್ಮ ಪತ್ರಿಕೋದ್ಯಮವನ್ನು ಬೆಳೆಸಿದರು, ತಮ್ಮಂದಿರು ಪ್ರಾಪ್ತ ವಯಸ್ಕರಾದಾಗ ಅವರ ಮದುವೆ, ತಮ್ಮ ಮಕ್ಕಳ ಮುಂಜಿ, ವಿದ್ಯಾಭ್ಯಾಸಗಳನ್ನು ಪೂರೈಸಿದರು. ೪೦ರ ದಶಕದಲ್ಲಿ ಪತ್ರಿಕೆ ತಾಯಿನಾಡು ಏಳಿಗೆ ಹೊಂದುತ್ತಾ ಅವರ ಆರ್ಥಿಕ ಬವಣೆಗಳು ತಗ್ಗಿದವು. ೧೯೩೫-೪೨ ರ ಮಧ್ಯಕ್ಕಾಗುವಾಗ ಕೊನೆಯ ಮಕ್ಕಳಾದ ರಾಮೇಶ್ವರಿ ಮತ್ತು ವಿಶ್ವನಾಥರ ಜನನವಾಯಿತು. ಇವರು ಮನೆಮಂದಿಗಳಿಗೆ ಹಾಗೂ ಸಮೀಪವರ್ತಿಗಳಿಗೆ ಅಣ್ಣ- ಅಕ್ಕಮ್ಮ ಎಂದೇ ಪರಿಚಿತರು. ಇದು ರಾಮಯ್ಯ ಮತ್ತು ಜಯಲಕ್ಷಮ್ಮನವರು ತೋರಿದ ಪ್ರೀತಿ, ಅಕ್ಕರೆಯ ಫಲವಾಗಿತ್ತು.</p>
<p>ರಾಮಯ್ಯನವರು ತಮ್ಮ ಹದಿ ವಯಸ್ಸಿನಲ್ಲೇ ಆ ಕಾಲದ ವಿಚಾರಗಳಿಂದ ಭಿನ್ನವಾಗಿ ಯೋಚಿಸಿದವರು, ಬೆಳೆಸಿದ ಸ್ವಂತ ತಂದೆಯ ವಿಚಾರಗಳಿಗೆ ವಿರೋಧವಾಗಿ ಕಾಶಿಗೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಪೂರೈಸಿ, ನಂತರ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಿಸಿಯೇರುತ್ತಿದ್ದಾಗ ಅದರಲ್ಲಿ ಭಾಗಿಯಾಗುವುದು ತನ್ನ ಕರ್ತವ್ಯವೆಂದು ತಿಳಿದು ಪತ್ರಿಕೋದ್ಯಮಕ್ಕೆ ಇಳಿದವರು. ಅವರು ಪ್ರವಾಹದ ವಿರುದ್ಧ ಈಸುವ ಕೆಚ್ಚು ಮತ್ತು ಧೈರ್ಯವಿದ್ದ ವ್ಯಕ್ತಿ. ಅವರ ನಡೆ, ನುಡಿ, ಆಚಾರ,ವಿಚಾರ ಎಲ್ಲವೂ ಆಗಿನ ಸಮಾಜದ ಗತಿಯಿಂದ ತೀವ್ರವಿತ್ತು.ಆದರೆ ಅರ್ಧಾಂಗಿಯಾದ ಜಯಲಕ್ಷಮ್ಮನವರು ಪತಿಯೊಂದಿಗೆ ಸಮತೂಗಿಸಿಕೊಳ್ಳುವುದು, ಸುಖದುಃಖಗಳೊಂದಿಗೆ ಸಹಭಾಗಿಯಾಗಿರುವುದು ತಮ್ಮ ಕರ್ತವ್ಯವೆಂದು ಭಾವಿಸಿದರು, ಅವರು ತಮ್ಮ ಅನುಭವಗಳ ಒಳಿತು ಕೆಡಕುಗಳನ್ನು ಗ್ರಹಿಸಿಕೊಂಡರು. ಅವರ ಪ್ರಬುದ್ಧತೆ ನಾವು ಸಾಮಾನ್ಯವಾಗಿ ಕಾಣುವಂತೆ ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿ ಬಂದುದಲ್ಲ; ಬದಲಿಗೆ ಜೀವನದ ತಿದಿಗೆ ಒಡ್ಡಿ ತಿದ್ದಿ, ತೀಡಿ ಪರಿಷ್ಕೄತವಾದುದಾಗಿತ್ತು. ಅದರಲ್ಲಿ ಜನರ ಮೇಲಿನ ವಿಶ್ವಾಸ,ಪ್ರೀತಿ,ಉಳಿದವರ ಒಳಿತಿನ ಬಗ್ಗೆ ಕಳವಳ, ಸಮಾಜಕ್ಕೆ ತನ್ನಿಂದಾದ ಉಪಕಾರ ಮಾಡುವ ನಿಸ್ವಾರ್ಥ ಸೇವೆಯ ಮನೋಭಾವ ವ್ಯಕ್ತವಾಗುತಿತ್ತು.<br />
೧೯೪೨ರ ವೇಳೆಗಾಗುವಾಗ ಈ ದಂಪತಿಗಳು ಆರ್ಥಿಕವಾಗಿ ಸುಧಾರಿಸಿದ್ದರು, ಅವರು ತಾವು ವಾಸವಾಗಿದ್ದ ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯಿಂದ ಹೊಸದಾಗಿ ಬಸವನಗುಡಿಯಲ್ಲಿ ಕಟ್ಟಿಸಿಕೊಂಡ  ತುಂಬಿದ ಸಂಸಾರಕ್ಕೆ ಬೇಕಾದಂತಾ ವಿಶಾಲವಾದ ಮನೆಗೆ ಹೋದರು. ನಂತರ ಅವರಿಗೆ ಅಡಿಗೆ, ಮನೆಕೆಲಸಗಳಿಗೆ ಸಹಾಯಕ್ಕೆ ಸಹಾಯಕರೂ ಬಂದರು, ಇದರಿಂದಾಗಿ ಜಯಲಕ್ಷಮ್ಮನವರಿಗೆ ಬೇರೆಡೆ ಗಮನವೀಯಲು ಅವಕಾಶ, ಸಮಯ ದೊರೆಯಿತು. ತಮ್ಮ ಸಂಸಾರದ ಜವಾಬ್ದಾರಿ ಮತ್ತು ಕೆಲಸಗಳ ಮಧ್ಯೆ ಅವರು ಜನಸಂಪರ್ಕ ಬೆಳೆಸಿಕೊಂಡರು. ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ರವೀಂದ್ರನಾಥ ಠಾಗೋರ್,ವಿಜಯಲಕ್ಶ್ಮಿ ಪಂಡಿತ್,ಸರೋಜಿನಿ ನಾಯ್ಡು ಮುಂತಾದ ದೇಶಸೇವಕರ ನಡೆ ನುಡಿಗಳಿಂದ ಪ್ರಭಾವಿತರಾಗಿ, ಜನಸಾಮಾನ್ಯರ ಹಿತ ಸಾಧನೆಗೆ ದುಡಿಯುವ ಉನ್ನತ ಧ್ಯೇಯವನ್ನು ತಮ್ಮದಾಗಿಸಿಕೊಂಡರು.</p>
<p><img class="alignnone" src="http://lh4.ggpht.com/_bEdWeUlAeV4/TRTi4TiuvZI/AAAAAAAAE50/Y5c-bry3yMU/prjgar.jpghoovina%20hara.jpg" alt="" width="304" height="640" /></p>
<p>ರಾಮಯ್ಯನವರ ತಮ್ಮ ಶ್ರೀನಿವಾಸನ್ ರವರು ಹೇಳಿದಂತೆ ಜಯಲಕ್ಷಮ್ಮನವರು ವರ್ಣಾಶ್ರಮದಲ್ಲಿ ಆಳವಾಗಿ ವಿಶ್ವಾಸವನ್ನಿಟ್ಟಿರಲಿಲ್ಲ.ಫಲಾಪೇಕ್ಷೆಯಿಲ್ಲದ ಜನಸೇವೆಯ ಆದರ್ಶವನ್ನು ಹೊತ್ತು ಅವರು ಕಾಂಗ್ರೆಸ್ ಮತ್ತು ರಾಜಕೀಯವೆರಡನ್ನೂ ಪ್ರವೇಶಿಸಿದರು. ಜನರೊಡನೆ ಒಡನಾಟ ಅವರ ಬದುಕಿನ ಅಂಗವಾಯಿತು. ಅವರ ವಿಶಾಲ ಹೃದಯ ಹಾಗೂ ಆತ್ಮವಿಸ್ತಾರವೇ ಪರಮ ಜಯಕ್ಕೆ ಸಾಧನವಾಯಿತು. ಅವರು ಜೀವನವನ್ನು ಮತ್ತು ಜೀವಿಸುವುದನ್ನು ಬಹಳ ಮಹತ್ವದ್ದೆಂದು ನಂಬಿದ್ದರು. ಅವರು ಯಾವುದೇ ಸಾಧನೆಗೆ ಮನುಷ್ಯ ಪ್ರಯತ್ನ ಬಹಳ ಮುಖ್ಯ; ಹಾಗೂ ಪೌರುಷ ಪ್ರವೃತ್ತಿಯಲ್ಲಿ ನಂಬಿಕೆಯನ್ನಿಡಬೇಕು ಎನ್ನುತ್ತಿದ್ದರು.</p>
<p><img class="alignnone" src="http://lh5.ggpht.com/_bEdWeUlAeV4/TRTjOvMGiEI/AAAAAAAAE58/gQJ6RZCm-aI/akkcorp.jpgjayalak.jpg" alt="" width="200" height="117" /></p>
<p>ಮಹಿಳಾ ಕಾರ್ಪೋರೇಟರ್ ಕೆಲಸದಲ್ಲಿ ಮಗ್ನರಾಗಿ</p>
<p>ಜೀವನದುದ್ದಕ್ಕೂ ಬಂದೆಲ್ಲಾ ಸಮಸ್ಯೆಗಳಲ್ಲಿ ರಾಮಯ್ಯ ಜಯಲಕ್ಷಮ್ಮನವರಿಬ್ಬರೂ ಸಹಭಾಗಿಗಳಾಗಿದ್ದರೂ, ಅವರ ಗೃಹಕೃತ್ಯ ನಿಭಾಯಿಸುವುದು, ಸಂಸಾರದ ಮೇಲುಸ್ತುವಾರಿ  ಕೇವಲ ಜಯಲಕ್ಷಮ್ಮನವರದು. ಮನೆಯಲ್ಲಿ ಪ್ರಾರಂಭವಾದ ಸಾರ್ವಜನಿಕ ಕೃತ್ಯಗಳು ಅವರಿಗೆ ವಿಶಾಲಪ್ರಪಂಚವನ್ನೇ  ತೆರೆದಿಟ್ಟಿತು. ಅವರು ೧೯೫೭ರಲ್ಲಿ ಬೆಂಗಳೂರಿನ ಬಸವನಗುಡಿ ಪ್ರದೇಶದಿಂದ  ನಗರಸಭೆಗೆ ಮಹಿಳಾ ಕಾರ್ಪೋರೇಟರಾಗಿ ಚುನಾಯಿತರಾದರು. ಎರಡನೇ ಬಾರಿ ಚುನಾಯಿತರಾದಾಗ ಅವರನ್ನು ಉಪಮೇಯರಾಗಿ ನೇಮಿಸಲಾಯಿತು. ಅವರು ಈ ೮ ವರ್ಷಗಳ ಅವಧಿಯಲ್ಲಿ ಶ್ರೀಮತಿ ಲೀಲಾದೇವಿ ಪ್ರಸಾದರೊಂದಿಗೆ(ಇನ್ನೊಬ್ಬ ಮಹಿಳಾ ಕಾರ್ಪೋರೇಟರ್) ಒಡಗೂಡಿಕೊಂಡು ಬಹಳಷ್ಟು ಕೆಲಸಗಳನ್ನು ಮಾಡಿದರು. ಲೀಲಾದೇವಿಯವರು ಹೇಳಿದ ಸಣ್ಣದೊಂದು ಘಟನೆ ಜಯಲಕ್ಷಮ್ಮನವರ ಸಂಪ್ರದಾಯಬದ್ಧ ಆಚಾರಗಳ ಮೇಲೆ,ನಂಬಿಕೆಗಳ ಮೇಲೆ ಬೆಳಕು ಬೀರುತ್ತದೆ. ಬೆಳೆದು ಬಂದ ಪರಿಸರದ ಪ್ರಭಾವದಿಂದಾಗಿ ದೇವರು,ಪೂಜೆ,ಪುರಸ್ಕಾರಗಳಲ್ಲಿ ಬಹಳ ನಂಬಿಕೆಯಿದ್ದ ಜಯಲಕ್ಷಮ್ಮನವರು ಎಂದೂ ಸ್ನಾನ ಮತ್ತು ಪೂಜೆ ಮಾಡದೆ ನೀರನ್ನೂ ಸೇವಿಸಿದವರಲ್ಲ. ಇವರು  ಬೆಂಗಳೂರು ನಗರಸಭೆಗೆ ಕೆಲಸ ಮಾಡುತ್ತಿದ್ದಾಗ ರೈಲಿನಲ್ಲಿ ದೆಹಲಿಗೆ ಪ್ರಯಾಣಿಸುವ ಸಂದರ್ಭ ಬಂದಿತು. ಆಗ ೬೦ರ ದಶಕದಲ್ಲಿ ದೆಹಲಿಗೆ ಹೋಗಬೇಕಾದರೆ ಈಗಿನ ಚೆನ್ನೈಯಿಂದ ದಿನವಿಡೀ ರೈಲು ಪ್ರಯಾಣ ಮಾಡಬೇಕಾಗಿತ್ತು. ಪ್ರಯಾಣಕ್ಕೆ ತಂದ ತಿಂಡಿ-ತಿನಿಸುಗಳನ್ನು ತಮ್ಮೊಂದಿಗೆ ಬಂದವರಿಗೆ ಹಂಚಿದರು, ತಾವು ಮಾತ್ರ ಸ್ನಾನ ಮಾಡಿರದಿದ್ದುದರಿಂದ ನೀರನ್ನೂ ಕುಡಿಯದೇ ಬಾಕಿಯಾದರು. ಉಪವಾಸದಲ್ಲಿದ್ದ ಜಯಲಕ್ಷಮ್ಮನವರನ್ನು ಕಂಡು ಮುಜುಗರಗೊಂಡ ಲೀಲಾಪ್ರಸಾದರು ಅವರ ಸ್ನಾನಕ್ಕೆ ನಾಗಪುರದಲ್ಲಿ ರೈಲು ನಿಂತಾಗ ವ್ಯವಸ್ಥೆ ಮಾಡಿದರು. ಸ್ನಾನ ಪೂರೈಸಿದ ಜಯಲಕ್ಷಮ್ಮನವರು ಪುನಃ ಗಾಡಿ ಹತ್ತುವಷ್ಟರಲ್ಲಿ ರೈಲು ಹೊರಟೇಬಿಟ್ಟಿತು. ಮಡಿಯಲ್ಲಿದ್ದ ಅವರನ್ನು ಮೇಲೆಳೆದುಕೊಳ್ಳಲು ಆಸಾಧ್ಯವಾದುದರಿಂದ ಲೀಲಾಪ್ರಸಾದರು ರೈಲು ಹೊರಡಲು ಹಸುರು ನಿಶಾನೆ(ಪತಾಕೆ) ಹೊತ್ತು ನಿಂತಿದ್ದ ರೈಲ್ವೇಗಾರ್ಡನ ಕೈಸೆಳೆದು ಕೆಂಪು ನಿಶಾನೆಯನ್ನು ಎತ್ತಿ ಹಿಡಿದು ರೈಲು ನಿಲ್ಲುವಂತೆ ಮಾಡಿದರು. ಇದರಿಂದಾಗಿ ಇವರಿಬ್ಬರೂ ರೈಲ್ವೇ ಅಧಿಕಾರಿಗಳ ಅಸಮಾಧಾನಕ್ಕೊಳಗಾದರೂ ಈ ಘಟನೆಯನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತಾಯಿತು. ಹೀಗಿತ್ತು ಮಡಿಯಿಂದಾದ ಆವಾಂತರ ! ಈ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅವರೆಷ್ಟೋ ಕೊಳೆಗೇರಿ, ಸಣ್ಣ ಊರು, ಹಳ್ಳಿಗಳಿಗೆ ಭೇಟಿಯಿತ್ತು, ಜನರನ್ನು ಸಂಪರ್ಕಿಸಬೇಕಿತ್ತು.ಆಗೆಲ್ಲಾ ಅವರು ದಿನವಿಡೀ ಕೇವಲ ಎಳೆನೀರೊಂದನ್ನು ಮಾತ್ರ ಸೇವಿಸುತ್ತಿದ್ದರು, ರಾತ್ರಿಯಲ್ಲಿ ಎಲ್ಲಾದರೂ ತಂಗಿದರೆ ಸ್ವತಃ ತಾವೇ ಬೇಯಿಸಿ ಉಣ್ಣುತ್ತಿದ್ದರು. ಅವರೆಂದೂ ತಮ್ಮ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರಲಿಲ್ಲ, ತಮ್ಮ ನಿಲುವು, ಯೋಚನೆಗಳನ್ನು ಬದಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ನಂಬಿಕೆ, ವಿಚಾರಧಾರೆ ಕೆಲವೊಂದು ಕಾಲ ಹಾಗೂ ಅವರ ಜೀವನಾನುಭವಗಳಿಂದ ಬದಲಾದರೂ ಪ್ರತ್ಯೇಕ-ಪ್ರತ್ಯೇಕವಾಗಿ ವಿಂಗಡಿತವಾಗಿದ್ದವು. ಕ್ರಾಂತಿಕಾರೀ ವಿಚಾರಗಳನ್ನು ಅವರು ಒಪ್ಪದಿದ್ದರೂ ಅವರು ವಿಧವಾ ವಿವಾಹ,ದಾಂಪತ್ಯ ವಿಚ್ಛೇದನ, ಮರುವಿವಾಹಗಳು ಎದುರು ನಿಂತಾಗ ಅದನ್ನು ಖಂಡಿಸುತ್ತಿರಲಿಲ್ಲ, ಸ್ವೀಕರಿಸುತ್ತಿದ್ದರು ಮತ್ತು ಕೈಲಾದ ಸಹಾಯಕ್ಕೂ ಸಿದ್ಧರಿರುತ್ತಿದ್ದರು.</p>
<p>&nbsp;</p>
<p><img class="alignnone" src="http://lh4.ggpht.com/_bEdWeUlAeV4/TRYwCmCDcGI/AAAAAAAAE7M/x3Vq-RTq1aQ/s640/scan0003.jpgjayalakshamma.jpg" alt="" width="316" height="519" /></p>
<p>ನಿರ್ಗತಿಕ ಹೆಣ್ಣುಮಕ್ಕಳಿಗೆಂದು ಪ್ರಾರಂಭಿಸಿದ ಅಬಲಾಶ್ರಮ, ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ  ನಡೆಸುತ್ತಿದ್ದ ಗೋಕುಲಂ ಗಾರ್ಡನ್ ಶಾಲೆ, ಅಶಕ್ತ ಪೋಷಕ ಸಭಾ ಇವು ಕೆಲವೊಂದು ಅವರು ಕಟ್ಟಿದ ಸಂಘ-ಸಂಸ್ಥೆಗಳು. ಅವರು ಎಷ್ಟೋ ಬಾರಿ ಈ ಸಂಸ್ಥೆಗಳಿಗೆ ತಮ್ಮ ಸ್ವಂತ ಸಂಪತ್ತನ್ನು ವಿನಿಯೋಗಿಸಿ ಮನೆಯವರ ವಿರೋಧವನ್ನು ಕಟ್ಟಿಕೊಂಡದ್ದೂ ಇದೆ. ಅಲ್ಲಿನ ಮಕ್ಕಳು, ಹೆಣ್ಣುಮಕ್ಕಳು ಅವರಿಗೆ ತಮ್ಮ ಸ್ವಂತದವರೆಂಬ ಭಾವನೆಯಿತ್ತು, ಅವರು ಬಡವ ಬಲ್ಲಿದರೆಂಬ ಬೇಧವಿಲ್ಲದೇ ಎಲ್ಲರನ್ನೂ ಪ್ರೀತಿಸಿದರು. ರಾಮಯ್ಯನವರು ರಾಜಕೀಯದಲ್ಲಿ ಕ್ರಿಯಾಶೀಲರಾಗಿದ್ದಾಗ  ಜಯಲಕ್ಷಮ್ಮನವರು ತಾವಿದ್ದ ಬಸವನಗುಡಿ ಪ್ರದೇಶದ ಕೊಳೆಗೇರಿಯಲ್ಲಿ ಅಲ್ಲಿನ ಮಕ್ಕಳಿಗೆಂದು ಶಾಲೆಯೊಂದು ಪ್ರಾರಂಭಿಸಿದರು.  ಅವರ ನಿರಂತರ ಭೇಟಿ, ಮತ್ತು  ಸಂಪರ್ಕಗಳಿಂದ ಜನರ ಮನವೊಲಿಸಿ  ಮಕ್ಕಳನ್ನು ಶಾಲೆಗೆ ಕಳುಹುವಂತೆ ಮಾಡುವುದರಲ್ಲಿ ಜಯಶೀಲರಾದರು. ನಂತರ ಈ ಶಾಲೆಯಲ್ಲಿ ಮಕ್ಕಳು ಕ್ರಮೇಣ ಮುಂದುವರಿದು ಪ್ರಾಥಮಿಕ ವಿದ್ಯಾಭ್ಯಾಸದಿಂದ ಮೇಲಿನ ಹಂತಕ್ಕೆ ಮುಂದುವರಿಯಲೂ ವ್ಯವಸ್ಥೆ ಮಾಡಲಾಯಿತು.</p>
<p><img class="alignnone" src="http://lh5.ggpht.com/_bEdWeUlAeV4/TRY3PfKlodI/AAAAAAAAE8M/Grz0WYBZBgw/scan0006.jpggokulam%20garden.jpg" alt="" width="314" height="421" /></p>
<p>ಅವರ ಕೊನೆಯ ದಿನಗಳಲ್ಲಿ ಕಣ್ಣಂತಿದ್ದ ಗೋಕುಲಮ್ ಗಾರ್ಡನ್ ಶಾಲೆ</p>
<p>ಅವರು ಯಾವುದೇ ಕೆಲಸವನ್ನು ಹಿಡಿದರೂ ಅದನ್ನು ಕೊನೆಯೆತ್ತಿಸದೇ ಬಿಡುತ್ತಿರಲಿಲ್ಲ. ಅವರ ಎಷ್ಟೋ ಸಂಬಂಧಿಗಳ ಮಕ್ಕಳಿಗೆ ಮನೆಯಲ್ಲಿ ಆಶ್ರಯ ಕೊಟ್ಟು, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿದ್ದರು. ಕೊನೆಯ ಮಕ್ಕಳು ರಾಮೇಶ್ವರಿ ಮತ್ತು ವಿಶ್ವನಾಥರು ಬೆಳೆಯುತ್ತಿದ್ದಾಗ ಅವರು ಮನೆಯಲ್ಲಿ ಉಪಸ್ಥಿತರಿದ್ದ ಬೇರೆ ಹಿರಿಯರನ್ನವಲಂಬಿಸುತ್ತಿದ್ದರು, ಆ ಕಾಲಕ್ಕಾಗುವಾಗಲೇ ಜಯಲಕ್ಷಮ್ಮನವರು ಸಾರ್ವಜನಿಕ ಕೆಲಸಗಳಿಗೆ ಇಳಿದಿದ್ದರು. ಆಗಲೆಲ್ಲಾ ಅವರು ಹೆಚ್ಚಾಗಿ ಬೆಳಗ್ಗೆ ಮನೆಯಿಂದ ಹೊರಟರೆ ರಾತ್ರೆಗಾಗುವಾಗಲೇ ಹಿಂದಕ್ಕೆ ಬರುತ್ತಿದ್ದರು. ಅವರ ಅದ್ಭುತ ಗ್ರಹಣಶಕ್ತಿ ಅವರೊಂದಿಗೆ ಕೆಲಸ ಮಾಡಿದ ಮಂದಿಗಳಿಗೆ ಅನುಭವಕ್ಕೆ ಬಂದಿದೆ. ಅವರ ಚೈತನ್ಯಶೀಲ ಪ್ರವೃತ್ತಿ ಯಾವುದೇ ಹೊಸ ವಿಚಾರವನ್ನು ನೋಡಿದಾಗಲೂ ಇದರಿಂದ ನಾಲ್ಕು ಮಂದಿ ಹೇಗೆ ಉಪಯೋಗ ಪಡೆಯಬಹುದೆಂದು ವಿಚಾರ ಮಾಡುತ್ತಿತ್ತು.</p>
<p><img class="alignnone" src="http://photos1.blogger.com/blogger/1692/3969/320/PICT0034.0.jpg" alt="" width="202" height="320" /><br />
ದಂಪತಿಗಳಿಬ್ಬರೂ ಕಟ್ಟಿ ಸ್ವತಃ ಬೆಳೆಸಿದ ತಾಯಿನಾಡು ಪತ್ರಿಕೆ ಹಸ್ತಾಂತರವಾದಾಗ ತುಂಬಾ ನೊಂದರು, ಆ ನಂತರ ಅವರನ್ನು ಕಾಡಿದ ಸಂಕಷ್ಟಗಳ ಸಂದರ್ಭದಲ್ಲಿ ಅವರಿಗೆ ಸಾಂತ್ವಾನ ನೀಡಿದ ವಿಚಾರವೆಂದರೆ,  ಗಾಂಧೀಜಿಯವರು ರಾಮಯ್ಯನವರ ಡೈರಿಯಲ್ಲಿ ಬರೆದ ಭಗವದ್ಗೀತೆಯ ಈ ಕೆಳಗಿನ ಸಾಲುಗಳು.<br />
ಸುಖದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ !<br />
ತತೋ ಯುದ್ಧಾಯ ಯುಜಸ್ವ ನೈವಂ ಪಾಪಮವಾಪ್ಸ್ಯಸಿ !<br />
ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧದಲ್ಲಿ ತೊಡಗಿದಾಗ, ನೀನು ಯಾವುದೇ ಪಾಪಗಳಲ್ಲೂ  ಪಾಲ್ಗೊಳ್ಳದೇ ಮುಕ್ತನಾಗುತ್ತೀಯ.<br />
೧೯೭೧ರಲ್ಲಿ ರಾಮಯ್ಯನವರ ನಿಧನರಾದಾಗ ಅವರು ದುಃಖ ಪಟ್ಟರೂ ಕಂಗೆಡಲಿಲ್ಲ.<br />
ದಂಪತಿಗಳಿಬ್ಬರನ್ನು ಹತ್ತಿರದಿಂದ ಬಲ್ಲವರು ಜಯಲಕ್ಷಮ್ಮನಂತ ಪತ್ನಿಯಿದ್ದುದರಿಂದ ರಾಮಯ್ಯನವರು ಇಷ್ಟೊಂದು ಕೆಲಸ ಮಾಡುವಂತಾಯಿತೋ, ಅಥವಾ ರಾಮಯ್ಯನವರಂತ ಪತಿಯಿದ್ದುದರಿಂದ ಜಯಲಕ್ಷಮ್ಮ ಇಂತಾ ಸಾಧನೆ ಮಾಡುವಂತಾಯಿತೋ ಎಂದು ಉದ್ಘಾರವೆತ್ತಿದ್ದಾರೆ. ಅವರಿಬ್ಬರಲ್ಲೂ ಅಸಾಧಾರಣ ಚೈತನ್ಯವಂತೂ ಅಡಗಿತ್ತು.   ಅವರು ತಮ್ಮ ಬದರಿಕಾಶ್ರಮದ ಯಾತ್ರೆಯ ನಂತರ ಸ್ವಂತ ಅನುಭವಗಳನ್ನಾಧರಿಸಿ ವಿವರವಾಗಿ ಪುಸ್ತಕವನ್ನು ಬರೆದರು. ಹಾಗೇ ಅವರು ತಮ್ಮ ವಿಚಾರ ಧಾರೆಗಳನ್ನು ಪ್ರಸ್ತುತ ಪಡಿಸಿ ಲೇಖನಗಳನ್ನು, ತಮಗೆ ತಿಳಿದಿದ್ದ ಪದ್ಯ, ಶ್ಲೋಕಗಳನ್ನು ಪುಸ್ತಕ ರೂಪದಲ್ಲಿ ಬರೆದು ಪ್ರಕಟಿಸಿದ್ದಾರೆ. ಇವರಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಭಿರುಚಿಯಿತ್ತು. ವೇದಿಕೆಯ ಮೇಲೆ ವೇಷ ಧರಿಸಿ ಅವರು ನಾಟಕವನ್ನಾಡಿದ್ದಾರೆ. ಅವರಿಗೆ ತಾವು ಹೆಚ್ಚಿನ ವಿದ್ಯಾಭ್ಯಾಸ ಹೊಂದಲಿಲ್ಲ ಎಂಬ ಕೊರಗು ಒಳಗಿಂದ ಇತ್ತು. ತಮಗೆ ತಿಳಿದ ಇಂಗ್ಲಿಷ್ ಭಾಷೆಯಲ್ಲಿ ಅವರು ಸಂಭಾಷಿಸುತ್ತಿದ್ದರು. ೧೯೬೩ರಲ್ಲಿ ಜಯಲಕ್ಷಮ್ಮನವರ ಕೆಲಸಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರ ಪ್ರಶಸ್ತಿಯಿತ್ತು ಗೌರವಿಸಿತು. ಅವರ ಅನವರತ ದುಡಿಮೆಯಿಂದಾಗಿ ಅರೋಗ್ಯ ಕ್ಷೀಣಿಸಿತು, ೧೯೯೧ರ ಎಪ್ರಿಲ್ ೨೦ರಂದು ಅವರು ತಮ್ಮೆಲ್ಲಾ ಕೆಲಸಗಳಿಗೆ ಪೂರ್ಣ ವಿರಾಮ ಹಾಕಿದರು.  ೨೦೦೮ ರ ಜುಲೈ ೬ ರಂದು ಅವರ ೧೦೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕುಟುಂಬದವರು ಮತ್ತು ಅಭಿಮಾನಿಗಳು ಒಟ್ಟುಗೂಡಿ ಶತಮಾನೋತ್ಸವವನ್ನಾಚರಿಸಿದರು. ಆ ಸಂದರ್ಭದಲ್ಲಿ  ಅವರ ನೆನಪುಗಳನ್ನು ಪ್ರಸ್ತುತ ಪಡಿಸಿದ &#8220;ಸ್ಮರಣೀಯ ಚೇತನ&#8221;ವೆಂಬ ಪುಸ್ತಕವೊಂದನ್ನು ಬಿಡುಗಡೆಗೊಳಿಸಲಾಯಿತು.</p>
<p><strong>ಈ ಲೇಖನವನ್ನು ಬರೆಯಲು ಮಾಹಿತಿಗಳನ್ನು ಒದಗಿಸಿದ ಶ್ರೀಯುತ  ಪಿ.ಆರ್.ವಿಶ್ವನಾಥರಿಗೆ( ರಾಮಯ್ಯನವರ -ಜಯಲಕ್ಷಮ್ಮನವರ ಕೊನೆಯ ಮಗ-ಪ್ರಸ್ತುತ ಬೆಂಗಳೂರು ನಗರ ನಿವಾಸಿ)  ನನ್ನ ಕೃತಜ್ಞತೆಗಳು.</strong></p>
<p>http://www.tainadu.blogspot.com/</p>
<p>ಈ ಮೇಲಿನ ಲಿಂಕ್ ಉಪಯೋಗಿಸಿ ಜಯಲಕ್ಷಮ್ಮನವರ ಜೀವನ ಮತ್ತು ಕೆಲಸಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/84/"><img alt="" border="0" src="http://feeds.wordpress.com/1.0/comments/shailajasbhat.wordpress.com/84/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/84/"><img alt="" border="0" src="http://feeds.wordpress.com/1.0/delicious/shailajasbhat.wordpress.com/84/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/84/"><img alt="" border="0" src="http://feeds.wordpress.com/1.0/facebook/shailajasbhat.wordpress.com/84/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/84/"><img alt="" border="0" src="http://feeds.wordpress.com/1.0/twitter/shailajasbhat.wordpress.com/84/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/84/"><img alt="" border="0" src="http://feeds.wordpress.com/1.0/stumble/shailajasbhat.wordpress.com/84/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/84/"><img alt="" border="0" src="http://feeds.wordpress.com/1.0/digg/shailajasbhat.wordpress.com/84/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/84/"><img alt="" border="0" src="http://feeds.wordpress.com/1.0/reddit/shailajasbhat.wordpress.com/84/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=84&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2010/12/25/%e0%b2%aa%e0%b2%bf-%e0%b2%86%e0%b2%b0%e0%b3%8d-%e0%b2%9c%e0%b2%af%e0%b2%b2%e0%b2%95%e0%b3%8d%e0%b2%b7%e0%b2%ae%e0%b3%8d%e0%b2%ae/feed/</wfw:commentRss>
		<slash:comments>4</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://lh4.ggpht.com/_bEdWeUlAeV4/TRTjDYui7mI/AAAAAAAAE54/yUdvyCzX1iI/indiakk.JPGindira.JPG" medium="image" />

		<media:content url="http://lh4.ggpht.com/_bEdWeUlAeV4/TRY4tpx_SfI/AAAAAAAAE8k/UP7bRYBjyuU/akkvija.jpg%20vijayalakshmi%20pandit.jpg" medium="image" />

		<media:content url="http://lh4.ggpht.com/_bEdWeUlAeV4/TRTi4TiuvZI/AAAAAAAAE50/Y5c-bry3yMU/prjgar.jpghoovina%20hara.jpg" medium="image" />

		<media:content url="http://lh5.ggpht.com/_bEdWeUlAeV4/TRTjOvMGiEI/AAAAAAAAE58/gQJ6RZCm-aI/akkcorp.jpgjayalak.jpg" medium="image" />

		<media:content url="http://lh4.ggpht.com/_bEdWeUlAeV4/TRYwCmCDcGI/AAAAAAAAE7M/x3Vq-RTq1aQ/s640/scan0003.jpgjayalakshamma.jpg" medium="image" />

		<media:content url="http://lh5.ggpht.com/_bEdWeUlAeV4/TRY3PfKlodI/AAAAAAAAE8M/Grz0WYBZBgw/scan0006.jpggokulam%20garden.jpg" medium="image" />

		<media:content url="http://photos1.blogger.com/blogger/1692/3969/320/PICT0034.0.jpg" medium="image" />
	</item>
		<item>
		<title>ಪಾಲಹಳ್ಳಿ ರಾಮಯ್ಯನವರು &#8220;ತಾಯಿ ನಾಡು &#8221; ಕನ್ನಡದ  ಜನಪ್ರಿಯ ವಾರ್ತಾಪತ್ರಿಕೆಯ ಸ್ಥಾಪಕರು</title>
		<link>http://shailajasbhat.wordpress.com/2010/10/24/%e0%b2%aa%e0%b2%be%e0%b2%b2%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%b0%e0%b2%be%e0%b2%ae%e0%b2%af%e0%b3%8d%e0%b2%af%e0%b2%a8%e0%b2%b5%e0%b2%b0%e0%b3%81-%e0%b2%a4%e0%b2%be%e0%b2%af/</link>
		<comments>http://shailajasbhat.wordpress.com/2010/10/24/%e0%b2%aa%e0%b2%be%e0%b2%b2%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%b0%e0%b2%be%e0%b2%ae%e0%b2%af%e0%b3%8d%e0%b2%af%e0%b2%a8%e0%b2%b5%e0%b2%b0%e0%b3%81-%e0%b2%a4%e0%b2%be%e0%b2%af/#comments</comments>
		<pubDate>Sun, 24 Oct 2010 18:11:54 +0000</pubDate>
		<dc:creator>my pen from shrishaila</dc:creator>
				<category><![CDATA[Life History]]></category>
		<category><![CDATA[ಕಾಶಿ]]></category>
		<category><![CDATA[ಗಾಂಧೀಜಿ]]></category>
		<category><![CDATA[ತಾಯಿ ನಾಡು]]></category>
		<category><![CDATA[ಪಿ.ಆರ್.ಜಯಲಕ್ಷಮ್ಮ]]></category>
		<category><![CDATA[ಪಿ.ಆರ್.ರಾಮಯ್ಯನವರು]]></category>
		<category><![CDATA[ಮದನ ಮೋಹನ ಮಾಲವೀಯ]]></category>
		<category><![CDATA[ಮೈಸೂರು ಸಂಸ್ಥಾನ]]></category>
		<category><![CDATA[ಸ್ವಾತಂತ್ರ್ಯ ಚಳವಳಿ]]></category>

		<guid isPermaLink="false">http://shailajasbhat.wordpress.com/?p=74</guid>
		<description><![CDATA[ಕಾಲಗತಿಯಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ,ಅವರಲ್ಲಿ ಕೆಲವರೇ ತಮ್ಮ ವ್ಯಕಿತ್ವ, ಕೆಲಸಗಳಿಂದ ತಾವು ಮೇಲಕ್ಕೇರುತ್ತಾರಲ್ಲದೇ, ತಮ್ಮ ಸಂಪರ್ಕಕ್ಕೆ ಬಂದ ಮಂದಿಗಳ ಜೀವನದಲ್ಲೂ ಪ್ರಭಾವ ಬೀರುತ್ತಾರೆ. ಇನ್ನು ಕೆಲವರು ತಮ್ಮ ಅಪರೂಪವಾದ ವ್ಯಕ್ತಿತ್ವ,ಬೌದ್ಧಿಕ ಸಾಮರ್ಥ್ಯ,ಧ್ಯೇಯಗಳಿಂದ ತಾವು ಬಾಳಿ, ಉಂಡ ನೆಲಕ್ಕೆ ,ತಮ್ಮ ಸಮಾಜಕ್ಕೆ ಕೊಡುಗೆಯನ್ನಿತ್ತು  ತೆರಳುತ್ತಾರೆ. ಇಂತಹ ಹಿರಿಜೀವಿಗಳಲ್ಲೊಬ್ಬರು ಪಾಲಹಳ್ಳಿ ರಾಮಯ್ಯನವರು; ಅವರ ಪತ್ನಿ ಶ್ರೀಮತಿ ಜಯಲಕ್ಷಮ್ಮನವರು ಅವರಿಗೆ ಅನುರೂಪರಾಗಿದ್ದವರು.ಈ ದಂಪತಿಗಳಿಬ್ಬರೂ ಕನ್ನಡಮ್ಮನ ಸೇವೆ  ಮಾಡಿದ ಮತ್ತು ತಾಯಿ ನಾಡಿಗಾಗಿ ದುಡಿದ (ದೇಶದ ಸ್ವಾತಂತ್ರ್ಯಕ್ಕೆ ದುಡಿದವರು) ಗೌರವಾನ್ವಿತ ವ್ಯಕ್ತಿಗಳು. [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=74&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p>ಕಾಲಗತಿಯಲ್ಲಿ ಎಷ್ಟೋ ಮಂದಿ ಬಂದು ಹೋಗುತ್ತಾರೆ,ಅವರಲ್ಲಿ ಕೆಲವರೇ ತಮ್ಮ ವ್ಯಕಿತ್ವ, ಕೆಲಸಗಳಿಂದ ತಾವು ಮೇಲಕ್ಕೇರುತ್ತಾರಲ್ಲದೇ, ತಮ್ಮ ಸಂಪರ್ಕಕ್ಕೆ ಬಂದ ಮಂದಿಗಳ ಜೀವನದಲ್ಲೂ ಪ್ರಭಾವ ಬೀರುತ್ತಾರೆ. ಇನ್ನು ಕೆಲವರು ತಮ್ಮ ಅಪರೂಪವಾದ ವ್ಯಕ್ತಿತ್ವ,ಬೌದ್ಧಿಕ ಸಾಮರ್ಥ್ಯ,ಧ್ಯೇಯಗಳಿಂದ ತಾವು ಬಾಳಿ, ಉಂಡ ನೆಲಕ್ಕೆ ,ತಮ್ಮ ಸಮಾಜಕ್ಕೆ ಕೊಡುಗೆಯನ್ನಿತ್ತು  ತೆರಳುತ್ತಾರೆ. ಇಂತಹ ಹಿರಿಜೀವಿಗಳಲ್ಲೊಬ್ಬರು ಪಾಲಹಳ್ಳಿ ರಾಮಯ್ಯನವರು; ಅವರ ಪತ್ನಿ ಶ್ರೀಮತಿ ಜಯಲಕ್ಷಮ್ಮನವರು ಅವರಿಗೆ ಅನುರೂಪರಾಗಿದ್ದವರು.ಈ ದಂಪತಿಗಳಿಬ್ಬರೂ ಕನ್ನಡಮ್ಮನ ಸೇವೆ  ಮಾಡಿದ ಮತ್ತು ತಾಯಿ ನಾಡಿಗಾಗಿ ದುಡಿದ (ದೇಶದ ಸ್ವಾತಂತ್ರ್ಯಕ್ಕೆ ದುಡಿದವರು) ಗೌರವಾನ್ವಿತ ವ್ಯಕ್ತಿಗಳು.</p>
<p><img src="http://lh5.ggpht.com/_bEdWeUlAeV4/THqdbqMkSPI/AAAAAAAAD7g/EOmlQtNA7TU/PICT0034.0.jpg%20ramayya%20couple.jpg" alt="" width="202" height="320" /></p>
<p>ಜೀವನದ ಸಂಜೆಯಲ್ಲಿ ಸಂತೃಪ್ತ ರಾಮಯ್ಯನವರು ಮತ್ತು ಜಯಲಕ್ಷಮ್ಮನವರು</p>
<p>ಸ್ವಾತಂತ್ರ್ಯಪೂರ್ವದ ಮೈಸೂರು ಸಂಸ್ಥಾನದಲ್ಲಿ ಜನಜಾಗೃತಿಯನ್ನು ಉಂಟುಮಾಡಲು ಪತ್ರಿಕೆ ತಾಯಿನಾಡು ಜನ್ಮವೆತ್ತಿತು, ಇದು ಕನ್ನಡದ ಜನಪ್ರಿಯ ವಾರ್ತಾಪತ್ರಿಕೆ, ಪಾಲಹಳ್ಳಿ ರಾಮಯ್ಯನವರು ಅದರ ಸ್ಥಾಪಕರು. ಇವರು ಕಟ್ಟಾಗಾಂಧೀವಾದಿ, ವಿದ್ಯಾರ್ಥಿಯಾಗಿದ್ದಾಗ ಗಾಂಧೀಜಿಯ ಆದರ್ಶವನ್ನು ಸಾಧಿಸುವುದಕ್ಕಾಗಿ ವಾರಣಾಸಿಯಲ್ಲಿ(ಕಾಶಿ) ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಧೀರ ವ್ಯಕ್ತಿ.  ರಾಮಯ್ಯನವರು ಮತ್ತು ಜಯಲಕ್ಷಮ್ಮನವರು ತಮ್ಮ ಕುಟುಂಬದವರನ್ನೆಲ್ಲ ಒಡಗೂಡಿಸಿಕೊಂಡು ತಾಯಿನಾಡು ಪತ್ರಿಕೆಯನ್ನು ಕಟ್ಟಿ ಬೆಳೆಸಿದರು. ಅವರೀರ್ವರು ತಾವು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡದ್ದಲ್ಲದೇ, ಪತ್ರಿಕಾ ಮಾಧ್ಯಮದಿಂದ ಜನರಲ್ಲಿ ದೇಶಪ್ರೇಮ, ಜಾಗೃತಿಯನ್ನು ಮೂಡಿಸಿದರು. ರಾಮಯ್ಯನವರು ಕೆಲ ಸಮಯ ಜೈಲುವಾಸವನ್ನು ಕೂಡಾ ಅನುಭವಿಸಿದರು. ದಂಪತಿಗಳಿಬ್ಬರು ಹತ್ತಿರದವರಿಗೆ ಅಣ್ಣ ಮತ್ತು ಅಕ್ಕಮ್ಮ ಎಂದೇ ಪರಿಚಿತರು. ಆ ಹೆಸರಿಗೆ ಅನ್ವರ್ಥಕರಾಗಿ ಹಿರಿಯಣ್ಣನಾಗಿ, ದಾರಿದೀಪವಾಗಿ, ಒಡನಾಡಿಗಳನ್ನು ವಾತ್ಸಲ್ಯದಿಂದ ನಡೆಸಿಕೊಂಡರು. ಇವರಿಬ್ಬರ ಕಾರ್ಯವೈಖರಿ ಪರಸ್ಪರ ಭಿನ್ನವಾಗಿದ್ದು ಒಂದಕ್ಕೊಂದು ಪೂರಕವಾಗಿತ್ತು.</p>
<p>ರಾಮಯ್ಯನವರ ಪೂರ್ವಜರು ಶ್ರೀರಂಗಪಟ್ಟಣದ ಹತ್ತಿರದ ಪಾಲಹಳ್ಳಿ ಎಂಬ ಸಣ್ಣ ಊರಿನವರು. ತಂದೆ ರಾಮಸ್ವಾಮಯ್ಯ ತಮ್ಮ ಸಂಸಾರದ ಹೊಟ್ಟೆ, ಬಟ್ಟೆಗಾಗಿ ಮೈಸೂರಿನಲ್ಲಿ ಮರದ ವ್ಯಾಪಾರಿಯೊಬ್ಬನಲ್ಲಿ ಉದ್ಯೋಗ ಮಾಡುತ್ತಿದ್ದರು.ಹಿರಿ ಮಗ  ರಾಮಯ್ಯನವರಿಗೆ (೧೮೯೪ ರಲ್ಲಿ ಇವರ ಜನನ) ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲೇ ನಡೆಯಿತು. ತಂದೆ ಕಟ್ಟಾಸಂಪ್ರದಾಯವಾದಿಗಳು, ಧರ್ಮಬೀರು; ಅವರಿಗೆ ಮಗನ ಯೋಗ್ಯತೆಗಿಂತ  ಜ್ಯೊತಿಷಿ ಹೇಳಿದ ಅವನ ಭವಿಷ್ಯವಾಣಿಯ ಮೇಲೆ ನಂಬಿಕೆ.   ಆದರೆ ಮಗ ತಂದೆಯ ಒಪ್ಪಿಗೆಯಿಲ್ಲದೇ, ಮನೆಯಲ್ಲಿ ಅರುಹದೇ, ದುಡ್ಡು ತೆಗೆದುಕೊಂಡು ೧೯೧೩ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಯುತ್ತಲೇ ವಾರಣಾಸಿಯತ್ತ ವಿದ್ಯಾಭ್ಯಾಸಕ್ಕೆಂದು ಹೊರಟು ಹೋದ, ಅಲ್ಲಿ ರಾಮಯ್ಯನಿಗೆ ಇಡಬೇಕಾದ ಪ್ರತಿಹೆಜ್ಜೆಗೂ ಬಹಳ ಕಷ್ಟಪಡಬೇಕಾಗಿ ಬಂತು. ರಾಮಯ್ಯನವರು ತೋರಿದ ಈ ಧೈರ್ಯ, ದಿಟ್ಟತನ,ಛಲ ಮತ್ತು ಆತ್ಮವಿಶ್ವಾಸ ಜೀವನದುದ್ದಕ್ಕೂ ಗೋಚರವಾಗುತ್ತದೆ.  ಮುಂದೆ ಇದೇ ಸಾಹಸ ಪ್ರವೃತ್ತಿಯಿಂದ  ಜೀವನದ ಎಲ್ಲಾ ಸಂಗ್ರಾಮಗಳನ್ನು ಹೋರಾಡಿ ಗೆಲ್ಲುವಂತಾಯಿತು.</p>
<p>ಕಾಶೀ ಸೆಂಟ್ರಲ್ ಕಾಲೇಜಿನಲ್ಲಿ ರಾಮಯ್ಯನವರ ಬಿ.ಎಸ್.ಸಿ. ವಿದ್ಯಾಭ್ಯಾಸ ೧೯೧೩-೧೯೨೦ ರ ಕಾಲದಲ್ಲಿ  ನಡೆಯಿತು. ಅಲ್ಲಿ ಓದುತ್ತಿದ್ದ ಸಂದರ್ಭದಲ್ಲೇ  ಅವರಿಗೆ ಸ್ವಾತಂತ್ರ್ಯ ಚಳವಳಿಯ ಅರಿವು, ಚಳವಳಿಕಾರರ ಸಂಕಷ್ಟಗಳು, ಅವರ ಮಹತ್ತರವಾದ ತ್ಯಾಗಗಳು ತಿಳಿದವು. ಅವರಿದ್ದ ವಿದ್ಯಾಸಂಸ್ಥೆಯ ಉಪ ಕುಲಪತಿಗಳು ಮದನ ಮೋಹನ ಮಾಲವೀಯರು. ಆಗಷ್ಟೇ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ತಮ್ಮ ದೇಶಕ್ಕೆ ಹಿಂದಿರುಗಿ, ದೇಶದ ಪರಿಸ್ಥಿತಿಯ ಬದಲಾವಣೆಗೆ ಶ್ರಮಿಸಲು ತೊಡಗಿದ್ದರು. ಗಾಂಧೀಜಿ ಭಾರತದಾದ್ಯಂತ ತಮ್ಮ ಸಹಚರರೊಡನೆ ಸಂಚರಿಸಿ, ಜನಮನದಲ್ಲಿ ಜಾಗೃತಿ, ದೇಶಪ್ರೇಮವನ್ನು ಎಚ್ಚರಗೊಳಿಸುತ್ತಿದ್ದರು. ಇಂತಹ ಸಭೆಯೊಂದರಲ್ಲಿ ಗಾಂಧೀಜಿಯ ಭಾಷಣವನ್ನು ಕೇಳಿ  ರಾಮಯ್ಯನವರ ಭವಿಷ್ಯದ ಯೋಜನೆಗಳು ಬದಲಾದವು. ಅವರು ತಾವು ಓದುತ್ತಿದ್ದ ರಾಸಾಯನಶಾಸ್ತ್ರ  ಸ್ನಾತಕೋತ್ತರ (Chemistry M.Sc )ಪದವಿಯನ್ನು (೧೯೨೦ ರಲ್ಲಿ) ೨ನೇ ವರ್ಷದಲ್ಲಿ ಕೊನೆಯ ಪರೀಕ್ಷೆಗೆ ಮೊದಲೇ ಕೈಬಿಡುವ ನಿರ್ಧಾರವನ್ನು ಕೈಗೊಂಡರು. ಅವರ ಈ ನಿರ್ಧಾರ ಗಾಂಧೀಜಿಯ ಹೇಳಿಕೆಯ ಪ್ರೇರಣೆಯಿಂದಾಗಿತ್ತು. ಆ ದಿನಗಳಲ್ಲಿ ಪ್ರಾರಂಭವಾದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ವಿದ್ಯಾರ್ಥಿಗಳಿಗೆ  ಬ್ರಿಟಿಷ್ ಪ್ರಭುತ್ವವನ್ನು, ಅದರ ಅಧಿಕಾರವನ್ನು ಪ್ರಶ್ನಿಸಿ ಅವರಿಂದ ಸಹಾಯ ಪಡೆಯುತ್ತಿರುವ ವಿದ್ಯಾಸಂಸ್ಥೆಗಳ ಪರೀಕ್ಷೆಯನ್ನು ನಿರಾಕರಿಸಿ ಎಂದು ಕರೆಯಿತ್ತಿದ್ದರು. ಆ ಮಾತಿನಿಂದ ಪ್ರೇರಿತರಾದ ರಾಮಯ್ಯನವರು ವಾರಣಾಸಿಯನ್ನು ಬಿಡಲು,  ಗುರುಸ್ಥಾನದಲ್ಲಿದ್ದ ಮಾಲವೀಯರು ಓದು ಮುಗಿಸಿ ನಂತರ ಚಳವಳಿಯಲ್ಲಿ ಪಾಲ್ಗೊಳ್ಳಬಹುದಲ್ಲ ಎಂಬ ಸಲಹೆಯಿತ್ತರು. ವಿದ್ಯಾರ್ಥಿ ರಾಮಯ್ಯನವರು ತಾನು ಮಹಾತ್ಮ ಗಾಂಧೀಜಿಗೆ ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವ ವಚನವಿತ್ತುದನ್ನು ತಿಳಿಸಿ, ಅವರನ್ನು ಒಪ್ಪಿಸಿದರು. ನಂತರ ಮಾಲವೀಯರು ಅವರನ್ನು ಆಶೀರ್ವದಿಸಿ, ಪ್ರಯಾಣಕ್ಕೆಂದು ೫೦ರೂ.ಗಳನ್ನಿತ್ತು, &#8220;ನಿನ್ನ ಪಥ ಸುಗಮವಾಗಲಿ, ನನ್ನೊಂದಿಗೆ ಸಂಪರ್ಕದಲ್ಲಿರು&#8221; ಎಂದು ಹರಸಿ ಕಳುಹಿ ಕೊಟ್ಟರು.</p>
<p>ವಾರಣಾಸಿಯಿಂದ ಹಿಂದಿರುಗಿ ಬಂದ ರಾಮಯ್ಯನವರು ಪ್ರಾರಂಭದಲ್ಲಿ ಬೆಳಗಾವಿಯಲ್ಲಿ ಹಿಂದೀ ಅಧ್ಯಾಪಕನಾಗಿ, ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿದರು. ಕಾಶಿಯಲ್ಲಿದ್ದ ೧೦ ವರ್ಷಗಳಿಗಿಂತಲೂ ಹೆಚ್ಚಿನ ಕಾಲದಲ್ಲಿ ಅವರಿಗೆ ದುಡಿಮೆಯಿಂದಾದ ಅನುಭವ ಪತ್ರಿಕೋದ್ಯಮದ, ಮತ್ತು ಬರಹದ ತಿಳುವಳಿಕೆಯನ್ನು ಮೂಡಿಸಿತು. ಇವರ ಕೆಲಸವನ್ನು ಡಾ.ಹರ್ಡಿಕರ್ ತುಂಬಾ ಮೆಚ್ಚಿಕೊಂಡರು. ನಂತರ ೧೯೨೨ ರಲ್ಲಿ ಇವರ ಪತ್ರಕರ್ತನ ಜೀವನ ಇಂಗ್ಲಿಷ್ ಪತ್ರಿಕೆಯಾದ ಸ್ವರಾಜ್ಯದೊಂದಿಗೆ ಅದರ ಸ್ಥಾಪಕ ಟಿ.ಪ್ರಕಾಶಮ್ ಅವರ ಕೆಳಗೆ ಉಪ ಸಂಪಾದಕರಾಗಿ ಮದ್ರಾಸಿನಲ್ಲಿ, ನಂತರ ಬೆಂಗಳೂರಲ್ಲಿ ಮುಂದುವರಿಯಿತು. ಆ ನಂತರ ಆಂಧ್ರಕೇಸರಿ ಮತ್ತು ಸ್ವರಾಜ್ಯ ಎರಡೂ ಪತ್ರಿಕೆಗಳ ಸುದ್ದಿಗಾರನಾಗಿ ದುಡಿದರು. ಅವರ ಸುದ್ದಿಗಾರನ ಕೆಲಸದ ತಿರುಗಾಟ ಈ ಉದ್ಯಮದ ಒಳ ಹೊರಗನ್ನು ತಿಳಿಸಿತು. ಇವರು ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು.</p>
<p>೧೯೨೫ ರ ಸಮಯದಲ್ಲಿ ಮೈಸೂರಿನ ತಾತಯ್ಯ ಎಂದೆನಿಸಿಕೊಂಡ  ವೆಂಕಟಕೃಷ್ಣಯ್ಯನವರಿಂದ ಪ್ರಭಾವಿತರಾಗಿ ಮೈಸೂರಿನಲ್ಲಿ ಅವರ ಪತ್ರಿಕೆ &#8220;ಸಂಪದಭ್ಯುದಯ&#8221;ದ ಸಂಪಾದಕರಾಗಿ ಸೇರಿಕೊಂಡರು. ಆಗ ಮಿರ್ಝಾ ಇಸ್ಮಾಯಿಲ್ ರವರು ದಿವಾನರಾಗಿದ್ದರು. ಇವರ ಬ್ರಿಟಿಷರ ಮೇಲಿನ ನೇರ ಹಾಗೂ ತೀಕ್ಷ್ಣ ಖಂಡನೆಯ ಪತ್ರಿಕಾ ವರದಿಗಳಿಂದ ಕುಪಿತಗೊಂಡ ಸರಕಾರ ಪತ್ರಿಕೆಯನ್ನು ನಿಲ್ಲಿಸಿಬಿಟ್ಟಿತು.  ಇದರಿಂದ ಉತ್ಸಾಹೀ ಪತ್ರಿಕೋದ್ಯಮಿಯೇನೂ ಕಂಗೆಡಲಿಲ್ಲ, ಇದ್ದ ಆರ್ಥಿಕ ಮುಗ್ಗಟ್ಟನ್ನು ಸವಾಲಾಗಿ ಸ್ವೀಕರಿಸಿ, ೧೯೨೭ರಲ್ಲಿ ಹೊಸಾ ಪತ್ರಿಕೆ ತಾಯಿನಾಡನ್ನು ಹುಟ್ಟು ಹಾಕಿದರು. ಇದು ವಾರ ಪತ್ರಿಕೆಯಾಗಿತ್ತು. ಆ ದಿನಗಳಲ್ಲಿ ಈ ಪತ್ರಿಕೆ ಕುಟುಂಬದ ಸದಸ್ಯರೆಲ್ಲ ಸೇರಿ ದುಡಿದುದರಿಂದ ತಲೆಯೆತ್ತುವಂತಾಯಿತು. ರಾಮಯ್ಯನವರ ಮುಖ್ಯ ಬಂಡವಾಳ ಅವರ ಧ್ಯೇಯ ಮತ್ತು ಮನೆಯವರೆಲ್ಲರ( ಪತ್ನಿ ಮತ್ತು ಸಹೋದರರು ) ಪೂರ್ಣ ಸಹಕಾರ. ಅವರ ಆಗಿನ ಕಷ್ಟದ ದಿನಗಳಲ್ಲಿ ಮಾಲಕನಿಗೆ ಮತ್ತು ಕೆಲಸಗಾರರಿಗೆ  ಅಂತರವಿರಲಿಲ್ಲ, ಮನೆಯವರೆಲ್ಲ ಸೇರಿ ಬರವಣಿಗೆ,ಮಾರಾಟ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು.ಇದೇ ಪತ್ರಿಕೆ ಭವಿಷ್ಯದಲ್ಲಿ ದೈನಿಕವಾಗಿ ಬೆಳೆಯಿತು.</p>
<p><img src="http://lh3.ggpht.com/_bEdWeUlAeV4/TH499DlwCWI/AAAAAAAAD8s/H-z_D3TRqis/PRRJOUR.jpg%20tatayya.jpg" alt="" width="400" height="285" /></p>
<p>ಅವರು ಕಾಶಿಯನ್ನು ಬಿಟ್ಟು ಬಂದ ಪ್ರಾರಂಭದ ದಿನಗಳಲ್ಲಿ ಆರ್ಥಿಕವಾಗಿ ಮುಗ್ಗಟ್ಟಿನಲ್ಲಿದ್ದರು. ಅವರ ಸಂಸಾರ ತಾಯಿ,ತಂದೆ, ನಾಲಕ್ಕು ತಮ್ಮಂದಿರು, ತಂಗಿ ಎಂದು ದೊಡ್ಡದಾಗಿತ್ತು. ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮೊದಲನೇ ಮದುವೆಯಾಗಿತ್ತು, ಆದರೆ ಆಕೆ ಇವರ ಮನೆ ಸೇರಿರಲಿಲ್ಲ. ಇಂತಹ ಸಂದರ್ಭದಲ್ಲಿ  ವಿದ್ಯಾಭ್ಯಾಸ ಪಡೆದ ಬುದ್ಧಿವಂತ ವರನೆಂಬ ಕಾರಣದಿಂದಲೋ ಏನೋ,ಅನುಕೂಲಸ್ಥರಾಗಿದ್ದ ಹಾಸನದ ಶಿರಸ್ತೇದಾರ್ ಭವಾನಿ ಶಂಕರ ಅಯ್ಯರ್ ಮತ್ತು ಲಕ್ಷ್ಮಮ್ಮನವರ ಕೊನೇ ಮಗಳು ೮ ವರ್ಷ ವಯಸ್ಸಿನ ಜಯಲಕ್ಷಮ್ಮನೊಡನೆ ೧೯೧೬ ನೇ ಇಸವಿಯಲ್ಲಿ  ಮದುವೆ ನಡೆದು ಹೋಯಿತು. ಆಗಿನ ಕಾಲದಲ್ಲಿ ದೊಡ್ಡ ಕುಟುಂಬ, ವಯಸ್ಸು ಇತ್ಯಾದಿಗಳನ್ನು ಯಾರೂ ಹೆಚ್ಚು ಗಮನಿಸುತ್ತಿದ್ದಿರಲಿಲ್ಲ. ಈ ಮದುವೆಯ ಸಂದರ್ಭದಲ್ಲಿ ಜಯಲಕ್ಷಮ್ಮನ ತಾಯಿಯವರ ಒತ್ತಾಯದ ಮೇರೆಗೆ ಮೊದಲ ಹೆಂಡತಿಯೂ ಮನೆ ಸೇರುವಂತಾಯಿತು. ರಾಮಯ್ಯನವರು ಚಿಕ್ಕ ವಯಸ್ಸಿನಲ್ಲಿ ಅತೀ ಕೋಪಿಯೂ, ಬಹಳ ಶಿಸ್ತಿನವರೂ ಆಗಿದ್ದರು, ಹಣಕ್ಕೂ ಕೊರತೆಯಿತ್ತು. ಆದರೆ ಇವೆಲ್ಲ ಸಮಸ್ಯೆಗಳನ್ನು, ಹೊಸ ಮನೆ ಸೇರಿದ ಆ ಚಿಕ್ಕ ವಯಸ್ಸಿನ ಹುಡುಗಿ ಜಯಲಕ್ಷಮ್ಮ ಹೃದಯವಂತಿಕೆ, ಬುದ್ಧಿವಂತಿಕೆ ಸಂಸ್ಕಾರಗಳಿಂದ ತುಂಬಾ ಚೆನ್ನಾಗಿ ನಿಭಾಯಿಸಿದರು. ಈ ಇಬ್ಬರು ಪತ್ನಿಯರು ಸವತಿ ಪದಕ್ಕಿದ್ದ ಕಳಂಕವನ್ನು ಅಳಿಸಿ, ಸಹ ಸತಿಯರಾಗಿ ಬಾಳಿದರು.ಇವರಿಗೆ ಮೊದಲ ಪತ್ನಿಯಲ್ಲಿ ಒಬ್ಬ ಮಗ ಮತ್ತು ಜಯಲಕ್ಷಮ್ಮನಿಂದ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದರು. ಮೊದಲ ಪತ್ನಿ ಸಣ್ಣ ವಯಸ್ಸಿನಲ್ಲೇ ತೀರಿಕೊಂಡರು, ನಂತರ ರಾಮಯ್ಯನವರ ಜೀವನದೆಲ್ಲ ಸಮಸ್ಯೆಗಳಿಗೂ ಜಯಲಕ್ಷಮ್ಮನೇ  ಹೆಗಲನ್ನಿತ್ತರು. ಇವರದು ಅನುಕೂಲ ದಾಂಪತ್ಯ.</p>
<p>ತಾಯಿನಾಡು ಪ್ರಾರಂಭವಾಗಿ ಎರಡು ವರ್ಷಗಳ ನಂತರ ಪತ್ರಿಕೆಯ ಕಾರ್ಯಾಲಯವನ್ನು ತಂದೆ ರಾಮಸ್ವಾಮಯ್ಯನವರ  ಕಾಲಾನಂತರ ಮೈಸೂರಿನಿಂದ ಬೆಂಗಳೂರಿಗೆ ಸ್ಥಾನಾಂತರಿಸಬೇಕಾಗಿ ಬಂದಿತು. ಇದರಿಂದ ಕುಟುಂಬದವರೆಲ್ಲಾ ವಸತಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದರು. ಪತ್ರಿಕೆ ದಿನ ಕಳೆದಂತೆ ಜನಪ್ರಿಯವಾಗುತ್ತಾ ಹೋಯಿತು; ರಾಮಯ್ಯನವರ ಹಣಕಾಸಿನ ಮುಗ್ಗಟ್ಟು ಕಮ್ಮಿಯಾಗುತ್ತಾ ಬಂತು. ಈ ಪತ್ರಿಕೆಯನ್ನು ರಾಮಯ್ಯನವರು ಗಾಂಧೀಜಿಯ ಆಶೀರ್ವಾದದೊಂದಿಗೆ ಪ್ರಾರಂಭಿಸಿದ್ದರು. ಅದರ ಕುರುಹಾಗಿ, ಗಾಂಧೀಜಿಯ ಕೈಬರಹದಲ್ಲಿ ಬಂದ ಪೋಸ್ಟ್ ಕಾರ್ಡ್ ನಲ್ಲಿದ್ದ ಭಗವದ್ಗೀತೆಯ ಶ್ಲೋಕವನ್ನು,  ನಿತ್ಯ ತಾಯಿನಾಡು ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸುತ್ತಿದ್ದರು.</p>
<p><img class="alignnone" src="http://lh4.ggpht.com/_bEdWeUlAeV4/THqcwEMFgmI/AAAAAAAAD68/8pzNILxJspw/taimast.jpgtainadu.jpg" alt="" width="399" height="146" /></p>
<p><img class="alignnone" src="http://lh6.ggpht.com/_bEdWeUlAeV4/THqcNFpXQWI/AAAAAAAAD6c/jskjWD9_TfA/PRR100.jpg%20tayinadu%20paper.jpg" alt="" width="214" height="320" /></p>
<p>ತಾಯಿನಾಡು ಪತ್ರಿಕೆಯ ಮುಖಪುಟ</p>
<p>ಸುಖದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ !</p>
<p>ತತೋ ಯುದ್ಧಾಯ ಯುಜಸ್ವ ನೈವಂ ಪಾಪಮವಾಪ್ಸ್ಯಸಿ !</p>
<p>ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧದಲ್ಲಿ ತೊಡಗಿದಾಗ, ನೀನು ಯಾವುದೇ ಪಾಪಗಳಲ್ಲೂ  ಪಾಲ್ಗೊಳ್ಳದೇ ಮುಕ್ತನಾಗುತ್ತೀಯ.</p>
<p>ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಪತ್ರಿಕೋದ್ಯಮಿಯಾಗಿ ರಾಮಯ್ಯನವರ ಪಾತ್ರ ಹಿರಿಯದು. ಅವರು ಸತ್ಯವನ್ನು ಜನರ ಮುಂದಿಡಲು ಎಂದೂ ಹೆದರಲಿಲ್ಲ. ಅವರನ್ನು ಆಮಿಷಗಳ ಬಲೆಯೊಡ್ಡಿ ಧ್ಯೇಯವನ್ನು ಮರೆಸುವ ಪ್ರಯತ್ನವನ್ನು ಮಾಡಿದಾಗ, ಅವರು ವಾಸ್ತವವನ್ನು ಅರಿತುಕೊಂಡು, ಸ್ಥಿರವಾದ ತಮ್ಮ ಮೌಲ್ಯಯುಕ್ತ ನಿಲುವನ್ನು ವ್ಯಕ್ತ ಪಡಿಸಿದರು. ಇವರಿಗಿದ್ದ ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವ ನಂತರದ ದಿನಗಳಲ್ಲಿ ಇವರು ಪ್ರಾರಂಭಿಸಿದ Daily News  ಪತ್ರಿಕೆಯಲ್ಲಿ ಅರಿವಾಗುತ್ತದೆ. ಇದು ಸಂಜೆಯ ಹೊತ್ತಿನಲ್ಲಿ ಪ್ರಕಟವಾಗುತ್ತಿತ್ತು. ೧೯೩೯ ರ ವೇಳೆಗಾಗುವಾಗ ಅವರು ಪತ್ರಿಕೋದ್ಯಮ ರಂಗದಲ್ಲಿ ಪ್ರಮುಖವ್ಯಕ್ತಿಯಾಗಿ ಮನ್ನಣೆ ಗಳಿಸಿದರು. ಅವರನ್ನು ಕರ್ನಾಟಕ ರಾಜ್ಯದ ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾಗಿ ಚುನಾಯಿಸಲಾಯಿತು; ಹಾಗೂ ಅವರ ಮೌಲ್ಯಯುಕ್ತ ಧೋರಣೆಗಳಿಂದ ಅವರನ್ನು ಮೈಸೂರು ಸಂಸ್ಥಾನದ ಹರಿಜನ ಸಂಘದ ಅಧ್ಯಕ್ಷರನ್ನಾಗಿ ಆರಿಸಲಾಯಿತು. ನಂತರದ ದಿನಗಳಲ್ಲಿ ಶುರುವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಇವರು ನಿರ್ಭಯರಾಗಿ  ಬ್ರಿಟಿಷ್ ಆಡಳಿತದ ಮೇಲೆ ಖಂಡಿಸಿ ಬರೆದ ಲೇಖನಗಳು  ಸರಕಾರದ ಗಮನಕ್ಕೆ ಬಂದಿತು. ೧೯೪೨ನೇ ಇಸವಿಯಲ್ಲಿ ರಾಮಯ್ಯನವರು ಕೂಡಾ ಇತರ ಪ್ರಮುಖ ಚಳವಳಿಗಾರರಂತೇ ಬಂಧಿತರಾದರು. ಆದರೆ ಕೆಲವೇ ದಿನಗಳಲ್ಲಿ ಇವರನ್ನು ಬಿಡುಗಡೆ ಮಾಡಲಾಯಿತು. ಆ ಸ್ವಾತಂತ್ರ್ಯ ಚಳವಳಿಯ ದಿನಗಳಲ್ಲಿ ತಮ್ಮ ಪತ್ನಿ ಜಯಲಕ್ಷಮ್ಮನಿಗೂ ಅದರ ಮಹತ್ವ ತಿಳಿಯಲು ಅವರನ್ನು ತಾವು ಹೋದೆಡೆಗಳಿಗೆ ಕರೆದೊಯ್ದರು, ಮತ್ತು ತಮ್ಮ ಕಾರ್ಯಗಳಲ್ಲಿ ಸಹಭಾಗಿಯಾಗುವಂತೆ ಮಾಡಿದರು. ಇದರಿಂದ ಮುಂದೆ ಜಯಲಕ್ಷಮ್ಮನವರ ತಿಳುವಳಿಕೆ, ಅನುಭವ ಹೆಚ್ಚಿತು, ಅವರ ಭವಿಷ್ಯದ ರಾಜಕೀಯ ಜೀವನದಲ್ಲಿ ಮತ್ತು ಸಮಾಜಸೇವೆಗೆ  ಸಹಾಯವಾಯಿತು.</p>
<p><img class="alignnone" src="http://lh5.ggpht.com/_bEdWeUlAeV4/THqdJE3WgPI/AAAAAAAAD7M/IqlcUWY0RR0/ANNANEH.jpg%20ramayya%201950s.jpg" alt="" width="400" height="299" /></p>
<p>ಬೆಂಗಳೂರಿನ ಪತ್ರಿಕೋದ್ಯಮಿಗಳು ರಾಮಯ್ಯನವರನ್ನು ಸನ್ಮಾನಿಸಿದಾಗ, ಕಾರ್ಯಕ್ರಮಕ್ಕೆ ಆಗಮಿಸಿದ ನೆಹರೂರವರು,(೧೯೫೦ ರ ದಿನಗಳಲ್ಲಿ); ಮುಂದಿನ ಸಾಲಿನಲ್ಲಿ ನಿಂತವರು-ವ್ಯಾಸ ರಾವ್,ರಾಮಸ್ವಾಮಿ(ಹಿಂದು ಪತ್ರಿಕೆ),ವೆಂಕೋಬ ರಾವ್(ವಿಶ್ವ ಕರ್ನಾಟಕ), ಕೆ.ಸಿ.ರೆಡ್ಡಿ(ಮೈಸೂರಿನ ಮುಖ್ಯಮಂತ್ರಿ),ನೆಹರು, &#8212;-, ಹನುಮಂತಯ್ಯ,&#8212;,ಸಾಗರ್, ರಾಮಯ್ಯನವರು ಹಾಗೂ ಪ್ರಜಾವಾಣಿಯ ಜಯಶೀಲ ರಾವ್</p>
<p>ರಾಮಯ್ಯನವರು ಪತ್ರಿಕೋದ್ಯಮ ಮತ್ತು ರಾಜಕೀಯ ರಂಗಗಳೆರಡರಲ್ಲೂ ನ್ಯಾಯಯುತವಾಗಿ, ಯಾವುದೇ ವ್ಯಾಮೋಹಗಳಿಗೂ ಒಳಗಾಗದೇ, ಧೈರ್ಯದಿಂದ ತಲೆಯೆತ್ತಿ ಬಾಳಿದರು ಮತ್ತು ಬದಲಾವಣೆಗಳನ್ನು ತಂದರು. ಪ್ರಸಿದ್ಧರಾದ ಹಿಂದೂ ಪತ್ರಿಕೆಯ ಕಸ್ತೂರಿ ರಂಗ ಅಯ್ಯಂಗಾರ್ ಮತ್ತು ಕನ್ನಡದ ದಿಗ್ಗಜರಾದ ಡಿ.ವಿ.ಗುಂಡಪ್ಪನವರೊಡನೆ ಇವರನ್ನು ಹೋಲಿಸಲಾಗಿದೆ. ಇವರನ್ನು ಕನ್ನಡದ ಪತ್ರಿಕೋದ್ಯಮ ರಂಗದಲ್ಲಿ ಚಿರವಾಗಿ ಮಿನುಗುವ ನಕ್ಷತ್ರ ಎಂದು ತಿಳಿಯಲಾಗಿದೆ. ಈ ಪತ್ರಿಕೆ ಸರಳ ಆಡು ನುಡಿಯಲ್ಲಿದ್ದು, ಜನರಲ್ಲಿ  ಓದುವ ಅಭಿರುಚಿಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು. ತಾಯಿನಾಡು ಪತ್ರಿಕೆ ಒಟ್ಟಿನಲ್ಲಿ ೩೦ ವರ್ಷಗಳ ಕಾಲ ನಡೆಯಿತು, ನಂತರ ೧೯೫೫ ರ ಸಮಯದಲ್ಲಿ ಸ್ವಂತ ಸಂಸ್ಥೆಯಾಗಿ (private limited company) ಪರಿವರ್ತಿಸಲು ಅಗತ್ಯವಿದ್ದ ಧನ ಬಲವಿರದೆ, ಬೇರೆಯವರಿಂದ ಯಾಚಿಸಲಾಗದಿದ್ದುದರಿಂದ ಮಾರ ಬೇಕಾಗಿ ಬಂತು. ರಾಮಯ್ಯನವರು ಎಲ್ಲಾ ಸನ್ನಿವೇಶಗಳಲ್ಲೂ ನಿರ್ಮೋಹರಾಗಿ ಈ ಮೇಲೆ ಹೇಳಿದ ಭಗವದ್ಗೀತೆಯ ಮಾತಿನಂತೆ  ನಡೆದರು. ಸ್ವಾತಂತ್ರ್ಯಾ ನಂತರ ಅವರು ದೇಶದ ಬೆಳವಣಿಗೆಯತ್ತ ತಮ್ಮ ಗಮನ ಹರಿಸಿ, ತಮ್ಮಿಂದಾದ ಕಾರ್ಯಗಳನ್ನು, ಸೇವೆಯನ್ನು ರಾಜಕೀಯ ರಂಗದಲ್ಲಿದ್ದುಕೊಂಡು ಮಾಡಿದರು.  ಮೈಸೂರು ಸಂಸ್ಥಾನವನ್ನು ಪ್ರತಿನಿಧಿಸಿದ ಕೆಲವೇ ಕಾಂಗ್ರೆಸ್ಸಿಗರಲ್ಲಿ ಇವರೊಬ್ಬರು. ರಾಮಯ್ಯನವರು ಬೆಂಗಳೂರು ನಗರ ಸಭೆಗೆ ಎರಡು ಬಾರಿ( ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ) ಚುನಾವಣೆಯಲ್ಲಿ ಆರಿಸಿ ಬಂದು ಶ್ರದ್ಧೆಯಿಂದ  ಜನರ ಏಳಿಗೆಗೆ ದುಡಿದರು. ಇವರು ೧೯೫೨ರಲ್ಲಿ ಬಸವನಗುಡಿ ಪ್ರದೇಶದಿಂದ ವಿದಾನಸಭೆಗೆ ಯಶಸ್ವಿಯಾಗಿ ಚುನಾಯಿತರಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ (MLA). ಆಧುನಿಕ ರಷ್ಯಾ, ಫ಼್ರಾನ್ಸಿನ ಮಹಾಕ್ರಾಂತಿ, ದಯಾಸಾಗರ ವೆಂಕಟಕೃಷ್ಣಯ್ಯ, Mysore&#8217;s political evolution, ಗಾಂಧೀಜಿ ಹಾಗೂ ತಮ್ಮ ಆತ್ಮಚರಿತ್ರೆ ಮುಂತಾದ ಕೆಲವೊಂದು ಪುಸ್ತಕಗಳನ್ನು ಬರೆದರು.  ಇವರ ಘನ ಕಾರ್ಯಗಳನ್ನು ಗುರುತಿಸಿ, ಕರ್ನಾಟಕ ಸರಕಾರ ೧೯೬೯ ರಲ್ಲಿ ರಾಜ್ಯಪ್ರಶಸ್ತಿಯನ್ನಿತ್ತು ಗೌರವಿಸಿತು.</p>
<p><img class="alignnone" src="http://lh6.ggpht.com/_bEdWeUlAeV4/THqcfp1F8pI/AAAAAAAAD6s/qwuOiEs0Bm0/PRRAUTO.jpg%20ramayya%20pic.jpg" alt="" width="247" height="400" /></p>
<p>೧೯೯೬ ರಲ್ಲಿ ರಾಮಯ್ಯನವರ ಜನ್ಮಶತಾಬ್ಧಿಯ ಸಂದರ್ಭದಲ್ಲಿ ಹೊರತಂದ ಹೊತ್ತಗೆ  (ಆತ್ಮಚರಿತ್ರೆ)</p>
<p>ಇವರ ಮೊದಲ ಮಗ ಬ್ರಹ್ಮಾನಂದರು ನಮ್ಮ ದೇಶದ ಹೆಮ್ಮೆಯ ಅರ್ಥಶಾಸ್ತ್ರಜ್ಞ,   ಎರಡನೇ ಮಗ ಇಂಜಿನಿಯರ್, ರಾಮಸ್ವಾಮಿ  ಇವರೊಂದಿಗೆ ಇದ್ದರು,  ಮತ್ತು ಮಗಳು ರಾಮೇಶ್ವರಿಯವರು ಪ್ರಾಧ್ಯಾಪಕಿ ಹಾಗೂ ಕೊನೆ ಮಗನಾದ ವಿಶ್ವನಾಥ್ ಬಾಹ್ಯಾಕಾಶ ವಿಜ್ಞಾನಿ. ಇವರ ಪತ್ನಿ ಜಯಲಕ್ಷಮ್ಮನವರು  ಬೆಂಗಳೂರು ನಗರ ಪಾಲಿಕೆಗೆ ಚುನಾವಣೆಯಲ್ಲಿ ಆರಿಸಿ ಬಂದ ಕಾರ್ಪೊರೇಟರ್, ಮತ್ತು ನಂತರ Deputy mayor ಆಗಿದ್ದು ತಮಗಿದ್ದ ಸ್ಥಾನಮಾನಗಳನ್ನು, ಅಧಿಕಾರವನ್ನು ಸದ್ವಿನಿಯೋಗ ಮಾಡಿಕೊಂಡು, ಹಲವೊಂದು ಸಮಾಜೋಪಕಾರಿ ಕೆಲಸಗಳನ್ನು ಮಾಡಿದಾಕೆ. ೧೯೭೦ ರಲ್ಲಿ ತಮ್ಮ ೭೬ನೇ ವಯಸ್ಸಿನಲ್ಲಿ ರಾಮಯ್ಯನವರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.</p>
<p><strong>ಈ ಲೇಖನವನ್ನು ಬರೆಯಲು ಮಾಹಿತಿಗಳನ್ನು ಒದಗಿಸಿದ ಶ್ರೀಯುತ ಪಿ.ಆರ್.ವಿಶ್ವನಾಥರಿಗೆ( ರಾಮಯ್ಯನವರ ಕೊನೆಯ ಮಗ-ಪ್ರಸ್ತುತ ಬೆಂಗಳೂರು ನಗರ ನಿವಾಸಿ) ನನ್ನ ಕೃತಜ್ಞತೆಗಳು.</strong></p>
<p>http://www.tainadu.blogspot.com/</p>
<p>ಈ ಮೇಲಿನ ಲಿಂಕ್ ಉಪಯೋಗಿಸಿ ರಾಮಯ್ಯನವರ ಜೀವನ ಮತ್ತು ಕೆಲಸಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.</p>
<p><strong><br />
</strong></p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/74/"><img alt="" border="0" src="http://feeds.wordpress.com/1.0/comments/shailajasbhat.wordpress.com/74/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/74/"><img alt="" border="0" src="http://feeds.wordpress.com/1.0/delicious/shailajasbhat.wordpress.com/74/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/74/"><img alt="" border="0" src="http://feeds.wordpress.com/1.0/facebook/shailajasbhat.wordpress.com/74/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/74/"><img alt="" border="0" src="http://feeds.wordpress.com/1.0/twitter/shailajasbhat.wordpress.com/74/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/74/"><img alt="" border="0" src="http://feeds.wordpress.com/1.0/stumble/shailajasbhat.wordpress.com/74/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/74/"><img alt="" border="0" src="http://feeds.wordpress.com/1.0/digg/shailajasbhat.wordpress.com/74/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/74/"><img alt="" border="0" src="http://feeds.wordpress.com/1.0/reddit/shailajasbhat.wordpress.com/74/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=74&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2010/10/24/%e0%b2%aa%e0%b2%be%e0%b2%b2%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%b0%e0%b2%be%e0%b2%ae%e0%b2%af%e0%b3%8d%e0%b2%af%e0%b2%a8%e0%b2%b5%e0%b2%b0%e0%b3%81-%e0%b2%a4%e0%b2%be%e0%b2%af/feed/</wfw:commentRss>
		<slash:comments>14</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://lh5.ggpht.com/_bEdWeUlAeV4/THqdbqMkSPI/AAAAAAAAD7g/EOmlQtNA7TU/PICT0034.0.jpg%20ramayya%20couple.jpg" medium="image" />

		<media:content url="http://lh3.ggpht.com/_bEdWeUlAeV4/TH499DlwCWI/AAAAAAAAD8s/H-z_D3TRqis/PRRJOUR.jpg%20tatayya.jpg" medium="image" />

		<media:content url="http://lh4.ggpht.com/_bEdWeUlAeV4/THqcwEMFgmI/AAAAAAAAD68/8pzNILxJspw/taimast.jpgtainadu.jpg" medium="image" />

		<media:content url="http://lh6.ggpht.com/_bEdWeUlAeV4/THqcNFpXQWI/AAAAAAAAD6c/jskjWD9_TfA/PRR100.jpg%20tayinadu%20paper.jpg" medium="image" />

		<media:content url="http://lh5.ggpht.com/_bEdWeUlAeV4/THqdJE3WgPI/AAAAAAAAD7M/IqlcUWY0RR0/ANNANEH.jpg%20ramayya%201950s.jpg" medium="image" />

		<media:content url="http://lh6.ggpht.com/_bEdWeUlAeV4/THqcfp1F8pI/AAAAAAAAD6s/qwuOiEs0Bm0/PRRAUTO.jpg%20ramayya%20pic.jpg" medium="image" />
	</item>
		<item>
		<title>ಪೀಪ್ಲಿ ಲೈವ್</title>
		<link>http://shailajasbhat.wordpress.com/2010/08/21/%e0%b2%aa%e0%b3%80%e0%b2%aa%e0%b3%8d%e0%b2%b2%e0%b2%bf-%e0%b2%b2%e0%b3%88%e0%b2%b5%e0%b3%8d/</link>
		<comments>http://shailajasbhat.wordpress.com/2010/08/21/%e0%b2%aa%e0%b3%80%e0%b2%aa%e0%b3%8d%e0%b2%b2%e0%b2%bf-%e0%b2%b2%e0%b3%88%e0%b2%b5%e0%b3%8d/#comments</comments>
		<pubDate>Sat, 21 Aug 2010 14:34:11 +0000</pubDate>
		<dc:creator>my pen from shrishaila</dc:creator>
				<category><![CDATA[Daily Blog]]></category>
		<category><![CDATA[ಪೀಪ್ಲಿ ಲೈವ್;ಸಿನೇಮ;ಆತ್ಮಹತ್ಯೆ;]]></category>

		<guid isPermaLink="false">http://shailajasbhat.wordpress.com/?p=70</guid>
		<description><![CDATA[ಪೀಪ್ಲಿ ಲೈವ್ ನಾನು ಬಹಳ ಸಮಯದ ನಂತರ ಸಿನೇಮಕ್ಕೆ ಹೋದೆ, ಇದು ನನ್ನ ಮನ ಮುಟ್ಟಿದ, ತಟ್ಟಿದ ಸಿನೇಮ. ನಿರ್ದೇಶಕಿ ಅನುಶಾ ರಿಜ಼್ವಿ ನಮ್ಮನ್ನು ಸಮಾಜದ , ನಮ್ಮ ರಾಜಕೀಯದ ಅತಿರೇಕಗಳ ಲೋಕಕ್ಕೆ ಕೊಂಡೊಯ್ಯುತ್ತಾರೆ.  ನಾವು ನಮ್ಮ ಲೋಪ, ದೋಷಗಳನ್ನು ವ್ಯಂಗ್ಯ, ಹಾಸ್ಯಾಸ್ಪದ  ಸನ್ನಿವೇಶಗಳಿಂದ ನೋಡಲು ಅವಕಾಶ .ಇದರ ತಯಾರಕ ಹಿಂದಿ ಸಿನೇಮಾ ನಟ ಅಮೀರ್ ಖಾನ್. ಕಥೆ ಬಡ ರೈತ ಬುಧುವ ಮತ್ತು ಅವನ ತಮ್ಮ ನತ್ಥಾನಿಂದ ಪ್ರಾರಂಭವಾಗುತ್ತದೆ. ಅವರು ತಮ್ಮ ಬಂಜರು ಭೂಮಿಯನ್ನು ಬಾಂಕಿಗೆ [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=70&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p><strong> ಪೀಪ್ಲಿ ಲೈವ್</strong><br />
ನಾನು ಬಹಳ ಸಮಯದ ನಂತರ ಸಿನೇಮಕ್ಕೆ ಹೋದೆ, ಇದು ನನ್ನ ಮನ ಮುಟ್ಟಿದ, ತಟ್ಟಿದ ಸಿನೇಮ. ನಿರ್ದೇಶಕಿ ಅನುಶಾ ರಿಜ಼್ವಿ ನಮ್ಮನ್ನು ಸಮಾಜದ , ನಮ್ಮ ರಾಜಕೀಯದ ಅತಿರೇಕಗಳ ಲೋಕಕ್ಕೆ ಕೊಂಡೊಯ್ಯುತ್ತಾರೆ.  ನಾವು ನಮ್ಮ ಲೋಪ, ದೋಷಗಳನ್ನು ವ್ಯಂಗ್ಯ, ಹಾಸ್ಯಾಸ್ಪದ  ಸನ್ನಿವೇಶಗಳಿಂದ ನೋಡಲು ಅವಕಾಶ .ಇದರ ತಯಾರಕ ಹಿಂದಿ ಸಿನೇಮಾ ನಟ ಅಮೀರ್ ಖಾನ್.</p>
<p><img class="alignnone" src="http://lh4.ggpht.com/_bEdWeUlAeV4/TG_L7KCEA6I/AAAAAAAAD6A/xD0k469sl00/s640/scan0002.jpg" alt="" width="432" height="640" /></p>
<p>ಕಥೆ ಬಡ ರೈತ ಬುಧುವ ಮತ್ತು ಅವನ ತಮ್ಮ ನತ್ಥಾನಿಂದ ಪ್ರಾರಂಭವಾಗುತ್ತದೆ. ಅವರು ತಮ್ಮ ಬಂಜರು ಭೂಮಿಯನ್ನು ಬಾಂಕಿಗೆ ಗಿರವಿಟ್ಟು, ಲಿಲಾವಿಯಲ್ಲಿ ಭೂಮಿಯನ್ನು ಕಳೆದುಕೊಳ್ಳುವ ಸನ್ನಿವೇಶಕ್ಕೆ ಹತ್ತಿರವಾಗುತ್ತಾರೆ. ಅಣ್ಣನೋ ಬ್ರಹ್ಮಚಾರಿ, ತಮ್ಮನೋ ತುಂಬಿದ ಕುಟುಂಬದ ಸಂಸಾರಿ. ಮನೆಯಲ್ಲಿ ಅಣ್ಣ ತಮ್ಮಂದಿರಲ್ಲದೆ ಹಾಸಿಗೆ ಹಿಡಿದ ಅಮ್ಮ,, ಜೋರು, ಬೆದರಿಕೆಗಳನ್ನೊಡ್ಡಿ ಕೆಲಸ ಮಾಡಿಸುವ ಹೆಂಡತಿ,ಮೂವರು ಮಕ್ಕಳು ಆ ಭೂಮಿಯಾಸರೆಯಲ್ಲಿ ಬದುಕಿದ್ದಾರೆ. ಪೀಪ್ಲಿ ಮುಖ್ಯ ಪ್ರದೇಶ ರಾಜ್ಯದಲ್ಲಿನ ಚಿಕ್ಕದೊಂದು ಹಳ್ಳಿ. ಆದರೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಆ ಪ್ರದೇಶದಿಂದ ಚುನಾಯಿತನಾಗಿ ಬಂದ ಕಾರಣ ಆ ಜಾಗಕ್ಕೆ ಪ್ರಾಮುಖ್ಯತೆ. ಅವ್ಯಾವುದನ್ನೂ ತಿಳಿಯದ ಮುಗ್ಧಮನಸ್ಸಿನ ಬಡ ರೈತರು ತಾವು ಬದುಕಿ ಉಳಿಯಲು ತಮ್ಮಿಂದಾದ ಎಲ್ಲ ಕೊನೇ ಪ್ರಯತ್ನಗಳನ್ನು ಮಾಡುತ್ತಾರೆ.<br />
ಬಾಂಕಿನಿಂದ ಹಿಂದಿರುಗಿದ ಮಾರನೆಯ ದಿನ   ಬುಧುವ, ಹಳ್ಳಿಯ ಮುಖಂಡನೊಡನೆ ಆದ ಭೇಟಿಯಿಂದ ತಿಳಿದುಕೊಂಡ  ಮುಖ್ಯ ಸಂಗತಿ ಎಂದರೆ, ಸಾಲವಾಗಿ ಭೂಮಿ ಕಳೆದುಕೊಂಡ ರೈತ ಜೀವನೋಪಾಯ ತೋಚದೇ ಆತ್ಮಹತ್ಯೆ ಮಾಡಿದರೆ, ಅವನಿಗೆ ಸರಕಾರ ಒಂದು ಲಕ್ಷ ರೂ.ಗಳನ್ನು ಕೊಡುತ್ತದೆ, ಆದರೆ ಬದುಕಿ  ಉಳಿದವನಿಗೆ ಏನೇನೂ ಇಲ್ಲ, ಎಂದು. ಹಾಗಾಗಿ ಅಣ್ಣ-ತಮ್ಮ ಬಹಳ ಹೊತ್ತು ಚರ್ಚಿಸಿ, ತಮ್ಮ ದಿವಾಳಿ ಹೋದುದರಿಂದ ಆತ್ಮಹತ್ಯೆ ಮಾಡುವುದೆಂದು, ಅದನ್ನು ಜನರಲ್ಲಿ, ಬಹಿರಂಗ ಪಡಿಸುವುದೆಂದೂ ನಿಶ್ಚಯಿಸಿದರು. ಅಣ್ಣನಾಗಿ ಹಿಂದಿ ಟಿ.ವಿ.ನಟ ರಘುವೀರ್ ಯಾದವ್ ಸಹಜವಾಗಿ ನಟಿಸಿದ್ದಾರೆ.ತಮ್ಮನನ್ನು ಸ್ವಲ್ಪ ನಿಧಾನಿ,ತಿಳುವಳಿಕೆಯಿಲ್ಲದವನೆಂದು ತೋರಿಸಿದ್ದಾರೆ. ಇದು ನಡೆಯುತ್ತಿರುವುದು ಚುನಾವಣೆ ಹತ್ತಿರಕ್ಕೆ ಬಂದ ಕಾಲದಲ್ಲಿ. ಹಾಗಾಗಿ ಎಲ್ಲಾ ವಾರ್ತಾಪತ್ರಿಕೆಗಳು, ಟಿ.ವಿ.ಚಾನೆಲ್ ಗಳು ಸುದ್ದಿಗಾಗಿ ಕಾಯುತ್ತಿರುತ್ತವೆ. ಈ ಆತ್ಮಹತ್ಯೆಯ ಸುದ್ದಿಯನ್ನು ಕೇಳಿಸಿಕೊಂಡ ಆ ಪ್ರದೇಶದ ಟಿ.ವಿ.ಸುದ್ದಿಗಾರ ದೆಹಲಿಯಲ್ಲಿರುವ ತನ್ನ ಕಛೇರಿಗೆ ತಿಳಿಸುತ್ತಾನೆ, ಅವರು ಈ ವಾರ್ತೆಯನ್ನು ಹಬ್ಬಿಸಿ ಇದರ ಉಪಯೋಗ ಪಡೆಯುವ ಸಿದ್ಧತೆಯಲ್ಲಿ ತೊಡಗುತ್ತಾರೆ. ಅಲ್ಲಿನ ಅಧಿಕಾರಿ ನಂದಿತಾ ತನ್ನ ಗುಂಪಿನೊಡನೆ ಆ ಹಳ್ಳಿಗೆ ಧಾವಿಸಿ ಬಂದು,ನಂತರ ಅದು ದೇಶದಾದ್ಯಂತ ಸುದ್ದಿಯಾಗುತ್ತದೆ, ಮತ್ತು ಇತರ ಟಿ.ವಿ.ಚಾನೆಲ್ ಗಳೂ ಸ್ಪರ್ಧೆಗೆಂದು ಅಲ್ಲಿಗೆ ಧಾವಿಸುತ್ತಾರೆ. ಅಲ್ಲಿಂದ ಮತ್ತೆ ಆ ಹಳ್ಳಿಯ ಜನ ತಮ್ಮ ಊರಿಗೆ ಸಿಕ್ಕುವ ಪ್ರಾಮುಖ್ಯತೆಯನ್ನು ಅರಿತು,ಬರುತ್ತಿರುವ ಜನಸ್ತೋಮವನ್ನು ಕಂಡು ಜಾತ್ರೆ,ಸಂತೆ ,ಮಾರಾಟ ಎಂದು ತಯಾರಾಗುತ್ತಾರೆ. ಇತ್ತ ರಾಜಧಾನಿಯಲ್ಲಿ, ಮುಖ್ಯಮಂತ್ರಿಗೆ ಹಗರಣದಿಂದ ತನ್ನ ವ್ಯಕಿತ್ವಕ್ಕೆಲ್ಲಿ ಕುಂದಾಗುತ್ತದೋ ಎಂದು ಮಾನಸಿಕ ತುಮುಲ. ಉಳಿದ ರಾಜಕಾರಿಣಿಗಳು ದೊರಕಿದ ಸಂದರ್ಭವನ್ನು ಸುಸಂದರ್ಭವನ್ನಾಗಿಸಿಕೊಳ್ಳಲು ಯತ್ನಿಸುವುದು, ಪತ್ರಿಕೋದ್ಯಮಿಗಳು ಮತ್ತು ಟಿ.ವಿ.ಚಾನೆಲ್ ಗಳವರು ಈ ಘಟನೆಯನ್ನು ತಮಗೋಸ್ಕರ ಬಳಸಲು ತಯಾರಿ ಇತ್ಯಾದಿ, ಇತ್ಯಾದಿ.ಹಾಗಾಗಿ ಮುಖ್ಯಮಂತ್ರಿ ನತ್ಥಾನಿಗೆ ನೀನು ಸಾಯಬೇಡ, ನಿನಗೆ ನಾವು &#8220;ಲಾಲ್ ಬಹಾದ್ದೂರ್&#8221;( ಬೋರ್ ವೆಲ್ ನ ಭೂಮಿಯ ಮೇಲಿನ ಯಂತ್ರ) ಕೊಡಿಸುತ್ತೇವೆ ಎಂದನು. ಮರುದಿನವೇ ಅವನಿಗೆ ಜಿಲ್ಲಾಧಿಕಾರಿ ನೀರಿಲ್ಲದ ಭೂಮಿಗೆ,ಭಾವಿಯಿಲ್ಲದ ರೈತನಿಗೆ ಬೋರ್ ವೆಲ್ ಯಂತ್ರವನ್ನು ಪ್ರಧಾನ ಮಾಡುತ್ತಾರೆ.ಇವೆಲ್ಲ ನಮ್ಮ ದೇಶದ ಸರಕಾರ ಕೃಷಿಕನಿಗೆ ಕೊಡುತ್ತಿರುವ ಸವಲತ್ತುಗಳು, ತೋರಿಸುವ ಕಾಳಜಿಗಳಿಗೆ ಹಿಡಿದ ಕೈಗನ್ನಡಿ. ಪ್ರೇಕ್ಷಕನಿಗೆ ದುರಂತ, ವ್ಯಂಗ್ಯ ಅರ್ಥವಾದರೂ ಅದನ್ನು ತೋರಿಸುವ ಕುಹಕಯುಕ್ತ ವಿಧಾನ ನಗೆ ಬರಿಸದಿರಲು ಸಾಧ್ಯವಿಲ್ಲ. ಹಳ್ಳಿಯಿಡೀ ದಿನ-ದಿನ ಭೇಟಿ ನೀಡುವ ರಾಜಕಾರಣಿಗಳು, ೮-೧೦ ಪರಸ್ಪರ ಸ್ಪರ್ಧಿಸುತ್ತಿರುವ ಟಿ.ವಿ. ಚಾನೆಲ್ ಗಳ ಮಂದಿ ಎಂದು ಜನಜಂಗುಳಿಯಿಂದ ತುಂಬಿ ಹೋಗಿದೆ. ಇವರಲ್ಲಿ &#8220;ನತ್ಥಾ ನೀನು ಸಾಯಬೇಡ&#8221; ಎನ್ನುವ ಬಣವೊಂದು, ವಿರೋಧ ಪಕ್ಷದ ರಾಜಕಾರಿಣಿಗಳು &#8220;ನತ್ಥಾ ನೀನಿನ್ನು ಸಾಯದೇ ವಿಧಿಯೇ ಇಲ್ಲ, ಆಗಲೇ ನಿನಗೆ ಪರಿಹಾರ&#8221;ವೆನ್ನುವವರು ಇನ್ನೊಂದು ಬಣ. ಒಬ್ಬನಂತೂ ಬಂದು, ವಿದ್ಯುತ್ ಶಕ್ತಿಯಿಲ್ಲದ ಆ ಮನೆಗೆ ಟಿ.ವಿ.ಯನ್ನಿತ್ತು ನೀನಿನ್ನು ಸತ್ತು ಹೋಗು ಎಂದು ಹೇಳುತ್ತಾನೆ. ಹೀಗೆ ಇವೆಲ್ಲಾ ವಿಪರ್ಯಾಸಗಳನ್ನು ಬಹಳ ಸಹಜವಾದ ಅಭಿನಯದಿಂದ ನಮಗೆ ನಗುಬರಿಸುವ ಈ ರಂಗ ಭೂಮಿಯ ನಟರ ನಟನಾಕೌಶಲ್ಯ, ಮತ್ತು ನಿರ್ದೇಶಕಿಯ ಕಥಾ ನಿರೂಪಣೆ ಚೆನ್ನಾಗಿ ಮೂಡಿಬಂದಿದೆ. ಜಾನಪದ ಶೈಲಿಯ ಹಾಡುಗಳೂ ಸಾಂದರ್ಭಿಕವಾಗಿವೆ.<br />
ಇದ್ದಕ್ಕಿದ್ದಂತೆ ಆ ಹಳ್ಳಿಯ ಮುಖಂಡ (ಮುಖ್ಯಮಂತ್ರಿಯ ಬೆಂಬಲಿಗ) ಏನೋ ಮಂತ್ರಾಲೋಚನೆ ಮಾಡಿ,ನತ್ಥಾನನ್ನು ತನ್ನ ಮನೆಗೆ ಕರೆದೊಯ್ದು, ತನ್ನದೊಂದು ಗೋದಾಮಿನಲ್ಲಿ ಬಚ್ಚಿಡುತ್ತಾನೆ. ಅದನ್ನು ಆ ಊರಿನ ಟಿ.ವಿ.ಸುದ್ದಿಗಾರ ಸಂಶಯಿಸಿ, ನಿಜವನ್ನು ಪತ್ತೆಹಚ್ಚಿ, ತನ್ನ ಮೇಲಿನ ಅಧಿಕಾರಿ ನಂದಿತಾಗೆ ಗುಟ್ಟಾಗಿ ತಿಳಿಸುತ್ತಾನೆ. ಅವಳೂ ತಾನು ಗುಟ್ಟಾಗಿ ಎಂದುಕೊಂಡು ಆ ಗೋದಾಮಿನತ್ತ ರಾತ್ರಿಯ ಹೊತ್ತಿನಲ್ಲಿ ವಾಹನದಲ್ಲಿ ಧಾವಿಸುತ್ತಾಳೆ.  ಅವಳನ್ನು ಹಿಂಬಾಲಿಸಿಕೊಂಡು ಇನ್ನೊಬ್ಬ, ಆ ಇನ್ನೊಬ್ಬನನ್ನು ಮತ್ತೊಬ್ಬ ಎಂದು ಆ ರಾತ್ರೊ ರಾತ್ರಿ ೮-೧೦ ವಾಹನಗಳು ಅಲ್ಲಿಗೆ ದೌಡಾಯಿಸಿ, ಪರಿಸ್ಥಿತಿ ಬಿಗಡಾಯಿಸುತ್ತದೆ. ಅಲ್ಲಿ ಈ ಗೊಂದಲದ ಮಧ್ಯದಲ್ಲಿ, ಗೋದಾಮಿನ ಮಾಲಕ ತನ್ನ ಪೆಟ್ರೋಮಾಕ್ಸ್ ದೀಪವನ್ನು ಹಚ್ಚಲು ಹೊರಟ. ಆಗ ಮೊದಲೇ ಚೆಲ್ಲಿದ್ದ ಸೀಮೆ ಎಣ್ಣೆಯಿಂದಾಗಿ ಇಡೀ ಗೋದಾಮು ಹತ್ತಿ ಉರಿಯಲಾರಂಭಿಸುತ್ತದೆ. ಈ ಕತ್ತಲಿನಲ್ಲಿ ಬೆದರಿದ ನತ್ಥಾ ಅಲ್ಲಿಂದ ತಪ್ಪಿಸಿಕೊಂಡ, ಆದರೆ ಆ ಊರಿನ ವಾರ್ತಾಕಾರ ಬೆಂಕಿಯಲ್ಲಿ ಉರಿದು ಹೋದ. ಮಾರನೇ ದಿನ ಜನರೆಲ್ಲಾ ಚದುರಿದರು, ಉರಿದು ಕರಕಿದ ವಾರ್ತಾಕಾರನ ದೇಹವೆ ನತ್ಥಾನದೆಂದು ಸರಕಾರ ಘೋಷಿಸಿತು, ಮತ್ತು ಎಲ್ಲಾ ಗೊಂದಲಗಳಿಗೂ ವಿರಾಮವಾಯಿತು,  ರಾಜಕಾರಿಣಿಗಳಿಗೆ ಒದಗಿ ಬಂದ ವಿಪತ್ತಿಗೆ ಪರಿಹಾರವಾಯಿತು. ರಾಜಕಾರಿಣಿಗಳು ಪರಸ್ಪರ ಸ್ಪರ್ಧಿಗಳೇ ಹೊರತು ವೈರಿಗಳಲ್ಲ ಎಂದು ಸಾಬೀತುಪಡಿಸಿದರು.<br />
ಆದರೆ ನಮ್ಮ,ತಲೆ ತಪ್ಪಿಸಿಕೊಂಡ ನಾಯಕ ನತ್ಥಾ ದೆಹಲಿಗೆ ಹೋಗಿ ದಿನಕೂಲಿ ಕೆಲಸಕ್ಕೆ ಸೇರಿಕೊಂಡ. ಸರಕಾರ ಅವನ ಸಾವು ಆಕಸ್ಮಿಕ, ಆತ್ಮಹತ್ಯೆಯಲ್ಲ,  ಆದುದರಿಂದ ಪರಿಹಾರವಿಲ್ಲ ಎಂದು ಘೋಷಿಸುತ್ತದೆ. ಈ ರೀತಿಯಲ್ಲಿ ಅವನ ಕುಟುಂಬದವರು</p>
<p>ನತ್ಥಾನನ್ನೂ, ಭೂಮಿಯನ್ನೂ ಕಳೆದುಕೊಂಡು ತಮ್ಮ ನತದೃಷ್ಟ ಬದುಕಲ್ಲೇ ಮುಂದುವರಿಯುತ್ತಾರೆ. ಇತ್ತ ಅಸ್ತಿತ್ವ ಕಳೆದುಕೊಂಡ ನತ್ಥಾ ಆ ದೊಡ್ಡ ನಗರಿಯಲ್ಲಿ ಜೀವಚ್ಛವದಂತೆ ಹತಾಶನಾಗಿ ಬದುಕುತ್ತಾನೆ. ಒಟ್ಟಿನಲ್ಲಿ ನಮ್ಮ ಈ ಭೂಮಿಯಲ್ಲಿ ಬದುಕು ಬದುಕಾಗಿರುವುದು ಸಶಕ್ತರಿಗೆ, ಧನವಂತರಿಗೆ, ಅಧಿಕಾರವಿದ್ದವರಿಗೆ. ಉಳಿದ ಕಾರ್ಮಿಕ ವರ್ಗದ ಮಂದಿಗಳು, ಅವರ ಸಾವು,ನೋವುಗಳು, ಸಮಾಜದ ಯಾವುದೇ  ವ್ಯಕ್ತಿಗಳಿಗೂ ಸ್ಪಂದನಕ್ಕೆ ಬಾರದೇ, ಬದುಕುತ್ತಾರೆ, ಬದುಕಿಯೂ ಸಾಯುತ್ತಿರುತ್ತಾರೆ. ನಮ್ಮ ದೇಶದ ಎಷ್ಟೋ ರೈತಾಪಿ ಜನರ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ವಾರ್ತೆಗಳನ್ನು ನಾವು ನೋಡುತ್ತೇವೆ, ಓದುತ್ತೇವೆ,ಬರೇ ಮಾತಿನಲ್ಲೇ ನಮ್ಮೊಳಗೆ ಸ್ಪಂದಿಸುತ್ತೇವೆ. ಅವರ ಸಾವಿನ ಅಂಕೆಗಳು ಕೇವಲ ವಾರ್ತೆಯಲ್ಲಿ ಹೇಳಲಿರುವ ಲೆಕ್ಕಾಚಾರಗಳಷ್ಟೆ ಹೊರತು ಅವರ ಏಳಿಗೆಗೆ ಉಪಯೋಗವಾಗುವ ಅಂಕೆ ಸಂಕೆಗಳಲ್ಲ.</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/70/"><img alt="" border="0" src="http://feeds.wordpress.com/1.0/comments/shailajasbhat.wordpress.com/70/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/70/"><img alt="" border="0" src="http://feeds.wordpress.com/1.0/delicious/shailajasbhat.wordpress.com/70/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/70/"><img alt="" border="0" src="http://feeds.wordpress.com/1.0/facebook/shailajasbhat.wordpress.com/70/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/70/"><img alt="" border="0" src="http://feeds.wordpress.com/1.0/twitter/shailajasbhat.wordpress.com/70/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/70/"><img alt="" border="0" src="http://feeds.wordpress.com/1.0/stumble/shailajasbhat.wordpress.com/70/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/70/"><img alt="" border="0" src="http://feeds.wordpress.com/1.0/digg/shailajasbhat.wordpress.com/70/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/70/"><img alt="" border="0" src="http://feeds.wordpress.com/1.0/reddit/shailajasbhat.wordpress.com/70/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=70&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2010/08/21/%e0%b2%aa%e0%b3%80%e0%b2%aa%e0%b3%8d%e0%b2%b2%e0%b2%bf-%e0%b2%b2%e0%b3%88%e0%b2%b5%e0%b3%8d/feed/</wfw:commentRss>
		<slash:comments>4</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://lh4.ggpht.com/_bEdWeUlAeV4/TG_L7KCEA6I/AAAAAAAAD6A/xD0k469sl00/s640/scan0002.jpg" medium="image" />
	</item>
		<item>
		<title>ಮಕ್ಕಳ ಪ್ರಗತಿ, ಬೆಳವಣಿಗೆ ಸಂತೋಷಕರವೇ ?</title>
		<link>http://shailajasbhat.wordpress.com/2010/08/12/%e0%b2%ae%e0%b2%95%e0%b3%8d%e0%b2%95%e0%b2%b3-%e0%b2%aa%e0%b3%8d%e0%b2%b0%e0%b2%97%e0%b2%a4%e0%b2%bf-%e0%b2%ac%e0%b3%86%e0%b2%b3%e0%b2%b5%e0%b2%a3%e0%b2%bf%e0%b2%97%e0%b3%86-%e0%b2%b8%e0%b2%82/</link>
		<comments>http://shailajasbhat.wordpress.com/2010/08/12/%e0%b2%ae%e0%b2%95%e0%b3%8d%e0%b2%95%e0%b2%b3-%e0%b2%aa%e0%b3%8d%e0%b2%b0%e0%b2%97%e0%b2%a4%e0%b2%bf-%e0%b2%ac%e0%b3%86%e0%b2%b3%e0%b2%b5%e0%b2%a3%e0%b2%bf%e0%b2%97%e0%b3%86-%e0%b2%b8%e0%b2%82/#comments</comments>
		<pubDate>Thu, 12 Aug 2010 16:47:39 +0000</pubDate>
		<dc:creator>my pen from shrishaila</dc:creator>
				<category><![CDATA[my experiences]]></category>
		<category><![CDATA[ಪಿಲಾನಿ;ವಿದ್ಯಾಭ್ಯಾಸ;ಮರುಭೂಮಿ;ರಾಜಸ್ಥಾನ;BITS Pilani]]></category>

		<guid isPermaLink="false">http://shailajasbhat.wordpress.com/?p=58</guid>
		<description><![CDATA[ಮಕ್ಕಳ ಪ್ರಗತಿ, ಬೆಳವಣಿಗೆ ಸಂತೋಷಕರವೇ ? ಈ ಯೋಚನೆ ನಾನು ನನ್ನಿಬ್ಬರು ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆಂದು ದೂರದೂರಾದ ಪಿಲಾನಿಗೆ ಕಳುಹಿದಾಗ ಕಾಡಿತು. ನಮ್ಮ ಜೀವನ ನೀರಿನ ಪ್ರವಾಹವಿದ್ದಂತೆ,ಅದು ನಿರಂತರ ಸಾಗುತ್ತಿರುತ್ತದೆ ಮತ್ತು ಚಿರ ನೂತನ. ನಾನು ನನ್ನ ಬಾಲ್ಯವನ್ನು ನೆನೆದರೆ, ನಾನೂ ತಮ್ಮನೂ ಇನ್ನು ಬೇರೆ ಹಿರಿಯ ಕಿರಿಯರ ಓರಗೆಯಲ್ಲಿ ಬೆಳೆದುದು ನೆನಪಿಗೆ ಬರುತ್ತದೆ. ನನ್ನದೇನೂ ಮಂದಿಯೊಂದಿಗೆ ಹಂಚಿಕೊಳ್ಳುವಂತ ವಿಶಿಷ್ಟವಾದ ಜೀವನವೇನಲ್ಲ, ಅಪರೂಪದ ಘಟನೆಗಳೂ ನಡೆದಿಲ್ಲ. ಆದರೆ ಪ್ರತಿಯೊಂದು ಮಾನವ ಯಾ ಜೀವಿಯ ಬದುಕು ಅದರದರ ಸ್ಥಾನದಲ್ಲಿ [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=58&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:left;">ಮಕ್ಕಳ ಪ್ರಗತಿ, ಬೆಳವಣಿಗೆ ಸಂತೋಷಕರವೇ ?<br />
ಈ ಯೋಚನೆ ನಾನು ನನ್ನಿಬ್ಬರು ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆಂದು ದೂರದೂರಾದ ಪಿಲಾನಿಗೆ ಕಳುಹಿದಾಗ ಕಾಡಿತು.<br />
ನಮ್ಮ ಜೀವನ ನೀರಿನ ಪ್ರವಾಹವಿದ್ದಂತೆ,ಅದು ನಿರಂತರ ಸಾಗುತ್ತಿರುತ್ತದೆ ಮತ್ತು ಚಿರ ನೂತನ. ನಾನು ನನ್ನ ಬಾಲ್ಯವನ್ನು ನೆನೆದರೆ, ನಾನೂ ತಮ್ಮನೂ ಇನ್ನು ಬೇರೆ ಹಿರಿಯ ಕಿರಿಯರ ಓರಗೆಯಲ್ಲಿ ಬೆಳೆದುದು ನೆನಪಿಗೆ ಬರುತ್ತದೆ. ನನ್ನದೇನೂ ಮಂದಿಯೊಂದಿಗೆ ಹಂಚಿಕೊಳ್ಳುವಂತ ವಿಶಿಷ್ಟವಾದ ಜೀವನವೇನಲ್ಲ, ಅಪರೂಪದ ಘಟನೆಗಳೂ ನಡೆದಿಲ್ಲ. ಆದರೆ ಪ್ರತಿಯೊಂದು ಮಾನವ ಯಾ ಜೀವಿಯ ಬದುಕು ಅದರದರ ಸ್ಥಾನದಲ್ಲಿ ಪರಿಪೂರ್ಣ,ಪ್ರತಿ ಜೀವನ ಚಕ್ರಕ್ಕೊಂದು ಲಾಸ್ಯ, ಲಯವಿದೆ.<br />
ನಾನು ವಿವಾಹಿತಳಾಗಿ  ಹೊಸ ಜೀವನ ಪ್ರಾರಂಭಿಸಿದಾಗ ನನ್ನನ್ನು ಪ್ರೌಢೆಯೆಂದೇನೂ ಭಾವಿಸಿರಲಿಲ್ಲ, ನನ್ನ ವಯೋಧರ್ಮಕ್ಕನುಗುಣವಾಗಿ ಯೋಚಿಸುತ್ತಿದ್ದೆ, ನಡೆಯುತ್ತಿದ್ದೆ. ಮುಂದಿನ ಕೆಲವು ವರ್ಷಗಳಲ್ಲಿ  ಪ್ರಕೃತಿ ನಿಯಮಾನುಸಾರವಾಗಿ ನನ್ನ ವಂಶದ ಪೀಳಿಗೆಯಾಗಿ ನನ್ನ ಮಗಳು ಇಲಾ ಮತ್ತು ಮಗ ಅನಿರುದ್ಧರ ಆಗಮನ. ಅವರ ಲಾಲನೆ-ಪಾಲನೆ, ಪೋಷಣೆಗಳಲ್ಲಿ ಕಲಿತುದು ಕಂಡುದು ಬಹಳ ವಿಚಾರ, ಅವರಿಂದಾಗಿ ನಾನು ಪ್ರೌಢಳಾದೆ ಎಂದೆನಿಸುತ್ತದೆ. ಮುಂದೆ ಈ ಮಕ್ಕಳೇ ಶಾಲೆ ಮೆಟ್ಟಲೇರುತ್ತಾ ಹದಿವಯಸ್ಸಿಗೆ ಕಾಲಿಡುತ್ತಾ ನನ್ನೆತ್ತರಕ್ಕೆ ಬೆಳೆದು ನಿಂತರು.ಆಗ ನಾನು ಅವರಿಂದ ಹೊಸ ಪ್ರಪಂಚವನ್ನು ಅರ್ಥ ಮಾಡಿಕೊಂಡೆ. ಕೆಲವೊಮ್ಮೆಈಗಿನ ಹೊಸ ವಿಚಾರಗಳನ್ನು ಅವರು ನನ್ನಿಂದ ಹೆಚ್ಚು ತಿಳಿದವರೆಂಬುವುದನ್ನು  ಅರಿತೆ.<br />
ನನ್ನ ಮಗಳು ಮತ್ತು ಮಗ ಸ್ವಭಾವದಲ್ಲಿ ಪೂರ್ತಿ ಭಿನ್ನ, ಇವಳೋ ಚಟುವಟಿಕೆಗಳೊಂದಿಗೆ ವಾಚಾಳಿಯಾಗಿ ಓರಗೆಯವರೊಂದಿಗೆ ಸ್ನೇಹದಿಂದಿದ್ದರೆ ಇನ್ನೊಬ್ಬ ಮಿತಭಾಷಿಯಾಗಿ ಯಾವುದೇ ದೈಹಿಕ ಚಟುವಟಿಕೆಗಳಲ್ಲಿ  ಗಮನವನ್ನು ಹರಿಸದೆ, ತನ್ನ ಕೆಲವೇ ಸ್ನೇಹಿತರೊಂದಿಗೆ ಬೆರೆಯುತ್ತಾ, ತನ್ನ ಆಸಕ್ತಿಯ ಪುಸ್ತಕಗಳನ್ನು ಓದುತ್ತಾ ಬೆಳೆದನು.  ಮಗಳು ಇಲಾ ೧೦ನೇ ತರಗತಿ ದಾಟಿದಾಗ ತಾನು ಮುಂದೇನು ಓದಬೇಕೆಂಬ ಗೊಂದಲಕ್ಕೊಳಗಾದಳು,ಅವಳು ಇನ್ನೊಬ್ಬರ ಸಲಹೆಯನ್ನು ಸುಲಭವಾಗಿ ಸ್ವೀಕರಿಸುವವಳಲ್ಲ. ಅವಳು  ೧೧ನೇ ತರಗತಿಗೆ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಳು. ಅವಳ ಗೊಂದಲಗಳೊಂದಿಗೆ ೧೨ನೇ ತರಗತಿಯನ್ನು ಮುಗಿಸಿದಾಗ ಮುಂದಕ್ಕೇನು ಮಾಡುವುದೆಂದು ಸಮಸ್ಯೆ ಎದುರಾಯಿತು. ಅವಳು ಮಹತ್ವಾಕಾಂಕ್ಷಿ, ಆದರೆ ಅದಕ್ಕೆ ಸರಿಯಾಗಿ ಅವಳು ಪ್ರಯತ್ನ ಪಡಲಿಲ್ಲ; ಇದರಿಂದಾಗಿ ಅವಳು ತನಗೆ ಪ್ರವೇಶ ದೊರಕಿದ ಯಾವುದೇ ಕಾಲೇಜಿನಲ್ಲೂ ಸೇರಿಕೊಳ್ಳದೆ, ಪುನಃ ಚೆನ್ನಾಗಿ ಓದಿ ಮರು ವರ್ಷ ಪರೀಕ್ಷೆ ಬರೆಯುವ ನಿರ್ಧಾರವನ್ನು  ಕೈಗೊಂಡಳು.ಅವಳ ದೃಷ್ಟಿಯಿದ್ದುದು BITS Pilani (BIRLA INSTITUTE OF TECHNOLOGY AND SCIENCE) ಯತ್ತ. ಮರು ವರ್ಷ ಪುನಃ ಎಲ್ಲ ಪ್ರವೇಶ ಪರೀಕ್ಷೆಗಳನ್ನು ಬರೆದಳು, ಕೊನೆಯಲ್ಲಿ ಮಣಿಪಾಲದಲ್ಲಿ B.Pharma ಕ್ಕೆ ಸೇರಿಕೊಂಡಳು. ಆಗ ಅವಳ ಅಜ್ಜ-ಅಜ್ಜಿಯಂದಿರ ಸಂತೋಷಕ್ಕೆ ಪಾರವೇ ಇರಲಿಲ್ಲ, ಕಾರಣ ಮೊಮ್ಮಗಳು ಹತ್ತಿರದಲ್ಲಿರುತ್ತಾಳೆ ಎಂದು ! ಅವರ ಸಂತೋಷ ಬಹಳ ದಿನಗಳದ್ದಾಗಲಿಲ್ಲ. ಕೊನೆಯ ಹಂತದಲ್ಲಿ ಅವಳಿಗೆ BITS Pilani ಯಲ್ಲಿ B.Pharma ಪ್ರವೇಶಕ್ಕೆ ಕರೆ ಬಂದಿತು. ಅವಳ ಅಜ್ಜ-ಅಜ್ಜಿಯಂದಿರು ಮೊಮ್ಮಗಳು  ಅಷ್ಟು ದೂರ ಹೋಗುವುದನ್ನು ಒಕ್ಕೊರಲಿನಿಂದ ವಿರೋಧಿಸಿದರು ಮತ್ತು ತಡೆಯಲೆತ್ನಿಸಿದರು. ಕೊನೆಯಲ್ಲಿ ಅವಳ ಹಟವೇ ಗೆದ್ದಿತು.ಮುಂದಿನ ಮೂರು ದಿನಗಳೊಳಗೆ ಆಗಾಗಲೇ ಸೇರಿದ್ದ ಮಣಿಪಾಲದ ಕಾಲೇಜಿನಿಂದ ಕಾಗದ ಪತ್ರಗಳನ್ನು ಹಿಂದಕ್ಕೆ ಪಡೆದುಕೊಂಡು, ನಾವಿರುವ ಹೈದರಾಬಾದಿಗೆ ಬಂದು, ನಾವೆಲ್ಲಾ ಪಿಲಾನಿಯತ್ತ  ಪಯಣಿಸಿದೆವು. ನಿಗಧಿತ ದಿನ ಹೇಳಿದ ವೇಳೆಯಲ್ಲಿ ನಾವು ಅಲ್ಲಿ ಹಾಜರಾದೆವು.<br />
ನಮ್ಮ ದೇಶದ ದೊಡ್ಡ ವರ್ತಕ ಸಮುದಾಯಕ್ಕೆ ಸೇರಿದ ಜಿ.ಡಿ.ಬಿರ್ಲಾರವರು( ಘನಶ್ಯಾಮ ದಾಸ್ ಬಿರ್ಲಾ) ಮೂಲತಃ ರಾಜಸ್ಥಾನದ ಪಿಲಾನಿಯವರು. ಇವರು ತಮ್ಮ ಹುಟ್ಟೂರಾದ ಪಿಲಾನಿಯಲ್ಲಿ<br />
ವಿದ್ಯಾಭ್ಯಾಸಕ್ಕೇನೂ ಸವಲತ್ತುಗಳಿಲ್ಲದಿರುವುದನ್ನು ಮನಗಂಡು ಹೆಣ್ಣು-ಗಂಡು ಮಕ್ಕಳೀರ್ವರೂ ಓದಲಾಗುವಂತೆ ೧೯೦೦ ರಲ್ಲಿ ಪಾಠಶಾಲೆಯೊಂದನ್ನು ತೆರೆದರು. ಇವರು ಗಾಂಧಿ,ನೆಹರೂರವರ ಸಮಕಾಲೀನರು, ಆಪ್ತ ಮಿತ್ರರು ಹಾಗೂ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾದವರು. ಮುಂದೆ ಇದೇ ಶಾಲೆ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಮುಂದುವರಿಯುತ್ತಾ ವಿಜ್ಞಾನ,ಕಲೆ, ತಾಂತ್ರಿಕತೆ ಹೀಗೆ ವಿವಿಧ ವಿಷಯಗಳ ಅಧ್ಯಯನವನ್ನು ಅಳವಡಿಸಿಕೊಳ್ಳುತ್ತ ಬೆಳೆಯಿತು.  ೧೯೬೪ರ ಕಾಲದಲ್ಲಿ ಈ ಸಂಸ್ಥೆಯ ಎಲ್ಲ ಕಾಲೇಜುಗಳನ್ನು ಒಂದಾಗಿಸಿ ವಿಶ್ವವಿದ್ಯಾಲಯವಾಗಿ ಇದು ಮಾರ್ಪಟ್ಟಿತು. ಇದು ಜಾಗತಿಕ ಮಟ್ಟದಲ್ಲೇ ಹೆಸರುವಾಸಿಯಾಗುವಂತೆ ಬೆಳೆಯಿತು.  ಇಲ್ಲಿ ದೇಶದ ಎಲ್ಲಾ ರಾಜ್ಯಗಳ ೧೨ನೇ ತರಗತಿಯ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದವರಿಗೆ ಪ್ರವೇಶ ನೀಡುವ ಪದ್ಧತಿಯನ್ನು  ಇಟ್ಟುಕೊಂಡಿದ್ದಾರೆ.ಈ ವರೆಗೆ ಇಲ್ಲಿ ಯಾವುದೇ ಸಂದರ್ಭದಲ್ಲೂ ಯಾವುದೇ ರಾಜಕೀಯ ಶಿಫಾರಸು, ಒತ್ತಾಯಕ್ಕೆ ಮಣಿಯದೆ ತಮ್ಮದೆ ನಿಲುವಿಗನುಸಾರವಾಗಿ  ಅರ್ಹತೆಯೊಂದನ್ನೆ ಮನ್ನಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.ಈಗ ಕಳೆದ ೬-೭ ವರ್ಷಗಳಿಂದ ಪ್ರವೇಶ ಪರೀಕ್ಷೆ ನಡೆಸುತ್ತಿದ್ದಾರೆ.</p>
<p style="text-align:left;"><img class="alignleft" src="http://lh6.ggpht.com/_bEdWeUlAeV4/Sm2sS50xcuI/AAAAAAAAAXI/3ecTki39sXA/s800/IMG_0187.JPG" alt="" width="438" height="284" /></p>
<p style="text-align:left;">BITS ನ ಆವರಣವು ಮರುಭೂಮಿಯ ಪ್ರಾರಂಭದ ಹಂತದಲ್ಲಿದೆ.ಇದು ಸಾಧಾರಣ  ದೆಹಲಿಯಿಂದ ೨೦೦ ಕಿ.ಮಿ.ದೂರದಲ್ಲಿದೆ.ಇಲ್ಲಿನದು ವೈಪರೀತ್ಯ ಹವಾಮಾನ.ಬೇಸಗೆಯಲ್ಲಿ ೪೦-೪೫ ”C,ಕೆಲವೊಮ್ಮೆ ಇನ್ನೂ ಹೆಚ್ಚಿಗೆ. ಬಿಸಿ ಗಾಳಿಯ ಒಣ ಹವೆ,  ಗಾಳಿಯಲ್ಲಿ ಉಸುಕು ಮಿಶ್ರವಾಗಿರುವುದೂ ಉಂಟು(dust storm). ಹಾಗಾಗಿ ಅಲ್ಲಿನ ಜನರು ಮುಖ ಮುಚ್ಚಿಕೊಳ್ಳುತ್ತಾರೆ, ಮೂಗಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಬಿಸಿಲಿನಿಂದ ಚರ್ಮ ಸುಡದಂತೆ ಪೂರ್ತಿ ಮುಚ್ಚುವಂತ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಇಲ್ಲಿನ ಚಳಿಯೂ ಅತಿಯೇ, ಡಿಸೆಂಬರ್, ಜನವರಿ ತಿಂಗಳಲ್ಲಿ ತಾಪಮಾನ ೩-೪&#8221;C ಗೆ ಇಳಿಯುತ್ತದೆ. ಆಗ ವಿದ್ಯಾರ್ಥಿಗಳು ಬಿಸಿ ನೀರಿಗಾಗಿ ಕೆಟಲ್ ಇಟ್ಟುಕೊಳ್ಳುತ್ತಾರೆ. ಇಲ್ಲಿನ ಕಠಿಣ ಹವೆ ಹೇಗೆ ಜನರನ್ನು ಕಷ್ಟಸಹಿಷ್ಣುಗಳನ್ನಾಗಿಸುತ್ತದೆಯೋ, ಅಂತೆಯೇ  ಅವರ ವಿದ್ಯಾಭ್ಯಾಸ ಪದ್ಧತಿಯೂ ವಿದ್ಯಾರ್ಥಿಗಳನ್ನು  ಬದುಕಿನ ತೀವ್ರ ಸ್ಪರ್ಧಾತ್ಮಕ  ಸಂದರ್ಭಗಳಿಗೆ ಬೇಕಾದಂತೆ ತರಬೇತು ಮಾಡುತ್ತದೆ. ಒಟ್ಟಿನಲ್ಲಿ ಅವರು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯನ್ನು ಪ್ರೊತ್ಸಾಹಿಸುತ್ತಾರೆ.</p>
<p style="text-align:left;">ಪಿಲಾನಿಯ ವರ್ಣನೆ ನಮ್ಮಿಂದ ಕೇಳಿದ ಅಜ್ಜ-ಅಜ್ಜಿಯರಿಗೆ ತಾವೂ ಕಣ್ಣಾರೆ ಕಂಡು ಬರಬೇಕೆಂದೆನಿಸಿತು. ಹಾಗಾಗಿ  ಇಲಾಳ ಎರಡನೇ ವರ್ಷದಲ್ಲಿ  ನಾಲಕ್ಕು ಮಂದಿ (ನನ್ನ ಮತ್ತು ಶ್ಯಾಮನ ಅಪ್ಪ ಅಮ್ಮಂದಿರು)ರೈಲಿನಲ್ಲಿ ಅಲ್ಲಿಗೆ ಹೋಗಿ ನೋಡಿ ಸಂತೃಪ್ತರಾದರು.</p>
<p>ಮೊಮ್ಮಗಳನ್ನು ನೋಡಲು ಹೋದ ಅಜ್ಜ ಅಜ್ಜಿಯಂದಿರು, ಲೈಬ್ರರಿಯ ಎದುರು ನಿಂತಾಗ</p>
<p style="text-align:left;"><img class="alignleft" src="http://lh4.ggpht.com/_bEdWeUlAeV4/TGQY6dBmFHI/AAAAAAAAD5Y/ng3UohZ1K3w/DSCN1773.JPG" alt="" width="480" height="360" /></p>
<p style="text-align:left;">ಪಿಲಾನಿ  ಊರು ಈ ವಿದ್ಯಾಸಂಸ್ಥೆಯ ಹೊರತಾಗಿ ಚಿಕ್ಕ ಹಳ್ಳಿ, ಅದೇನೂ ಪ್ರವಾಸೀ ತಾಣವಲ್ಲ. ಕಾಲೇಜಿನ ಆವರಣ ಬಹಳ ವಿಶಾಲವಾಗಿದೆ, ಸಾಧಾರಣ ೪-೫೦೦೦ ಮಂದಿ ವಿದ್ಯಾರ್ಥಿಗಳು, ಮತ್ತು ಶಿಕ್ಷಕ ವೃಂದದವರು ಸಂಸಾರದೊಂದಿಗೆ ಅಲ್ಲೇ ವಾಸವಾಗಿದ್ದಾರೆ. ಅಲ್ಲಿನ ಕೆಲಸಗಾರರೆಲ್ಲರೂ ಸುತ್ತುಮುತ್ತಲಿನ ಹಳ್ಳಿಯವರು. ಆವರಣದೊಳಗೆ ಎಲ್ಲೆಡೆಯಲ್ಲೂ ಹಸುರು, ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳು, ಅಲ್ಲಲ್ಲಿ ಉದ್ಯಾನ, ಕಾಡಿನಂತೆ ಬೆಳೆಸಿದ ಮರಗಳು, ಅವನ್ನು ಹೊಂದಿಕೊಂಡು  ಜೀವಿಸುವ ಮಯೂರಗಳು ಮತ್ತಿತರ ಪಕ್ಷಿ ಹಾಗೂ ಜೀವ ಸಂಕುಲಗಳು. ಮೊದಲ ಬಾರಿಗೆ ನಾನು ಅಲ್ಲಿಗೆ ಹೋಗಿದ್ದಾಗ ನವಿಲಿನ ಕೀರಲು ದ್ವನಿಯ ಕಿರುಚಾಟವನ್ನು ಮುಂಜಾವಿನ ಹೊತ್ತಿನಲ್ಲಿ ಬೆಕ್ಕು ಜೋರಾಗಿ ಕೂಗುತ್ತಿದೆ ಎಂದು ಭಾವಿಸಿದ್ದೆ. ಆ ಜಾಗ ಮಯೂರ ವನ ಎಂದು ಹೆಸರಿಸುವಂತಿದೆ. ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ಸಂಪರ್ಕ ಬೆಳೆಸಲು ಸಂದರ್ಭಗಳೇ ಕಮ್ಮಿ. ನಮ್ಮ ಹಳ್ಳಿಗಳಲ್ಲಿ ವಾಹನ ಸೌಕರ್ಯ ಬರುವ ಮುಂದು ಎತ್ತಿನ ಗಾಡಿ ಬಳಸಿದಂತೆ ಅಲ್ಲಿನ ಜನರು ಸಾಗಾಟಕ್ಕೆ ಒಂಟೆಗಾಡಿಯನ್ನು ಬಳಸುತ್ತಾರೆ.</p>
<p style="text-align:left;"><img class="alignleft" src="http://lh3.ggpht.com/_bEdWeUlAeV4/TGQZW7F_DrI/AAAAAAAAD5o/Xtl4TIlWzXM/DSCN1796.JPG" alt="" width="480" height="360" /></p>
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p>ಪಿಲಾನಿಯ  ಆವರಣದೊಳಗಣ ಸರಸ್ವತಿ ದೇವಾಲಯದ  ಮೆಟ್ಟಲಲ್ಲಿ</p>
<p>ಮಗಳು ಇಲಾಳ  ವಿದ್ಯಾಭ್ಯಾಸದ ಮೊದಲ ಎರಡು ವರ್ಷಗಳು ಮುಗಿಯುತ್ತಾ ಬಂದಂತೆ ಮಗ ಅನಿರುದ್ಧನ ಇಂಟರ್ ೨ನೇ  ವರ್ಷ ಮುಗಿಯುತ್ತಾ ಬಂದು ಅವನು ಬೇರೆ, ಬೇರೆ ಕಾಲೇಜುಗಳಲ್ಲಿ ಪ್ರವೇಶ  ಗಿಟ್ಟಿಸಿಕೊಳ್ಳಲು ತಯಾರಿ ಮಾಡಹತ್ತಿದ. ಅವನೊ I.I.T., BITS ಎಂದು ಹಲವಾರು  ಪರೀಕ್ಷೆಗಳನ್ನು ಬರೆದನು. ಆದರೆ ಇವನ ಓದು, ತಯಾರಿಯ ಪದ್ಧತಿ ಅಕ್ಕನದಕ್ಕಿಂತ ಭಿನ್ನ,  ಅವನು ಮೊದಲೇ ತನ್ನ ದಿಕ್ಕನ್ನು ನಿಶ್ಚಯಿಸಿದ್ದ. ಅವನು ದೃಷ್ಟಿಯಿಟ್ಟುದು  I.I.T  ಗೆ,ಅವನು ಓದಿದ ಕಾಲೇಜಿನವರು ಈ ಮಕ್ಕಳನ್ನು ಬಿರುಸಾದ ತರಬೇತಿಯನ್ನಿತ್ತು  ಮಿಕ್ಕ  ಪರೀಕ್ಷೆಗಳಿಗೂ ಸೈ ಎನ್ನುವಂತೆ ತಯಾರು ಮಾಡಿದ್ದರು. ಮೇ ತಿಂಗಳ ಕೊನೆಗಾಗುವಾಗ ಒಂದಾಗಿ  ಒಂದರಂತೆ ಪ್ರವೇಶ ಪರೀಕ್ಷೆಗಳ  ಫಲಿತಾಂಶ ಹೊರಬಂತು, ಅವನ ದಾರಿ ಸ್ಪಷ್ಟವಾಗಹತ್ತಿತು.  ಅವನಿಗೆ ಬೇಕೆಂದ I.I.T ಕಾಲೇಜು ಮತ್ತು ಅಭ್ಯಾಸ ವಿಷಯ  ಸಿಗಲಿಲ್ಲ, ಹಾಗಾಗಿ BITS ಗೆ  ಸೇರುವುದಾಗಿ ನಿರ್ಧಾರವಾಯಿತು.<br />
ನಮ್ಮ ಜೀವನದಲ್ಲಿ ಮಕ್ಕಳ ಪಾಲನೆ ಪೋಷಣೆಯಷ್ಟೇ  ಅವರ ವಿದ್ಯಾಭ್ಯಾಸದ ಘಟ್ಟವೂ  ಪ್ರಾಮುಖ್ಯವಾದುದು. ಹೆತ್ತವರಾದ ನಮ್ಮ ಸಹಕಾರ,ತ್ಯಾಗ,ಮಾರ್ಗದರ್ಶನವಿಲ್ಲದೆ ಮಕ್ಕಳು  ಮೇಲಕ್ಕೆ ಹತ್ತಲು ಸಾಧ್ಯವಿಲ್ಲ.ಆದರೆ ಇಂದಿನ ದಿನಗಳಲ್ಲಿ ದೊಡ್ಡ ಕಾಲೇಜಿನಲ್ಲಿ  ಓದುವುದಕ್ಕೋಸ್ಕರ ಪಾಲಕರಾದ ನಮ್ಮಂತವರು ಅವರಿಗೆ ನೀಡುವ ಉಪಟಳ, ಒತ್ತಡ ವಿಪರೀತ. ಅವರೇ  ಉತ್ಸಾಹದಲ್ಲಿ ಓದಿದಾಗಲೇ ಒತ್ತಡ ಭರಿಸಲು ಅಸಾಧ್ಯ! ಆದರೆ ಅದು ಒತ್ತಾಯದಲ್ಲಾದಾಗ ಪರಿಣಾಮ  ಮಕ್ಕಳ ಮೇಲೆ ನಕಾರಾತ್ಮಕವಾಗಿರುತ್ತದೆ, ಕೆಡುಕುಗಳೇ ಆಗುತ್ತವೆ.</p>
<p>ಅನಿರುದ್ಧನ ಕಾಲೇಜು ಪ್ರವೇಶಕ್ಕೆ ಪಿಲಾನಿಗೆ ಹೋಗಲು ನಾವು ನಾಲಕ್ಕು ಮಂದಿಗೆ ಟಿಕೆಟು  ತೆಗೆದಿರಿಸಿ ತಯಾರಾದೆವು. ನಮ್ಮ ಮನೆಯಲ್ಲೊಂದು ವಿಪರ್ಯಾಸವೆಂದರೆ ನಾವು ಎಷ್ಟೇ  ಮುಂದಾಲೋಚನೆಯಲ್ಲಿ ನಮ್ಮ ಪ್ರವಾಸಗಳ ತಯಾರಿ ಮಾಡಿದರೂ ಕೊನೆಯ ನಿಮಿಷದ ವರೆಗೂ ಶ್ಯಾಮ  ನಮ್ಮೊಂದಿಗೆ ಪಯಣಿಸುತ್ತಾರೋ ಇಲ್ಲವೋ ಎಂದು ನಮಗೆ ತಿಳಿದಿರುವುದಿಲ್ಲ, ಈ ಬಾರಿಯೂ ಹಾಗೇ  ಕೊನೆಯ ಎರಡು ದಿನಗಳಿರುವಾಗ ಅವರ ಆಫೀಸ್ ಕೆಲಸದ ನಿಮಿತ್ತ ಬೇರೆಡೆಗೆ ಹೋಗಬೇಕಾಗಿ ಬಂತು.  ನಾನೂ ಮಕ್ಕಳೀರ್ವರೂ ದೆಹಲಿಗೆ ಹೋಗಿ , ಅಲ್ಲಿಂದ ಮೊದಲೇ ನಿಗಧಿಸಿಟ್ಟಿದ್ದ ಬಾಡಿಗೆ  ಕಾರಲ್ಲಿ ಪಿಲಾನಿಯಲ್ಲಿ ಬಂದಿಳಿದೆವು. ನಾನು ಆ ಮೊದಲೇ ೨ ಬಾರಿ ಹೋಗಿದ್ದುದರಿಂದ ,ಇಲಾ  ಕಳೆದ ಎರಡು ವರ್ಷಗಳಲ್ಲಿ ಹಲವಾರು ಬಾರಿ ಪ್ರಯಾಣಿಸಿದ್ದುದರಿಂದ ಮಾನಸಿಕ ಆತಂಕಗಳೇನು  ಇರಲಿಲ್ಲ. ಅಲ್ಲಿನ ಅತಿಥಿ ಗೃಹದಲ್ಲಿ ಇಳಿದೆವು. ಎಲ್ಲಾ ಮುಖ್ಯ ಕೆಲಸಗಳು ಮುಗಿದ ನಂತರ  ಶ್ಯಾಮ ನಮ್ಮನ್ನು ಕೂಡಿಕೊಂಡರು.</p>
<p style="text-align:left;"><img class="alignleft" src="http://lh3.ggpht.com/_bEdWeUlAeV4/TGPrkaKyMSI/AAAAAAAAD4k/kL2gWMPW-CY/DSC01608.JPG" alt="" width="439" height="329" /></p>
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">ಪ್ರಯಾಣಕ್ಕೆ ಸಜ್ಜಾದ ನಾವು</p>
<p style="text-align:left;">
<p style="text-align:left;">ಮಾರನೇ ದಿನ ನಾನು ಮತ್ತು ಅನಿರುದ್ಧ ಅವನ ಕಾಲೇಜಿನ ಪ್ರವೇಶಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕಟ್ಟಲೆಗಳನ್ನು ಒಂದೊಂದಾಗಿ ಪೂರೈಸಿದೆವು. ಅಲ್ಲಿ ದೇಶದ ಯಾವ್ಯಾವುದೋ ಮೂಲೆಗಳಿಂದ ಬಂದ ಬಂದ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಆತಂಕಭರಿತ ಮುಖದಲ್ಲಿ ಒಬ್ಬರನ್ನೊಬ್ಬರು ಪ್ರಶ್ನಿಸುತ್ತ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಎಲ್ಲರ ಸಮಸ್ಯೆಯೂ ಒಂದೇ- ಅದು, ನಮ್ಮ ಮಗ ಅಥವಾ ಮಗಳು ಇಲ್ಲಿನ ಹವೆಗೆ, ಮತ್ತು ಇಷ್ಟು ದೂರದೂರಿಗೆ ಹೇಗೆ ಹೊಂದಿಕೊಳ್ಳುತ್ತಾರೆ? ನಾನು ಕಂಡಂತೆ ನೀರಿಗೆಸೆದರೆ ಹೇಗೆ ಈಜು ಬರುತ್ತದೆಯೋ ಹಾಗೇ ಅಲ್ಲಿ ಸಮಯ ಕಳೆದಂತೆ ಅದೇ ಬೆದರಿದ ಮಕ್ಕಳು ಆತ್ಮ ವಿಶ್ವಾಸದೊಂದಿಗೆ ಓದು, ಒಡನಾಟ,ವ್ಯವಹಾರಗಳನ್ನೆಲ್ಲ ನಿಭಾಯಿಸಲು ಸಮರ್ಥರಾಗುತ್ತಾರೆ.<br />
ಉತ್ತರಭಾರತದಲ್ಲಿ ಅಗಸ್ಟ್ ತಿಂಗಳಿನಲ್ಲಿ ಮಳೆಯಾಗಿ ಸುಡು ಬಿಸಿ ತಗ್ಗಿ, ಹವೆಯಲ್ಲಿ ತೇವಾಂಶ ಹೆಚ್ಚುತ್ತದೆ. ಆ ಸಮಯದಲ್ಲಿ ದೆಹಲಿಯಲ್ಲಿ, ಪಿಲಾನಿಯಲ್ಲಿ ಮಳೆ ಬೀಳುತ್ತದೆ. ನನಗೆ ಅನುಭವವಾದಂತೆ ಆ ತಿಂಗಳಲ್ಲಿ ಅಲ್ಲಿ ವಿಪರೀತ ಬೆವರುವ ಹವೆ. ಅಭ್ಯಾಸವಿಲ್ಲದವರಿಗೆ ಬೆವರಿನಿಂದಾಗಿ ದೇಹದ ಉಪ್ಪಿನಂಶ ಹೊರಹೋಗಿ,ನೀರಿನಂಶ ತಗ್ಗಿ ದಣಿವಾಗುತ್ತದೆ. ಹಾಗಾಗಿ  ನಾವು  ಅಲ್ಲಿ ನೀರು ಕುಡಿಯುತ್ತಲೇ ಇರಬೇಕು.<br />
ಅಲ್ಲಿ ಕಾಲೇಜಿನೊಳಗೆ ಎಲ್ಲೆಡೆಯಲ್ಲಿ ಶುದ್ಧಿಸಿದ, ಶೀತಲೀಕರಿಸಿದ ನೀರನ್ನಿಟ್ಟು (Water cooler) ಜನರಿಗೆ ತಿಳಿಯುವಂತೆ ಬರೆದಿರುತ್ತಾರೆ. ನನಗೆ ಮೊದಲ ಬಾರಿ, ನಿದ್ರೆ ಕೆಟ್ಟು ಪ್ರಯಾಣಿಸಿ, ದಣಿವು ಬಾಯಾರಿಕೆಗಳಿಂದ  ಅಸ್ವಸ್ಥಳಾಗಿ ಅಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಪರೀಕ್ಷಿಸುವ ಸಂದರ್ಭ ಒದಗಿತ್ತು.</p>
<p style="text-align:left;"><img class="alignleft" src="http://lh4.ggpht.com/_bEdWeUlAeV4/Sm2sauZwO0I/AAAAAAAAAXQ/R8V4bqw0bpk/s800/IMG_0189.JPG" alt="" width="565" height="423" /></p>
<p style="text-align:left;">ನಾವು ಈಗಿನ ವಿಭಕ್ತ,ಸಣ್ಣ  ಕುಟುಂಬ ಪದ್ಧತಿಯಲ್ಲಿ, ದೊಡ್ಡ ಪಟ್ಟಣಗಳಲ್ಲಿ ಮಕ್ಕಳನ್ನು ತುಂಬ ಮುಚ್ಚಟೆಯಲ್ಲಿ ಬೆಳೆಸಿರುತ್ತೇವೆ. ಅವರಿಗೆ ಬಟ್ಟೆಬರೆ ತೊಳೆಯುವುದು, ಜೋಡಿಸಿಟ್ಟುಕೊಳ್ಳುವುದು, ತಮ್ಮ ವಸ್ತುಗಳನ್ನು ಕಾಪಾಡಿಕೊಳ್ಳುವುದು ಅಭ್ಯಾಸವಿರುವುದಿಲ್ಲ. ಮತ್ತು ಇತರರೊಂದಿಗೆ ಹೊಂದಿಕೊಂಡು ನಡೆಯುವುದು, ನುಡಿಯುವುದು ತಿಳಿದಿರುವುದಿಲ್ಲ.ಮಕ್ಕಳು ಕಾಲೇಜು ಮಟ್ಟಲು ಹತ್ತುವುದೆಂದರೆ ಪ್ರೌಢ ಜೀವನದ ಮೊದಲ ಮೆಟ್ಟಲು ತುಳಿಯುವುದು. ಅವರು ಅಮ್ಮನ ಕಣ್ಣಳತೆಯಿಂದ ದೂರಾದಾಗ ಬೇಗನೇ ಜವಾಬ್ದಾರಿಯುತರಾಗುತ್ತಾರೆ ಮತ್ತು ಪ್ರಪಂಚವನ್ನು ಅರ್ಥೈಸಿಕೊಳ್ಳಲು ಯತ್ನಿಸುತ್ತಾರೆ. ನಾನು ನನ್ನಿಬ್ಬರು ಮಕ್ಕಳು ಮುಂಬರುವ ವರುಷಗಳಲ್ಲಿ ಈ ಮರುಭೂಮಿಯೂರಲ್ಲಿ ಓದಿ, ಕಲಿತು ಸಧೃಡರಾಗಿ ಬೆಳೆದು ಲೋಕದ ಸತ್ಪ್ರಜೆಗಳಾಗಲಿ ಎಂದು ಮನದಲ್ಲಿ ಹಾರೈಸುತ್ತ ಹಿಂದಿರುಗಿದೆ.<br />
ನನ್ನ ಸೋದರ ಭಾವನಾದ ಅಶೋಕ ವರ್ಧನರು &#8221; ನಿನ್ನ ಕರುಳ ಕುಡಿಗಳನ್ನು ಮರುಭೂಮಿಯಲ್ಲಿ ನೆಟ್ಟು ಬಂದುದನ್ನು ನಮಗೆ ಬರೆದು ತಿಳಿಸು&#8221; ಎಂದುದಕ್ಕಾಗಿ ನಾನಿದನ್ನು ಬರೆದೆ.</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/58/"><img alt="" border="0" src="http://feeds.wordpress.com/1.0/comments/shailajasbhat.wordpress.com/58/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/58/"><img alt="" border="0" src="http://feeds.wordpress.com/1.0/delicious/shailajasbhat.wordpress.com/58/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/58/"><img alt="" border="0" src="http://feeds.wordpress.com/1.0/facebook/shailajasbhat.wordpress.com/58/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/58/"><img alt="" border="0" src="http://feeds.wordpress.com/1.0/twitter/shailajasbhat.wordpress.com/58/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/58/"><img alt="" border="0" src="http://feeds.wordpress.com/1.0/stumble/shailajasbhat.wordpress.com/58/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/58/"><img alt="" border="0" src="http://feeds.wordpress.com/1.0/digg/shailajasbhat.wordpress.com/58/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/58/"><img alt="" border="0" src="http://feeds.wordpress.com/1.0/reddit/shailajasbhat.wordpress.com/58/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=58&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2010/08/12/%e0%b2%ae%e0%b2%95%e0%b3%8d%e0%b2%95%e0%b2%b3-%e0%b2%aa%e0%b3%8d%e0%b2%b0%e0%b2%97%e0%b2%a4%e0%b2%bf-%e0%b2%ac%e0%b3%86%e0%b2%b3%e0%b2%b5%e0%b2%a3%e0%b2%bf%e0%b2%97%e0%b3%86-%e0%b2%b8%e0%b2%82/feed/</wfw:commentRss>
		<slash:comments>14</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://lh6.ggpht.com/_bEdWeUlAeV4/Sm2sS50xcuI/AAAAAAAAAXI/3ecTki39sXA/s800/IMG_0187.JPG" medium="image" />

		<media:content url="http://lh4.ggpht.com/_bEdWeUlAeV4/TGQY6dBmFHI/AAAAAAAAD5Y/ng3UohZ1K3w/DSCN1773.JPG" medium="image" />

		<media:content url="http://lh3.ggpht.com/_bEdWeUlAeV4/TGQZW7F_DrI/AAAAAAAAD5o/Xtl4TIlWzXM/DSCN1796.JPG" medium="image" />

		<media:content url="http://lh3.ggpht.com/_bEdWeUlAeV4/TGPrkaKyMSI/AAAAAAAAD4k/kL2gWMPW-CY/DSC01608.JPG" medium="image" />

		<media:content url="http://lh4.ggpht.com/_bEdWeUlAeV4/Sm2sauZwO0I/AAAAAAAAAXQ/R8V4bqw0bpk/s800/IMG_0189.JPG" medium="image" />
	</item>
		<item>
		<title>ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ &#8211; ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೨</title>
		<link>http://shailajasbhat.wordpress.com/2010/04/07/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-2/</link>
		<comments>http://shailajasbhat.wordpress.com/2010/04/07/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-2/#comments</comments>
		<pubDate>Wed, 07 Apr 2010 07:00:53 +0000</pubDate>
		<dc:creator>my pen from shrishaila</dc:creator>
				<category><![CDATA[Series on History By V.S.G.]]></category>
		<category><![CDATA[ಜಪಾನ್;ಬೌದ್ಧ ಧರ್ಮ;ಶಿಂಟೋ ಧರ್ಮ;ಕ್ಯೋಟೋ]]></category>
		<category><![CDATA[ಟಿಬೆಟ್;ಮುನಿ ಪದ್ಮ ಸಂಭವ;ಗುರು ರೀನ್ ಪೊಚೆ]]></category>
		<category><![CDATA[ದಲೈ ಲಾಮಾ]]></category>
		<category><![CDATA[ನ್ಯಿಂಗ್ಮಾ;ಕಡಮ್;ಕರಗ್ಯು;ಸಖ್ಯ ಸಂಪ್ರದಾಯ;ಗೆಲುಗ್]]></category>
		<category><![CDATA[ಸಮುರೈ;ಕಮಲದ ಸೂತ್ರ;ನಾರಾದ ತೋಡೈಜಿ ದೇವಾಲಯ]]></category>

		<guid isPermaLink="false">http://shailajasbhat.wordpress.com/?p=47</guid>
		<description><![CDATA[ಮರೆತು ಹೋದ ಕಥೆ &#8211; ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ- ಭಾಗ ೨ http://shailajasbhat.wordpress.com/2010/03/01/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0/  .  ಇದು  ಮೊದಲಿನ ಭಾಗ &#160; ಈ ಮೊದಲಿನ ಭಾಗದಲ್ಲಿ ನಾವು ಸ್ಥೂಲವಾಗಿ ಬೌದ್ಧ ಧರ್ಮದ ಸಂಸ್ಕೃತಿ ಅಪಘಾನಿಸ್ಥಾನ,ಮಧ್ಯ ಏಶಿಯಾ, ಚೀನಾದೇಶ ಮತ್ತು ಕೊರಿಯಾಗಳಲ್ಲಿ ಹರಡಿದ್ದನ್ನು ಪರಿಗಣಿಸಿದೆವು. ಬೌದ್ಧ  ಧರ್ಮದ ಸಂಸ್ಕೃತಿ ಎಂದರೆ ಅದು  ಆ ಜನರ ದೈನಂದಿನ ಸ್ವಂತ ಬದುಕು, ಸಾಮಾಜಿಕ ವಿಧಿ ನಿಯಮಗಳು, ಆಚಾರ ವಿಧಾನಗಳು,ಸಾಂಘಿಕ ವ್ಯವಸ್ಥೆ,  ನೀತಿ ತತ್ತ್ವಗಳು, ಆಧ್ಯಾತ್ಮಿಕತೆ, ಆಡಳಿತ ವಿಧಿ ನಿಯಮಗಳು, [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=47&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ಮರೆತು ಹೋದ ಕಥೆ &#8211; ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ- ಭಾಗ ೨</strong></p>
<p>http://shailajasbhat.wordpress.com/2010/03/01/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0/  .  ಇದು  ಮೊದಲಿನ ಭಾಗ</p>
<p>&nbsp;</p>
<p>ಈ ಮೊದಲಿನ ಭಾಗದಲ್ಲಿ ನಾವು ಸ್ಥೂಲವಾಗಿ ಬೌದ್ಧ ಧರ್ಮದ ಸಂಸ್ಕೃತಿ ಅಪಘಾನಿಸ್ಥಾನ,ಮಧ್ಯ ಏಶಿಯಾ, ಚೀನಾದೇಶ ಮತ್ತು ಕೊರಿಯಾಗಳಲ್ಲಿ ಹರಡಿದ್ದನ್ನು ಪರಿಗಣಿಸಿದೆವು. ಬೌದ್ಧ  ಧರ್ಮದ ಸಂಸ್ಕೃತಿ ಎಂದರೆ ಅದು  ಆ ಜನರ ದೈನಂದಿನ ಸ್ವಂತ ಬದುಕು, ಸಾಮಾಜಿಕ ವಿಧಿ ನಿಯಮಗಳು, ಆಚಾರ ವಿಧಾನಗಳು,ಸಾಂಘಿಕ ವ್ಯವಸ್ಥೆ,  ನೀತಿ ತತ್ತ್ವಗಳು, ಆಧ್ಯಾತ್ಮಿಕತೆ, ಆಡಳಿತ ವಿಧಿ ನಿಯಮಗಳು, ನ್ಯಾಯ ತತ್ತ್ವಗಳು, ಆರ್ಥಿಕ  ಬದುಕು ಇವೆಲ್ಲವೂ ಸೇರುತ್ತದೆ. ಈ ಧರ್ಮವು ಇಸ್ಲಾಮ್ ಆಕ್ರಮಣಕಾರರಿಂದಾಗಿ ಅಪಘಾನಿಸ್ಥಾನ, ಮಧ್ಯ ಏಶಿಯಾದಲ್ಲಿ ಕ್ರಿ.ಶ.೭-೮ರ  ಶತಮಾನದಲ್ಲಿ  ಕೊನೆಗೊಂಡಿತು.ಆದರೆ ಚೀನಾದಲ್ಲಿ ಅದು ಭವ್ಯವಾಗಿ, ಯಶಸ್ವಿಯಾಗಿ  ಕಳೆದ ೨೦೦೦ ಸಾವಿರ ವರ್ಷಗಳಿಂದ  ಬೆಳೆಯಿತು, ಮತ್ತು  ಕೊರಿಯಾದಲ್ಲಿ ಕಳೆದ ೧೫೦೦ ವರ್ಷಗಳಲ್ಲಿ ಓಲಾಡುತ್ತಾ (ಏರಿಳಿಯುತ್ತಾ )   ಅಸ್ತಿತ್ವದಲ್ಲಿತ್ತು.</p>
<p><strong>ಜಪಾನ್-</strong><br />
ಪ್ರಪಂಚದಲ್ಲೇ  ಪ್ರಭಲವಾದ ಈ ದೇಶವೂ ಚೀನಾ  ಮತ್ತು ಕೊರಿಯಾ ದೇಶಗಳಂತೆ ಬೌದ್ಧ ಧರ್ಮವನ್ನು  ಆದರದಿಂದ ಬರಮಾಡಿಕೊಂಡಿತು  ಮತ್ತು  ಸ್ವೀಕರಿಸಿತು. ಕ್ರಿ.ಶ. ೬ನೇ ಶತಮಾನದಲ್ಲಿ ಕೊರಿಯಾದ ಪಾಕ್ಚೆ ಪ್ರಾಂತ್ಯದ  ರಾಜ, ಗೌತಮ ಬುದ್ಧನ ಆಕೃತಿಗಳು ಮತ್ತು ಧರ್ಮ ಶಾಸ್ತ್ರಕ್ಕೆ ಸಂಬಂಧಿಸಿದ ಬರಹಗಳನ್ನು ಜಪಾನಿನ  ರಾಜನ  ಆಸ್ಥಾನಕ್ಕೆ ಕಳುಹಿಸಿದನು. ಆದರೊಂದಿಗೆ ಕೊರಿಯಾದಲ್ಲಿ  ಆ ಧರ್ಮಕ್ಕೆ ಮನ್ನಣೆ ಲಭಿಸಿತು ಮತ್ತು  ಅದು  ಜನರಿಂದ ಸ್ವೀಕೃತವಾಯಿತು.೭ನೇ ಶತಮಾನದಲ್ಲಿ  ಜಪಾನಿನ  ಪ್ರಸಿದ್ಧ  ರಾಜಕುಮಾರ ಶೊಟೊಕು ಜಪಾನಿನ  ಪ್ರಥಮ ರಾಜ್ಯ ಆಡಳಿತ ಸಂಹಿತೆಯನ್ನು ಬರೆದನು. ಅದರಲ್ಲಿ  ಬೌದ್ಧ  ಧರ್ಮದಲ್ಲಿ  ಉಲ್ಲೇಖಿಸಲ್ಪಟ್ಟ  ನೈತಿಕ  ಹಾಗೂ ಸಾಮಾಜಿಕ  ನೀತಿಗಳನ್ನು ಅಳವಡಿಸಲಾಯಿತು.ಈ ರಾಜನು  ಬೌದ್ಧ ಧರ್ಮವನ್ನು ತನ್ನ ಪ್ರಜೆಗಳ ಮಧ್ಯದಲ್ಲಿ   ಬಿರುಸಾಗಿ  ಪ್ರೋತ್ಸಾಹಿಸಿದನು. ಆಗ ಬಹಳಷ್ಟು  ಬೌದ್ಧ ಧರ್ಮದ ಶಾಲೆಗಳ  ನಿರ್ಮಾಣವಾಯಿತು, ಮತ್ತು ಧರ್ಮಕ್ಕೆ  ಸಂಬಂಧಿಸಿದ  ಕಲಾ ವೈವಿಧ್ಯಗಳು  ಬೆಳೆಯತೊಡಗಿದವು.  ಧರ್ಮ ಸಂಬಂಧಿತ ಓದಿಗೆ, ಅಭ್ಯಾಸಕ್ಕೆ  ಮುನಿಗಳನ್ನು    ನೆರೆಯ ರಾಜ್ಯವಾದ ಚೀನಾಕ್ಕೆ ಕಳುಹಿಸಲಾಯಿತು. ಈ ರಾಜ ಶೊಟೊಕು ಸ್ವತಃ ಆ ಧರ್ಮದ ಮೇಲೆ  ಹಲವಾರು  ವ್ಯಾಖ್ಯಾನ, ಠೀಕೆ,  ಟಿಪ್ಪಣಿಗಳನ್ನು  ಬರೆದನು. ಅವೆಲ್ಲವನ್ನೂ ಜತನದಿಂದ  ಕಾಪಾಡಲಾಗಿದೆ.</p>
<p><img src="/Users/ilani/AppData/Local/Temp/moz-screenshot-106.png" alt="" /></p>
<p><img src="/Users/ilani/AppData/Local/Temp/moz-screenshot-108.png" alt="" /></p>
<p><span style="font-family:arial;font-size:x-small;"><img src="http://www.japan-guide.com/g4/2165_01.jpg" alt="" width="350" height="169" /></span></p>
<p>ನಾರಾದ ತೋಡೈಜಿ ದೇವಾಲಯ</p>
<p><img src="/Users/ilani/AppData/Local/Temp/moz-screenshot-107.png" alt="" /></p>
<p>ನಾರಾರಾಜರ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ.೮ನೇ ಶತಮಾನ)   ಹಲವಾರು  ಬುದ್ಧ ದೇವಾಲಯಗಳ  ನಿರ್ಮಾಣವಾಯಿತು. ಧರ್ಮಕ್ಕೆ ಸಂಬಂಧಿಸಿದ  ಪುಸ್ತಕ, ವ್ಯಾಖ್ಯಾನಗಳು  ಭಾಷಾಂತರವಾದವು  ಮತ್ತು  ಅದರ  ವಿತರಣೆಯೂ ನಡೆಯಿತು.  ಆ ಕಾಲದಲ್ಲಿ  ಕಟ್ಟಿಸಿದ ನಾರಾದ ತೋಡೈಜಿ ದೇವಾಲಯವು  ಬಹಳ  ಪ್ರಸಿದ್ಧ  ಮತ್ತು  ಹೆಸರುವಾಸಿಯಾದುದು. ಚೀನಾ ದೇಶದ  ಮುನಿಗಳು (ಭಿಕ್ಷುಗಳು) ಜಪಾನಿಗೆ  ಬಂದು  ಧರ್ಮ  ಬೋಧನೆಗಿಳಿದರು. ಆ ಕಾಲದಲ್ಲಿ ಜಪಾನಿನ ಬೌದ್ಧ ಭಿಕ್ಷುಗಳನ್ನು ಧರ್ಮ ಸಂಬಂಧಿಯಲ್ಲದ ರಾಜನ ಆಸ್ಥಾನ ಕಾರ್ಯಕ್ರಮಗಳಿಗೆ, ಸಾರ್ವಜನಿಕ  ಕೆಲಸಗಳಿಗೆ , ಸರಕಾರದ ಆಡಳಿತಕ್ಕೆ  ನೇಮಿಸಲಾಯಿತು. ಆಗ  ಅಲ್ಲಿ  ಮೊದಲಿಂದ ಜನರು ಪಾಲಿಸುತ್ತಿದ್ದ  ಶಿಂಟೋ ಧರ್ಮದೊಂದಿಗೆ ಹೊಂದಿಕೊಂಡು ಬೌದ್ಧ ಧರ್ಮವು ಬೆಳೆಯಿತು, ಜೊತೆ ಜೊತೆಯಾಗಿ ವೈಮನಸ್ಯವಿಲ್ಲದೇ  ಮುಂದುವರಿದವು.</p>
<div id="imageContainer" style="text-align:center;"><img src="http://www.asiasociety.org/files/buddhism_japan.jpg" alt="The  Kinkaku-ji Temple (aka the Golden Temple) in Kyoto, Japan. (Stephane  D'Alu)" width="410" height="291" /></div>
<div id="lightbox">
<div id="imageDataContainer">
<div id="imageData">ಕ್ಯೋಟೋದ ಕಿನ್ ಕಾಕು ಜಿ ದೇವಾಲಯ( ಸ್ವರ್ಣ ದೇವಾಲಯ)</div>
</div>
</div>
<p>ಆಗಿನ  ಕಾಲದಲ್ಲಿ  &#8220;ಹೀನ್&#8221;(Heian)  ಎಂದು ಕರೆಸಿಕೊಂಡ ಈ (ರಾಜಧಾನಿ) ನಗರವನ್ನು ಹೊಸದಾಗಿ ನಿರ್ಮಿಸಲಾಗಿತ್ತು.  ಈಗ ಅದನ್ನು ಕ್ಯೋಟೊ  ಎಂದು ಗುರುತಿಸುತ್ತಾರೆ. ಇಲ್ಲಿನ ಇಬ್ಬರು ಸೈಕೊ(Saicho ) ಮತ್ತು ಕುಕೈ( Kukai ) ಎಂಬ ಬೌದ್ಧಮುನಿಗಳು ಚೀನಾ ದೇಶಕ್ಕೆ ಹೋಗಿ ಅಧ್ಯಯನ ಮಾಡಿ ಬಂದರು, ನಂತರ  ಚೀನಾ ದೇಶದ ಬೌದ್ಧ  ಧರ್ಮದ ಎರಡು ಹೊಸ ಪಂಥಗಳನ್ನು  ತಮ್ಮ ದೇಶದಲ್ಲಿ ಪ್ರಾರಂಭಿಸಿದರು. ಸೈಕೊ, ಟಿಯಾನ್ ಟೈ(Tian-tai ) ಮತ್ತು ಕುಕೈ ವಜ್ರಯಾನಾ ಎಂಬ ಬೌದ್ಧ ಪಂಥಗಳನ್ನು  ಹೊಸತಾಗಿ  ಪರಿಚಯಿಸಿದರು. ಟಿಯಾನ್ ಟೈ ಶಾಲೆಯು  ಕಮಲದ  ಪಂಥ ( ಕಮಲದ ಸೂತ್ರವನ್ನಾಧರಿಸಿದೆ)ದ  ಶಾಲೆಯೆಂದೇ ಪ್ರಸಿದ್ಧವಾಗಿದೆ.ಇದನ್ನು  ಚೀನಾದ ಟಿಯಾನ್ ಟೈ ಪರ್ವತದಲ್ಲಿ   ಝಿಯಿ(Zhiyi ) ಎಂಬವನು ಪ್ರಾರಂಭಿಸಿದನು.ಅವನು  ಹಲವಾರು  ಬರಹಗಳನ್ನು ಸಂಶ್ಲೇಷಿಸಿದನು. ಅವುಗಳಲ್ಲಿ  ಕೆಲವು ವಿವಾದಾತ್ಮಕವಾಗಿದ್ದವು, ನಂತರ ಅವನು ಕಮಲದ ಸೂತ್ರವನ್ನು ತಿಳಿಸಿ, ಅದರಲ್ಲಿ ಹೇಳಿದಂತೆ ಧರ್ಮ, ಶಾಸ್ತ್ರಗ್ರಂಥಗಳ  ಅಧ್ಯಯನವು  ಅಧ್ಯಾತ್ಮಿಕ ಬೆಳವಣಿಗೆಗೆ , ನಿರ್ವಾಣವನ್ನು ಹೊಂದಲು  ಅಗತ್ಯವೆಂದು ಪ್ರತಿಪಾದಿಸಿದನು. ಆದರೆ  ಬೌದ್ಧ ಧರ್ಮದ ವಜ್ರಯಾನಾ ಪಂಥವು  ತಾಂತ್ರಿಕ ಕ್ರಿಯಾ ವಿಧಿ, ವಿಧಾನಗಳ ತಳಪಾಯದ ಮೇಲೆ ನಿಂತಿದೆ. ಟಿಬೆಟಿನಲ್ಲಿ ವಜ್ರಯಾನಾ ಪಂಥವು  ಪ್ರಮುಖವಾಗಿದೆ. ಬೌದ್ಧ ಧರ್ಮದಲ್ಲಿ  ಹೀನಾಯಾನ, ಮಹಾಯಾನ ಮತ್ತು ವಜ್ರಯಾನ ಎಂಬ ಮೂರು ಮುಖ್ಯ ಪಂಥಗಳು.<br />
ಚೀನಾ ದೇಶದ  &#8220;ಸಮುರೈ&#8221;ಎಂದು ಕರೆಸಿಕೊಂಡ ಯೋಧರ ಪಂಗಡದವರು  ಅಧಿಕಾರದಲ್ಲಿದ್ದ  ರಾಜರನ್ನು  ಉರುಳಿಸಿ ತಾವು ರಾಜ್ಯವಾಳಹತ್ತಿದ್ದರು.  ೧೨ನೇ ಶತಮಾನದಲ್ಲಿ  ಕಾಮಕೂರ ಅವರು ವಾಸಮಾಡಿದ್ದ ತಾಣವಾಗಿತ್ತು. ಇವರು ಬಂದ ನಂತರ ಬೌದ್ಧ ಧರ್ಮದ ಬೇರೆ  ಪಂಗಡಗಳು  ಪ್ರಾರಂಭವಾದವು. ಜೋಡೊ ಶಿಸ್ಸು ಪಂಗಡದವರು ಅಮಿತಾಭ ಎಂಬ ಹೆಸರಿನ ಪುನರುರಚ್ಛರಣೆ (ಜಪಿಸುವುದು)  ಆ ವ್ಯಕ್ತಿಗೆ ಮುಕ್ತಿಯನ್ನು ಕೊಡುತ್ತದೆ ಎಂದು ನಂಬಿದ್ದರು. ನಿಚಿರೆನ್ ಪಂಗಡದವರು ಕೇವಲ ಕಮಲದ ಪಂಥದ  ಶ್ರಧ್ಧಾಂಜಲಿಯ ಪುನರುಚ್ಛಾರದಿಂದ ದಿವ್ಯಜ್ಞಾನ ಪ್ರಾಪ್ತವಾಗುತ್ತದೆ ಎಂದು ವಾದಿಸಿದರು.  ಝೆನ್ ಎಂಬ ಪಂಗಡದವರು  ( ಮೂಲತಃ ಚಿನಾದ ಛಾನ್ ಪಂಥ)  ದೇಹ ಮತ್ತು ಮನಸ್ಸಿನ ಶಿಸ್ತು  ಪ್ರಮುಖವೆಂದರು. ಇದರಿಂದ  ಜಪಾನಿನ ಪ್ರಸಿದ್ಧವಾದ ಚಹಾ(ಟೀ) ಸಮಾರಂಭದ  ಆಚರಣೆಯು ಶುರುವಾಯಿತು ಮತ್ತು ಅದುವೇ  ಮುಂದುವರಿದು ಜಪಾನಿನ ಕಪ್ಪು ವರ್ಣದ ಶಾಯಿಯ ( black ink) ಚಿತ್ರಕಲೆ  ಮತ್ತು ಪುಷ್ಪ ವಿನ್ಯಾಸದ ರಚನೆಗಳು ಬೆಳೆದವು.<br />
ಆದರೆ  ೧೬ನೇ ಶತಮಾನದ ನಂತರ ಆಡಳಿತ ನಡೆಸುತ್ತಿದ್ದ ಸಮುರೈ ರಾಜರು ಬೌದ್ಧ ಧರ್ಮಕ್ಕೆ ಕೊಡುತ್ತಿದ್ದ ಪ್ರೋತ್ಸಾಹವನ್ನು  ಹಿಂತೆಗೆದುಕೊಂಡರು. ಆದರೆ ಇದರಿಂದ ವಿವಿಧ ಪಂಗಡಗಳ ಧಾರ್ಮಿಕ ವಿಧಿ, ವಿಧಾನಗಳ ಆಚರಣೆಗೆ ಏನೂ ತಡೆ ಬರಲಿಲ್ಲ. ಆಗಿನ ಬೌದ್ಧ ದೇವಾಲಯಗಳು, ಮಂದಿರಗಳು ವಿದ್ಯಾಭ್ಯಾಸ, ಸಮಾಜಸೇವೆಯಲ್ಲಿ  ಮುಖ್ಯಪಾತ್ರ ವಹಿಸುತ್ತಿದ್ದವು.</p>
<p>ಜಪಾನಿನ ಸಾಂಪ್ರದಾಯಿಕ ಕೆತ್ತನೆಗಳ ಕೃತಿಗಳು-ಅಲ್ಲಿ ಮೊದಲಿನಿಂದ ಬಂದ ಶಿಂಟೋ ಧರ್ಮ ಮತ್ತು ಬೌದ್ಧ ಧರ್ಮದ ಪ್ರಭಾವವನ್ನು ತೋರುತ್ತಿದೆ</p>
<p>ಬಟ್ಸುಝೋ    (Butsuzo)</p>
<p><img src="http://japan.so01one.com/images_art/butsuzo.jpg" alt="butsuzo" width="211" height="400" /></p>
<p><img src="http://japan.so01one.com/images_art/butsuzo2.jpg" alt="butsuzo2" width="290" height="267" /></p>
<p>ಟೋಕಿಯೋದ ಸೆನ್ಸೋಜಿ ದೇವಾಲಯ; ಅಮಿದ(ಅಮಿತಾಭಾ)</p>
<p>೧೮೬೮ ರಲ್ಲಿ ಜಪಾನಿನ ರಾಜವಂಶದವರು ಸಮುರೈಗಳಿಂದ  ರಾಜ್ಯವನ್ನು ಪುನಃ ವಶಪಡಿಸಿಕೊಂಡರು.  ಅದನ್ನು ಮಿಜಿ ಪುನರ್ಸ್ಥಾಪನೆ (Meiji Restoration ) ಎನ್ನುತ್ತಾರೆ.  ಮಿಜಿ ಎಂದರೆ ಜಪಾನೀ ಭಾಷೆಯಲ್ಲಿ ಅರಿವು, ಪ್ರಜ್ಙೆ  ಮೂಡಿದ ಎಂದು.ಆಗ ರಾಜರಿಂದ  ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕದೇ ಕೆಡುಕುಗಳಾದವು; ಕೆಲವೊಂದು ಮಂದಿರಗಳು, ವಿಗ್ರಹಗಳು, ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳು ನಾಶವಾದವು. ಆಗ ರಾಜನಾದವನಿಗಿದ್ದ  ಸ್ಥಾನ ಮಾನ, ದೇವತಾ ಸ್ವರೂಪನೆಂಬ ಭಾವನೆಗಳನ್ನು ನೋಡಿದರೆ  ಇದೇನೂ  ಅಸ್ವಾಭಾವಿಕವೇನಲ್ಲ. ರಾಜ ಪ್ರಾಚೀನ ಕಾಲದಿಂದ ಪ್ರಕೃತಿ ಆರಾಧನೆಯೇ ಮುಖ್ಯವಾಗಿದ್ದ ಶಿಂಟೋ ಧರ್ಮವನ್ನೇ ದೇಶದ ಅಧಿಕೃತ ಧರ್ಮವೆಂದು ಘೋಷಿಸಿದನು. ಶಿಂಟೋ ಧರ್ಮದಲ್ಲಿ ಸೂರ್ಯ, ಕಲ್ಲು, ವೃಕ್ಷ, ಧ್ವನಿ (sound ) ಗಳೇ ಮೊದಲಾದವುಗಳನ್ನು ಆರಾಧಿಸುತ್ತಿದ್ದರು. ಆದರೆ  ಆಗಲೇ ಅಳವಾಗಿ  ಬೇರೂರಿದ್ದ ಬೌದ್ಧ ಧರ್ಮವು ಇದ್ಯಾವುದೇ ಹೊಸ ಬದಲಾವಣೆಗಳ  ಒತ್ತಡಕ್ಕೆ ಒಳಗಾಗದೇ; ಆ ಕಾಲದಲ್ಲಿ ವಿದ್ಯಾಭ್ಯಾಸದಿಂದ  ಹೊಸ ವಿಧಾನಗಳನ್ನು ಮೈಗೂಡಿಸಿಕೊಂಡು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ತೆರೆಯಲಾಯಿತು.<br />
<strong>ಟಿಬೆಟ್</strong><br />
ಬೌದ್ಧ ಧರ್ಮವು ಟಿಬೆಟಿಗೆ ಪ್ರವೇಶಿಸಲು ಬಹಳ ಕಾಲ ಹಿಡಿಯಿತು. ಭಾರತದ ಸುತ್ತುಮುತ್ತಲಿನ ಶ್ರೀಲಂಕಾ , ಅಪಘಾನಿಸ್ತಾನ, ಮಧ್ಯ ಏಶಿಯಾದ ದೇಶಗಳಲ್ಲಿ ಹಬ್ಬಿದ ನಂತರ ಅದು ಟಿಬೆಟಿಗೆ ಪ್ರವೇಶಿಸಿತು. ಏಕೆಂದರೆ ಟಿಬೆಟ್ ಈ ಎಲ್ಲಾ  ದೇಶಗಳಿಂದ ಪ್ರತ್ಯೇಕವಾಗಿ; ರೇಶ್ಮೆವ್ಯಾಪಾರದ ಮಾರ್ಗದಿಂದ ದೂರಾಗಿದೆ. ಸಾಧಾರಣ ಕ್ರಿ.ಶ.೫೦೦ ರ ವೇಳೆಗಾಗುವಾಗ ಟಿಬೆಟ್ ದೇಶದ ೨೮ನೇ ರಾಜನ ಕಾಲದಲ್ಲಿ  ಬೌದ್ಧ ಧರ್ಮದ ಗ್ರಂಥ , ಸಾಹಿತ್ಯಗಳು ಆ ದೇಶಕ್ಕೆ ಬಂದವು, ಆದರೆ ಅವುಗಳ ಅನುವಾದವಾಗಲಿಲ್ಲ.ಕ್ರಿ.ಶ.೬೭೦ ರ ಕಾಲಕ್ಕಾಗುವಾಗ ೩೩ನೇ ರಾಜ ಗಾಂಪೊ ಈ ಧರ್ಮಕ್ಕೆ ಸಂಬಂಧಪಟ್ಟ ಗ್ರಂಥ, ಸಾಹಿತ್ಯ, ಠೀಕೆ, ಟಿಪ್ಪಣಿ, ವ್ಯಾಖ್ಯಾನಗಳನ್ನು ಅನುವಾದಿಸುವ ವ್ಯವಸ್ಥೆ ಮಾಡಿದನು ಮತ್ತು ಚೀನಾ ಹಾಗೂ ನೇಪಾಳದ  ರಾಜಮನೆತನದ ಬೌದ್ಧ ಧರ್ಮದ ಅನುಯಾಯಿಗಳಾದ  ರಾಜಕುಮಾರಿಯರನ್ನು ಮದುವೆಯಾದನು.ಈ ರೀತಿಯಲ್ಲಿ  ಟಿಬೆಟ್ ನಲ್ಲಿ  ಈ  ಧರ್ಮವು ತಳವೂರಿತು.<br />
ಟಿಬೆಟಿನ ೩೭ನೇ ರಾಜ ಡೆಟ್ಸನ್(Detsen)  ಭಾರತ ದೇಶದ ಪದ್ಮ ಸಂಭವ ನೆಂಬ ಮುನಿಯನ್ನು ಟಿಬೆಟಿಗೆ ಆಹ್ವಾನಿಸಿದನು. ಮುನಿ ಪದ್ಮ ಸಂಭವ ಗುರು ರೀನ್ ಪೊಚೆ( Guru Rinpoche)      ಎಂದು ಪ್ರಸಿದ್ಧನಾಗಿದ್ದಾನೆ.ಇವನು ಆ ದೇಶದಲ್ಲಿ ಆ ಧರ್ಮದ ದೇವಾಲಯ, ಆಶ್ರಮ, ಮಠ ಇತ್ಯಾದಿಗಳ  ಮತ್ತು, ಧರ್ಮದ ಬೆಳವಣಿಗೆಗೆ ಬೇಕಾದ ಬೇರೆ ಸಂಘಟನೆಗಳನ್ನು ಮಾಡಿದನು. ನಂತರ ಭಾರತದಿಂದ ತರಲಾದ ಬೌದ್ಧ ಧರ್ಮ ಸಂಬಂಧಿತವಾದ ಶಾಸ್ತ್ರಾದಿ  ವ್ಯಾಖ್ಯಾನಗಳು ಅನುವಾದವಾಗುವಂತೆ ವ್ಯವಸ್ಥೆ ಮಾಡಿದನು.<br />
ಈ ಬೌದ್ಧಮುನಿಯನ್ನು ಚೀನಾ ದೇಶಕ್ಕೆ ಧರ್ಮ ಪ್ರಚಾರಕ್ಕೆಂದು ಹೋದ ಕುಮಾರ ಜೀವನಿಗೆ ಹೋಲಿಸಬಹುದು.  ಪದ್ಮಸಂಭವನಿಂದಾಗಿ  ಟಿಬೆಟಿನಲ್ಲಿ ಬೌದ್ಧ ಧರ್ಮವು ಆಳವಾಗಿ ಬೇರೂರಿತು. ಕಾಲ ಕ್ರಮೇಣ ಈ ಧರ್ಮದ  ವಿವಿಧ ಪಂಗಡಗಳು ಹುಟ್ಟಿಕೊಂಡವು.</p>
<p style="text-align:center;"><img src="/Users/ilani/AppData/Local/Temp/moz-screenshot-109.png" alt="" />ನ್ಯಿಂಗ್ಮಾ( NYINGMA ) ಪಂಗಡವು  ಗುರು ರೀನ್ ಪೋಚೆಯವರ ಬೋಧನೆಯನ್ನು ಆಧರಿಸಿ  ಹುಟ್ಟಿಕೊಂಡಿತು. ಇಲ್ಲಿ ವಿವರಗಳನ್ನು ಕೈಬಿಡಲಾಗಿದೆ, ಕೇವಲ ಮುಖ್ಯಾಂಶಗಳನ್ನು ಮಾತ್ರಹೇಳುತ್ತೇನೆ.</p>
<p><strong><img src="http://viewonbuddhism.org/images/padmasambhava.jpg" alt="Padmasambhava" hspace="20" width="229" height="267" align="RIGHT" /></strong></p>
<p>ಗುರು ರೀನ್ ಪೋಚೆಯವರ  ನ್ಯಿಂಗ್ಮಾ ಪಂಗಡವು ತರ್ಕ ಶಾಸ್ತ್ರ, ತತ್ವ ಶಾಸ್ತ್ರಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತದೆ. ಕಾಲ ಕ್ರಮೇಣ ಈ ಪಂಥದವರು ತಾಂತ್ರಿಕ ವಿಧಾನಗಳ ಆಚರಣೆಯನ್ನು ಅಳವಡಿಸಿದರು  ಮತ್ತು  ಬಳಕೆಗೆ ತಂದರು.<br />
ಕಡಮ್( KADAM ) ಪಂಗಡದವರು ಶೂನ್ಯ  ಮತ್ತು ಪ್ರೀತಿಯನ್ನು ಮುಖ್ಯವೆಂದರು.</p>
<p>ಕರಗ್ಯು( KARAGYU )  ಪಂಥದವರು  ಧ್ಯಾನ ಮತ್ತು ತತ್ತ್ವಶಾಸ್ತ್ರಗಳನ್ನು ಮುಖ್ಯವೆಂದು ಗಣಿಸಿದರು. ಟಿಬೆಟಿನ ಪ್ರಸಿದ್ಧ ಬೌದ್ಧಮುನಿ ಮಿಲರೆಪಾ(Milarepa  )  ಕರಗ್ಯು ಪಂಥಕ್ಕೆ  ಸೇರಿದವನು. ಅವನು ಒಂದೇ ಜನ್ಮದಲ್ಲಿ  ಬುದ್ಧ ಸ್ಥಿತಿಗೆ  ತಲುಪಿದನು ಎಂದು ಹೇಳುತ್ತಾರೆ. ಭಾರತದಿಂದ ಹೋದ ಗುರು ನರೋಪಾ ಹೇಳಿದ  ಮಹಾಮುದ್ರೆ  ಮತ್ತು ಆರು ಯೋಗಗಳ  ಅಭ್ಯಾಸ  ಈ ಕರಗ್ಯು ಪಂಥದಲ್ಲಿ ಪ್ರಾಮುಖ್ಯವಾಗಿದೆ.</p>
<h4><strong><strong><img src="http://viewonbuddhism.org/images/milarepa.jpg" alt="Milarepa" hspace="20" width="189" height="228" align="RIGHT" /></strong></strong></h4>
<p><strong><strong><br />
</strong></strong></p>
<p>ಸಖ್ಯ ಸಂಪ್ರದಾಯವನ್ನು ಕೆಲವು ಶತಮಾನಗಳ  ಕಾಲ ಜನರು ಟಿಬೆಟಿನಲ್ಲಿ ಪರಿಪಾಲಿಸುತ್ತಿದ್ದರು, ಅದಕ್ಕೆ ಬಹಳ ಹಿಂಬಾಲಕರಿರಲಿಲ್ಲ.  ಕ್ರಿ.ಶ.೧೨೪೭ ರಲ್ಲಿ  ಮಂಗೋಲರ ರಾಜಕುಮಾರ ಗೋಡಾನ್ ಖಾನ್ ಟಿಬೆಟಿನ ಮೇಲೆ  ಆಕ್ರಮಣ ಮಾಡಿ ದೇಶವನ್ನು  ವಶಪಡಿಸಿಕೊಂಡನು. ನಂತರ  ಅದರ ಆಡಳಿತವನ್ನು ಆಗಿನ ಸಖ್ಯ ಸಂಪ್ರಾದಾಯದ  ಲಾಮ &#8220;ಸಖ್ಯ ಪಂಡಿತ&#8221;ನಿಗೆ ಒಪ್ಪಿಸಿದನು.ಮುಂದೆ ಕೆಲ ವರ್ಷಗಳ ನಂತರ ಮಂಗೋಲ  ರಾಜ ಕುಬ್ಲೈ ಖಾನ್ ಬೌದ್ಧ ಧರ್ಮವನ್ನು ತನ್ನ ದೇಶದ ಧರ್ಮವೆಂದು ಘೋಷಿಸಿದನು; ಮತ್ತು ಸಖ್ಯಪಂಡಿತನನ್ನು ಧಾರ್ಮಿಕ ನೇತಾರ ಮತ್ತು ಟಿಬೆಟ್ ದೇಶದ ಆಡಳಿತಗಾರನೆಂದು ನೇಮಿಸಿದನು.</p>
<h4><strong><img src="http://viewonbuddhism.org/images/sakya_pandita.jpg" alt="Sakya  Pandita" width="196" height="231" align="RIGHT" /></strong></h4>
<p style="text-align:center;">&nbsp;</p>
<p>ಇದಾಗಿ  ಹಲವು  ವರ್ಷಗಳ ನಂತರ, ಕೊನೆಯಲ್ಲಿ ಗೆಲುಗ್ ( yellow hat) ) ಪಂಥವು ಕ್ರಿ.ಶ.೧೪೦೦ ರಲ್ಲಿ ಪ್ರಾರಂಭವಾಯಿತು. ಈಗಿನ ದಲೈ ಲಾಮಾ ಗೆಲುಗ್ ಸಂಪ್ರದಾಯದವರು. ದಲೈ ಲಾಮಾ ಎಂದರೆ  ಜ್ಞಾನದ ಸಾಗರ ಎಂದರ್ಥ.ಮುಂದಿನ ದಿನಗಳಲ್ಲಿ ಮಂಗೋಲದ ರಾಜರು ದಲೈ ಲಾಮಾನನ್ನು ಆಡಳಿತಗಾರನಾಗಿ ನೇಮಿಸಿದರು.ಈ ಸಂಪ್ರದಾಯವು ನೈತಿಕತೆ, ಪಾಂಡಿತ್ಯ ಮತ್ತು  ಜ್ಞಾನಕ್ಕೆ  ಮಹತ್ವವನ್ನು ಕೊಡುತ್ತದೆ. ದಲೈ  ಲಾಮಾಗಳು ಗೆಲುಗ್ ಸಂಪ್ರದಾಯದ ಲೌಕಿಕ ವಿಷಯಗಳ  ಕುರಿತಾದ ನಾಯಕರು, ಮತ್ತು ದೇಶದ ಆಡಳಿತವನ್ನೂ ಅವರೇ  ನಡೆಸುತ್ತಿದ್ದರು.ಆದರೆ ಇವರ ಆಧ್ಯಾತ್ಮಿಕ ಗುರು ಗಾಡೆನ್ ತ್ರಿಪಾ ಆಗಿದ್ದರು.</p>
<h4><strong><a name="7"></a> </strong>ಗೆಲುಗ್<strong> (GELUG) </strong></h4>
<p><img src="http://viewonbuddhism.org/images/tsonkhapa.jpg" alt="Je Tsongkhapa" hspace="20" width="136" height="189" align="LEFT" /></p>
<p>ಬೌದ್ಧ  ಧರ್ಮದ ವಿವಿಧ ಪಂಥಗಳು ಎಲ್ಲವೂ ಹೀನಾಯಾನ, ಮಹಾಯಾನ ಮತ್ತು  ವಜ್ರಯಾನದ ಸಿದ್ಧಾಂತಗಳನ್ನೇ ಉಪದೇಶಿಸಿದವು. ಈಗಿನ ವರ್ತಮಾನ  ಕಾಲದಲ್ಲಿ<br />
ಟಿಬೆಟ್, ನೇಪಾಳ, ಸಿಕ್ಕಿಮ್, ಲಡಾಕ್, ಭೂತಾನ್, ಮಂಗೋಲಿಯಾ  ಮತ್ತು  ಸೈಬೀರಿಯಾದಲ್ಲಿರುವ ಬೌದ್ಧ ಪಂಥವು ಗೆಲುಗ್ ಸಂಪ್ರದಾಯದ್ದಾಗಿದೆ, ಇದಕ್ಕೆ ಟಿಬೆಟಿನ ಬೌದ್ಧ ಧರ್ಮ ಎಂದೇ ಹೆಸರಾಗಿದೆ.</p>
<p>ಮುಂದುವರಿಯುವುದು.</p>
<p>ಇದರೊಳಗಿನ ಎಲ್ಲಾ ಚಿತ್ರಗಳನ್ನು ಅಂತರ್ಜಾಲದಿಂದ ಆರಿಸಿಕೊಳ್ಳಲಾಗಿದೆ.</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/47/"><img alt="" border="0" src="http://feeds.wordpress.com/1.0/comments/shailajasbhat.wordpress.com/47/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/47/"><img alt="" border="0" src="http://feeds.wordpress.com/1.0/delicious/shailajasbhat.wordpress.com/47/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/47/"><img alt="" border="0" src="http://feeds.wordpress.com/1.0/facebook/shailajasbhat.wordpress.com/47/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/47/"><img alt="" border="0" src="http://feeds.wordpress.com/1.0/twitter/shailajasbhat.wordpress.com/47/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/47/"><img alt="" border="0" src="http://feeds.wordpress.com/1.0/stumble/shailajasbhat.wordpress.com/47/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/47/"><img alt="" border="0" src="http://feeds.wordpress.com/1.0/digg/shailajasbhat.wordpress.com/47/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/47/"><img alt="" border="0" src="http://feeds.wordpress.com/1.0/reddit/shailajasbhat.wordpress.com/47/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=47&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2010/04/07/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0-2/feed/</wfw:commentRss>
		<slash:comments>2</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://www.japan-guide.com/g4/2165_01.jpg" medium="image" />

		<media:content url="http://www.asiasociety.org/files/buddhism_japan.jpg" medium="image">
			<media:title type="html">The  Kinkaku-ji Temple (aka the Golden Temple) in Kyoto, Japan. (Stephane  D'Alu)</media:title>
		</media:content>

		<media:content url="http://japan.so01one.com/images_art/butsuzo.jpg" medium="image">
			<media:title type="html">butsuzo</media:title>
		</media:content>

		<media:content url="http://japan.so01one.com/images_art/butsuzo2.jpg" medium="image">
			<media:title type="html">butsuzo2</media:title>
		</media:content>

		<media:content url="http://viewonbuddhism.org/images/padmasambhava.jpg" medium="image">
			<media:title type="html">Padmasambhava</media:title>
		</media:content>

		<media:content url="http://viewonbuddhism.org/images/milarepa.jpg" medium="image">
			<media:title type="html">Milarepa</media:title>
		</media:content>

		<media:content url="http://viewonbuddhism.org/images/sakya_pandita.jpg" medium="image">
			<media:title type="html">Sakya  Pandita</media:title>
		</media:content>

		<media:content url="http://viewonbuddhism.org/images/tsonkhapa.jpg" medium="image">
			<media:title type="html">Je Tsongkhapa</media:title>
		</media:content>
	</item>
		<item>
		<title>ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ-ಏಶಿಯಾ  ಖಂಡದಾದ್ಯಂತ  ಭಾರತೀಯ ಸಂಸ್ಕೃತಿ  ಹಬ್ಬಿದ ಪರಿ :   ಭಾಗ ೧</title>
		<link>http://shailajasbhat.wordpress.com/2010/03/01/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0/</link>
		<comments>http://shailajasbhat.wordpress.com/2010/03/01/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0/#comments</comments>
		<pubDate>Mon, 01 Mar 2010 18:04:13 +0000</pubDate>
		<dc:creator>my pen from shrishaila</dc:creator>
				<category><![CDATA[Series on History By V.S.G.]]></category>
		<category><![CDATA[ಗೌತಮ ಬುದ್ಧ;ಚಕ್ರವರ್ತಿ ಅಶೋಕ]]></category>
		<category><![CDATA[ಚೀನಾ; ಕೊರಿಯಾ;]]></category>
		<category><![CDATA[ಬೌದ್ಧ ಧರ್ಮ;ಝೆನ್]]></category>

		<guid isPermaLink="false">http://shailajasbhat.wordpress.com/?p=31</guid>
		<description><![CDATA[ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ: ಡಾ.ವಿ.ಎಸ್.ಗೋಪಾಲಕೃಷ್ಣರವರು ಮಹಾರಾಷ್ಟ್ರ ವಲಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ  ಐ.ಎ.ಎಸ್.ಅಧಿಕಾರಿ. ಅವರು  ಬಹುಮುಖ  ಪ್ರತಿಭೆಯ, ವಿವಿಧ  ವಿಷಯಗಳಲ್ಲಿ  ಆಸಕ್ತಿ, ತಿಳಿವು  ಮತ್ತು ಪಾಂಡಿತ್ಯ ಹೊಂದಿರುವ  ವ್ಯಕ್ತಿ. ಬರವಣಿಗೆ, ಚಿತ್ರಕಲೆ,  ಕಾವ್ಯ, ಸಂಗೀತ (ಹಾಡುವುದು) ಇತ್ಯಾದಿ  ಅವರ ಆಸಕ್ತಿಗಳು. ನಾನಿಲ್ಲಿ  ಸುಲೇಖ ಅಂತರ್ಜಾಲದ  ಬ್ಲಾಗ್  ಸೈಟ್ ನಲ್ಲಿ  ಪ್ರಕಟವಾದ , ಕೇವಲ   ಚರಿತ್ರೆಗೆ  ಸಂಬಂಧಿಸಿದ  ಅವರ  ಬರಹಗಳನ್ನು ಇಂಗ್ಲಿಷ್ ನಿಂದ  ಕನ್ನಡಕ್ಕೆ ಭಾಷಾಂತರಿಸುತ್ತಿದ್ದೇನೆ. ಇವುಗಳು ಈ ಮೇಲಿನ  ಹೆಸರಿನ  ಸರಣಿಯಲ್ಲಿ ಪ್ರಕಟವಾಗುವುದು. ಏಶಿಯಾ  [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=31&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p><strong>ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ</strong>:</p>
<p><img class="alignleft" src="http://lh6.ggpht.com/_bEdWeUlAeV4/S2my7TNHl4I/AAAAAAAACl0/Dl_f5mhnxDs/1.jpggopal.jpg" alt="" width="88" height="88" /></p>
<p>ಡಾ.ವಿ.ಎಸ್.ಗೋಪಾಲಕೃಷ್ಣರವರು ಮಹಾರಾಷ್ಟ್ರ ವಲಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ  ಐ.ಎ.ಎಸ್.ಅಧಿಕಾರಿ. ಅವರು  ಬಹುಮುಖ  ಪ್ರತಿಭೆಯ, ವಿವಿಧ  ವಿಷಯಗಳಲ್ಲಿ  ಆಸಕ್ತಿ, ತಿಳಿವು  ಮತ್ತು ಪಾಂಡಿತ್ಯ ಹೊಂದಿರುವ  ವ್ಯಕ್ತಿ. ಬರವಣಿಗೆ, ಚಿತ್ರಕಲೆ,  ಕಾವ್ಯ, ಸಂಗೀತ (ಹಾಡುವುದು) ಇತ್ಯಾದಿ  ಅವರ ಆಸಕ್ತಿಗಳು. ನಾನಿಲ್ಲಿ  ಸುಲೇಖ ಅಂತರ್ಜಾಲದ  ಬ್ಲಾಗ್  ಸೈಟ್ ನಲ್ಲಿ  ಪ್ರಕಟವಾದ , ಕೇವಲ   ಚರಿತ್ರೆಗೆ  ಸಂಬಂಧಿಸಿದ  ಅವರ  ಬರಹಗಳನ್ನು ಇಂಗ್ಲಿಷ್ ನಿಂದ  ಕನ್ನಡಕ್ಕೆ ಭಾಷಾಂತರಿಸುತ್ತಿದ್ದೇನೆ. ಇವುಗಳು ಈ ಮೇಲಿನ  ಹೆಸರಿನ  ಸರಣಿಯಲ್ಲಿ ಪ್ರಕಟವಾಗುವುದು.</p>
<p style="text-align:left;">
<p style="text-align:left;"><strong>ಏಶಿಯಾ  ಖಂಡದಾದ್ಯಂತ  ಭಾರತೀಯ ಸಂಸ್ಕೃತಿ  ಹಬ್ಬಿದ ಪರಿ :   ಭಾಗ ೧ </strong><br />
ಹಿಂದೂ  ಸಂಸ್ಕೃತಿ ಹಬ್ಬಿದ  ವಿಚಾರ  ಬರೆಯಲು ಎನಿಲ್ಲವೆಂದರು ನೂರಾರು ಪುಟಗಳು ಬೇಕು, ಹಾಗಿರುವಲ್ಲಿ  ಅದು  ನನ್ನ ಈ ಪುಟ್ಟ ಲೇಖನದಲ್ಲಿ  ಸ್ಪಷ್ಟವಾಗಿ  ವ್ಯಕ್ತವಾಗಲು  ಅಸಾಧ್ಯ. ನಮ್ಮ ದೇಶದ, ಚರಿತ್ರೆಯ  ಪಠ್ಯಪುಸ್ತಕದ  ಲೇಖಕರಾದ  ಡಾ.ಸಿ.ಆರ್.ಮಜುಂದಾರ್ ಅವರು  ತಮ್ಮ ೧೧೪೯ ಪುಟಗಳ  ಪುಸ್ತಕದಲ್ಲಿ ಕೇವಲ  ೧೧ ಪುಟಗಳಲ್ಲೇ  ಈ  ವಿಷಯವನ್ನು  ಹೇಳಿದ್ದಾರೆ,  ವಿನ್ಸೆಂಟ್ ಸ್ಮಿತ್ ತಮ್ಮ ೯೪೬ ಪುಟಗಳ   ಭಾರತದ  ಚರಿತ್ರೆ  ಪುಸ್ತಕದಲ್ಲಿ ಕೇವಲ ೫ ಪುಟಗಳಲ್ಲಿ    ಈ  ವಿಷಯವನ್ನು  ಹೇಳಿ  ಮುಗಿಸಿದ್ದಾರೆ. ನಮ್ಮ  ಚರಿತ್ರೆ  ಬರಹಗಾರರ  ವಿಪರ್ಯಾಸವೆಂದರೆ,  ನಮ್ಮ ದೇಶದ  ಮೇಲೆ ಆಕ್ರಮಣ  ಮಾಡಿದ ಸುಲ್ತಾನ್, ಮೊಗಲರು ಮುಂತಾದವರ ಕಥೆ  ಅವರ  ಪುಸ್ತಕದಲ್ಲಿ  ಅಗ್ರ ಸ್ಥಾನವನ್ನು ಪಡೆಯುತ್ತದೆ . ಅದೇ ಕ್ರಿ. ಪೂ. ೫೦೦ರಿಂದ  ಕ್ರಿ.ಶ. ೧೫೦೦ ರ ವರೆಗೆ ಬೆಳೆದು   ರಾರಾಜಿಸುತ್ತಿದ್ದ  ಭಾರತೀಯ  ಸಂಸ್ಕೃತಿಯ  ಮೇಲಿನ  ಮಾತು  ಯಾವುದೇ ಪ್ರಾಮುಖ್ಯತೆಯನ್ನು   ಪಡೆದಿಲ್ಲ. ಆದರೆ  ವಿದೇಶೀ  ವಿದ್ವಾಂಸರು  ಅದರ ಮೇಲೆ ಬಹಳಷ್ಟು  ಸಂಶೋಧನೆಗಳನ್ನು ನಡೆಸಿದ್ದಾರೆ.<br />
ಭಾರತೀಯ  ಸಂಸ್ಕೃತಿ,  ಬೌದ್ಧ ಧರ್ಮ ಮತ್ತು  ಹಿಂದೂ ಧರ್ಮ  ನಮ್ಮಲ್ಲಿಂದ ಚೀನಾ, ಕೊರಿಯಾ, ಜಪಾನ್, ಟಿಬೆಟ್, ಶ್ರೀಲಂಕಾ, ಇಂಡೊನೇಶಿಯಾ, ಮಲೇಶಿಯಾ ಹಾಗೂ  ಕಂಬೋಡಿಯಾಗಳಂತಹ ನೆರೆಕರೆಯ  ದೇಶಗಳಿಗೆ ಹಬ್ಬಿದ  ಪರಿ  ಬಹಳ ಕುತೂಹಲಕಾರಿ  ಕಥಾನಕವಾಗಿದೆ. ಅವುಗಳ  ಬಗ್ಗೆ ಕೇವಲ ಸ್ಥೂಲವಾಗಿ ದೇಶ ,ಪ್ರದೇಶಗಳಿಗೆ ಹೊಂದಿದಂತೆ  ವಿವರಗಳನ್ನು ಕೊಡಲು  ಪ್ರಯತ್ನಿಸುತ್ತೇನೆ.<br />
ನಮ್ಮ ಭಾರತ ದೇಶ ಕ್ರಿಸ್ತಪೂರ್ವದ  ಕಾಲದಿಂದಲೇ  ಸಮುದ್ರಗಾಮಿ ವರ್ತಕರಿದ್ದ, ಸುಸಜ್ಜಿತ  ಬಂದರುಗಳಿದ್ದ  ದೇಶ. ನಾವು  ರೋಮ್, ಈಜಿಪ್ಟ್, ಬಾಬಿಲೋನಿಯಾಗಳಂತಹ, ಮತ್ತು ಅಗ್ನೇಯ ದಿಕ್ಕಿನ(ದಕ್ಷಿಣ ಪೂರ್ವ) ದೇಶಗಳೊಂದಿಗೆ  ವ್ಯಾಪಾರಸಂಪರ್ಕವನ್ನು  ಹೊಂದಿದ್ದೆವೆಂಬುವುದನ್ನು  ನೆನಪಿಸಿಕೊಳ್ಳಬೇಕು. ನಮ್ಮ ಕರಾವಳಿ  ಪ್ರದೇಶಗಳಲ್ಲಿ  ಹಲವಾರು  ಬಂದರುಗಳು, ಸಮುದ್ರಯಾನಕ್ಕೆ  ಯೋಗ್ಯವಾದ  ವ್ಯಾಪಾರೀ ನೌಕೆಗಳು ಬೇಕಷ್ಟಿದ್ದವು. ಈ  ವಿಚಾರದ  ಮೇಲೆ  ವಿದೇಶೀಯರಾದ ಪ್ಲಿನಿ(Pliny ), ಪ್ಟೊಲೆಮಿ( Ptolemy) ಯವರ  ಬರಹಗಳಿಂದ ಮತ್ತು  ಗ್ರೀಕ್  ನಾವಿಕನ ಪುಸ್ತಕ &#8220;Periplus of the Erythrean  Sea&#8221; ಇಂದ  ಮಾಹಿತಿ  ಸಿಗುತ್ತದೆ. ಈ  ವರ್ತಕರ ಸಂಚಾರ,  ಸಂಪರ್ಕಗಳ  ಹಿನ್ನೆಲೆಯಲ್ಲಿ  ನಮ್ಮ  ಭಾರತೀಯ ಸಂಸ್ಕೃತಿ , ಹಿಂದೂ ಧರ್ಮ  ಮತ್ತು  ಬೌದ್ಧ ಧರ್ಮ ನೆರೆಕರೆಯ  ದೇಶಗಳಿಗೆ ಹಬ್ಬಿದ  ರೀತಿ ಆಸಕ್ತಿಕರವೂ, ಉಲ್ಲೇಖನೀಯವೂ  ಆಗಿದೆ.</p>
<p style="text-align:left;"><strong>ಚೀನಾ ದೇಶ</strong>&#8211;ಇದು ಅತ್ಯಂತ  ವಿಶಾಲವಾದ ದೇಶ, ಹಾಗಾಗಿ ಇಲ್ಲಿಗೆ ಬೌದ್ಧ ಧರ್ಮದ ಪ್ರವೇಶ, ನಂತರ ಅದು ಯಾವ ತೆರನಾಗಿ ಅಲ್ಲಿ ಹರಡಿತು ಎಂಬುವುದು ಅತಿ ಮುಖ್ಯವೆನಿಸುತ್ತದೆ. ಗೌತಮ ಬುದ್ಧ  ತನ್ನ ೮೦ನೇ  ವಯಸ್ಸಿನಲ್ಲಿ   ಕ್ರಿ.ಪೂ ೪೮೩ರಲ್ಲಿ ತೀರಿ  ಹೋದನು.  ಅದಾಗಿ  ಎರಡು ಶತಮಾನಗಳ  ಸಮಯದಲ್ಲಿ  ಬೌದ್ಧ ಧರ್ಮ ನಮ್ಮ ದೇಶದಲ್ಲಿ ಬೇರೂರಿತು. ಮೌರ್ಯ ವಂಶದ ಚಕ್ರವರ್ತಿಯಾದ  ಅಶೋಕನು  ತಾನು  (ಜೀವನದ ಉತ್ತರಾರ್ಧದಲ್ಲಿ)  ಮತಾಂತರ ಹೊಂದಿ, ಕ್ರಿ.ಪೂ.೨೪೦ರಲ್ಲಿ  ಬೌದ್ಧ ಧರ್ಮದ  ಮೂರನೇ  ಪರಿಷತ್ತನ್ನು( Council ) ನಡೆಸಿದನು. ಅವನು ಧಾರ್ಮಿಕ  ಪ್ರತಿನಿಧಿಗಳನ್ನು ಶ್ರೀಲಂಕಾ ಮತ್ತು  ಇನ್ನಿತರ ದೇಶಗಳಿಗೆ ಕಳುಹಿಸಿದನು, ಆ ಸಂದರ್ಭದಲ್ಲಿ ಅವರು ಆಫ್ರಿಕಾದ ಉತ್ತರ  ಭಾಗಗಳಿಗೂ ಹೋಗಿದ್ದಾರೆ. ಚಕ್ರವರ್ತಿ ಅಶೋಕನ ಈ  ಪ್ರಯತ್ನದಿಂದಾಗಿ  ಪರಿವ್ರಾಜಕ  ಬೌದ್ಧಸನ್ಯಾಸಿಗಳು  ಅಫಘಾನಿಸ್ತಾನ, ಮಧ್ಯ ಏಶಿಯಾ, ಚೀನಾ ದೇಶಗಳಲ್ಲಿ ಮತ ಪ್ರಚಾರ ಮಾಡಿ,  ಬೇರೂರುವಂತೆ ಮಾಡುವುದರಲ್ಲಿ  ಯಶಸ್ವಿಗಳಾದರು.  ಆ  ಕ್ರಿ.ಶ.೨ನೇ ಶತಮಾನದ  ಕಾಲದಲ್ಲಷ್ಟೇ  ತೆರೆದುಕೊಂಡ  ರೇಶ್ಮೆ  ವ್ಯಾಪಾರ ಮಾರ್ಗವು ಮತಪ್ರಚಾರವನ್ನು ಸುಲಭವಾಗಿಸಿತು. ಕ್ರಿ.ಶ. ೨ನೇ ಶತಮಾನದ  ಕಾಲದಲ್ಲಿ ಕುಶಾಣರ ಚಕ್ರವರ್ತಿಯಾದ ಕನಿಷ್ಕನು ಬೌದ್ಧ ಧರ್ಮವನ್ನು ಸ್ವೀಕರಿಸಿ , ಅವನ ವಂಶಜರು ಅದನ್ನು ಸ್ವೀಕಾರಮಾಡುವುದಕ್ಕೆ  ಅನುವು  ಮಾಡಿಕೊಟ್ಟನು. ಇದರಿಂದಾಗಿ ಮುಂದೆ  ಪಾರ್ಥಿಯಾ, ಮಧ್ಯ ಏಶಿಯಾದಲ್ಲಿ  ಈ ಧರ್ಮವು ಹಬ್ಬಲು  ಸಹಾಯವಾಯಿತು.<br />
ಚೀನಾದ  &#8220;ಹನ್&#8221;  ವಂಶದ ಚಕ್ರವರ್ತಿ ಮಿಂಗ್ಡಿ ಎಂಬವನು ಕ್ರಿ.ಶ.೬೮ರಲ್ಲಿ  ಗೌತಮ ಬುದ್ಧನನ್ನು  ಸ್ವಪ್ನದಲ್ಲಿ  ಕಂಡು, &#8220;ಕಾಯ್ ಯಿನ್&#8221; ಎಂಬ ಅಧಿಕಾರಿಯನ್ನು ಮಧ್ಯ  ಏಶಿಯಾವನ್ನು ನೋಡಿ ಬರಲು ಕಳುಹುತ್ತಾನೆ. ಆ ಅಧಿಕಾರಿ  ಭಾರತ ದೇಶಕ್ಕೂ  ಭೇಟಿಯನ್ನಿತ್ತು, ತನ್ನ ರಾಜ್ಯದ ಮುಖ್ಯ ವಸತಿಸ್ಥಾನವಾಗಿದ್ದ ಲೋಯಾಂಗ್ ಗೆ  ಇಬ್ಬರು ಬೌದ್ಧ  ಸನ್ಯಾಸಿಗಳು ಮತ್ತು ಹಲವು  ಬುದ್ಧನ ವಿಗ್ರಹಗಳೊಂದಿಗೆ   ಹಾಗೂ  ಸಂಸ್ಕೃತ ಮತ್ತು  ಪಾಲಿ  ಭಾಷೆಗಳಲ್ಲಿದ್ದ  ಪುಸ್ತಕ, ಪತ್ರಗಳೊಂದಿಗೆ ಹಿಂದಿರುಗುತ್ತಾನೆ. ಆ ನಂತರ ಲೋಯಾಂಗ್ ನಲ್ಲಿ  ಬೌದ್ಧ  ಧರ್ಮದ ಅನುಯಾಯಿಗಳ ಸಂಖ್ಯೆ  ಬೆಳೆಯುತ್ತದೆ. ಕ್ರಿ.ಶ. ೧೬೬ ರಲ್ಲಿ ಹಾನ್  ವಂಶಜನಾದ ಹುವಾನ್ ಚಕ್ರವರ್ತಿ  ತನ್ನ  ಅರಮನೆಯಲ್ಲಿ  ರಾಜಮನೆತನಕ್ಕೆ  ಸಂಬಂಧಿಸಿದ ಎಲ್ಲಾ  ಧಾರ್ಮಿಕ  ಆಚರಣೆಗಳನ್ನು ಪ್ರಜೆಗಳಿಗೆ, ಸಾರ್ವಜನಿಕರಿಗೆ  ತಿಳಿಸಿ  ಬೌದ್ಧ ಧರ್ಮದ ರೀತ್ಯಾ ಪ್ರಾರಂಭಿಸುತ್ತಾನೆ. ನಂತರ  ಕ್ರಿ.ಶ.೪ನೇ  ಶತಮಾನದಲ್ಲಿ  ಭಾರತೀಯ ಬೌದ್ಧ ಮುನಿ  ಕುಮಾರ ಜೀವನೆಂಬವನು , ಚೀನಾದೇಶದಿಂದ  ಆಮಂತ್ರಿತನಾಗಿ  ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನು ಸಂಸ್ಕೃತ ಮತ್ತು  ಪಾಲಿ ಭಾಷೆಗಳಲ್ಲಿದ್ದ ಹಸ್ತಲಿಖಿತ ಪತ್ರ ಮತ್ತು ಪುಸ್ತಕಗಳನ್ನು  ಚೀನೀ  ಭಾಷೆಗೆ ಭಾಷಾಂತರಿಸಲು  ಅತ್ಯಂತ  ದೊಡ್ಡ  ಕಾರ್ಯಾಗಾರವನ್ನೇ ಪ್ರಾರಂಭಿಸಿದನು. ಆ  ದಿನಗಳ  ಅನುವಾದಿತ  ಬರಹಗಳ ೫೨ ಪ್ರತಿ  ಇನ್ನೂ  ಪುಸ್ತಕ ರೂಪದಲ್ಲಿ  ಉಳಿದುಕೊಂಡಿವೆ. ಭಾಷಾಂತರದಿಂದಾಗಿ  ಮತಪ್ರಚಾರವು  ಇನ್ನೂ  ಸುಲಭಸಾಧ್ಯವಾಯಿತು.<br />
ಕ್ರಿ,ಶ.೫೧೪ರ  ಕಾಲದಲ್ಲಿ   ಚೀನಾದೇಶದಲ್ಲಿ  ಸಾಧಾರಣ ೨೦,೦೦,೦೦೦ ಮಂದಿ ಬೌದ್ಧಮತಾವಲಂಬಿಗಳಿದ್ದರು. ಆಗ ಚೀನಾದೇಶದಿಂದ ಬಹಳಷ್ಟು  ಬೌದ್ಧ ಮತೀಯ ಯಾತ್ರಾರ್ಥಿಗಳು  ಧರ್ಮಕ್ಷೇತ್ರ  ವೀಕ್ಷಣೆಗೆಂದು   ಭಾರತಕ್ಕೆ  ಬರುತ್ತಿದ್ದರು. ಹಾಗೆ ಬಂದವರಲ್ಲಿ  ಮುಖ್ಯರಾದವರು, ಎಲ್ಲರಿಗೂ ತಿಳಿದವರು  ಫಾ ಹಿಯೆನ್ ಮತ್ತು ಹುವಾನ್ ತ್ಸುವಾಂಗ್. ಭಾರತೀಯ  ಬೌದ್ಧ ಮುನಿ ಬೋಧಿಧರ್ಮ ಎಂಬವನು ಕ್ರಿ.ಶ.೬ನೇ ಶತಮಾನದಲ್ಲಿ ಚೀನಾ ದೇಶಕ್ಕೆ ಹೋಗಿ ಅಲ್ಲಿ  ಬೌದ್ಧ ಧರ್ಮದ ಚಾನ್  ಪಂಥವನ್ನು ಸ್ಥಾಪಿಸಿದನು. ಚಾನ್ ಪಂಥದವರು  ಧ್ಯಾನಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಮುಂದಕ್ಕೆ ಇದೇ  ಚಾನ್ ಪಂಥ ಜಪಾನ್  ದೇಶದಲ್ಲಿ ಝೆನ್ ಎಂದಾಗುತ್ತದೆ.</p>
<p><a href="http://shailajasbhat.files.wordpress.com/2010/03/300px-qianfoshan_xingguochantemple-shandong-province.jpg"><img title="300px-Qianfoshan_xingguochantemple.jpg shandong province" src="http://shailajasbhat.files.wordpress.com/2010/03/300px-qianfoshan_xingguochantemple-shandong-province.jpg?w=300&#038;h=200" alt="" width="300" height="200" /></a></p>
<p style="text-align:left;">ಚೀನಾದೇಶದ   ಶಾನ್ ಡೊಂಗ್ ಪ್ರಾಂತ್ಯದ ಬುದ್ಧ ಮಂದಿರ</p>
<p style="text-align:left;">ಕ್ರಿ,ಶ.೯ರ ಶತಮಾನದ  ಮಧ್ಯದಲ್ಲಿ  ಕೆಲವು  ಒತ್ತಡಗಳಿಂದಾಗಿ  ಚೀನಾ ದೇಶದೊಳಗೆ  ಕೆಲವಾರು  ವರ್ಷಗಳ  ಕಾಲ  ಈ  ಧರ್ಮದ  ಬೆಳವಣಿಗೆ ಕುಂಠಿತವಾಗಿತ್ತು. ಆದರೆ  ಆ ನಂತರ  ಅದರ ಬೆಳವಣಿಗೆ  ಎಂದೂ  ಹಿಮ್ಮುಖವಾಗಲಿಲ್ಲ. ಮತ್ತು  ಅದು ಆನಂತರದ  ಸಾಹಿತ್ಯ, ಕಲೆ, ಶಿಲ್ಪ, ತತ್ತ್ವಶಾಸ್ತ್ರ, ವೇದಾಂತ  ಇವೆಲ್ಲವುಗಳಿಗೂ  ಪ್ರಭಾವ  ಬೀರುತ್ತದೆ. ಈಗಿನ ದಿನಗಳಲ್ಲಿ  ಚೀನೀಯರಲ್ಲಿ  ೮೫% ಮಂದಿ ಮಹಾಯಾನ ಪಂಥೀಯರು, ಅದರೊಂದಿಗೆ  ಅವರ  ಪೂರ್ವಧರ್ಮವಾಗಿದ್ದ  ತಾವೋ( Taoism ) ಬೆರೆತು ಹೋಗಿದೆ. ಈಗಿನ ವಿಜ್ಞಾನ  ಸಂಬಂಧಿತ ಬೆಳವಣಿಗೆ, ಹೊಸ ನಾಗರಿಕ ಜೀವನ ಯಾವುದೂ ಚೀನೀಯರಲ್ಲಿ  ಹಾಸುಹೊಕ್ಕಾಗಿಹೋದ  ಬೌದ್ಧ ಧರ್ಮವನ್ನು, ಮತ್ತು ಅದರ ಪ್ರಭಾವಗಳನ್ನು ಅಲ್ಲಾಡಿಸಲಿಲ್ಲ.   ಮಧ್ಯ ಏಶಿಯಾದ  ದೇಶಗಳಲ್ಲಿ ಪ್ರಚಲಿತವಾಗಿದ್ದ  ಈ ಧರ್ಮ, ೮ನೇ ಶತಮಾನದಲ್ಲಾದ  ಅರಬರ ಧಾಳಿಯಿಂದಾಗಿ   ಬೆಳವಣಿಗೆ ಮತ್ತು  ಆಚರಣೆಯಲ್ಲಿ  ಕುಗ್ಗಿತು  ಮತ್ತು  ೧೫ನೇ  ಶತಮಾನಕ್ಕಾಗುವಾಗ  ತೀವ್ರ  ಇಸ್ಲಾಮೀಕರಣದಿಂದಾಗಿ ತೀರ ಕುಂಠಿತವಾಯಿತು.</p>
<p style="text-align:left;"><a href="http://shailajasbhat.files.wordpress.com/2010/03/120px-great_wall_of_china-mutianyu_4-great-wall.jpg"><img title="120px-Great_wall_of_china-mutianyu_4.JPG great wall" src="http://shailajasbhat.files.wordpress.com/2010/03/120px-great_wall_of_china-mutianyu_4-great-wall.jpg?w=220&#038;h=144" alt="" width="220" height="144" /></a></p>
<p style="text-align:left;">ದೇಶರಕ್ಷಣೆಗೆಂದು  ನಿರ್ಮಿಸಿದ ಮಹಾಗೋಡೆ</p>
<p style="text-align:left;">ಚೀನೀಯರು ದೇಶರಕ್ಷಣೆಗೆಂದು ಪೂರ್ವದಲ್ಲೇ  ನಿರ್ಮಿಸಿದ ಸಹಸ್ರಾರು ಮೈಲುಗಳುದ್ದದ  ಮಹಾಗೋಡೆಯೇ ಪ್ರಾಯಶಃ  ಅವರ ದೇಶವನ್ನು ಮತಾಂತರದಿಂದ  ತಪ್ಪಿಸಿತು.  ನಾವು ಭಾರತೀಯರು ನಮ್ಮ ಭಾರತೀಯ ಮೂಲದ ಧರ್ಮ ಈಗಲೂ ಚೀನಾ ದೇಶದ ಸಂಸ್ಕೃತಿಯನ್ನೇ ಆಳುತ್ತಿದೆ ಎಂದು  ಹೆಮ್ಮೆಪಡಬಹುದು.</p>
<p style="text-align:left;">ನಮಗೆ( ಭಾರತೀಯರಿಗೆ) ಬೌದ್ಧಧರ್ಮಕ್ಕೆ ಸಂಬಂಧಿಸಿದ  ಕಲೆ, ಶಿಲ್ಪ, ಸ್ತೂಪ, ಸ್ಮಾರಕ ಇತ್ಯಾದಿಗಳು  ಚೀನಾದಲ್ಲಿ  ಉಳಿದುಕೊಂಡಿರುವುದು  ಅರಿವಿಲ್ಲ.</p>
<p style="text-align:left;"><a href="http://shailajasbhat.files.wordpress.com/2010/03/200px-hanwudibuddhas-dunhang.jpg"><img title="200px-HanWudiBuddhas.jpg dunhang" src="http://shailajasbhat.files.wordpress.com/2010/03/200px-hanwudibuddhas-dunhang.jpg?w=198&#038;h=300" alt="" width="198" height="300" /></a></p>
<p>ಡುನ್ ಹುವಾಂಗ್ ನ   ಸಾವಿರ ಗುಹೆ</p>
<p style="text-align:left;">ಚೀನಾದ  ಡುನ್ ಹುವಾಂಗ್ ನಲ್ಲಿರುವ  &#8220;ಸಾವಿರ ಗುಹೆಗಳ&#8221;ಲ್ಲಿ ಗೋಡೆಗಳ  ಮೇಲೆ ಬರೆದಿರುವ  ಚಿತ್ರಕಲೆಗಳು, ಸಾವಿರಾರು ಬುದ್ಧನ ವಿಗ್ರಹಗಳು ಕಂಡುಬರುತ್ತದೆ. ಹಾಗೂ ಮುಖ್ಯವಾಗಿ  ಯುನ್  ಗಾಂಗ್ ಮತ್ತು ಲಾಂಗ್ ಮೆನ್ ನಲ್ಲಿ  ಬಂಡೆಕಲ್ಲುಗಳ ಮೇಲೆ  ನೂರಾರು ಬುದ್ಧನ ಆಕೃತಿಗಳನ್ನು ಕಡೆದಿರುವುದನ್ನು  ಕಾಣಬಹುದು.</p>
<p style="text-align:left;"><strong>ಕೊರಿಯಾ</strong>, ಜಪಾನ್&#8211;ಇವೆರಡೂ ದೇಶಗಳು ಈ  ಕಾಲದ ಪ್ರಭಲ ದೇಶಗಳು. ಕೊರಿಯಾ ಪರ್ಯಾಯ ದ್ವೀಪವು  ಭೌಗೋಳಿಕವಾಗಿ ಚೀನಾದೇಶದೊಂದಿಗೆ ಜೋಡಿಕೊಂಡಿದೆ. ಹಳೆಕಾಲದ ಕೊರಿಯಾ ರಾಜ್ಯದಲ್ಲಿ   ಮೂರು  ಪ್ರತ್ಯೇಕ  ಭಾಗಗಳಿದ್ದವು. ಅವು  ಉತ್ತರದ ಕೊಗುರ‍್ಯು, (Koguryu) ನೈರುತ್ಯದ ಪಾಕ್ಚೆ (Packche in the southwest) ಮತ್ತು ಆಗ್ನೇಯದ ಸಿಲ್ಲಾ ( Silla in the south east)ಎಂಬ ಮೂರು ಭಾಗಗಳು.</p>
<p style="text-align:left;"><img class="alignleft" src="http://lh5.ggpht.com/_bEdWeUlAeV4/S4v31b5wMqI/AAAAAAAADC4/iCkoXTEMFVU/200px-History_of_Korea-375.jpg" alt="" width="200" height="274" /></p>
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p>ಕೊರಿಯಾದ  ಮೂರು ಭಾಗಗಳು.</p>
<p style="text-align:left;">ಕ್ರಿ.ಶ.೪ನೇ ಶತಮಾನದಲ್ಲಿ  ಉತ್ತರದ  ಕೊಗುರ‍್ಯುನಲ್ಲಿ ಚೀನಾದ ಬೌದ್ಧಮುನಿಯೊಬ್ಬನು  ಬೌದ್ಧ ಧರ್ಮವನ್ನು ಪರಿಚಯಿಸಿದನು. ಕೆಲಕಾಲದ ನಂತರದ  ಮಧ್ಯ ಏಶಿಯಾದ  ಬೌದ್ಧಮುನಿಯೊಬ್ಬನು  ಪಾಕ್ಚೆ ಪ್ರಾಂತ್ಯದಲ್ಲಿ  ಬೌದ್ಧಧರ್ಮವನ್ನು  ಪ್ರಚಾರ  ಮಾಡುತ್ತಾನೆ.  ಸಿಲ್ಲ  ಪ್ರಾಂತ್ಯದೊಳಗೆ ಜನ ಮೊದಲು  ಬೌದ್ಧಧರ್ಮವನ್ನು ವಿರೋಧಿಸಿದರು, ಮತ್ತು  ಧರ್ಮ  ಪ್ರಚಾರಕ್ಕೆ  ಬಂದ ಮುನಿಯನ್ನೇ ಕೊಲೆಗೈದರು. ಆದರೆ ೬ನೇ  ಶತಮಾನಕ್ಕಾಗುವಾಗ ಆ ಧರ್ಮದ ಅನುಯಾಯಿಗಳಾದರು. ನಂತರ  ೭ನೇ ಶತಮಾನಕ್ಕಾಗುವಾಗ ಈ ಮೂರೂ ಪ್ರದೇಶಗಳು  ಒಂದಾಗಿ  ಸಿಲ್ಲದ ರಾಜನು  ಚಕ್ರವರ್ತಿಯಾದನು. ಈ ರಾಜರು  ಮುಂದೆ ಕಲೆ, ಶಿಲ್ಪಕಲೆಗಳನ್ನು  ಪ್ರೋತ್ಸಾಹಿಸಿ ಸುಂದರವಾದ ಬೌದ್ಧಮಠ, ಮಂದಿರಗಳ ಸೃಷ್ಟಿಗೆ  ಕಾರಣಕರ್ತರಾಗುತ್ತಾರೆ.</p>
<p style="text-align:left;"><a href="http://shailajasbhat.files.wordpress.com/2010/03/800px-buddha_statues_in_a_temple_on_jejudo-korea1.jpg"><img class="alignleft size-medium wp-image-42" title="800px-Buddha_statues_in_a_temple_on_Jejudo.jpg korea" src="http://shailajasbhat.files.wordpress.com/2010/03/800px-buddha_statues_in_a_temple_on_jejudo-korea1.jpg?w=300&#038;h=199" alt="" width="300" height="199" /></a></p>
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">
<p style="text-align:left;">ಕೊರಿಯಾದ ಬುದ್ಧ ಮಂದಿರ</p>
<p style="text-align:left;">ಮುಂದೆ ಹತ್ತನೆ ಶತಮಾನದಲ್ಲಿ  ಕೋರ್ಯೋ ವಂಶ ಅಧಿಕಾರಕ್ಕೆ ಬಂದಾಗ  ಬೌದ್ಧಧರ್ಮವನ್ನು  ತುಂಬಾ ಪ್ರೋತ್ಸಾಹಿಸಿತು. ಈ ಎಲ್ಲ ಕಾಲದಲ್ಲಿ ಕೊರಿಯಾ ದೇಶದ ಸನ್ಯಾಸಿಗಳು  ಬೌದ್ಧಧರ್ಮವನ್ನು   ಅಭ್ಯಸಿಸಲು  ಚೀನಾಕ್ಕೆ ಹೋಗುತ್ತಿದ್ದರು. ಮತ್ತು  ಚೀನೀ  ಭಾಷೆಯಲ್ಲಿದ್ದ  ಬೌದ್ಧಧರ್ಮದ  ಸಾಹಿತ್ಯಗಳನ್ನು    ತರುತ್ತಿದ್ದರು. ೧೪ನೆ ಶತಮಾನದಲ್ಲಿ ಅಧಿಕಾರಕ್ಕೆ  ಬಂದ  &#8220;ಯಿ&#8221; ವಂಶದವರು ಬೌದ್ಧಧರ್ಮವನ್ನು ಬೆಳೆಯದಂತೆ  ೧೯೧೦ ರ ವರೆಗೆ  ಹತ್ತಿಕ್ಕಿದರು.ಆ ಕಾಲದಲ್ಲಿ  ಜಪಾನ್ ಕೊರಿಯಾವನ್ನು ಆಕ್ರಮಿಸಿತು.  ಆಗ ಬಂದ ಜಪಾನೀಯರು ೧೯೪೫ ರ ವರೆಗೆ  ಕೊರಿಯಾವನ್ನು  ಆಳುತ್ತಿರುವಾಗ    ಬೌದ್ಧಧರ್ಮಕ್ಕೆ  ಪ್ರೋತ್ಸಾಹವನ್ನಿತ್ತು  ಬೆಳೆಯಲು ಕಾರಣರಾದರು. ಈಗ ಕೊರಿಯನ್ನರಲ್ಲಿ  ಈ ಧರ್ಮದ  ಸಂಸ್ಕೃತಿಯಿದ್ದರೂ  ಆಚರಣೆ  ಕಂಡು ಬರುವುದಿಲ್ಲ.</p>
<p><strong> ಮುಂದುವರಿಯುವುದು&#8230;.</strong></p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/31/"><img alt="" border="0" src="http://feeds.wordpress.com/1.0/comments/shailajasbhat.wordpress.com/31/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/31/"><img alt="" border="0" src="http://feeds.wordpress.com/1.0/delicious/shailajasbhat.wordpress.com/31/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/31/"><img alt="" border="0" src="http://feeds.wordpress.com/1.0/facebook/shailajasbhat.wordpress.com/31/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/31/"><img alt="" border="0" src="http://feeds.wordpress.com/1.0/twitter/shailajasbhat.wordpress.com/31/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/31/"><img alt="" border="0" src="http://feeds.wordpress.com/1.0/stumble/shailajasbhat.wordpress.com/31/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/31/"><img alt="" border="0" src="http://feeds.wordpress.com/1.0/digg/shailajasbhat.wordpress.com/31/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/31/"><img alt="" border="0" src="http://feeds.wordpress.com/1.0/reddit/shailajasbhat.wordpress.com/31/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=31&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2010/03/01/%e0%b2%a1%e0%b2%be-%e0%b2%b5%e0%b2%bf-%e0%b2%8e%e0%b2%b8%e0%b3%8d-%e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d-%e0%b2%9a%e0%b2%b0/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://lh6.ggpht.com/_bEdWeUlAeV4/S2my7TNHl4I/AAAAAAAACl0/Dl_f5mhnxDs/1.jpggopal.jpg" medium="image" />

		<media:content url="http://shailajasbhat.files.wordpress.com/2010/03/300px-qianfoshan_xingguochantemple-shandong-province.jpg" medium="image">
			<media:title type="html">300px-Qianfoshan_xingguochantemple.jpg shandong province</media:title>
		</media:content>

		<media:content url="http://shailajasbhat.files.wordpress.com/2010/03/120px-great_wall_of_china-mutianyu_4-great-wall.jpg" medium="image">
			<media:title type="html">120px-Great_wall_of_china-mutianyu_4.JPG great wall</media:title>
		</media:content>

		<media:content url="http://shailajasbhat.files.wordpress.com/2010/03/200px-hanwudibuddhas-dunhang.jpg?w=198" medium="image">
			<media:title type="html">200px-HanWudiBuddhas.jpg dunhang</media:title>
		</media:content>

		<media:content url="http://lh5.ggpht.com/_bEdWeUlAeV4/S4v31b5wMqI/AAAAAAAADC4/iCkoXTEMFVU/200px-History_of_Korea-375.jpg" medium="image" />

		<media:content url="http://shailajasbhat.files.wordpress.com/2010/03/800px-buddha_statues_in_a_temple_on_jejudo-korea1.jpg?w=300" medium="image">
			<media:title type="html">800px-Buddha_statues_in_a_temple_on_Jejudo.jpg korea</media:title>
		</media:content>
	</item>
		<item>
		<title>೨೦ನೇ ಶತಮಾನದ ರೋಮಾಂಚಕಾರಿ ಕಮ್ಯುನಿಸ್ಟ್ ಸಂಚು( ನಾಗಿರೆಡ್ಡಿ  ಸಂಚಿನ ಮೊಕದ್ದಮೆ)</title>
		<link>http://shailajasbhat.wordpress.com/2010/01/06/%e0%b3%a8%e0%b3%a6%e0%b2%a8%e0%b3%87-%e0%b2%b6%e0%b2%a4%e0%b2%ae%e0%b2%be%e0%b2%a8%e0%b2%a6-%e0%b2%b0%e0%b3%8b%e0%b2%ae%e0%b2%be%e0%b2%82%e0%b2%9a%e0%b2%95%e0%b2%be%e0%b2%b0%e0%b2%bf-%e0%b2%95/</link>
		<comments>http://shailajasbhat.wordpress.com/2010/01/06/%e0%b3%a8%e0%b3%a6%e0%b2%a8%e0%b3%87-%e0%b2%b6%e0%b2%a4%e0%b2%ae%e0%b2%be%e0%b2%a8%e0%b2%a6-%e0%b2%b0%e0%b3%8b%e0%b2%ae%e0%b2%be%e0%b2%82%e0%b2%9a%e0%b2%95%e0%b2%be%e0%b2%b0%e0%b2%bf-%e0%b2%95/#comments</comments>
		<pubDate>Wed, 06 Jan 2010 16:05:30 +0000</pubDate>
		<dc:creator>my pen from shrishaila</dc:creator>
				<category><![CDATA[1]]></category>
		<category><![CDATA[Armed peasants struggle;ಆಂಧ್ರ ಮತ್ತು ತೆಲಂಗಾಣ ಪ್ರದೇಶ;ಕಮ್ಯುನಿಸ್ಟ್ ತತ್ವ;]]></category>
		<category><![CDATA[ನಾಗಿರೆಡ್ಡಿ ಸಂಚು;Conspiracy case;]]></category>
		<category><![CDATA[ಸಾಯುಧ ಪೋರಾಟಮು;ನಕ್ಸಲೈಟ್ ;ಜಿ.ರಾಘವ ರೆಡ್ಡಿ]]></category>

		<guid isPermaLink="false">http://shailajasbhat.wordpress.com/?p=25</guid>
		<description><![CDATA[೨೦ನೇ ಶತಮಾನದ ರೋಮಾಂಚಕಾರಿ ಕಮ್ಯುನಿಸ್ಟ್ ಸಂಚು( ನಾಗಿರೆಡ್ಡಿ  ಸಂಚಿನ ಮೊಕದ್ದಮೆ) ಈ  ಘಟನೆ ನಡೆದುದು ಕಳೆದ ಶತಮಾನದ ೬೦ರ ದಶಕದಲ್ಲಿ, ಈ ಮೊಕದ್ದಮೆಯ ರುವಾರಿ ಯಾನೆ ಶಿಲ್ಪಿ ಎನಿಸಿಕೊಂಡ ವ್ಯಕ್ತಿ  ಶ್ರೀ ಜಿ.ರಾಘವ ರೆಡ್ಡಿಯವರು(ಐ.ಪಿ.ಎಸ್.). ಇದು ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದೊಳಗಿನ ಅತಿ ದೊಡ್ಡ &#8220;ಸಂಚಿನ ಮೊಕದ್ದಮೆ&#8221;( Conspiracy case) ಎನಿಸಿಕೊಂಡಿದೆ. ಮೊದಲಿಗೆ  ಈ ಸಂಚಿನ ಹಿನ್ನೆಲೆ, ಆಗಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳನ್ನು ನೋಡುವ. ಈ ಸಂಚಿನ ಅಪರಾಧಿ ಸ್ಥಾನದಲ್ಲಿದ್ದ ವ್ಯಕ್ತಿ  ತರಿಮೆಲ್ಲ ನಾಗಿ ರೆಡ್ಡಿಯವರು ಆಗಿನ,  [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=25&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p><em><strong>೨೦ನೇ ಶತಮಾನದ ರೋಮಾಂಚಕಾರಿ ಕಮ್ಯುನಿಸ್ಟ್ ಸಂಚು( ನಾಗಿರೆಡ್ಡಿ  ಸಂಚಿನ ಮೊಕದ್ದಮೆ)</strong></em></p>
<p>ಈ  ಘಟನೆ ನಡೆದುದು ಕಳೆದ ಶತಮಾನದ ೬೦ರ ದಶಕದಲ್ಲಿ, ಈ ಮೊಕದ್ದಮೆಯ ರುವಾರಿ ಯಾನೆ ಶಿಲ್ಪಿ ಎನಿಸಿಕೊಂಡ ವ್ಯಕ್ತಿ  ಶ್ರೀ ಜಿ.ರಾಘವ ರೆಡ್ಡಿಯವರು(ಐ.ಪಿ.ಎಸ್.). ಇದು ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದೊಳಗಿನ ಅತಿ ದೊಡ್ಡ &#8220;ಸಂಚಿನ ಮೊಕದ್ದಮೆ&#8221;( Conspiracy case) ಎನಿಸಿಕೊಂಡಿದೆ.<br />
ಮೊದಲಿಗೆ  ಈ ಸಂಚಿನ ಹಿನ್ನೆಲೆ, ಆಗಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳನ್ನು ನೋಡುವ. ಈ ಸಂಚಿನ ಅಪರಾಧಿ ಸ್ಥಾನದಲ್ಲಿದ್ದ ವ್ಯಕ್ತಿ  ತರಿಮೆಲ್ಲ ನಾಗಿ ರೆಡ್ಡಿಯವರು ಆಗಿನ,  ವಿದ್ಯಾವಂತ,  ಸುಸಂಸ್ಕೃತ, ದೊಡ್ಡ  ಜಮೀನುದಾರ ಮನೆತನದವರು, ಆಂಧ್ರಪ್ರದೇಶದ ಅನಂತಪುರದಿಂದ  (೧೯೬೯ರಲ್ಲಿ) ಚುನಾಯಿತರಾದ  ಶಾಸಕರು MLA ; ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯವರ ಭಾವ( ತಂಗಿಯ ಗಂಡ).</p>
<div class="wp-caption alignnone" style="width: 361px"><img src="http://lh6.ggpht.com/_bEdWeUlAeV4/S0RKKE3dz1I/AAAAAAAACBs/fuZ3z4Bn9UM/scan0004.jpg" alt="" width="351" height="445" /><p class="wp-caption-text">Nagi Reddy</p></div>
<p>ಕಳೆದ ಶತಮಾನದಲ್ಲಿ  ಭಾರತ ದೇಶ ಬ್ರಿಟಿಷ್ ಆಳ್ವಿಕೆಯಿಂದ ಹೊರಬಂದರೂ, ಬಹಳ ಕಾಲದ ವರೆಗೆ ಕಷ್ಟ ಪರಂಪರೆಗಳನ್ನು ದಾಟಿಹೊರಬರಲಾಗಲಿಲ್ಲ. ದೇಶದ ಬಹುಭಾಗಗಳಲ್ಲಿ ಬಡತನ, ಶೋಷಣೆ   ತುಂಬಿಹೋಗಿತ್ತು.  ನಿಜಾಮನ ರಾಜ್ಯವಾಗಿದ್ದ ಹೈದರಾಬಾದ್ ಇದಕ್ಕೆ ಹೊರತಾಗಿರಲಿಲ್ಲ. ಜನರಲ್ಲಿ ಶೋಷಣೆ, ದಬ್ಬಾಳಿಕೆಗಳಿಂದಾಗಿ ಮತ್ತು  ಆ ವರೆಗೆ ನಡೆದ ಎರಡೆರಡು ವಿಶ್ವಯುದ್ಧಗಳಿಂದ ಕಾರ್ಗತ್ತಲಿನಂತೆ  ಕವಿದಿದ್ದ ಕಷ್ಟಕೋಟಲೆಗಳಿಂದ ಅಸಮಾಧಾನ ದಿನೇ ದಿನೇ ಬೆಳೆಯುತ್ತಿತ್ತು.<br />
ಸ್ವಾತಂತ್ರಪೂರ್ವದಲ್ಲಿ ಹೈದರಾಬಾದಿನಲ್ಲಿ, ರಜಾಕರ್ ಎಂಬ ಗುಂಪಿನ ಮಂದಿ, ನಿಜಾಮನ ಅನಧಿಕೃತ  ಒಪ್ಪಿಗೆಯಿದ್ದು, ಜನಸಾಮಾನ್ಯರನ್ನು ಕೊಲೆ, ಲೂಟಿ,ಹಿಂಸೆಗಳನ್ನು ಮಾಡಿ ಪೀಡಿಸುತ್ತಿದ್ದರು. ಇದಕ್ಕೆ ಶ್ರೀಮಂತ, ಬಡವರೆಂದು ಯಾರೂ  ಹೊರತಾಗಿರಲಿಲ್ಲ.ಆಗ ಇಲ್ಲಿನ ಕಮ್ಯುನಿಸ್ಟ್ ನಾಯಕರಾದ ರಾವಿ ನಾರಾಯಣ ರೆಡ್ಡಿಯವರು   ಸ್ಥಳೀಯ ರೈತಸಮುದಾಯದವರನ್ನು ಒಂದುಗೂಡಿಸಿ, &#8220;ಸಾಯುಧ ರೈತು ಪೋರಾಟಮು&#8221;  ( Armed peasants struggle) ಅನ್ನು ಪ್ರಾರಂಭಿಸಿದರು. ಮುಂದೆ ಇದೇ ವ್ಯಕ್ತಿ ಹೈದರಾಬಾದಿನ ಬಿಡುಗಡೆಗೆ  ಭಾರತದ ಸ್ವಾತಂತ್ರ ಸಂಗ್ರಾಮದಲ್ಲೂ ಭಾಗಿಯಾದರು.ಇವರು ಈ ಪ್ರದೇಶದ ಇತಿಹಾಸದಲ್ಲಿ ಅಮರರಾಗಿರುವ ವ್ಯಕ್ತಿ.<br />
ಭಾರತದಲ್ಲಿ ಕಮ್ಯುನಿಸ್ಟ್ ತತ್ವಗಳ ತಿಳುವಳಿಕೆ, ಚಳವಳಿ ಪ್ರಾರಂಭವಾದುದು ಕಲ್ಕತ್ತಾ ನಗರದಲ್ಲಿ. ದೇಶಕ್ಕೆ ಸ್ವಾತಂತ್ರ ಬಂದ  ಕೆಲವೇ ವರ್ಷಗಳಲ್ಲಿ (೧೯೪೮-೫೧ರ ಮಧ್ಯದಲ್ಲಿ) ಆಂಧ್ರ ಮತ್ತು ತೆಲಂಗಾಣ  ಪ್ರದೇಶದ  ಸಿ.ಪಿ.ಐ.ಯ ಕಾರ‍್ಯಕರ್ತರು,  ಪಾರ್ಟಿಯ ಬೆಂಬಲದಿಂದ  ಭೂಗತರಾಗಿ  ಹಿಂಸಾಚಾರಗಳಲ್ಲಿ ಪ್ರವೃತ್ತರಾದರು,ಬಹಳಷ್ಟು ಕೊಲೆ,ದೊಂಬಿ ಇತ್ಯಾದಿ ಕೃತ್ಯಗಳನ್ನೆಸಗಿದರು. ಆಗ ಸ್ಥಳೀಯ ಹಾಗೂ ಕೇಂದ್ರ ಸರಕಾರಗಳು  ಸಕಾಲದಲ್ಲಿ ಆಗಿನ ಗೆರಿಲಾ  ಯುದ್ಧವನ್ನು ನಿಲ್ಲಿಸುವುದರಲ್ಲಿ ಯಶಸ್ವಿಯಾದವು. ಕೊನೆಯಲ್ಲಿ ಸಿ.ಪಿ.ಐ.ಪಕ್ಷವು ಯಾವುದೇ ಶರತ್ತುಗಳಿಲ್ಲದೇ ಶರಣಾಯಿತು. ಆದರೆ ಅವರು ನಿಷ್ಕ್ರಿಯರಾಗಿ ಮರೆಯಲ್ಲಿದ್ದರೇ ಹೊರತು, ಅವರ ಧ್ಯೇಯವನ್ನು ಮರೆತಿರಲಿಲ್ಲ. ದೇಶಕ್ಕೆ ಸ್ವಾತಂತ್ರ ಲಭಿಸಿ ಹಲವಾರು ವರ್ಷಗಳಾದರೂ ಬಡಜನರ ಕಷ್ಟ ತಗ್ಗಲಿಲ್ಲ, ಅಭಿವೃದ್ಧಿಯಾಗಲಿಲ್ಲ ಎಂದಾದಾಗ , ಕಮ್ಯುನಿಸ್ಟ್ ತತ್ವಗಳನ್ನು ಅನುಸರಿಸುವ ಮಂದಿಗಳು ವಿಹ್ವಲಿತರಾದರು. ಆಂಧ್ರಪದೇಶದ ಕಮ್ಯುನಿಸ್ಟ್ ಹಿಂಬಾಲಕರು ತಮ್ಮ ಪಕ್ಷದ  ಕಾರ‍್ಯಕಲಾಪಗಳಲ್ಲಿಹಸ್ತಕ್ಷೇಪಮಾಡಿದರು, ಆಗ ಪಕ್ಷದ ಪದಾಧಿಕಾರಿಗಳೂ ಬದಲಾದರು, ಕಮ್ಯುನಿಸ್ಟ್ ತತ್ವಗಳ ಪ್ರಯೋಗವನ್ನು ನಗರ ವಲಯದಿಂದ (ಚೀನಾ ದೇಶದಲ್ಲಿದ್ದಂತೆ) ಹಳ್ಳಿಗಳ ಮಟ್ಟಕ್ಕೆ  ತರಲಾಯಿತು. ಸ್ವಾತಂತ್ರಪೂರ್ವದಲ್ಲಿ ಬ್ರಿಟಿಶ್ ವಸಾಹತುಗಳಿದ್ದ ಬೇರೆ ದೇಶಗಳಲ್ಲಿ(ಇಂಡೊನೇಶಿಯಾ,ಮಲೇಶಿಯಾ,ಫಿಲಿಪೈನ್) &#8220;ಸಾಯುಧ ರೈತು ಪೋರಾಟಮು&#8221;  ( Armed peasants struggle) ನಂತಹ ಹೋರಾಟ  ನಡೆಯುತ್ತಿತ್ತು.<br />
ರಷ್ಯಾದ ಕಮ್ಯುನಿಸ್ಟ್ ನಾಯಕ ಸ್ಟಾಲಿನ್ ೧೯೫೩ರಲ್ಲಿ ಮರಣ ಹೊಂದಿದಾಗ, ಕ್ರುಶ್ಚೇವ್ ಆ ಪದವಿಗೇರಿದರು.ಅವರ ಕಾರ‍್ಯವೈಖರಿ ಚೈನಾದ ಮಾವೋ ಮತ್ತು ಅವರ ಸಹವರ್ತಿಗಳಿಗೆ ಸರಿಬರಲಿಲ್ಲ, ಕ್ರಮೇಣ ಎರಡು ದೇಶಗಳು ಭಿನ್ನಭಿಪ್ರಾಯಗಳಿಂದಾಗಿ ದೂರ ಸರಿದು, ಪಕ್ಷ ಇಬ್ಭಾಗವಾಯಿತು,ನಮ್ಮ ದೇಶದ ಕಮ್ಯುನಿಸ್ಟ್-ಮಾರ್ಕ್ಸಿಸ್ಟ್ ಸದಸ್ಯರು ಮಾವೋನನ್ನು ಅನುಮೋದಿಸಿದರು.ಈ ಉಗ್ರಗಾಮಿ ಸದಸ್ಯರು ಚಾರು ಮುಝಮ್ದಾರ್, ಮತ್ತು ಕಾನುಸನ್ಯಲ್ ಅವರ ಮುಂದಾಳತ್ವದಲ್ಲಿ ೧೯೬೭ ರ ಸಮಯದಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ಬಾರಿ ಎಂಬ ಹಳ್ಳಿಯಲ್ಲಿ ಗೆರಿಲಾ ಯುದ್ಧವನ್ನು ಪ್ರಾರಂಭಿಸಿದರು.ಇವರ ಈ ಯುದ್ಧವನ್ನು ಅಲ್ಲಿನ ಸರಕಾರ ಯಶಸ್ವಿಯಾಗಿ ಎಳವೆಯಲ್ಲೇ ಚಿವುಟಿ ಹಾಕಿತು. ಆದರೆ ಈ ಸಂದರ್ಭದಲ್ಲಿ ತೆಲಂಗಾಣದ ಕಮ್ಯುನಿಸ್ಟ್ ಸದಸ್ಯರು ನಿಶ್ಶಬ್ದವಾಗಿ ಕಾರ‍್ಯಪ್ರವೃತ್ತರಾಗಿದ್ದರು.ಆಗಲೇ ಅವರಲ್ಲಿ ಅಭಿಪ್ರಾಯ-ಬೇಧಗಳಿಂದಾಗಿ ಎರಡು ಬಣಗಳಾಗಿದ್ದವು, ಎರಡನೇ ಬಣ C P M-Extremists (ನಕ್ಸಲೈಟ್ ಉಗ್ರವಾದಿಗಳು) ನ ನಾಯಕ ತರಿಮೆಲ್ಲ ನಾಗಿರೆಡ್ಡಿಯವರು.ಆಗಿನ ಹೆಚ್ಚಿನ ರಾಜಕೀಯ ನಾಯಕರು ತತ್ವನಿಷ್ಠರು,ವಿದ್ಯಾವಂತರಾಗಿದ್ದರು. ಆದರ್ಶವಾದಿ ನಾಯಕ, ಅನಂತಪುರದಿಂದ ಚುನಾಯಿತರಾದ (೧೯೬೮ರಲ್ಲಿ) ಶಾಸಕ ನಾಗಿರೆಡ್ಡಿಯವರಿಗೆ, ಪ್ರಜಾಪ್ರಭುತ್ವದ ಚುನಾಯಿತ ಸರಕಾರದಲ್ಲಿಭ್ರಮೆನಿರಸನವಾಯಿತು. ಅವರು ಸರಕಾರದ  ಶಾಸಕರ ಸಭೆ ಸೇರಿದ್ದಲ್ಲಿ(ಹೈದರಾಬಾದಿನಲ್ಲಿ),ಎದ್ದು ನಿಂತು ಆಗಿನ ಆಡಳಿತ ಪದ್ಧತಿಯನ್ನು ಧಿಕ್ಕರಿಸಿ, &#8221; ನಮ್ಮ ದೇಶಕ್ಕೆ ಕ್ರಾಂತಿಯೊಂದೇ (ಸಾಯುಧ ಪೋರಾಟಮು- Armed  struggle )   ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ,  ಮತಪತ್ರಗಳನ್ನು ತುಪಾಕಿನ ಗುಂಡುಗಳು ಸ್ಥಳಾಂತರಿಸಬೇಕು &#8221; ಎಂದು ಹೇಳಿ ಪದ ತ್ಯಾಗ ಮಾಡಿದರು. ನಂತರ ಅವರು  ಸಾರ್ವಜನಿಕರ ಹಾಗೂ ಪತ್ರಕರ್ತರ ಸಮಕ್ಷಮದಲ್ಲಿ ತಮ್ಮ ಭವಿಷ್ಯದ ಉದ್ದೇಶವನ್ನು ಘೋಷಿಸಿ ,ಕ್ರಾಂತಿಕಾರಿ ಬದುಕಿಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಳ್ಳುವುದಾಗಿ ಹೇಳಿ ಭೂಗತರಾದರು.<br />
ಈ ಉಗ್ರವಾದಿ ನಕ್ಸಲೀಯರು ನಾಗಿರೆಡ್ಡಿಯವರ ಮುಖಂಡತ್ವದಲ್ಲಿ ಗುಪ್ತ ಸಂದೇಶ ರವಾನಿಸುವ ಪದ್ಧತಿಯನ್ನುಆವಿಷ್ಕರಿಸಿಕೊಂಡರು, ನಂತರ ವಿದ್ಯಾವಂತ ನಿರುದ್ಯೋಗಿ  ತರುಣರನ್ನು ಮನವೊಲಿಸಿ  ಗೆರಿಲಾ ಹೋರಾಟಕ್ಕೆ  ಅವರನ್ನು ಸಜ್ಜುಗೊಳಿಸಿದರು. ಕೆಲವೇ ತಿಂಗಳೊಳಗಾಗಿ ರಾಜ್ಯಾದಾದ್ಯಂತ ಆಗಿನ ನವೀನ-ಆಯುಧಗಳೊಂದಿಗೆ ಕೊಲೆ, ದೊಂಬಿಗಳಂತಹ  ಹಿಂಸಾಕೃತ್ಯಗಳಿಂದ ಭಯಾನಕ  ವಾತಾವರಣವನ್ನು ಸೃಷ್ಟಿಸಿದರು. ಅವರು  ಆ ಅಲ್ಪ ಕಾಲದಲ್ಲಿ೨೮ ಮಂದಿ ಭೂಮಾಲಕರ ಕೊಲೆ, ಇನ್ನೆಷ್ಟೋ ಗಂಭೀರ ಅಪರಾಧಗಳಿಂದ  ಮೇಲ್ನೋಟಕ್ಕೆ ಅರಾಜಕತೆ  ಕಾಣುವಂತಹ ಪರಿಸ್ಥಿತಿಯನ್ನುಂಟುಮಾಡಿದರು.ಇದರಿಂದ ಆಗಿನ ಸರಕಾರದ  ಮೇಲೆ  ಅಪರಾಧಗಳನ್ನು ಹತ್ತಿಕ್ಕಲು, ಕಾನೂನನ್ನು ಹೇರುವ ಒತ್ತಡ  ಬಂದಿತು. ಆಗ ಇ.ಎನ್.ಪುರುಷೊತ್ತಮನ್(ಡಿ.ಎಸ್.ಪಿ) ಅವರ ನಾಯಕತ್ವದಲ್ಲಿ  ಪೋಲೀಸ್ ಗುಪ್ತಚರ ದಳದವರು  ಮದ್ರಾಸಿನಲ್ಲಿ ಜರಗಲಿರುವ ನಕ್ಸಲೈಟ್ ಮುಖಂಡರ ಗುಪ್ತಸಭೆಯ  ಮಾಹಿತಿಯನ್ನು ಸಂಗ್ರಹಿಸಿ,  ಅವರ  ಬೆನ್ನುಹತ್ತಿ, ಬಂಧನದ ಪ್ರಯತ್ನಮಾಡಿದರು.<br />
ಮತ್ತು ಅವರ ಪ್ರಯತ್ನವು ಯಶಸ್ವಿಯಾಯಿತು,೧೯೬೯ ರ ಡಿಸೆಂಬರ್ ೧೯ ರಂದು ನಾಗಿರೆಡ್ಡಿಯವರು ಮತ್ತು ಇನ್ನುಳಿದ ೮ ಮಂದಿ  ನಾಯಕರೆಲ್ಲರೂ, ಪ್ರಮುಖ ಪುರಾವೆ, ದಾಖಲೆ ಪತ್ರಗಳೊಂದಿಗೆ ಸಿಕ್ಕಿಬಿದ್ದರು. ಇಂದಿನ ವರೆಗೆ ಆ ರೀತಿಯಲ್ಲಿ ಗುಪ್ತ ಸಭೆಗೆ ಬಂದ ಸದಸ್ಯರೆಲ್ಲರನ್ನು ಬಂಧಿಸಿದ್ದಿಲ್ಲ.ಹಾಗೆ ಬಂಧಿಸಲ್ಪಟ್ಟ ಆಪಾದಿತರನ್ನು ,ಮದ್ರಾಸಿನಿಂದ  ಪೋಲೀಸ್ ವಾಹನದಲ್ಲಿ ಹೈದರಾಬಾದ್ ನಗರಕ್ಕೆ ತರಲಾಯಿತು. ಆ ಸದಸ್ಯರಲ್ಲಿ ಪ್ರಮುಖರಾಗಿದ್ದ ನಾಗಿರೆಡ್ಡಿಯವರನ್ನು ಪ್ರತ್ಯೇಕವಾಗಿ ಕರೆ ತರುವ ಜವಾಬ್ದಾರಿಯನ್ನು ರಾಘವ ರೆಡ್ಡಿಯವರಿಗೆ (ಡಿ.ಎಸ್.ಪಿ. ಸಿ.ಐ.ಡಿ)  ಒಪ್ಪಿಸಲಾಯಿತು, ಅವರನ್ನು ಈ ಬೃಹತ್ ಗಾತ್ರದ ಪ್ರಾಮುಖ್ಯ ಮೊಕದ್ದಮೆಯ ಮುಖ್ಯ ತನಿಖಾಧಿಕಾರಿಯನ್ನಾಗಿ ಮಾಡಲಾಯಿತು,ಮತ್ತು ಅವರ ಸಹಚರರಾಗಿ ಇನ್ನು ಕೆಲವೊಂದು ಅಧಿಕಾರಿಗಳ  ತಂಡವನ್ನು ರಚಿಸಲಾಯಿತು.ಅವರು ನಾಗಿ ರೆಡ್ಡಿಯವರನ್ನುತಮ್ಮ ಕಾರಿನಲ್ಲಿ ಬಿಗಿಯಾದ ರಕ್ಷಣಾವ್ಯವಸ್ಥೆಯೊಂದಿಗೆ ಹೈದರಾಬಾದಿಗೆ  ಕರೆತಂದರು.ಆಗ ಅವರಿಗೆ ನಾಗಿರೆಡ್ಡಿಯವರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಒದಗಿ ಬಂತು.ಆಗ ಕಮ್ಯುನಿಸ್ಟ್ ತತ್ವಗಳನ್ನು ಮತ್ತು ಆದರ್ಶಗಳನ್ನು ಅವರಿಂದಲೇ ತಿಳಿಯುವಂತಾಯಿತು. ಮತ್ತು ಅವರ ಈ ಸಂಭಾಷಣೆ ಮುಂದೆ ಈ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಅದರ ಬೆಳವಣಿಗೆಯನ್ನು ಅರ್ಥೈಸಿಕೊಳ್ಳಲು ಸಹಾಯವಾಯಿತು.</p>
<p><img class="alignnone" src="http://lh4.ggpht.com/_bEdWeUlAeV4/S0RKW274VuI/AAAAAAAACBw/3ZhW_zxG_Kw/scan0005.jpg" alt="" width="379" height="640" /></p>
<p>ಒಂದು ಹಂತದಲ್ಲಿ ನಾಗಿ ರೆಡ್ಡಿಯವರ ವಿಚಾರಧಾರೆ ರಾಘವ ರೆಡ್ಡಿಯವರನ್ನು ಬಹಳ ಪ್ರಭಾವಿತರನ್ನಾಗಿಸಿತು,ಆದರೆ ಅವರೆಂದೂ ಹಿಂಸಾಚಾರದ ಹಾದಿಯನ್ನು ಒಪ್ಪಲಿಲ್ಲ. ನಾಗಿ ರೆಡ್ಡಿಯವರು  &#8220;ಒಂದು ಉತ್ತಮ ಸಮಾಜದಲ್ಲಿ ವಸ್ತುವಿನ ( ಅಹಾರ ಅಥವಾ ಇತರ ಸಾಮಾನು) ಉತ್ಪತ್ತಿ ಯಾನೆ ತಯಾರಿ ಸಮಾಜೀಕೃತವಾಗಿರುತ್ತದೆ, ಮತ್ತು ಅದರ  ವಿತರಣೆ ರಾಷ್ಟ್ರೀಕೃತವಾಗಿರುತ್ತದೆ.&#8221; ಎಂದು ಹೇಳಿದರು ಮತ್ತು ನಂಬಿದರು, ಅವರು ಈ ತತ್ವಗಳ ಸಾಧನೆಗೆ ತಮ್ಮ ಜೀವನಪರ‍್ಯಂತ (೧೯೧೭-೧೯೭೬)  ತಮ್ಮದೆಲ್ಲವನ್ನೂ ತ್ಯಾಗಮಾಡಿದರು, ಕೊನೆಗಾಲದಲ್ಲಿ ಅನಾಮಧೇಯರಾಗಿ ಸಾವನ್ನಪ್ಪಿದರು.<br />
ಈ ಕಮ್ಯುನಿಸ್ಟ್  ಸಂಚಿನ ಮೊಕದ್ದಮೆಯಲ್ಲಿ ೬೭ ಮಂದಿ ಮೇಲಿನ ಹಂತದ ನಕ್ಸಲೈಟ್ ಸದಸ್ಯರನ್ನು ,ಆಂಧ್ರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಹರಡಿದ್ದ ೫೫೦ ಮಂದಿ ಸಾಕ್ಷಿಗಳನ್ನು ಪರೀಕ್ಷಿಸಬೇಕಿತ್ತು,ಅದಲ್ಲದೇ ನಡೆದ ೨೮ ಕೊಲೆ,೧೫೦ ದರೋಡೆ ಕಳ್ಳತನಗಳ,ಕಾನೂನು  ಬಾಹಿರವಾಗಿ ಸಂಗ್ರಹಿಸಲ್ಪಟ್ಟ ಆಯುಧಗಳು ಇತ್ಯಾದಿ  ಪ್ರಕರಣಗಳ ಪ್ರತ್ಯಕ್ಷ ಸಾಕ್ಷಿ ಹಾಗೂ ಸಂಗ್ರಹಿಸಿದ ೭೭೭ ದಾಖಲೆ ಪತ್ರಗಳು  ಎಲ್ಲವೂ ತನಿಖಾಧಿಕಾರಿಯಾದ ರಾಘವ ರೆಡ್ಡಿಯವರ ಕೆಲಸವನ್ನು ಹಿರಿದಾಗಿಸಿತ್ತು.ಅದರಲ್ಲಿ ಅತ್ಯಂತ ಕ್ಲಿಷ್ಟವಾದುದು ಆ ಎಲ್ಲಾ ನೂರಾರು ಅಪರಾಧಗಳನ್ನು,ಅಪರಾಧಿಗಳನ್ನು ಒಂದಕ್ಕೊಂದು ಜೋಡಿಸುವುದು ,ಮತ್ತು ಜೀವಕ್ಕೇ ಸಂಚಕಾರವಿರುವ  ಸಾಕ್ಷಿಗಳನ್ನು,ಜೀವಭಯವಿರುವಂತಹ ಕಾಡುಮೇಡುಗಳಿಂದ ಕರೆತಂದು, ಸಂದರ್ಭಕ್ಕೆ ಸರಿಯಾಗಿ ಹೊಂದಿಸಿಕೊಳ್ಳುವುದು ಇತ್ಯಾದಿ.ಈ ಎಲ್ಲಾ ಕೆಲಸವನ್ನು ರಾಘವ ರೆಡ್ಡಿಯವರೂ ಅವರ ತಂಡದವರು ಕಾನೂನಿನ ಚೌಕಟ್ಟಿನೊಳಗೆ ಅವರಿಗಿದ್ದ ಸಮಯಾವಧಿಯಲ್ಲಿ ಸಾಧಿಸಿದರು.<br />
ರಾಘವ ರೆಡ್ಡಿಯವರು ತನಿಖಾಧಿಕಾರಿಯಾಗಿ  ಮೊಕದ್ದಮೆಯನ್ನು ಬರಹದಲ್ಲಿದಾಖಲಿಸಬೇಕಾಗಿತ್ತು.ಅವರ &#8220;ಕೇಸ್ ಡೈರಿ&#8221; ೧೨೦೦ ಪುಟಗಳ ಟೈಪ್ ಮಾಡಿದ ದಾಖಲೆಪತ್ರವಾಗಿತ್ತು,ಅವುಗಳನ್ನು ನಿರಂತರವಾಗಿ ಬದಲಾಯಿಸುತ್ತಾ, ದೂಷಿತರಾಗಿದ್ದ ೬೭ ಮಂದಿ ನಕ್ಸಲೈಟ್ ವಿವಿಧ ಅಪರಾಧಿಗಳ ಹಿನ್ನೆಲೆಗೆ   ಹೊಂದುವಂತೆ ಬರೆಯಬೇಕಾಗುತ್ತಿತ್ತು. ಮುಂದುವರಿದಂತೆ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಪತ್ರಗಳು ಒಬ್ಬೊಬ್ಬ ಅಪರಾಧಿಗೆ ೯೦೦೦ ಪುಟಗಳಾದವು,ಅಂತಹ  ೬೭ ಮಂದಿ ಅಪರಾಧಿಗಳ ಕಾಗದಪತ್ರಗಳು  ಒಟ್ಟಾಗಿ ೭,೦೦,೦೦೦ ಮುದ್ರಿತ ಕಾಗದಗಳಾದವು. ಆಪಾದಿತರು  ತಮಗೆ ಒದಗಿ ಬಂದ ಸಣ್ಣ ಕಾರಣಗಳಿಗೂ ಮೊಕದ್ದಮೆಗೆ ತಡೆ ತರಲು ಪ್ರಯತ್ನಿಸುತ್ತಿದ್ದರು,ಹಾಗಾಗಿ  ತನಿಖಾಧಿಕಾರಿಯಾಗಿ  ರಾಘವ ರೆಡ್ಡಿಯವರು  ಮತ್ತು ತಂಡದವರು ಹಗಲು ರಾತ್ರಿ ಅವಿಶ್ರಾಂತರಾಗಿ ದುಡಿಯಬೇಕಾಗಿತ್ತು,  ಆಗ ಆ ಕಾಗದ ಪತ್ರಗಳ ಸುರಕ್ಷತೆಗಾಗಿ ರೆಡ್ಡಿಯವರೂ ಅವರ ಕೆಲವು ಅಧಿಕಾರಿಗಳು ಮುದ್ರಣಾಲಯದಲ್ಲೇ  ರಾತ್ರಿಯಲ್ಲಿ ಮಲಗುತ್ತಿದ್ದರು.ಅವಷ್ಟನ್ನೂ ನಿಗಧಿತ ೯೦ ದಿನಗಳೊಳಗಾಗಿ ಒದಗಿಸಿದರು.  ಆ ಸಂದರ್ಭದಲ್ಲಿ ಜಲಗಂ ವೆಂಗಲ ರಾವ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದರು,ಸರಕಾರವು ಈ ಕಾಗದ ಪತ್ರಗಳ ಮುದ್ರಣಕ್ಕೆ ಪೋಲೀಸ್ ಇಲಾಖೆಗೆ ಬೇಕಿದ್ದ ೨೦೦ ಮಿಕ್ಕಿದ  typists ಗಳನ್ನು ಬೇರೆ  ಇಲಾಖೆಗಳಿಂದ ತತ್ಕಾಲಿಕವಾಗಿ ಒದಗಿಸಿತು.  ಆ ದಾಖಲೆ ಪತ್ರಗಳನ್ನು ಪೊಲೀಸ್ ಲಾರಿಗಳಲ್ಲಿ,ಹಿಂದಿನಿಂದ ನಕ್ಸಲೈಟ್ ಅಪಾದಿತರನ್ನು ಕೃಷ್ಣವರ್ಣದ  ಮರಿಯದಲ್ಲಿ(black Maria)  ನ್ಯಾಯಾಲಯಕ್ಕೆ ಕರೆತರಲಾಗುತ್ತಿತ್ತು.<br />
ಆಗಿನ ಮುಖ್ಯಮಂತ್ರಿಯಾಗಿದ್ದ ಜಲಗಂ ವೆಂಗಲ್ ರಾವ್ ಬಹಳ ಬುದ್ಧಿವಂತ ನಾಯಕರಾಗಿದ್ದರು,ಅವರು ಜನರನ್ನು, ಸನ್ನಿವೇಶಗಳನ್ನು  ತುಂಬಾ ಚೆನ್ನಾಗಿ  ಅರ್ಥೈಸುತ್ತಿದ್ದರು. ನಂತರದ ದಿನಗಳಲ್ಲಿ, ಅವರು ಈ ನಕ್ಸಲೈಟ್ ಬೆಳವಣಿಗೆಗೆ ಹಳ್ಳಿಗಳ, ಹಿಂದುಳಿದ  ಜನಾಂಗಗಳ ಬೆಳವಣಿಗೆಯಲ್ಲಾದ  ವಿಳಂಬವೇ ಕಾರಣ ಎಂದು, ಶ್ರೀಕಾಕುಲಮ್ ಜಿಲ್ಲೆಯ ಮೂಲನಿವಾಸಿಗಳಾದ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಹಲವಾರು  ಕಾರ್ಯಕ್ರಮಗಳನ್ನು ಕೈಗೊಂಡರು.<br />
ನ್ಯಾಯಾಲಯದಲ್ಲಿ ಆಪಾದಿತ ನಕ್ಸಲೈಟ್ ನಾಯಕರು  ತಮಗೆ ಪ್ರಜಾಪ್ರಭುತ್ವದ ಸರಕಾರ ಪದ್ಧತಿಯಲ್ಲಿ ನಂಬಿಕೆಯಿಲ್ಲ ಎಂದು ಎಲ್ಲರ ಸಮಕ್ಷಮದಲ್ಲಿ ಘೋಷಿಸಿ ಹೇಳುತ್ತಿದ್ದರು. ಆ ಸಂದರ್ಭದಲ್ಲಿ ನ್ಯಾಯಾಲಯದ ಆವರಣದೊಳಗೆ ಉಂಟಾಗುತ್ತಿದ್ದ ಉದ್ರೇಕಕಾರಿ ಸನ್ನಿವೇಷಗಳನ್ನು ಹತ್ತಿಕ್ಕುವುದು, ರಕ್ಷಣಾ ಮುನ್ನೆಚ್ಚರಿಕೆಗಳನ್ನು ವಹಿಸುವುದು ರಾಘವ ರೆಡ್ಡಿಯವರ ಜವಾಬ್ದಾರಿಯಾಗಿತ್ತು.ದೇಶದಾದ್ಯಂತ  ಹರಡಿದ್ದ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಸಾಕ್ಷಿಹೇಳಿಕೆಗಾಗಿ ರಕ್ಷಣಾವ್ಯವಸ್ಥೆಯೊಂದಿಗೆ ಕರೆತಂದಾಗ,  ಆ ಸಂದರ್ಭದಲ್ಲಿ ನೆರೆದಿದ್ದ ನಕ್ಸಲೈಟ್  ಸದಸ್ಯರು ಅವರನ್ನು ಅವಮಾನಿಸುವುದು, ತೆಗಳುವುದು  ಹಾಗೂ ಕ್ರಾಂತಿಕಾರಿ ಹಾಡುಗಳೊಂದಿಗೆ   ಭಯಭೀತರನ್ನಾಗಿಸುವುದು ಇತ್ಯಾದಿ  ಮಾಡುತ್ತಿದ್ದರು.ಆದರೆ ಆ  ಎಲ್ಲಾ ಸಂದರ್ಭದಲ್ಲಿ ರಾಘವ ರೆಡ್ಡಿಯವರು ತೋರಿದ ತಾಳ್ಮೆ, ಸಹನೆ ಹಾಗೂ ನಿರಂತರ ಪರಿಶ್ರಮ ಆ ಕ್ರಾಂತಿಕಾರಿ ಮಂದಿಗಳಲ್ಲೂ ಅವರ ಆ ನಡವಳಿಕೆಯ ಬಗ್ಗೆ ವ್ಯತಿರಿಕ್ತ ಭಾವನೆಗಳನ್ನು ತರಿಸಿತು.<br />
ಈ ಮೊಕದ್ದಮೆ ಆಂಧ್ರಪ್ರದೇಶದ  ಪೋಲೀಸ್ ಇಲಾಖೆಯ ಇತಿಹಾಸದಲ್ಲೇ ಯಶಸ್ವೀಯಾಗಿ ಬಗೆಹರಿದ  ಹಾಗೂ ಮುಂಬರುವ ಪೋಲೀಸ್ ಅಧಿಕಾರಿಗಳಿಗೆ ನಿರಂತರ ಸ್ಫೂರ್ತಿ ನೀಡುವ  ಮೊಕದ್ದಮೆ  ಎಂದು ಶ್ರೀ ವಿ.ಕೆ.ರಾವ್( ICS-Chief Secretary to Govt of AP) ಹೇಳಿದ್ದಾರೆ.ಒಟ್ಟಿನಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಮಂದಿ ೩೨೪, ಕೊನೆಯ ಸಾಕ್ಷಿ ಸ್ವತಃ ರಾಘವ ರೆಡ್ಡಿಯವರು. ಮೊಕದ್ದಮೆಯ ಮುಕ್ತಾಯದ ಹಂತದಲ್ಲಿ ಆಪಾದಿತರ ನಾಯಕ ನಾಗಿ ರೆಡ್ಡಿಯವರೇ ಸ್ವತಃ, ಇದು ಅತ್ಯಂತ ನ್ಯಾಯಯುತವಾಗಿ ಬಗೆಹರಿದ ದಾವೆ, ಎಂದು ತನಿಖಾಧಿಕಾರಿಯಾದ ರಾಘವ ರೆಡ್ಡಿಯವರನ್ನು ಮುಕ್ತವಾಗಿ  ಪ್ರಶಂಸಿಸಿದ್ದಾರೆ,  ಮತ್ತು ಕೊನೆಯಲ್ಲಿ ಯಾವುದೇ ದ್ವೇಷ-ಮನೋಭಾವನೆಯಿಲ್ಲದೇ  ಪೋಲೀಸರೂ, ಅಪರಾಧಿಗಳೂ ಬೀಳ್ಕೊಂಡಿದ್ದಾರೆ. ಪ್ರಾಯಶಃ ಪೋಲೀಸರಿಗೆ ಇದಕ್ಕಿಂತ ದೊಡ್ಡ ಬಹುಮಾನ ಇನ್ನೊಂದಿಲ್ಲ. ನಾಗಿ ರೆಡ್ಡಿಯವರು ಮತ್ತು ಇನ್ನಿತರ ೨೨ ಮಂದಿ ಅಪರಾಧಿಗಳಿಗೆ  ಪ್ರತ್ಯೇಕವಾಗಿ ರಚಿಸಲ್ಪಟ್ಟ ಸೆಷನ್ಸ್ ಕೋರ್ಟ್, ೪ ವರ್ಷಗಳ  ತೀವ್ರಜೈಲು ಶಿಕ್ಷೆಯನ್ನು  ವಿಧಿಸಿತು. ಆದರೆ  ನಾಗಿ ರೆಡ್ಡಿಯವರು ಜಾಮೀನಿನಿಂದ ತಲೆ  ತಪ್ಪಿಸಿಕೊಂಡು  ಭೂಗತರಾಗಿ,  ಕೊನೆಗಾಲದ  ವರೆಗೂ ಧ್ಯೇಯ  ಸಾಧನೆಯಲ್ಲಿ ನಿರತರಾಗಿದ್ದರು  ಮತ್ತು ಕೊನೆಯಲ್ಲಿ ಸಹಜವಾಗಿ  ೧೯೭೬ ರಲ್ಲಿ ಸಾವನ್ನಪ್ಪಿದರು, ಉಳಿದ ಶಿಕ್ಷೆಗೊಳಗಾದವರು ತಮ್ಮ ಶಿಕ್ಷಾವಧಿಯನ್ನು ಪೂರೈಸಿ ಹೊರಬಂದರು.<br />
ರಾಘವ ರೆಡ್ಡಿಯವರೇ ಹೇಳಿದಂತೆ ಈ ತೆರನಾದ ಸಂಚಿನ ತನಿಖೆಯು ಅತ್ಯಂತ ಕ್ಲಿಷ್ಟವಾದುದು, ಇದು ನಮ್ಮ ದೇಶದ ಇತಿಹಾಸದಲ್ಲೇ ಸಾಟಿಯಿಲ್ಲದ, ಯಶಸ್ವಿಯಾಗಿ ಬಗೆಹರಿದ ಸಂಚಿನ ಮೊಕದ್ದಮೆಯಾಗಿದೆ. ಇದರನ್ನು ಎದುರಿಸುವ ಅಧಿಕಾರಿಗೆ  ಈ ಕೆಳಗಿನ ಗುಣಗಳಿರಬೇಕು.<br />
೧.ಅಂತರ್ ದೃಷ್ಟಿ                   (Perception)<br />
೨.ಸಹನೆ                              (Patience)<br />
೩.ಸಿದ್ಧತೆ                              (Preparation)<br />
೪.ಪೂರ್ವ ಸಿದ್ಧತೆ,ಯೋಜನೆ    (Planning)<br />
೫.ಮನವೊಲಿಸುವಿಕೆ              (Persuasiveness)<br />
೬.ನಿರಂತರ ಪರಿಶ್ರಮ           (Perseverance)<br />
೭.ನಿರೂಪಣೆ                         (Presentation)<br />
ಈ ಮೊಕದ್ದಮೆ ನಡೆಸಿಕೊಟ್ಟ  ಕೆ. ಜಯಚಂದ್ರ ರೆಡ್ಡಿ(Chief Public Prosecutor) ಯವರು ಇಂತಹ ಕ್ಲಿಷ್ಟವಾದ ದಾವೆಯಿಂದಾಗಿ ಬಹಳ ಪ್ರಶಂಸಿಸಲ್ಪಟ್ಟರು  ಮತ್ತು ಆಂಧ್ರ ಪ್ರದೇಶದ ಉಚ್ಚನ್ಯಾಯಾಧೀಶರಾಗಿ ,ತರುವಾತ ಭಾರತ ದೇಶದ (supreme court) ನ್ಯಾಯಾಧೀಶರಾಗಿ ಭಡ್ತಿ ಹೊಂದಿದರು.<br />
ಇ.ಎನ್.ಪುರುಷೊತ್ತಮನ್(ಡಿ.ಎಸ್.ಪಿ,ನಿವೃತ್ತ ಅಧಿಕಾರಿ)  ರಾಘವ ರೆಡ್ಡಿಯವರ ಕಾರ್ಯವೈಖರಿಯನ್ನು ತಮ್ಮ ಬರಹದಲ್ಲಿ ಈ ರೀತಿಯಾಗಿ ಹೇಳಿದ್ದಾರೆ.ರಾಘವ ರೆಡ್ಡಿಯವರು ಸರಳ ಸ್ವಭಾವದ ನಿಗರ್ವೀ ವ್ಯಕ್ತಿ, ಪೋಲೀಸ್ ಅಧಿಕಾರಿಯಾಗಿ  ಅವರಿಗೆ ಅದುವೇ ಆಯುಧವಾಗಿತ್ತು.ಬಹಳ ಗಡಸಾಗಿ ತರಬೇತಾದ ,ಕಠೋರ  ಅನುಭವಗಳನ್ನು ಹೊಂದಿದ ನಕ್ಸಲೈಟ್ ಬಂಧಿತರನ್ನು ವಿಚಾರಣೆ  ಮಾಡುವುದು ದುಸ್ಸಾಧ್ಯವಾದ ಕೆಲಸ. ಆದರೆ ಆ ಬಂಧಿತರು ರಾಘವ ರೆಡ್ಡಿಯವರಂತಹ ಮೃದು ಹೃದಯಿ ಮತ್ತು ದಯಾರ್ದ್ರ  ಸ್ವಭಾವದ  ವ್ಯಕ್ತಿಯನ್ನು ನಿರೀಕ್ಷಿಸಿರಲಿಕ್ಕಿಲ್ಲ,ಇವರ ಪ್ರೋತ್ಸಾಹನೀಯ ಹೊಗಳಿಕೆಗಳನ್ನು ಅವರು ಎದುರಿಸಲು ತಿಳಿಯದೇ, ತಮ್ಮ ತಪ್ಪೊಪ್ಪುವಂತಾಯಿತು ಮತ್ತು ಅಪರಾಧಗಳಲ್ಲಿ ತಾವು ವಹಿಸಿದ ಪಾತ್ರಗಳನ್ನು ತಿಳಿಸುವಂತಾಯಿತು. ಈ ಮೊಕದ್ದಮೆ ಇದರ ಗಾತ್ರ ಹಾಗೂ ಸ್ನೇಹಮಯ ಮತ್ತು ದಯಾಭರಿತ ವಿಚಾರಣಾ ವಿಧಾನದಿಂದ ಸ್ಮಾರಕಪ್ರಾಯವಾಗಿದೆ. ಇದರ ಪೂರ್ತಿ ಹೆಗ್ಗಳಿಕೆ ರಾಘವ ರೆಡ್ಡಿಯವರಿಗೆ ಸಲ್ಲುತ್ತದೆ.<br />
ಇವರ ಈ ಕೆಲಸವನ್ನು ಗುರುತಿಸಿ,  ಅವರ ಕಾರ್ಯದಕ್ಷತೆಗಾಗಿ, ರಾಜ್ಯದಲ್ಲಿ ಹೆಚ್ಚುತ್ತಿದ್ದ ಅಪರಾಧಗಳ  ಶೋಧನೆಗಾಗಿ  ಅವರನ್ನು ಆ ಇಲಾಖೆಯ  ಸೇವೆಗೆ ನೇಮಕ ಮಾಡಲಾಯಿತು, ಅವರಿಗೆ  ಉನ್ನತ ಮಟ್ಟದ ಕೆಲಸಕ್ಕೊಸ್ಕರ ೧೯೭೩ ರಲ್ಲಿ ರಾಜ್ಯ ಸರಕಾರದ  ಪೋಲೀಸ್ ಮೆಡಲ್ ಅನ್ನು ಕೊಟ್ಟು ಗೌರವಿಸಲಾಯಿತು.ನಾಗಿ ರೆಡ್ಡಿ ಸಂಚಿನ ಮೊಕದ್ದಮೆಯ ಯಶಸ್ಸನ್ನು ಕಂಡು ಆ ನಂತರದ  ಚಾರು ಮುಝಂದಾರ್, ಕನು ಸನ್ಯಾಲ್ ಅಂತಹ  ನಾಯಕರಿದ್ದ ಕಮ್ಯುನಿಸ್ಟ್ ಮೊಕದ್ದಮೆಗಳನ್ನು ರಾಘವ ರೆಡ್ಡಿಯವರಿಗೆ ಒಪ್ಪಿಸಲಾಯಿತು. ಅವುಗಳು ಪಾರ್ವತಿಪುರಮ್ ಸಂಚು,ಕ್ರಾಂತಿಕಾರೀ ಬರಹಗಾರರ ಸಂಚಿನ ಮೊಕದ್ದಮೆಗಳು,  ಆದರೆ ಅವ್ಯಾವುದೂ  ಮೊದಲಲ್ಲಿ ಹೇಳಿದ ನಾಗಿ ರೆಡ್ಡಿ ಸಂಚಿನಂತೆ ಬಗೆಹರಿಯಲಿಲ್ಲ ಮತ್ತು ಅಪರಾಧಿಗಳಿಗೆ  ಸುಪ್ರಿಂ ಕೋರ್ಟ್ ಮಟ್ಟದಲ್ಲಿ ಶಿಕ್ಷೆಯಾಗಲಿಲ್ಲ. ರಾಘವ ರೆಡ್ಡಿಯವರಿಗೆ  ದೇಶದಲ್ಲೇ ಅವರ ಕೆಲಸಕ್ಕೆ ಮನ್ನಣೆ ದೊರೆಯಿತು ಮತ್ತು ೧೯೮೨ ರಲ್ಲಿ ರಾಷ್ಟ್ರಪತಿಯವರ ಪೋಲೀಸ್ ಮೆಡಲ್ ಅನ್ನು ಕೊಟ್ಟು ಗೌರವಿಸಲಾಯಿತು.ಅವರು ತಮ್ಮ ಕೆಲಸದಲ್ಲಿ ತೋರಿದ ಸಾಹಸ, ಧೈರ್ಯ  ಮತ್ತು ಶ್ರದ್ಧೆ  ನ್ಯಾಯನಿಷ್ಠೆಗಳಿಂದ  ತಮ್ಮ ಎಲ್ಲಾ ಸಹೋದ್ಯೋಗಿಗಳ ಮತ್ತು ಮೇಲಿನ ಅಧಿಕಾರಿಗಳ  ಗೌರವ, ಪ್ರೀತಿಗಳನ್ನು ಗಳಿಸಿದ್ದಾರೆ. ಅವರು ಮುಂಬರುವ ಯುವ ಅಧಿಕಾರಿಗಳಿಗೆ ಸ್ಫೂರ್ತಿದಾಯಕರಾಗಿದ್ದಾರೆ.</p>
<p>ರಾಘವ ರೆಡ್ಡಿಯವರು ಕಮ್ಯುನಿಸ್ಟ್ ತತ್ವಗಳು ಎಂದಿಗೂ ಫಲಕಾರಿಯಾಗದು,ಹಿಂಸಾಮಾರ್ಗವು  ಎಂದಿಗೂ ಶಾಂತಿಯುತ ಬದುಕನ್ನು ಕೊಡಲಾರದು ಎನ್ನುತ್ತಾರೆ, ಅವರು ನಿಷ್ಠಾವಂತ ಗಾಂಧಿವಾದಿ.<br />
ವಿ.ಸೂ.-  ನನ್ನ ಮೊದಲಿನ (ಪ್ರಥಮ)  ಕನ್ನಡ ಬ್ಲಾಗ್ ಶ್ರೀ ರಾಘವ ರೆಡ್ಡಿಯವರ ಜೀವನ ಚರಿತ್ರೆಯನ್ನು ಹೇಳುತ್ತದೆ.ಈ ಬರಹವೂ ಅವರ ಆತ್ಮ ಕಥನವಾದ &#8220;  As I Look Back&#8221;   ಅನ್ನು   ಆಧರಿಸಿ ಬರೆದುದು.</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/25/"><img alt="" border="0" src="http://feeds.wordpress.com/1.0/comments/shailajasbhat.wordpress.com/25/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/25/"><img alt="" border="0" src="http://feeds.wordpress.com/1.0/delicious/shailajasbhat.wordpress.com/25/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/25/"><img alt="" border="0" src="http://feeds.wordpress.com/1.0/facebook/shailajasbhat.wordpress.com/25/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/25/"><img alt="" border="0" src="http://feeds.wordpress.com/1.0/twitter/shailajasbhat.wordpress.com/25/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/25/"><img alt="" border="0" src="http://feeds.wordpress.com/1.0/stumble/shailajasbhat.wordpress.com/25/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/25/"><img alt="" border="0" src="http://feeds.wordpress.com/1.0/digg/shailajasbhat.wordpress.com/25/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/25/"><img alt="" border="0" src="http://feeds.wordpress.com/1.0/reddit/shailajasbhat.wordpress.com/25/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=25&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2010/01/06/%e0%b3%a8%e0%b3%a6%e0%b2%a8%e0%b3%87-%e0%b2%b6%e0%b2%a4%e0%b2%ae%e0%b2%be%e0%b2%a8%e0%b2%a6-%e0%b2%b0%e0%b3%8b%e0%b2%ae%e0%b2%be%e0%b2%82%e0%b2%9a%e0%b2%95%e0%b2%be%e0%b2%b0%e0%b2%bf-%e0%b2%95/feed/</wfw:commentRss>
		<slash:comments>4</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://lh6.ggpht.com/_bEdWeUlAeV4/S0RKKE3dz1I/AAAAAAAACBs/fuZ3z4Bn9UM/scan0004.jpg" medium="image" />

		<media:content url="http://lh4.ggpht.com/_bEdWeUlAeV4/S0RKW274VuI/AAAAAAAACBw/3ZhW_zxG_Kw/scan0005.jpg" medium="image" />
	</item>
		<item>
		<title>ವೀಣಾ ವಿದ್ವಾಂಸ ಬಾಲಚಂದರ್</title>
		<link>http://shailajasbhat.wordpress.com/2009/11/26/%e0%b2%b5%e0%b3%80%e0%b2%a3%e0%b2%be-%e0%b2%b5%e0%b2%bf%e0%b2%a6%e0%b3%8d%e0%b2%b5%e0%b2%be%e0%b2%82%e0%b2%b8-%e0%b2%ac%e0%b2%be%e0%b2%b2%e0%b2%9a%e0%b2%82%e0%b2%a6%e0%b2%b0%e0%b3%8d/</link>
		<comments>http://shailajasbhat.wordpress.com/2009/11/26/%e0%b2%b5%e0%b3%80%e0%b2%a3%e0%b2%be-%e0%b2%b5%e0%b2%bf%e0%b2%a6%e0%b3%8d%e0%b2%b5%e0%b2%be%e0%b2%82%e0%b2%b8-%e0%b2%ac%e0%b2%be%e0%b2%b2%e0%b2%9a%e0%b2%82%e0%b2%a6%e0%b2%b0%e0%b3%8d/#comments</comments>
		<pubDate>Thu, 26 Nov 2009 10:42:00 +0000</pubDate>
		<dc:creator>my pen from shrishaila</dc:creator>
				<category><![CDATA[1]]></category>
		<category><![CDATA[ಅಂಧಾನಾಲ್;ಸರಸ್ವತಿ ವೀಣೆ;ಪದ್ಮಭೂಷಣ ಪ್ರಶಸ್ತಿ]]></category>
		<category><![CDATA[ವೀಣಾ ಬಾಲಚಂದರ್;ತಮಿಳು ಚಿತ್ರರಂಗ;ಬಾಲಚಂದರ್ ಬನಿ]]></category>

		<guid isPermaLink="false">http://shailajasbhat.wordpress.com/?p=20</guid>
		<description><![CDATA[ಕರ್ಣಾಟಕ  ಸಂಗೀತದ  ಅಭಿರುಚಿಯಿರುವ ಯಾರಿಗೂ ಬಾಲಚಂದರ್ ಅವರ ಪರಿಚಯವನ್ನು ಹೇಳುವ ಅಗತ್ಯವಿಲ್ಲ.ಅವರು ಬಾಲಪ್ರತಿಭೆಯೆಂದು ಲೋಕಕ್ಕೆ ಪರಿಚಿತರಾಗಿ, ಕಳೆದ ಶತಮಾನದ ನಲ್ವತ್ತರ  ಮತ್ತು  ಐವತ್ತರ  ದಶಕದಲ್ಲಿ  ತಮಿಳು ಚಿತ್ರರಂಗದಲ್ಲಿ ನಾಯಕ ನಟನಾಗಿ, ಸಂಗೀತ, ನಿರ್ದೇಶನ, ಹಿನ್ನೆಲೆ ಗಾಯಕನಾಗಿ, ನಂತರದ ವರುಷಗಳಲ್ಲಿ  ಕರ್ಣಾಟಕ ಸಂಗೀತದ ಗಣ್ಯ  ಕಲಾಕಾರನಾಗಿ ಮಿಂಚಿದವರು. ಬಾಲಚಂದರ್ ಮದ್ರಾಸಿನ (ಈಗಿನ ಚೆನ್ನೈ) ಪ್ರಮುಖ ವಕೀಲರಾದ ಸುಂದರಂ  ಅಯ್ಯರ್ ಅವರ ಎರಡನೆಯ ಮಗ (ಮಕ್ಕಳಲ್ಲಿ  ಕಿರಿಯವನು). ೧೯೨೭ ಜನವರಿ ೧೮ ಅವರ ಜನ್ಮದಿನ,   ಇವರು  ತಮ್ಮ ೬೩ನೇ ವಯಸ್ಸಿನಲ್ಲಿ [...]<img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=20&amp;subd=shailajasbhat&amp;ref=&amp;feed=1" width="1" height="1" />]]></description>
			<content:encoded><![CDATA[<p>ಕರ್ಣಾಟಕ  ಸಂಗೀತದ  ಅಭಿರುಚಿಯಿರುವ ಯಾರಿಗೂ ಬಾಲಚಂದರ್ ಅವರ ಪರಿಚಯವನ್ನು ಹೇಳುವ ಅಗತ್ಯವಿಲ್ಲ.ಅವರು ಬಾಲಪ್ರತಿಭೆಯೆಂದು ಲೋಕಕ್ಕೆ ಪರಿಚಿತರಾಗಿ, ಕಳೆದ ಶತಮಾನದ ನಲ್ವತ್ತರ  ಮತ್ತು  ಐವತ್ತರ  ದಶಕದಲ್ಲಿ  ತಮಿಳು ಚಿತ್ರರಂಗದಲ್ಲಿ ನಾಯಕ ನಟನಾಗಿ, ಸಂಗೀತ, ನಿರ್ದೇಶನ, ಹಿನ್ನೆಲೆ ಗಾಯಕನಾಗಿ, ನಂತರದ ವರುಷಗಳಲ್ಲಿ  ಕರ್ಣಾಟಕ ಸಂಗೀತದ ಗಣ್ಯ  ಕಲಾಕಾರನಾಗಿ ಮಿಂಚಿದವರು.<br />
ಬಾಲಚಂದರ್ ಮದ್ರಾಸಿನ (ಈಗಿನ ಚೆನ್ನೈ) ಪ್ರಮುಖ ವಕೀಲರಾದ ಸುಂದರಂ  ಅಯ್ಯರ್ ಅವರ ಎರಡನೆಯ ಮಗ (ಮಕ್ಕಳಲ್ಲಿ  ಕಿರಿಯವನು). ೧೯೨೭ ಜನವರಿ ೧೮ ಅವರ ಜನ್ಮದಿನ,   ಇವರು  ತಮ್ಮ ೬೩ನೇ ವಯಸ್ಸಿನಲ್ಲಿ ತೀರಿಕೊಂಡರು.ಸುಂದರಮ್ ಅಯ್ಯರ್ರವರ  ಮನೆಯೆಂದರೆ  ಸಂಗೀತದ ದಿಗ್ಗಜರೆನಿಸಿದ  ಅರಿಯಾಕುಡಿ ರಾಮಾನುಜ ಅಯ್ಯಂಗಾರ್,ಮುತ್ತಯ್ಯ ಭಾಗವತರ್, ಮಧುರೆ ಮಣಿ ಅಯ್ಯರ್ ಮುಂತಾದ ಮಂದಿಗಳು ಬಂದು ಹಾಡಿ ,ಉಂಡು, ಪುರಸ್ಕೄತರಾಗಿ ಹೋಗುವ ತಾಣವಾಗಿತ್ತು. ಮನೆಯ ಈ ವಾತಾವರಣದಿಂದಾಗಿ ಹಿರಿಯ  ಮಗ ರಾಜಂ ಮತ್ತು ಎರಡನೆಯವನಾದ ಬಾಲಚಂದರ್ ಅವರ ಸುಪ್ತಪ್ರತಿಭೆ ಸಕಾಲದಲ್ಲಿ ಬೆಳಕಿಗೆ ಬಂದು, ಅವರು ಹಿರಿಯ ಕಲಾವಿದರಾಗಲು  ಅನುವು ಮಾಡಿಕೊಟ್ಟಿತು.<br />
ಬಾಲಚಂದರ್ ತೀರ ಎಳೆ ವಯಸ್ಸಿನಲ್ಲೇ ಬಾಲಪ್ರತಿಭೆ ಎಂದು ಗುರುತಿಸಲ್ಪಟ್ಟರು.ಅವರು ಚಿತ್ರಕಲೆಯಲ್ಲಿ, ಸಂಗೀತದಲ್ಲಿ, ನಟನೆಯಲ್ಲಿ ಹೀಗೆ ಬಹಳಷ್ಟು  ಕಲೆಗಳಲ್ಲಿ  ನೈಪುಣ್ಯತೆ ತೋರಿದರು.ಲೋಕಪದ್ಧತಿಯಂತೆ ಅವರು ಶಾಲೆಗೆ ಹೋದರೂ  ೧೦ನೇ ತರಗತಿಯ ನಂತರ ಶಾಲಾವಿದ್ಯಾಭ್ಯಾಸವನ್ನು ನಿಲ್ಲಿಸಿ, ಕಲೆಯ ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತಾ ಪರಿಣತರಾದರು. ಅವರಿಗೆ ಹಾಡುಗಾರನಿಗೆ  ಬೇಕಾದ ಶಾರೀರವಿರಲಿಲ್ಲ ಎಂಬುದು ಅವರ ಅಣ್ಣ ರಾಜಂ ಹಾಗು ಇನ್ನೂ ಕೆಲವರ ಅಭಿಪ್ರಾಯ. ಅವರು ತಮ್ಮ ಜೀವನದ ಒಂದು ಹಂತದಿಂದ ಮತ್ತೆ ಕೇವಲ ವೀಣಾವಾದನವೊಂದಕ್ಕೇ ತಮ್ಮನ್ನು ಮುಡಿಪಾಗಿಟ್ಟುಕೊಂಡರು.</p>
<p><img src="http://v-s-gopal.sulekha.com/mstore/v-s-gopal/albums/default/veena.bmp" alt="" width="231" height="161" /></p>
<p>ಸರಸ್ವತಿ ವೀಣೆ</p>
<p>ಬಾಲಚಂದರ್ ಚಿಕ್ಕಂದಿನಲ್ಲಿ  ಚೆಸ್ ಆಟದಲ್ಲಿ ಪರಿಣತಿ ಸಾಧಿಸಿ ಅಂತಃರಾಷ್ಟ್ರೀಯ ಮಟ್ಟದ  ಸ್ಪರ್ಧೆಗೆ ಸಿಲೋನಿಗೆ ಹೋಗಿದ್ದರು. ಅಲ್ಲಿ ಹೋದಲ್ಲಿ ಅವರು ಚೆಸ್ಸಿಗೆ ಸಂಬಂಧಿಸಿದ ಕ್ಲಿಷ್ಟ ಸಮಸ್ಯೆಗಳನ್ನು ಸುಲಲಿತವಾಗಿ ಪರಿಹರಿಸಿ ನೆರೆದ ಮಂದಿ  ಹಾಗು ತಜ್ಞರನ್ನು ಬೆರಗುಪಡಿಸಿದ್ದರು.ಬೆಳೆದು ದೊಡ್ಡವರಾದಂತೆ ಹೆಸರುವಾಸಿಯಾಗುತ್ತಾ ಮದ್ರಾಸಿನ  ಜನರ ಬಾಯಲ್ಲಿ ಎಸ್.ಬಿ. ಆಗಿಹೋದರು. ಅವರ  ಅಕ್ಕ ಜಯಲಕ್ಶ್ಮಿ  ಆಗಲೇ, ಆಗಿನ ತಮಿಳು ಸಿನೆಮಾ ಶಿವಕಾವಿಯಲ್ಲಿ ತ್ಯಾಗರಾಜ ಭಾಗವತರೊಂದಿಗೆ ನಟಿಸಿ ಹೆಸರು ಮಾಡಿದ್ದರು.<br />
ಅವರ ಮೊದಲ ಸಿನೆಮಾ  (ತಮಿಳು) ಸೀತಾಕಲ್ಯಾಣದಲ್ಲಿ ಬಾಲನಟನಾಗಿ, ರಾವಣನ  ಆಸ್ಥಾನದಲ್ಲಿ  ಕಂಜೀರ ನುಡಿಸುವ  ಬಾಲಕನಾಗಿ ನಟಿಸಿದರು, ಆಗ ವಯಸ್ಸು ಕೇವಲ ಆರು.ಈ ಸಿನೇಮಾ ಬಂದುದು ೧೯೩೩-೩೪ ರಲ್ಲಿ. ಹಿಂದಿ ಸಿನೇಮಾದ ವಿ.ಶಾಂತಾರಾಮ್ ಈ ಸಿನೇಮಾದ ನಿರ್ಮಾಪಕ.ಇದರಲ್ಲಿ ಸುಂದರಮ್ ಅಯ್ಯರ್ ಜನಕ ಮಹಾರಾಜನಾಗಿ, ಹಿರಿಯಣ್ಣ ರಾಜಂ ಶ್ರೀರಾಮನಾಗಿ,ಅಕ್ಕಂದಿರಾದ ಜಯಲಕ್ಷ್ಮಿ ಸೀತೆಯಾಗಿ,ಮತ್ತು  ಸರಸ್ವತಿ ಊರ್ಮಿಳೆಯಾಗಿ  ಪಾತ್ರ ವಹಿಸಿದ್ದರು. ಅವರ ಹದಿಮೂರರ ವಯಸ್ಸಿನಲ್ಲಿ ಅಭಿನಯಿಸಿದ ಋಷ್ಯಶೃಂಗ ಎಂಬ ಪೌರಾಣಿಕ ಕಥಾವಸ್ತುವಿದ್ದ   ಸಿನೇಮಾದಲ್ಲಿ, ಈ ಲೋಕದ ರೀತಿ ನೀತಿಗಳನ್ನರಿಯದ, ತೇಜಸ್ವಿಯಾದ  ತಪಸ್ವೀ ಬಾಲಕ  ರಾಜನಿಂದ ಆಹ್ವಾನಿತನಾಗಿ  ಆ ರಾಜ್ಯದೊಳಗೆ ಕಾಲಿಟ್ಟಾಗ ಅಲ್ಲಿ ಮಳೆಯಾಗುತ್ತದೆ, ಮುಂದೆ  ರಾಜಕುಮಾರಿ  ಅವನನ್ನು ಮೋಹಿಸಿ  ಮದುವೆಯಾಗುತ್ತಾಳೆ.ಆ ಪಾತ್ರ ಮಾಡಿದ ಶಾಂತ  ಕೊನೆಗೆ ನಿಜಜೀವನದಲ್ಲೂ ಅವರನ್ನು ಮದುವೆಯಾಗುತ್ತಾಳೆ.ಈ ಚಿತ್ರದ ಹಲವು ಗೀತೆಗಳನ್ನು ಬಾಲಚಂದರವರೇ ಹಾಡಿದ್ದಾರೆ. ಆದರೆ ಕುಟುಂಬದೊಳಗೆ ರಾಜಂನಂತಹ ಸುಮಧುರ ಶಾರೀರದವರಿದ್ದಾಗ,  ಮಧುರವಿಲ್ಲದ ಧ್ವನಿಯ ಬಾಲಚಂದರ್ ಗೆ ಹಾಡಲು ಹೆಚ್ಚಿನ ಉತ್ತೇಜನ ಸಿಗಲಿಲ್ಲ,ಬದಲು ಅವರು ಇನ್ನೆಷ್ಟೋ ವಾದ್ಯಗಳಿಗೆ ಜೀವ ತುಂಬುವಂತಾಯಿತು, ಮತ್ತು ಅವರು ವೀಣೆಯಿಂದ ಹಾಗೂ ವೀಣೆ ಅವರಿಂದ ಗುರುತಿಸಿಕೊಳ್ಳುವಂತಾಯಿತು.</p>
<p><img src="http://v-s-gopal.sulekha.com/mstore/v-s-gopal/albums/default/SB%20young.bmp" alt="" width="217" height="266" /></p>
<p>ಸುಂದರ ಯುವಕ, ಆಂಗ್ಲರನ್ನು ಹೋಲುವ  ಬಿಳಿವರ್ಣದ ಬಾಲಚಂದರ್</p>
<p>ಸುಂದರಂ ಅವರು  ಮಗ ದೊಡ್ಡವನಾದಂತೆ ಸಿನೇಮಾದಲ್ಲಿ  ಮುಂದುವರಿಯುವುದನ್ನು ಇಷ್ಟಪಡಲಿಲ್ಲ.ಆದರೆ ಹದಿನಾರರ ಬಾಲಚಂದರ್ ಜೆಮಿನಿ ಸ್ಟುಡಿಯೊದಲ್ಲಿನ ಚಟುವಟಿಕೆಗಳನ್ನು ಆಸಕ್ತಿಯಿಂದ ಆಳವಾಗಿ  ಗಮನಿಸುತ್ತಿದ್ದ.ಇದು  ಮುಂದೆ ಸಂಗೀತ ನಿರ್ದೇಶನದಲ್ಲಿ ಮುಂದುವರಿಯಲು  ಅವರಿಗೆ ಸಹಾಯವಾಯಿತು.ಅವರನ್ನು ಪ್ರಸಿದ್ಧಿಗೆ ತಂದ ಇನ್ನೊಂದು ಸಿನೆಮಾ &#8221; ಇದು ನಿಜಮಾ&#8221;.ಇದರಲ್ಲಿ ಅವರಿಗೆ ಅವಳಿ ಸಹೋದರರಿರುವ ನಾಯಕ ಪಾತ್ರ.  ಆಗಿನ್ನೂ ಅವರು ಇಪ್ಪತ್ತರ ಯುವಕ. ಈ ಚಿತ್ರದ  ಕಥಾ ಬರವಣಿಗೆ, ಸಂಗೀತ ರಚನೆ ಮತ್ತು ನಿರ್ದೇಶನವನ್ನು   ಇವರೇ ಮಾಡಿದರು. ಇದರಲ್ಲಿ  ಹಲವು ಹಾಡುಗಳನ್ನೂ ಹಾಡಿದ್ದಾರೆ. ಬಾಲಚಂದರ್ ಅವರು  ಹೆಚ್ಚಿನ ಸಿನೇಮಾಗಳಲ್ಲಿ ನಾಯಕನಾಗಿಯೇ ಅಭಿನಯಿಸಿದರು ಮತ್ತು ಅವರೇ ಹಾಡಿದರು. ಅವರೊಂದಿಗೆ ನಟಿಸಿದ ನಾಯಕಿಯರು ವೈಜಯಂತಿ ಮಾಲಾ,ಮಾಧುರಿ ದೇವಿ,ಅಂಜಲಿ ದೇವಿ  ಮುಂತಾದವರು. ಈ ಸಮಯದಲ್ಲಾಗಲೇ ಅವರು ತಮ್ಮ  ಹೆಚ್ಚಿನ ಸಮಯವನ್ನು ವೀಣಾವಾದನಕ್ಕೂ,ಅದರ ಅಭ್ಯಾಸಕ್ಕೂ ಮೀಸಲಾಗಿಟ್ಟರು.ಮತ್ತು ಕೆಲವೇ ಆರಿಸಿದ, ಹಾಗೂ ಮೆಚ್ಚಿಗೆಯಾದ ಸಿನೇಮಾಗಳಲ್ಲಿ ನಟಿಸಿದರು. ಆ ಕಾಲದಲ್ಲಿ ಬಾಲಚಂದರ್ ನಿರ್ದೇಶನದ &#8220;ಅಂಧಾನಾಲ್&#8221; ಎಂಬ ಸಿನೆಮಾ ಪ್ರಶಸ್ತಿಗಳ ಸುರಿಮಳೆಯನ್ನೇ ತಂದಿತು. ಶಿವಾಜಿ ಗಣೇಶನ್ ಈ ಚಿತ್ರದಲ್ಲಿ ಅಭಿನಯಿಸಿದರು; ಈ ಸಿನೇಮಾ ಇಂದಿನ ವರೆಗೆ ನಿರ್ಮಿಸಿದ ಹತ್ತು ಅತ್ಯುತ್ತಮ ಸಿನೇಮಾಗಳಲ್ಲೊಂದು.ಆಗಿನ್ನೂ  ಅವರಿಗೆ ಇಪ್ಪತ್ತೇಳರ ವಯಸ್ಸು.  ಅವರು ತಾವು ನಟಿಸಿದ  ಹೆಚ್ಚಿನ  ಸಿನೇಮಾಗಳಲ್ಲಿ  ತಾವೇ  ಹಾಡಿದ್ದಾರೆ. ಆದರೆ ಅವರು  ಇಷ್ಟೆಲ್ಲಾ  ಸಿನೇಮಾಗಳಲ್ಲಿ ನಟಿಸಿ,ನಿರ್ದೇಶಿಸಿದರೂ , ಅವರ  ಮನಸ್ಸು  ಮಾತ್ರ ಸಿನೇಮಾದಲ್ಲಿ ಇರಲಿಲ್ಲ, ಅವರ ಜೀವನದ ಧ್ಯೇಯ ವೀಣೆಯಾಗಿಯೇ ಉಳಿಯಿತು.   ಸರಸ್ವತಿ ವೀಣೆಯ ಭಕ್ತರಾದ  ಬಾಲಚಂದರವರಿಗೆ  ಸಿನೇಮಾದ  ಲೋಕ ಕೇವಲ ಕ್ಷಣಿಕ, ಅರ್ಥಹೀನವಾಗಿ  ಕಂಡಿತು.</p>
<p><a href="http://v-s-gopal.sulekha.com/mstore/v-s-gopal/albums/default/SB%20and%20Gemini.bmp"><img class="alignnone" src="http://v-s-gopal.sulekha.com/mstore/v-s-gopal/albums/default/SB%20and%20Gemini.bmp" alt="" width="214" height="167" /></a></p>
<p>ಜೆಮಿನಿ ಗಣೇಶನ್ ಮತ್ತು ಬಾಲಚಂದರ್ &#8220;ಪೆಣ್&#8221;(ಹುಡುಗಿ) ಚಿತ್ರದಲ್ಲಿ</p>
<p><strong>ಬಾಲಚಂದರ್ ಮತ್ತು ಅವರ ಸಂಗೀತದ ಪ್ರಪಂಚ:</strong> ಇವರದು ಬಹುಮುಖ ಪ್ರತಿಭೆ,ಅವರ ಕಲಾವಿದನ ಚಿಲುಮೆ ಬಹಳ ದಿಕ್ಕುಗಳಲ್ಲಿ ಹರಿಯುತಿತ್ತು, ಅದರ ಸೆಳೆತ ಶಕ್ತಿಭರಿತವಾಗಿತ್ತು. ಅವರು ಆರರ ವಯಸ್ಸಿನಲ್ಲಿ ನಟಿಸಿದ ಸಿನೇಮಾ ಸೀತಾಕಲ್ಯಾಣದ ನಿರ್ದೇಶಕ ವಿ.ಶಾಂತಾರಾಮ್ ಅವರು  ಹುಡುಗನ ಪ್ರತಿಭೆಯನ್ನು ಕಂಡು, ಅವನಿಗೆ  ತಬಲಾವನ್ನು  ಉಡುಗೊರೆಯಾಗಿತ್ತು  ಪ್ರೋತ್ಸಾಹಿಸಿದರು. ಅವರು ಹತ್ತರ ವಯಸ್ಸಿನಲ್ಲಿ ತಮ್ಮ  ಹಿರಿಯಣ್ಣ ರಾಜಂ ಅವರೊಂದಿಗೆ ತಾಳವಾದ್ಯದವನಾಗಿ ಕಛೇರಿ ಕೊಡಲು ಹೋಗುತ್ತಿದ್ದರು. ಹಾಗೆ ಕರಾಚಿಗೆ ಹೋದಲ್ಲಿ (೧೯೩೮ರಲ್ಲಿ) ಶ್ರೀಮತಿ ಕೃಷ್ಣಬಾಯಿಯವರು ಈ ಚಿಕ್ಕ ಬಾಲಕನಿಗೆ ಸಿತಾರ್ ವಾದ್ಯವನ್ನಿತ್ತು ಉತ್ತೇಜನ  ಕೊಟ್ಟರು.ಆ ನಂತರ ಆ ಚಿಕ್ಕ ಹುಡುಗ ಸಿತಾರ್  ವಾದನದಲ್ಲಿ  ಪ್ರಾವೀಣ್ಯತೆ ಗಳಿಸಿದ. ಅದರಿಂದ ಮತ್ತೆ  ಅವರು ಹೆಚ್ಚಿನ ತಂತಿ ವಾದ್ಯಗಳನ್ನು  ತಾವೇ॑ ನುಡಿಸಿ ಪ್ರಾಚೀಣ್ಯತೆಯನ್ನು ಪಡೆದರು. ಅವರ  ಹೆಚ್ಚಿನ ಕಲಿಕೆಯೂ ಸ್ವಂತ ಪರಿಶ್ರಮದ ಫಲ, ಗುರುಮುಖೇನ  ಕಲಿತುದಲ್ಲ.  ಹದಿನೈದರಿಂದ ಹದಿನೆಂಟರ  ವಯಸ್ಸಿನ  ವರೆಗೆ  ಅವರು ಆಕಾಶವಾಣಿ ಕಲಾವಿದನಾಗಿ  ಕೆಲಸ ಮಾಡುತ್ತಿದ್ದರು, ಆಗ ಅವರು  ಕೈಯಾಡಿಸಿ ನೋಡದ  ವಾದ್ಯವಿಲ್ಲ,  ಕೊನೆಯಲ್ಲಿ ವೀಣೆಯೇ ಅವರನ್ನು ಕರೆಯಿತೊ ಎಂಬಂತೆ ಅದರಲ್ಲಿ ಅವರು ಸ್ಥಿರವಾಗಿ ಮುಂದುವರಿದರು.</p>
<p><a href="http://v-s-gopal.sulekha.com/mstore/v-s-gopal/albums/default/SB%202.jpg"><img class="alignnone" src="http://v-s-gopal.sulekha.com/mstore/v-s-gopal/albums/default/SB%202.jpg" alt="" width="500" height="281" /></a></p>
<p>ಅವರ ಸಹಿಯು ವೀಣೆಯಾಕಾರದಲ್ಲಿತ್ತು. ಮೇಲಿನ  ಚಿತ್ರದಲ್ಲಿ  ಇದನ್ನು ನೋಡಬಹುದು.</p>
<p>ವೀಣೆಯ  ಮೇಲಿನ ಅವರ ಗೀಳನ್ನು ಶ್ರಧ್ಧೆಯೋ,ಭಕ್ತಿಯೋ,ಚಟವೋ  ಅಥವಾ ಪೂಜಾಮನೋಭಾವವೋ ಎಂದು ಏನೇ ಹೇಳಿದರೂ ಸರಿಹೋಗದು.ಅವರು ವೀಣೆ ಹಿಡಿದು ಪೂಜಾಮಂದಿರವನ್ನು  ಹೊಕ್ಕರೆ ಗಂಟೆಗಟ್ಟಲೆ ಅಲ್ಲೇ ಇದ್ದುಬಿಡುತ್ತಿದ್ದರು. ವೀಣೆಯನ್ನು ಕಛೇರಿಯ ಮುಖ್ಯವಾದ್ಯವನ್ನಾಗಿ ಮಾಡಿದ  ಹೆಗ್ಗಳಿಕೆ ಇವರಿಗೇ ಸಲ್ಲುತ್ತದೆ.ಅವರು  ತಮ್ಮ ವೀಣೆಯೊಂದಿಗೆ ಪ್ರಪಂಚವಿಡೀ  ತಿರುಗಿದ್ದಾರೆ.ಒಮ್ಮೆಯಂತೂ ಮಾರುಕಟ್ಟೆಯಲ್ಲಿ ಅವರ ಧ್ವನಿ ಸುರುಳಿ (ಎಲ್.ಪಿ.ರೆಕಾರ್ಡ್) ಬೇರೆಲ್ಲಾ  ಸಂಗೀತಗಾರರದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿತ್ತು. ಅವರಿಗೆ ವಿಶ್ವಖ್ಯಾತಿವೆತ್ತರಾದ ಸಿತಾರ್  ವಾದಕ ಪಂಡಿತ್ ರವಿಶಂಕರ್,ಪಾಶ್ಚಾತ್ಯ ಸಂಗೀತಕಾರರಾದ ಯಹೂದಿ ಮೆನನ್ ಮುಂತಾದವರೊಂದಿಗೆ ಗೆಳೆತನವಿತ್ತು. ಹೊರ ಪ್ರಪಂಚ ಅವರನ್ನು ವೀಣಾ ಬಾಲಚಂದರ್ ಎಂದೇ ಗುರುತಿಸುತ್ತಿತ್ತು.<br />
೧೯೭೭ರಲ್ಲಿ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿಯನ್ನು  ನವದೆಹಲಿಯಲ್ಲಿ ರಾಷ್ಟ್ರಪತಿಯವರಿಂದ  ಪಡೆದರು.ನಂತರ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಭಾರತ ಸರಕಾರ ಪ್ರಧಾನಿಸಿ  ಗೌರವಿಸಿತು.  &#8221; World Academy of Arts and Culture&#8221; ನವರು ಅವರಿಗೆ ಗೌರವ ಡಾಕ್ಟರೇಟ್ ಅನ್ನು ಇತ್ತು ಸನ್ಮಾನಿಸಿದರು.ಅವರ ಪ್ರಮುಖ ಶಿಷ್ಯರಲ್ಲಿ ಕೆಲವರು ಗಾಯತ್ರಿ ರಾಮಚಂದ್ರನ್(ನಾರಾಯಣನ್),ಎಸ್.ವಿ.ಮಾಧವನ್ ಮುಂತಾದವರು.ಇವರು ಎಪ್ಪತ್ತೆರಡು ಮೇಳಕರ್ತ ರಾಗಗಳಲ್ಲಿ ಕೃತಿರಚನೆ ಮಾಡಿದ್ದಾರೆ.<br />
ಇವರನ್ನು ಅಪ್ರತಿಮ ಮೇಧಾವಿ  ಎಂದು ಪರಿಗಣಿಸುತ್ತಾರೆ, ಇವರು ಬಹಳಷ್ಟು ಹೊಸ ಪ್ರಯೋಗಗಳನ್ನು ಬಳಕೆಗೆ ತಂದವರು, ವೀಣೆಯಲ್ಲಿ ಧ್ವನಿವರ್ಧಕವನ್ನು ಅಳವಡಿಸುವುದನ್ನು ಬಳಕೆಗೆ ತಂದರು. ಅವರ ವಾದನ ಶೈಲಿ ,ಗಮಕಕ್ಕೆ ಅವರದೇ ಹೆಸರು; &#8220;ಬಾಲಚಂದರ್ ಬನಿ&#8221; ಎನ್ನುತ್ತಾರೆ ತಮಿಳಿನಲ್ಲಿ. ಈ ಶೈಲಿಯ ಬಗೆಗೆ ಬಹಳ  ವಿವಾದಗಳಿವೆ,ಇವರ ತಂದೆಯವರೇ ಇವರ ವೀಣೆ ಮೀಟುವುದರ (ವೇಗದ)ಬಗ್ಗೆ ವಿರೋಧಿಸುತ್ತಾರೆ. ಇನ್ನೊಬ್ಬರು ಮದ್ರಾಸಿನ ಹೆಸರಾಂತ ವಿಮರ್ಶಕ ಹಾಗೂ ಹತ್ತಿರದ ಸಂಬಂಧಿ,  ಇವರ ಗಮಕ ನುಡಿಸುವ ವಿಧಾನದಲ್ಲಿ ಅಪಸ್ವರ ಹೊಮ್ಮುತ್ತದೆ ,ಕೆಲವೊಮ್ಮೆ ಹಿಂದುಸ್ಥಾನಿ ಶೈಲಿಯೂ ಬರುತ್ತದೆ ಎಂದಿದ್ದಾರೆ. ಆದರೆ ಮಾಮೂಲಾಗಿ ಅತಿ ಮೇಧಾವಿಗಳಾದವರು ಮಾಡುವ ಹೊಸ ಪ್ರಯೋಗಗಳು ವಿಮರ್ಷಕರಿಂದ ಒಪ್ಪಿಗೆ ಪಡೆಯುವುದಿಲ್ಲ. ಇವರ ಸ್ವಭಾವದ ಬಗ್ಗೆ ಹೇಳುವುದಾದರೆ, ತುಸು ಕೋಪಿಷ್ಟರೆನ್ನಬಹುದು.ಕಛೇರಿಯ ವೇಳೆಯಲ್ಲಿ  ಅತ್ತಿತ್ತ ನಡೆದಾಡುವ ಪ್ರೇಕ್ಷಕರನ್ನು, ಕೂಗಿ ಕಿರಿಚಾಡುವ ಮಕ್ಕಳನ್ನು ಕಂಡರೆ, ವೀಣಾವಾದನವನ್ನು ನಿಲ್ಲಿಸಿ ದಿಟ್ಟಿಸಿ  ನೋಡುತ್ತಿದ್ದರು.</p>
<p><a href="http://v-s-gopal.sulekha.com/mstore/v-s-gopal/albums/default/s.balachander.bmp"><img class="alignnone" src="http://v-s-gopal.sulekha.com/mstore/v-s-gopal/albums/default/s.balachander.bmp" alt="" width="196" height="350" /></a></p>
<p>ಬಾಲಚಂದರ್ ಕಚೇರಿಯೊಂದರಲ್ಲಿ</p>
<p>ಎಸ್.ಬಿಯವರ ತಿಳುವಳಿಕೆ, ಬುಧ್ಧಿಮತ್ತೆಯನ್ನು ಓದಿ, ಕೇಳಿ, ಮಾತುಕತೆ ವಿಚಾರ ವಿನಿಮಯಗಳಿಂದ ಹೆಚ್ಚಿಸಿಕೊಳ್ಳುತ್ತಿದ್ದರು.ಇವರಿನ್ನೂ  ಶಾಲಾವಿದ್ಯಾರ್ಥಿಯಾಗಿದ್ದಾಗಲೇ  ಆಕಾಶವಾಣಿಯಲ್ಲಿ ಸಂಗೀತ ಕಲಾವಿದನಾಗಿ ಕೆಲಸ ಮಾಡುತ್ತಿದ್ದರು,ಆಗ  ಅವರ ತಂದೆಯವರು (ಸುಂದರಂ ಅಯ್ಯರ್) ಮಗನ ಕೆಲಸದಲ್ಲಿರಬಹುದಾದ ಬರವಣಿಗೆಗೆ ಸಂಬಂಧಪಟ್ಟದ್ದನ್ನು ಪೂರೈಸಲು, ಮತ್ತು ಅವನ  ಸಂಬಳವನ್ನು(ಸರಕಾರ ಕಾನೂನಿನಂತೆ ಪ್ರಾಪ್ತ  ವಯಸ್ಕನಲ್ಲದುದಂದರಿಂದ) ಸಹಿ  ಹಾಕಿ  ತೆಗೆದುಕೊಳ್ಳಲು ಹೋಗುತ್ತಿದ್ದರು. ಎಸ್.ಬಿ.ಯವರ ಇಂಗ್ಲಿಷ್ ಭಾಷಾಜ್ಞಾನ ಆಳವಾಗಿತ್ತು, ಅವರು ಉತ್ತಮ  ವಾಗ್ಮಿ, ಅವರ ಭಾಷಣಗಳು ವಿಷಯಭರಿತವಾದ  ಅಮೂಲ್ಯ ರತ್ನವಾಗಿತ್ತು. ಚಿಕ್ಕ ವಯಸ್ಸಿನಲ್ಲೇ ವೃಧ್ಧಿಸುತ್ತಿದ್ದ ತಮ್ಮ ಪ್ರಸಿಧ್ಧಿಯನ್ನು,ಅವರು ಬಹಳ ಚೆನ್ನಾಗಿಯೇ ನಿಭಾಯಿಸಿದರು. ಇವರ ಸಂಗೀತ  ಹಾಗೂ  ಸಂಗೀತಶಾಸ್ತ್ರದ ಕುರಿತಾದ ಅಸಂಖ್ಯಾತ ಬರಹಗಳು  ಅಮೋಘ ನಿಧಿಯಂತೆ  ಕಾಣುತ್ತದೆ.ಶೆಮ್ಮಂಗುಡಿ ಶ್ರೀನಿವಾಸ  ಅಯ್ಯರ್ ಮತ್ತು ಎಸ್.ಬಿ.ಯವರಿಗಿದ್ದ(ಅವರ  ಕೊನೆಗಾಲದಲ್ಲಿ)  ಭಿನ್ನಭಿಪ್ರಾಯ ಬಹುಮಂದಿಗೆ ತಿಳಿದಿರುವ ವಿಷಯ. ಹಾಗೇ ಇವರು ಕೇರಳದ ಮಹಾರಾಜ ಬಹು ಭಾಷಾ ಪಾರಂಗತ, ಹಿರಿಯ ವಿದ್ವಾಂಸ, ದೊಡ್ಡ ಕಲಾಗಾರನೆಂದು  ಪರಿಗಣಿಸಲ್ಪಟ್ಟ ಸ್ವಾತಿ ತಿರುನಾಳ್ ಅವರ ಪಾಂಡಿತ್ಯದ ಮೇಲೆ  ಸಂಶಯ ವ್ಯಕ್ತ ಪಡಿಸಿದ್ದಾರೆ, ಮಾತ್ರವಲ್ಲ  ಆ  ವ್ಯಕ್ತಿ ಕಾಲ್ಪನಿಕ ಎಂದು  ಅಸ್ತಿತ್ವವನ್ನೇ ಅಲ್ಲಗಳೆದಿದ್ದಾರೆ. ಸಂಗೀತಾಭಿಮಾನಿಗಳಾದ  ಮದ್ರಾಸಿನ  ಜನರು ಸಂಗೀತಕ್ಕೆ ಸಂಬಂಧಿಸಿದ  ವಿವಾದಗಳನ್ನೂ ಇಷ್ಟಪಡುತ್ತಾರೆ.<br />
ಬಾಲಚಂದರ್ ಹಾಗೂ ಶಾಂತಾರವರಿಗೆ  ಒಬ್ಬನೇ ಮಗ, ಅವರು ಎಸ್.ಬಿ.ಎಸ್.ರಾಮನ್, ವೃತ್ತಿಯಲ್ಲಿ ಹೈಕೋರ್ಟ್ ವಕೀಲರು.  ಇವರ ಪತ್ನಿ ಧರ್ಮ,ಮತ್ತು   ರಾಮನ್ ಅವರಿಗೆ ಮೂವರು ಮಕ್ಕಳು.ಹಿರಿ ಮಗ ಭಾರದ್ವಜ ತನ್ನ ಅಜ್ಜನಂತೆ ವೀಣೆ  ನುಡಿಸುತ್ತಾನೆ,ಕಛೇರಿಗಳನ್ನು ಕೊಡುತ್ತಾನೆ. ಮಗಳು ತಾರಾ ವಿಮರ್ಷಕರಿಂದ  ಪ್ರಶಂಸಿಸಲ್ಪಟ್ಟ ಭರತ ನಾಟ್ಯ ಕಲಾವಿದೆ.ಸಣ್ಣ ಮಗ ಚಟುವಟಿಕೆಗಳಿಂದ  ಕೂಡಿದ ಉತ್ಸಾಹಿ.<br />
ಇದರಲ್ಲೊಂದು ಸಣ್ಣ  ನಗು ಬರಿಸುವ ಘಟನೆಯೊಂದನ್ನು ಹೇಳಬಯಸುತ್ತೇನೆ. ಇದರ ಮೂಲ ಲೇಖಕರಾದ ವಿ.ಎಸ್.ಗೋಪಾಲರು, ತಮ್ಮ ಮಾವ(ಎಸ್.ಬಿ.) ಅವರನ್ನು  ಮನೆಗೆ ಕರೆ ತಂದಿದ್ದಾಗ ಉಪಚರಿಸಿ ,ಮಾತನಾಡಿ,ನಂತರ  ವಿರಾಮದ  ವೇಳೆಯಲ್ಲಿ,  ಅವರಿಗೆ  ತಾನು ಹಾಡಿದ ಹಿಂದಿಯ &#8220;ತಲಾತ್  ಮಹಮೂದ್&#8221; ಹಾಡಿದ ಪದ್ಯಗಳನ್ನು ರೆಕಾರ್ಡ್ ಮಾಡಿದ್ದನ್ನು ಹಾಕಿ  ಕೇಳಿಸಿದರು,ಮತ್ತು ಮಾವನಲ್ಲಿ ಅಭಿಪ್ರಾಯವನ್ನು ಕೇಳಿಯೇ ಬಿಟ್ಟರು, ಪೂರ್ತಿ ಆತ್ಮವಿಶ್ವಾಸದಿಂದ. ಆಗ  ಆ  ಮಾವ  ಅದನ್ನು ಕೇಳಿ &#8220;ಇದಕ್ಕೆ ನಾಲಕ್ಕು ಕಾಸು ಕೊಡುವಂತಿದೆ&#8221;  ಎನ್ನಬೇಕೆ!!!</p>
<p><strong>ತಮ್ಮ  ಅರುವತ್ತಮೂರರ ವಯಸ್ಸಿನಲ್ಲಿ ತೀರಿಹೋದ ಈ ಕಲಾಗಾರ ಬದುಕಿದ್ದರೆ ಇನ್ನೆಷ್ಟೊ ವಿಷಯಗಳನ್ನು  ಸಾಧಿಸಿ  ಸಂಗೀತದ  ಪ್ರಪಂಚವನ್ನು ಶ್ರೀಮಂತವಾಗಿಸುತ್ತಿದ್ದರು.</strong></p>
<p>ಈ ಲೇಖನದ ಮೂಲ ಲೇಖಕರು ವಿ.ಎಸ್.ಗೋಪಾಲಕೃಷ್ಣ  ಅಯ್ಯರ್(ನಿವೃತ್ತ  ಐ.ಎ.ಎಸ್.ಅಧಿಕಾರಿ,ಮಹಾರಾಷ್ಟ್ರ ವಲಯದವರು) ಬಾಲಚಂದರವರ  ಅಕ್ಕ  ಸರಸ್ವತಿಯವರ  ಮಗ.ತಮ್ಮ ಮಾವನ ಪುಣ್ಯ ತಿಥಿಯಂದು ಅವರ ನೆನಪಿಗಾಗಿ ಬರೆದ ಲೇಖನ,ಸುಲೇಖ ಅಂತರ್ಜಾಲದ  ಬ್ಲಾಗಿನಲ್ಲಿ ಪ್ರಕಟವಾದ  ಲೇಖನ.</p>
<br />  <a rel="nofollow" href="http://feeds.wordpress.com/1.0/gocomments/shailajasbhat.wordpress.com/20/"><img alt="" border="0" src="http://feeds.wordpress.com/1.0/comments/shailajasbhat.wordpress.com/20/" /></a> <a rel="nofollow" href="http://feeds.wordpress.com/1.0/godelicious/shailajasbhat.wordpress.com/20/"><img alt="" border="0" src="http://feeds.wordpress.com/1.0/delicious/shailajasbhat.wordpress.com/20/" /></a> <a rel="nofollow" href="http://feeds.wordpress.com/1.0/gofacebook/shailajasbhat.wordpress.com/20/"><img alt="" border="0" src="http://feeds.wordpress.com/1.0/facebook/shailajasbhat.wordpress.com/20/" /></a> <a rel="nofollow" href="http://feeds.wordpress.com/1.0/gotwitter/shailajasbhat.wordpress.com/20/"><img alt="" border="0" src="http://feeds.wordpress.com/1.0/twitter/shailajasbhat.wordpress.com/20/" /></a> <a rel="nofollow" href="http://feeds.wordpress.com/1.0/gostumble/shailajasbhat.wordpress.com/20/"><img alt="" border="0" src="http://feeds.wordpress.com/1.0/stumble/shailajasbhat.wordpress.com/20/" /></a> <a rel="nofollow" href="http://feeds.wordpress.com/1.0/godigg/shailajasbhat.wordpress.com/20/"><img alt="" border="0" src="http://feeds.wordpress.com/1.0/digg/shailajasbhat.wordpress.com/20/" /></a> <a rel="nofollow" href="http://feeds.wordpress.com/1.0/goreddit/shailajasbhat.wordpress.com/20/"><img alt="" border="0" src="http://feeds.wordpress.com/1.0/reddit/shailajasbhat.wordpress.com/20/" /></a> <img alt="" border="0" src="http://stats.wordpress.com/b.gif?host=shailajasbhat.wordpress.com&amp;blog=9903374&amp;post=20&amp;subd=shailajasbhat&amp;ref=&amp;feed=1" width="1" height="1" />]]></content:encoded>
			<wfw:commentRss>http://shailajasbhat.wordpress.com/2009/11/26/%e0%b2%b5%e0%b3%80%e0%b2%a3%e0%b2%be-%e0%b2%b5%e0%b2%bf%e0%b2%a6%e0%b3%8d%e0%b2%b5%e0%b2%be%e0%b2%82%e0%b2%b8-%e0%b2%ac%e0%b2%be%e0%b2%b2%e0%b2%9a%e0%b2%82%e0%b2%a6%e0%b2%b0%e0%b3%8d/feed/</wfw:commentRss>
		<slash:comments>9</slash:comments>
	
		<media:content url="" medium="image">
			<media:title type="html">my pen from shrishaila</media:title>
		</media:content>

		<media:content url="http://v-s-gopal.sulekha.com/mstore/v-s-gopal/albums/default/veena.bmp" medium="image" />

		<media:content url="http://v-s-gopal.sulekha.com/mstore/v-s-gopal/albums/default/SB%20young.bmp" medium="image" />

		<media:content url="http://v-s-gopal.sulekha.com/mstore/v-s-gopal/albums/default/SB%20and%20Gemini.bmp" medium="image" />

		<media:content url="http://v-s-gopal.sulekha.com/mstore/v-s-gopal/albums/default/SB%202.jpg" medium="image" />

		<media:content url="http://v-s-gopal.sulekha.com/mstore/v-s-gopal/albums/default/s.balachander.bmp" medium="image" />
	</item>
	</channel>
</rss>
